ಇಸ್ಲಾಂ ಸಮುದಾಯದ ಪ್ರವಾದಿ ಮಹಮದ್ ಪೈಗಂಬರರ ಜನ್ಮ ದಿನದ ಅಂಗವಾಗಿ ಪಟ್ಟಣದಲ್ಲಿ ಈದ್-ಮಿಲಾದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಭಾನುವಾರದಂದು ಆಚರಿಸಲಾಯಿತು.
![]() |
| ಹುಳಿಯಾರಿನ ಮುಸ್ಲಿಂ ಸಮುದಾಯದವರು ಈದ್-ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. |
ಹಬ್ಬದ ಅಂಗವಾಗಿ ಪಟ್ಟಣದ ಮದೀನಾ,ನೂರಾನಿ,ಜಾಮೀಯ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಅಪಾರ ಸಂಖ್ಯೆಯ ಮುಸ್ಲಿಂ ಯುವಕರು ಮಕ್ಕಳೆನ್ನದೆ ಎಲ್ಲರೂ ಮದೀನಾ ಮಸೀದಿಯಲ್ಲಿಗೆ ಆಗಮಿಸಿ ಧರ್ಮಗುರುಗಳೊಂದಿಗೆ ಪಟ್ಟಣದ ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆ, ಬಿ.ಎಚ್.ರಸ್ತೆಯಲ್ಲಿ ಸಾಗಿ ಅಜಾದ್ ನಗರ,ಇಂದಿರಾ ನಗರದ ಮೂಲಕ ಮೆರವಣಿಗೆ ನಡೆಸಿದರು. ಮೆರವಣಿಯುದ್ದಕ್ಕೂ ಪೈಗಂಬರರ ಘೋಷಣೆ ಕೂಗುತ್ತಾ, ಹಾಡಿಗೆ ಹೆಜ್ಜೆಹಾಕುತ್ತಾ, ದೊಡ್ಡದೊಡ್ಡ ಭಾವುಟಗಳನ್ನು ಹಿಡಿದು ಅಲ್ಲಾಹೂವಿನ ಬಗ್ಗೆ ಘೋಷಣೆ ಕೂಗುತ್ತಾ ಸಾಗಿದರು.
ಈದ್-ಮಿಲಾದ್ ಆಚರಣೆಯ ಮಹತ್ವದ ಆಚರಣೆ ಕುರಿತಂತೆ ಜಾಮೀಯ ಮಸೀದಿಯ ಮುತುವಲ್ಲಿ ಜಬೀಉಲ್ಲಾ ಮಾತನಾಡಿ, ಪೈಗಂಬರರತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬ ಮುಸ್ಲಿಂರು ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು ಹಾಗೂ ಪ್ರತಿಯೊಬ್ಬರು ವಿಶಾಲಮನೋಭಾವ ಬೆಳೆಸಿಕೊಂಡು, ಶಾಂತಯುತವಾಗಿ ಬಾಳಬೇಕೆಂದು ಕರೆ ನೀಡಿದರು. ನೂರಾನಿ ಮಸೀದಿಯ ಬೈಜುಸಾಬ್, ಗ್ರಾ.ಪಂ.ಸದಸ್ಯರಾದ ಜಹೀರ್ ಸಾಬ್, ಡಿಶ್ ಬಾಬು ,ಟಿಪ್ಪುಯುವಕ ಸಂಘದ ಇಮ್ರಾಜ್, ಟಿಫ್ಫು ಸಂಘಟನೆಯ ಸದಸ್ಯರು, ಟಿಪ್ಪುಯುವಕ ಸಂಘಟನೆ, ಟಿಫ್ಫು ಮಹಾವೇದಿಕೆಯವರು, ಮದೀನಾ, ಜಾಮೀಯ, ನೂರಾನಿ ಮಸೀದಿಯ ಸದಸ್ಯರು ಹಾಜರಿದ್ದರು, ಮೆರವಣಿಯ ಮಧ್ಯೆ ಯುವಕ ಸಂಘಟನೆ ಹಾಗೂ ಕೆಲ ಅಂಗಡಿಯವರು ಜ್ಯೂಸ್,ಕೇಸರಿ ಬಾತ್, ಹಲ್ವಾ ವಿತರಿಸಿದರು.
![]() |
| ಹುಳಿಯಾರಿನಲ್ಲಿ ಈದ್-ಮಿಲಾದ್ ಹಬ್ಬದ ಅಂಗವಾಗಿ ನಡೆದ ಮೆರವಣಿಯಲ್ಲಿ ಯುವಸಂಘಟನೆಯವರು ತಯಾರಿಸಿದ್ದ ಸಿಹಿಖಾದ್ಯ ಹಾಗೂ ಜ್ಯೂಸ್ ಸಾರ್ವಜನಿಕರಿಗೆ ವಿತರಿಸಿದರು. |
ಹಬ್ಬದ ಅಂಗವಾಗಿ ಮಸೀದಿಗಳನ್ನು ವಿದ್ಯುತ್ ದೀಪದಿಂದ ಅಲಂಕರಿಸಿದ್ದರಲ್ಲದೆ ಸಮುದಾಯದವರಿಗಾಗಿ ಶಾದಿಮಹಲ್ ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಉಳ್ಳವರು ಬಡವರಿಗೆ ಆಹಾರ, ಬಟ್ಟೆಬರೆ ದಾನ ಮಾಡಿದರು. ಪುಟ್ಟಪುಟ್ಟ ಮಕ್ಕಳು ಪೈಗಂಬರರ ವೇಷ ತೊಟ್ಟು ಸಂಭ್ರಮಿಸುತ್ತಿದ್ದರು. ಯಾವುದೇ ಅವಘಡ ಸಂಭವಿಸದಂತೆ ಮಸೀದಿ ಪ್ರದೇಶಗಳಲ್ಲಿ ಹಾಗೂ ಮೆರವಣೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.











ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ