ವಿಷಯಕ್ಕೆ ಹೋಗಿ

ಕೆಇಬಿ, ಹಾಸ್ಟೆಲ್ , ಐಬಿ ಕಾಂಪೌಂಡ್ ಮುಂದೆ ಅಂಗಡಿಯಿಡಲು ಸಜ್ಜು ತಹಸೀಲ್ದಾರ್ ರಿಂದ ಮತ್ತೊಮ್ಮೆ ತೆರವು : ಅನಧಿಕೃತ ಅಂಗಡಿಯಿಟ್ಟರೆ ಕಾನೂನುಕ್ರಮ

ಕೆರೆ ಒತ್ತುವರಿ ಕಾರ್ಯಾಚರಣೆಯಲ್ಲಿ ಪಟ್ಟಣದ ಬಸ್ ನಿಲ್ದಾಣದ ಬಳಿ ಅಂಗಡಿಗಳನ್ನು ಕಳೆದುಕೊಂಡ ಅಂಗಡಿದಾರರು ರಸ್ತೆಬದಿಯ ಸರ್ಕಾರಿ ಹಾಗೂ ಸಾರ್ವಜನಿಕ ಜಾಗಗಳಲ್ಲಿ ತರಾತುರಿಯಿಂದ ಅಂಗಡಿಗಳನ್ನಿಡಲು ಜಾಗಗುರುತು ಮಾಡಿಕೊಳ್ಳಲು ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿ, ತಹಸೀಲ್ದಾರ್ ಕಾಮಾಕ್ಷಮ್ಮ ಸ್ಥಳಕ್ಕಾಗಮಿಸಿ ಅಂಗಡಿದಾರರು ಗುರುತಿಗಾಗಿ ನೆಟ್ಟಿದ್ದ ಸರ್ವೆಗಳನ್ನು ತೆರವು ಮಾಡಿದ್ದಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಅಂಗಡಿಗಳನ್ನು ಇಡದಂತೆ ಎಚ್ಚರಿಸಿದ್ದಾರೆ.
ಸರ್ಕಾರಿ ಜಾಗದಲ್ಲಿ ಅಂಗಡಿಗಳನ್ನಿಡದಂತೆ ಪಿಡಿಓ ಗಮನಹರಿಸುವಂತೆ ತಾಕೀತು ಮಾಡಿದ ತಹಸೀಲ್ದಾರ್ ಕಾಮಾಕ್ಷಮ್ಮ.
. ಹುಳಿಯಾರಿನ ಕೆರೆಅಂಗಳದಲ್ಲಿ ಹೆದ್ದಾರಿಗೆ ಲಗತ್ತಾಗಿ ಸುಮಾರು ೮೦ಕ್ಕೂ ಅಧಿಕ ಅಂಗಡಿಗಳನ್ನು ಕಳೆದ ಎರಡು ದಿನಗಳಿಂದಷ್ಟೆ ತೆರವುಗೊಳಿದ್ದರಿಂದ ಬೀದಿಗೆ ಬಿದ್ದ ಅಂಗಡಿದಾರರು ಕೆರೆ ಪ್ರದೇಶ ಹೊರತುಪಡಿಸಿ ಇತರೆ ಸರ್ಕಾರಿ ಜಾಗಗಳಾದ ಬೆಸ್ಕಾಂ ಕಛೇರಿ, ಬಾಲಕರ ಹಾಸ್ಟೆಲ್ ಹಾಗೂ ಪರಿವೀಕ್ಷಣಾ ಮಂದಿರದ ಕಾಂಪೌಡ್ ಮುಂದಿನ ಜಾಗದಲ್ಲಿ ಅಂಗಡಿಗಳನ್ನಿಡಲು ಮುಂದಾದರು. ಹುಳಿಯಾರು-ಹಿರಿಯೂರು ಎಸ್.ಎಚ್-೧೯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಅಂಗಡಿಗಳನ್ನಿಡಲು ತಮಗೆ ಬೇಕಾದ ಜಾಗವನ್ನು ತಾವೇ ಗುರ್ತಿಸಿಕೊಂಡ ಕೆಲ ಅಂಗಡಿದಾರರು ಗಿಡಗಂಟೆಗಳನ್ನು ಕಡಿದು ಸರ್ವೆಮರಗಳನ್ನು ನೆಟ್ಟರೆ,ಮತ್ತೆಕೆಲವರು ತಾವೇ ಆ ಜಾಗದಲ್ಲಿ ನಿಂತು ಇಷ್ಟು ಜಾಗ ನನ್ನದು ಎಂದು ಹೇಳುತ್ತಿದ್ದರು.
ವಿಚಾರ ಕ್ಷಣಾರ್ಧದಲ್ಲೆ ಹರಡಿ ಹೆದ್ದಾರಿಯಲ್ಲಿ ಒಂದಿಚು ಜಾಗಬಿಡದಂತೆ ಆಕ್ರಮಿಸಿಕೊಂಡರು. ಜಾಗ ಸಿಗದ ಕೆಲವರು ಹತಾಶರಾಗಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಮಿಂಚಿನಂತೆ ಸುದ್ದಿ ಮುಟ್ಟಿಸಿದರೆ ಕೆಇಬಿ ಅಧಿಕಾರಿಗಳು ಸಹ ಕಛೇರಿ ಮುಂದೆ ತೆರವು ಮಾಡಲು ಸೂಚಿಸಿದ್ದಾರೆ .
ಸ್ಥಳಕ್ಕಾಗಮಿಸಿದ ಪಿಎಸೈ ಪ್ರವೀಣ್ ಕುಮಾರ್ ಅವರು ಅಂಗಡಿದಾರರೊಂದಿಗೆ ಚರ್ಚಿಸಿ ಇಲ್ಲಿ ಅಂಗಡಿಯಿಡಲು ಯಾರು ಒಪ್ಪಿಗೆ ಕೊಟ್ಟಿದ್ದಾರೆ ಈರೀತಿ ಏಕಾಏಕಿ ಸಾರ್ವಜನಿಕ ಸ್ಥಳದಲ್ಲಿ ಅಂಗಡಿಯನ್ನಿಡಲು ಮುಂದಾಗುವುದು ಕಾನೂನುಬಾಹಿರ ಎಂದು ಅಂಗಡಿದಾರರನ್ನು ತಡೆಯುವಲ್ಲಿ ಮುಂದಾದರು.
ತಹಸೀಲ್ದಾರ್ ಕಾಮಾಕ್ಷಮ್ಮ ,ತಾಲ್ಲೂಕ್ ಪಂಚಾಯ್ತಿಯ ಇಓ ಕೃಷ್ಣಮೂರ್ತಿ ಸ್ಥಳಕ್ಕಾಗಮಿಸಿ ಪಿಡಿಓ ಅಡವೀಶ್ ಅವರನ್ನು ಕರೆಸಿ ಈ ಜಾಗದ ಬಗ್ಗೆ ಮಾಹಿತಿ ಪಡೆದು ನಂತರ ಸಾರ್ವಜನಿಕ ಸ್ಥಳದಲ್ಲಿ ಅಂಗಡಿಯಿಡಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ, ಸರ್ಕಾರಿ ಕಛೇರಿಯ ಮುಂದಿನ ಜಾಗಕ್ಕೆ ಪೆನ್ಸಿಂಗ್ ಮಾಡಿ ಇದು ಸರ್ಕಾರಿ ಜಾಗ ಅತಿಕ್ರಮಣ ನಿಷಿದ್ಧ ಎಂದು ಬೋರ್ಡ್ ಹಾಕಿ . ಒಂದು ವೇಳೆ ಯಾರಾದರೂ ಅನಧಿಕೃತವಾಗಿ ಅಂಗಡಿಗಳನ್ನಿಟ್ಟರೆ ಅವರೆ ಮೇಲೆ ಕಾನೂನುಕ್ರಮ ಕೈಗೊಳ್ಳುವಂತೆ ತಿಳಿಸಿದರು. ಅಂಗಡಿದಾರರು ಗುರ್ತಿಗಾಗಿ ನೆಟ್ಟಿದ್ದ ಸರ್ವೆಮರಗಳನ್ನು ಪಂಚಾಯ್ತಿಯ ವಶಕ್ಕೆ ಪಡೆಯುವಂತೆ ಸೂಚಿಸಿದರು.
ಅಂಗಡಿದಾರರ ಮನವಿ ಆಲಿಸುತ್ತಿರುವ ತಹಸೀಲ್ದಾರ್ ಹಾಗೂ ಇಓ ಕೃಷ್ಣಮೂರ್ತಿ.
ಮಾತಿನಚಕಮುಕಿ: ಸಾರ್ವಜನಿಕ ಸ್ಥಳದಲ್ಲಿ ಅಂಗಡಿಯಿಡುವುದು ತಪ್ಪಾದರೆ ಹುಳಿಯಾರಿನ ತುಂಬಾ ಸರ್ಕಾರಿ ಜಾಗ ಅತಿಕ್ರಮಿಸಿ ಅಂಗಡಿಗಳನ್ನಿಟ್ಟಿರುವುದನ್ನು ತೆರವುಗೊಳಿಸಿ ಅಲ್ಲದೆ ಹೆದ್ದಾರಿ ಜಾಗ ಕಂದಾಯ ಇಲಾಖೆಯವರಿಗೆ ಸೇರದಿರುವುದರಿಂದ ನಮ್ಮನ್ನು ತೆರವುಗೊಳಿಸಲು ತಮಗೆ ಅಧಿಕಾರವೇಯಿಲ್ಲ ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷ್ಯ ಕೃಷ್ಣಪ್ಪ ಮಾತಿನಚಕಮುಕಿ ನಡೆಸಿದರು.
ಅಂಗಡಿದಾರು ಇಲ್ಲಿಯೂ ಜಾಗದ ಸಿಗದ ಹಿನ್ನಲೆಯಲ್ಲಿ ಆಕ್ರೋಶಗೊಂಡು ನಮ್ಮ ಅಂಗಡಿಗಳನ್ನು ಸ್ವಲ್ಪವೂ ಕರುಣೆಯಿಲ್ಲದೆ ತೆರವು ಮಾಡಿದ್ದೀರಿ. ಈಗ ನಾವು ಬೀದಿಗೆ ಬಿದ್ದಿದ್ದು ಜೀವನಕ್ಕಾಗಿ ಅಂಗಡಿಯಿಡಲು ಸೂಕ್ತ ಜಾಗ ಕೊಡಿಸಿ ಎಂದು ಅಂಗಲಾಚಿದರು.
ಈವೇಳೆ ಡಿಟಿ ಸತ್ಯನಾರಾಯಣ್,ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ,ಸದಸ್ಯರುಗಳಾದ ರಾಘವೇಂದ್ರ, ವೆಂಕಟಮ್ಮ, ಬಾಲರಾಜ್,ಪ್ರದೀಪ, ಏಜೆಂಟ್ ಕುಮಾರ್ ,ಕರವೇ ಶ್ರೀನಿವಾಸ್, ಬಸವರಾಜು,ಇನ್ನಿತರರಿದ್ದರು.
----------------

ಪಟ್ಟಣದಲ್ಲಿ ಅತಿಕ್ರಮವಾಗಿರುವ ಸರ್ಕಾರಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಗುರ್ತಿಸಿ ಸರ್ವೆ ಮಾಡಿ ಅತಿಕ್ರಮಣದಾರರ ಪಟ್ಟಿ ಮಾಡಿ. ಸೂಕ್ತ ನೋಟೀಸ್ ನೀಡಿದ ನಂತರ ತೆರವುಗೊಳಿಸಿ : ಇಓ ಕೃಷ್ಣಮೂರ್ತಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.