ವಿಷಯಕ್ಕೆ ಹೋಗಿ

ಸೀಗೆಬಾಗಿಯಲ್ಲಿ ಸಂಕ್ರಾಂತಿ ಜೋರು : ಮೊಲ ಬಿಡುವ ಮೂಲಕ ಸಂಕ್ರಾಂತಿ ಆಚರಣೆ

ವರದಿ: ಡಿ.ಆರ್.ನರೇಂದ್ರಬಾಬು
---------
ಹುಳಿಯಾರು : ಸುಗ್ಗಿ ಹಬ್ಬವಾದ ಸಂಕ್ರಾತಿಯನ್ನು ರಾಜ್ಯದೆಲ್ಲೆಡೆ ಒಂದೊಂದು ರೀತಿ ತಮ್ಮ ವಾಡಿಕೆಯಂತೆ ಆಚರಿಸಿದರೆ, ಹೋಬಳಿಯ ಸೀಗೆಬಾಗಿ ಗ್ರಾಮದಲ್ಲಿ ಮಾತ್ರ ಮೊಲ ಬಿಡುವ ಮೂಲಕ ಸಂಕ್ರಾತಿ ಹಬ್ಬವನ್ನು ಎರಡು ದಿನಗಳಕಾಲ ವಿಜೃಂಭಣೆಯಿಂದ ನಡೆಸುತ್ತಾರೆ. ಸುಮಾರು ೩೫೦ ಮನೆಗಳಿರುವ ಈ ಗ್ರಾಮದಲ್ಲಿ ಸಂಕ್ರಾಂತಿಯನ್ನು ಗ್ರಾಮಹಬ್ಬದ ರೀತಿ ಗ್ರಾಮಸ್ಥರೆಲ್ಲಾ ಜಾತಿಬೇಧ ಮರೆತು ಆಚರಿಸುತ್ತಾರೆ. ಅಂದು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ವಿಶೇಷ ಅಡುಗೆ ಮಾಡಿಕೊಂಡು ವರದರಾಜಸ್ವಾಮಿ ದೇವಸ್ಥಾನಕ್ಕೆ ಅಡುಗೆಬುತ್ತಿಯನ್ನು ಹೊತ್ತು ತಂದು ಎಲ್ಲರು ಒಟ್ಟಾಗಿ ಹಂಚಿಕೊಂಡು ಊಟ ಮಾಡುವುದು ಇಲ್ಲಿನ ವಾಡಿಕೆ.
ಅದರಂತೆ ಹಬ್ಬದ ದಿನ ಗ್ರಾಮದವರು ತಮ್ಮ ಮನೆಯಲ್ಲಿ ಸಿದ್ದ ಮಾಡಿದ ಎಡೆಯನ್ನು ತಂದು ವರದರಾಜ ಸ್ವಾಮಿಗೆ ಅರ್ಪಿಸುವ ಮೂಲಕ ಎಡೆಗೆಸೇವೆ ಹಾಗೂ ಪೂಜಾ ಕೈಂಕರ್ಯ ನಡೆಸಿದರು.
ಹುಳಿಯಾರು ಹೋಬಳಿ ಸೀಗೆಬಾಗಿಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಸಾರ್ವಜನಿಕರೆಲ್ಲಾ ಸೇರಿ ದೇವರುಗಳ ಸಮ್ಮುಖದಲ್ಲಿ ಮೊಲ ಬಿಡುತ್ತಿರುವುದು.
ಹಬ್ಬದ ಮಾರನೇ ದಿನ ವರದರಾಜ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನೂರೊಂದೆಡೆ ಸೇವೆ ಸಲ್ಲಿಸುವ ನೂರಕ್ಕು ಅಧಿಕ ಸಂಖ್ಯೆಯ ದಾಸಪ್ಪಗಳು ಸಂಪ್ರದಾಯ ಉಡುಗೆ ತೊಟ್ಟು ನಂತರ ಗ್ರಾಮದ ಪ್ರತಿಯೊಂದು ಮನೆಗೆ ಹೋಗಿ ಸಾಂಕೇತಿಕವಾಗಿ ಪಡಿಆಟದ ಮೂಲಕ ಬೇಡುವುದು ಸಂಪ್ರದಾಯವಾಗಿದೆ.
         ಮೊಲ ಬಿಡುವುದು : ಮಕರ ಸಂಕ್ರಮಣದ ಹಿಂದಿನ ದಿನ ವಿಷ್ಣುವಿನ ಅಪರಾವತಾರವೆಂದೆ ನಂಬಿರುವ ಮೊಲವನ್ನು ಕಾಡಿಗೆ ತೆರಳಿ ಹಿಡಿದು ತರುವುದು ಹಾಗೂ ಸಂಕ್ರಮಣದ ಮಾರನೆ ದಿನ ಕಾಡಿಗೆ ವಾಪಸ್ಸ್ ಬಿಡುವುದು ಅನುಚಾನವಾಗಿ ಆಚರಣೆಯಲ್ಲಿದೆ. ಮೊಲ ಹಿಡಿಯುವುದನ್ನು ಬೇಟೆ ಉತ್ಸವ ಎಂದು ಕರೆಯಲಾಗುವುದಿದ್ದು, ಧಾರ್ಮಿಕ ವಿಧಿವಿಧಾನಗಳನ್ವಯ ದೇವಾಲಯದ ಪಟೇಲರು,ಗೌಡರು ಹಾಗೂ ಗ್ರಾಮಸ್ಥರು ತೆರಳಿ ಮೊಲ ಹಿಡಿದು ವಾದ್ಯದ ಮೆರವಣಿಗೆ ಮೂಲಕ ದೇವಾಲಯದಲ್ಲಿಗೆ ತರಲಾಗುತ್ತದೆ. ಆ ಮೊಲಕ್ಕೆ ವರದರಾಜ ಸ್ವಾಮಿ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಕಿವಿಗೆ ಮುರು ಚುಚ್ಚಿ ವಾದ್ಯ ಮೇಳದೊಂದಿಗೆ ದೇವರುಗಳ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಮೊಲ ಬಿಡಲಾಗುತ್ತದೆ.ಈ ಮೊಲ ಯಾವ ದಿಕ್ಕಿನ ಕಡೆ ಜಿಗಿದು ಹೋಗುತ್ತದೋ ಆ ದಿಕ್ಕಿನಲ್ಲಿ ಉತ್ತಮ ಮಳೆ,ಬೆಳೆಯಾಗುತ್ತದೆ ಎಂಬ ಪ್ರತೀತಿ ಇದೆ.
ಹುಳಿಯಾರು ಹೋಬಳಿ ಸೀಗೆಬಾಗಿಯ ವರದರಾಜಸ್ವಾಮಿ ದೇವಾಲಯದಲ್ಲಿ ನಡೆದ ನೂರೊಂದೆಡೆ ಸೇವೆ.
ಬಹುದಿನಗಳಿಂದಲೂ ಈ ಮೊಲ ಬಿಡುವುದನ್ನು ವರದರಾಜಸ್ವಾಮಿ, ದುರ್ಗಮ್ಮದೇವಿ ಹಾಗೂ ಮುಳ್ಳಲಗೆ ಬೂತರಾಯಸ್ವಾಮಿಯ ಸಮ್ಮುಖದಲ್ಲಿ ಒಕ್ಕಲಿನವರು ನಡೆಸಿಕೊಂಡು ಬರುತ್ತಿರುವುದಾಗಿ ಅರ್ಚಕ ಸುಗಂಧರಾಜ್ ತಿಳಿಸುತ್ತಾರೆ.
       ಜಾನಪದ ಹಿನ್ನಲೆ: ಸಂಕ್ರಾಂತಿಯಂದು ಲಕ್ಷ್ಮಿತವರಿಗೆ ಹೊರಟು ನಿಂತಾಗ ಕೋಪಗೊಂಡ ವಿಷ್ಣುವು ಬೇಟೆ ಆಡುವ ನೆಪದಲ್ಲಿ ಕಾಡಿಗೆ ತೆರಳುತ್ತಾನೆ. ಇದನ್ನು ತಿಳಿದ ಲಕ್ಷ್ಮಿಯು ಗಂಡನನ್ನು ತಡೆಯಲು ಕಾಡಿನಲ್ಲಿ ಮೊಲವನ್ನು ಆತನ ದಾರಿಗೆ ಅಡ್ಡವಾಗಿ ಬರುವಂತೆ ಮಾಡುತ್ತಾಳೆ, ಮೊಲ ಅಡ್ಡ ಬಂದಿದ್ದು ಅಪಶಕುನ ಎಂದು ಭಾವಿಸಿದ ವಿಷ್ಣುವು ವಾಪಸ್ಸ್ ನಾಡಿಗೆ ತೆರಳುತ್ತಾನೆ.ಈ ಹಿನ್ನಲೆಯೂ ಮೊಲ ಬಿಡುವ ಸಂಪ್ರದಾಯಕ್ಕೆ ಕಾರಣವಾಗಿದೆ.
ಹಬ್ಬದ ಮರುದಿನ ಸಂಜೆ ದುರ್ಗಮ್ಮ ದೇವಿಗೆ ಮಡಲಕ್ಕಿ ಹಾಕಿ ಪೂಜೆ ಸಲ್ಲಿಸಿದ ಬಳಿಕ ಸ್ವಾಮಿ ಹಾಗೂ ಅಮ್ಮನವರನ್ನು ಹೊರಡಿಸಿ ಮೊಲ ಬಿಡುವ ಕಾರ್ಯ ನಡೆಯಿತು.
----------------------------------------------------------------------------------------
ತುಮಕೂರು ಜಿಲ್ಲೆಯಲ್ಲಿ ಸೀಗೆಬಾಗಿಯ ವರದರಾಜಸ್ವಾಮಿ ವಿಶಿಷ್ಟವಾದುದಾಗಿದ್ದು ಬೇರೆಲ್ಲೂ ಇಂತಹ ಮೂರ್ತಿಯನ್ನು ಕಾಣಲು ಸಾಧ್ಯವಿಲ್ಲ. ಇದರ ಬಗ್ಗೆ ಪುರಾಣಗಳಲ್ಲೂ ಉಲ್ಲೇಖಗಳಿವೆ. ಇಲ್ಲಿನ ವರದರಾಜಸ್ವಾಮಿಯು ಉದ್ಭವ ಮೂರ್ತಿಯಾಗಿದ್ದು ಇದೇ ದೇವಾಲಯದಲ್ಲಿ ಊರಿನಲ್ಲಿದ್ದ ಆಂಜನೇಯಸ್ವಾಮಿಯನ್ನು ಸಹ ಪ್ರತಿಷ್ಠಾಪಿಸಿ ಪೂಜಿಸಲು ಪ್ರಾರಂಭಿಸಿದ್ದರಿಂದ ವರದಾಂಜನೇಯಸ್ವಾಮಿ ಎಂದು ಪ್ರಸಿದ್ದಿಯಾಗಿದೆ.
---------------------------------------------------------
ವಿಷ್ಣುವಿನ ಅಪರಾವತಾರ ಎನ್ನುವ ಮೊಲವನ್ನು ಹಿಡಿದು ತಂದು ಪೂಜೆಸಿದ ಬಳಿಕ ಬಿಡುವುದರಿಂದ ನಾಡು ಗ್ರಾಮ ಸುಭಿಕ್ಷವಾಗಿರುತ್ತದೆ ಹಾಗೂ ಅದು ಯಾವ ದಿಕ್ಕಿನತ್ತ ಓಡಿ ಹೋಗುತ್ತದೆ ಆ ದಿಕ್ಕಿನ ಕಡೆ ಉತ್ತಮ ಮಳೆ,ಬೆಳೆ ಆಗುತ್ತದೆ ಎಂಬ ನಂಬಿಕೆ ಇದೆ: ಕಾಂತರಾಜು ದೇವಸ್ಥಾನದ ಕನ್ವೀನಿಯರ್.
----------------
ವಿಷ್ಣು ದೇವರ ಹೆಸರಿನಲ್ಲಿ ಸಾಂಕೇತಿಕವಾಗಿ ಮೊಲ ಹಿಡಿಯುವುದು ಸಂಪ್ರದಾಯವೇ ಆಗಿ ನಡೆದು ಬರುತ್ತಿದ್ದು, ಇತ್ತೀಚಿನ ದಿನದಲ್ಲಿ ಗುಡ್ಡಬೆಟ್ಟಗಳೆಲ್ಲ ಬಯಲಾಗಿ ಮೊಲ ಸಿಗುವುದೇ ಕಷ್ಟಕರವಾಗಿದೆ. ಅದರೂ ಸಹ ಈ ಸಂಪ್ರದಾಯವನ್ನು ಬಿಡದೆ ಪಾಲಿಸಿಕೊಂಡು ಬರಲಾಗುತ್ತಿದೆ: ಭಕ್ತೇಶ್,ಅರ್ಚಕರು.

-------------------

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.