ಹುಳಿಯಾರು ಹೋಬಳಿಯ ಕರ್ನಾಟಕ ರಕ್ಷಣಾ ವೇದಿಕೆಯ ಮಾಜಿಅಧ್ಯಕ್ಷ ಕೋಳಿ ಶ್ರೀನಿವಾಸ್ ಹೊಸವರ್ಷದ ಆಚರಣೆಯ ಅಂಗವಾಗಿ ಶುಕ್ರವಾರ ಪಟ್ಟಣದ ಶಂಕರಪುರ ಬಡಾವಣೆಯ ಅಂಗನವಾಡಿ ಮಕ್ಕಳಿಂದ ಕೇಕ್ ಕತ್ತರಿಸಿದರಲ್ಲದೆ, ಮಕ್ಕಳಿಗೆ ಉಚಿತ ಸ್ಲೇಟ್ ಹಾಗೂ ಲೇಖನ ಸಾಮಗ್ರಿ ವಿತರಿಸಿದರು.
ಹುಳಿಯಾರಿನ ಶಂಕರಪುರ ಬಡಾವಣೆಯ ಅಂಗನವಾಡಿ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಕರವೇ ಮಾಜಿ ಅಧ್ಯಕ್ಷ ಕೋಳೀಶ್ರೀನಿವಾಸ್ ಹೊಸವರ್ಷ ಆಚರಿಸಿದರು.
|
|
ಮಕ್ಕಳಿಗೆ ಲೇಖನ ಸಾಮಗ್ರಿ ವಿತರಿಸಿದ ಕೋಳಿಶ್ರೀನಿವಾಸ್ ಮಾತನಾಡಿ, ಹೊಸವರ್ಷದ ಆಚರಣೆಯ ಹೆಸರಿನಲ್ಲಿ ಹಲವರು ದುಂದುವೆಚ್ಚ ಮಾಡುತ್ತಾರೆ ಅದರ ಬದಲು ತಮ್ಮ ಸುತ್ತಮುತ್ತಲಿನ ಶಾಲೆ, ಅಂಗನವಾಡಿಯಲ್ಲಿನ ಮಕ್ಕಳಿಗೆ ಅವರ ಅಭ್ಯಾಸಕ್ಕೆ ಪೂರಕವಾದ ವಸ್ತುಗಳನ್ನು ಕೊಡಿಸುವ ಮೂಲಕ ಆಚರಣೆ ಮಾಡಿದಾಗ ನಮ್ಮ ಆಚರಣೆಗೆ ಅರ್ಥ ಬರುತ್ತದೆ ಎಂದರು. ವಿದ್ಯಾಭ್ಯಾಸಕ್ಕೆ ಮೊದಲ ಆಯಾಮವಾಗಿರುವ ಅನೇಕ ಅಂಗನವಾಡಿಗಳಿಗೆ ಇಂದು ಸೂಕ್ತ ಕಟ್ಟಡವಿಲ್ಲದೆ, ಮೂಲಭೂತ ವ್ಯವಸ್ಥೆಗಳಿಲ್ಲದೆ ಬಡವಾಗಿವೆ, ಇಂತಹದರ ಬಗ್ಗೆ ಜನಪ್ರತಿನಿಧಿಗಳು ಗಮನ ಮಾಡಿ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದರು. ಮಕ್ಕಳಿಗೆ ಹೊಸವರ್ಷದ ಶುಭಾಷಯ ತಿಳಿಸಿ ಹಾರೈಸಿದರು.
ಅಂಗನವಾಡಿ ಶಿಕ್ಷಕಿ ಅನ್ನಪೂರ್ಣಮ್ಮ ಮಾತನಾಡಿ, ಜಾತ್ರೆ ಉತ್ಸವದಂತಹ ಅನೇಕ ಕಾರ್ಯಕ್ರಮಗಳಿಗೆ ಸಂಘಸಂಸ್ಥೆಯವರು ಹಣ ವಿನಿಯೋಗಿಸುವಂತೆ ಸಮಾಜಮುಖಿ ಕಾರ್ಯಗಳನ್ನು ಮಾಡಲು ಮುಂದಾಗಬೇಕು ಹಾಗೂ ಸಮಾಜದ ಪ್ರತಿಯೊಬ್ಬರಲ್ಲೂ ನಿಸ್ವಾರ್ಥ ಸೇವಾಮನೋಭಾವ ಮೂಡಬೇಕಿದೆ ಎಂದರು. ಈ ವೇಳೆ ನಂಜುಂಡೇಶ್ವರ ಬೇಕರಿಯ ರವಿ, ಪಾನಿಪುರಿ ಮಂಜಣ್ಣ, ಗಂಟೇನಹಳ್ಳಿ ರಾಜಣ್ಣ, ಅಂಗನವಾಡಿ ಶಿಕ್ಷಕಿ ವರಲಕ್ಷ್ಮಿ ಹಾಗೂ ಸಿಬ್ಬಂದಿಯವರಿದ್ದರು.
.jpg)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ