ಹೊಸವರ್ಷದ ಸಂಭ್ರಮಾಚರಣೆಯನ್ನು ಹೇಗೆ ಸಡಗರ ಸಂಭ್ರಮದಿಂದ ಮಾಡುತ್ತೇವೆ ಅದೇ ರೀತಿ ನಮ್ಮ ಮನಸ್ಸಿನಲ್ಲಿ ಹೊಸಹೊಸ ಉತ್ತಮ ಚಿಂತನೆಗಳು ಮೂಡಲಿ ಎಂದು ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಲಕ್ಷ್ಮಿಕಾಂತ್ ತಿಳಿಸಿದರು.
![]() |
| ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯಲ್ಲಿ ನೂತನ ವರ್ಷದ ಆಚರಣೆ ಅಂಗವಾಗಿ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಿಕಾಂತ್ ಕೇಕ್ ಕತ್ತರಿಸಿ,ಶುಭಾಶಯ ತಿಳಿಸಿದರು. |
ಪಟ್ಟಣದ ವಾಸವಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಅಯೋಜಿಸಿದ್ದ ಹೊಸವರ್ಷದ ಸಂಭ್ರಮಾಚರಣೆ ಹಾಗೂ ಸೈನ್ಸ್ ಫೆಸ್ಟ್ ೨೦೧೪-೧೫ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು .
೨೦೧೪ನೇ ಸಾಲಿನಲ್ಲಿ ನಡೆದ ಕ್ರೀಡಾಕೂಟ ಹಾಗೂ ಪರೀಕ್ಷೆಗಳಲ್ಲಿ ನಮ್ಮ ಶಾಲೆಗೆ ಅನೇಕ ಬಹುಮಾನಗಳು ಹಾಗೂ ಉತ್ತಮ ಫಲಿತಾಂಶ ಬಂದಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಅದರಂತೆ ೨೦೧೫ರಲ್ಲೂ ಸಹ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಅಂಕಗಳಿಸುವ ಮೂಲಕ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತನ್ನಿ ಎಂದು ಹಾರೈಸಿದ ಅವರು ಮಕ್ಕಳಿಗೆಲ್ಲಾ ನೂತನ ವರ್ಷದ ಶುಭಾಶಯ ತಿಳಿಸಿದರು.
ಇದೇ ವೇಳೆ ೬ನೇ ತರಗತಿಯ ವಿದ್ಯಾರ್ಥಿಗಳು ವಿಜ್ಞಾನ ಶಿಕ್ಷಕರಾದ ಪದ್ಮಾಕರ್ ಹಾಗೂ ಕ್ಲಾಸ್ ಟೀಚರ್ ರಂಗನಾಥ್ ಅವರ ಮಾರ್ಗದರ್ಶನದಲ್ಲಿ ಸೈನ್ ಫೆಸ್ಟ್-೨೦೧೪-೧೫ ಕಾರ್ಯಕ್ರಮ ನಡೆಸಿದ್ದು, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಹಲವು ಮಾದರಿಗಳು,ಚಾರ್ಟ್ ಸೇರಿದಂತೆ ಇನ್ನಿತರ ಪ್ರಯೋಗಗಳನ್ನು ಪ್ರದರ್ಶಿಸಿದರು.
![]() |
| ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ೬ ನೇ ತರಗತಿ ಮಕ್ಕಳು ಅಯೋಜಿಸಿದ್ದ ಸೈನ್ ಫೆಸ್ಟ್ ೨೦೧೪-೧೫ ಕಾರ್ಯಕ್ರಮದಲ್ಲಿ ಮಕ್ಕಳು ವಿಜ್ಞಾನಕ್ಕೆ ಸಂಬಂಧಿಸಿದ ಕೆಲ ಮಾದರಿಗಳನ್ನು ಪ್ರದರ್ಶಿಸಿದ್ದರು. |
ಈ ಸಂಧರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಮ್ ನಾಥ್,ನಿರ್ದೇಶಕರಾದ ಬಿ.ವಿ.ಶ್ರೀನಿವಾಸ್,ವಿಜಯಮ್ಮ, ನಿವೃತ್ತ ಶಿಕ್ಷಕಿ ಗಾಯತ್ರಿ, ಮುಖ್ಯಶಿಕ್ಷಕ ಮಹೇಶ್, ಶಿಕ್ಷಕರಾದ ಗಂಗಾಧರಯ್ಯ, ಮಂಜುನಾಥ್, ರಮೇಶ್, ಪ್ರಸಾದ್,ರವಿ,ಪ್ರಸನ್ನ,ಶೇಖರ್ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ