ವಿಷಯಕ್ಕೆ ಹೋಗಿ

ಕೆಇಬಿ, ಹಾಸ್ಟೆಲ್ , ಐಬಿ ಕಾಂಪೌಂಡ್ ಮುಂದೆ ಅಂಗಡಿಯಿಡಲು ಸಜ್ಜು ತಹಸೀಲ್ದಾರ್ ರಿಂದ ಮತ್ತೊಮ್ಮೆ ತೆರವು : ಅನಧಿಕೃತ ಅಂಗಡಿಯಿಟ್ಟರೆ ಕಾನೂನುಕ್ರಮ

ಕೆರೆ ಒತ್ತುವರಿ ಕಾರ್ಯಾಚರಣೆಯಲ್ಲಿ ಪಟ್ಟಣದ ಬಸ್ ನಿಲ್ದಾಣದ ಬಳಿ ಅಂಗಡಿಗಳನ್ನು ಕಳೆದುಕೊಂಡ ಅಂಗಡಿದಾರರು ರಸ್ತೆಬದಿಯ ಸರ್ಕಾರಿ ಹಾಗೂ ಸಾರ್ವಜನಿಕ ಜಾಗಗಳಲ್ಲಿ ತರಾತುರಿಯಿಂದ ಅಂಗಡಿಗಳನ್ನಿಡಲು ಜಾಗಗುರುತು ಮಾಡಿಕೊಳ್ಳಲು ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿ, ತಹಸೀಲ್ದಾರ್ ಕಾಮಾಕ್ಷಮ್ಮ ಸ್ಥಳಕ್ಕಾಗಮಿಸಿ ಅಂಗಡಿದಾರರು ಗುರುತಿಗಾಗಿ ನೆಟ್ಟಿದ್ದ ಸರ್ವೆಗಳನ್ನು ತೆರವು ಮಾಡಿದ್ದಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಅಂಗಡಿಗಳನ್ನು ಇಡದಂತೆ ಎಚ್ಚರಿಸಿದ್ದಾರೆ.
ಸರ್ಕಾರಿ ಜಾಗದಲ್ಲಿ ಅಂಗಡಿಗಳನ್ನಿಡದಂತೆ ಪಿಡಿಓ ಗಮನಹರಿಸುವಂತೆ ತಾಕೀತು ಮಾಡಿದ ತಹಸೀಲ್ದಾರ್ ಕಾಮಾಕ್ಷಮ್ಮ.
. ಹುಳಿಯಾರಿನ ಕೆರೆಅಂಗಳದಲ್ಲಿ ಹೆದ್ದಾರಿಗೆ ಲಗತ್ತಾಗಿ ಸುಮಾರು ೮೦ಕ್ಕೂ ಅಧಿಕ ಅಂಗಡಿಗಳನ್ನು ಕಳೆದ ಎರಡು ದಿನಗಳಿಂದಷ್ಟೆ ತೆರವುಗೊಳಿದ್ದರಿಂದ ಬೀದಿಗೆ ಬಿದ್ದ ಅಂಗಡಿದಾರರು ಕೆರೆ ಪ್ರದೇಶ ಹೊರತುಪಡಿಸಿ ಇತರೆ ಸರ್ಕಾರಿ ಜಾಗಗಳಾದ ಬೆಸ್ಕಾಂ ಕಛೇರಿ, ಬಾಲಕರ ಹಾಸ್ಟೆಲ್ ಹಾಗೂ ಪರಿವೀಕ್ಷಣಾ ಮಂದಿರದ ಕಾಂಪೌಡ್ ಮುಂದಿನ ಜಾಗದಲ್ಲಿ ಅಂಗಡಿಗಳನ್ನಿಡಲು ಮುಂದಾದರು. ಹುಳಿಯಾರು-ಹಿರಿಯೂರು ಎಸ್.ಎಚ್-೧೯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಅಂಗಡಿಗಳನ್ನಿಡಲು ತಮಗೆ ಬೇಕಾದ ಜಾಗವನ್ನು ತಾವೇ ಗುರ್ತಿಸಿಕೊಂಡ ಕೆಲ ಅಂಗಡಿದಾರರು ಗಿಡಗಂಟೆಗಳನ್ನು ಕಡಿದು ಸರ್ವೆಮರಗಳನ್ನು ನೆಟ್ಟರೆ,ಮತ್ತೆಕೆಲವರು ತಾವೇ ಆ ಜಾಗದಲ್ಲಿ ನಿಂತು ಇಷ್ಟು ಜಾಗ ನನ್ನದು ಎಂದು ಹೇಳುತ್ತಿದ್ದರು.
ವಿಚಾರ ಕ್ಷಣಾರ್ಧದಲ್ಲೆ ಹರಡಿ ಹೆದ್ದಾರಿಯಲ್ಲಿ ಒಂದಿಚು ಜಾಗಬಿಡದಂತೆ ಆಕ್ರಮಿಸಿಕೊಂಡರು. ಜಾಗ ಸಿಗದ ಕೆಲವರು ಹತಾಶರಾಗಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಮಿಂಚಿನಂತೆ ಸುದ್ದಿ ಮುಟ್ಟಿಸಿದರೆ ಕೆಇಬಿ ಅಧಿಕಾರಿಗಳು ಸಹ ಕಛೇರಿ ಮುಂದೆ ತೆರವು ಮಾಡಲು ಸೂಚಿಸಿದ್ದಾರೆ .
ಸ್ಥಳಕ್ಕಾಗಮಿಸಿದ ಪಿಎಸೈ ಪ್ರವೀಣ್ ಕುಮಾರ್ ಅವರು ಅಂಗಡಿದಾರರೊಂದಿಗೆ ಚರ್ಚಿಸಿ ಇಲ್ಲಿ ಅಂಗಡಿಯಿಡಲು ಯಾರು ಒಪ್ಪಿಗೆ ಕೊಟ್ಟಿದ್ದಾರೆ ಈರೀತಿ ಏಕಾಏಕಿ ಸಾರ್ವಜನಿಕ ಸ್ಥಳದಲ್ಲಿ ಅಂಗಡಿಯನ್ನಿಡಲು ಮುಂದಾಗುವುದು ಕಾನೂನುಬಾಹಿರ ಎಂದು ಅಂಗಡಿದಾರರನ್ನು ತಡೆಯುವಲ್ಲಿ ಮುಂದಾದರು.
ತಹಸೀಲ್ದಾರ್ ಕಾಮಾಕ್ಷಮ್ಮ ,ತಾಲ್ಲೂಕ್ ಪಂಚಾಯ್ತಿಯ ಇಓ ಕೃಷ್ಣಮೂರ್ತಿ ಸ್ಥಳಕ್ಕಾಗಮಿಸಿ ಪಿಡಿಓ ಅಡವೀಶ್ ಅವರನ್ನು ಕರೆಸಿ ಈ ಜಾಗದ ಬಗ್ಗೆ ಮಾಹಿತಿ ಪಡೆದು ನಂತರ ಸಾರ್ವಜನಿಕ ಸ್ಥಳದಲ್ಲಿ ಅಂಗಡಿಯಿಡಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ, ಸರ್ಕಾರಿ ಕಛೇರಿಯ ಮುಂದಿನ ಜಾಗಕ್ಕೆ ಪೆನ್ಸಿಂಗ್ ಮಾಡಿ ಇದು ಸರ್ಕಾರಿ ಜಾಗ ಅತಿಕ್ರಮಣ ನಿಷಿದ್ಧ ಎಂದು ಬೋರ್ಡ್ ಹಾಕಿ . ಒಂದು ವೇಳೆ ಯಾರಾದರೂ ಅನಧಿಕೃತವಾಗಿ ಅಂಗಡಿಗಳನ್ನಿಟ್ಟರೆ ಅವರೆ ಮೇಲೆ ಕಾನೂನುಕ್ರಮ ಕೈಗೊಳ್ಳುವಂತೆ ತಿಳಿಸಿದರು. ಅಂಗಡಿದಾರರು ಗುರ್ತಿಗಾಗಿ ನೆಟ್ಟಿದ್ದ ಸರ್ವೆಮರಗಳನ್ನು ಪಂಚಾಯ್ತಿಯ ವಶಕ್ಕೆ ಪಡೆಯುವಂತೆ ಸೂಚಿಸಿದರು.
ಅಂಗಡಿದಾರರ ಮನವಿ ಆಲಿಸುತ್ತಿರುವ ತಹಸೀಲ್ದಾರ್ ಹಾಗೂ ಇಓ ಕೃಷ್ಣಮೂರ್ತಿ.
ಮಾತಿನಚಕಮುಕಿ: ಸಾರ್ವಜನಿಕ ಸ್ಥಳದಲ್ಲಿ ಅಂಗಡಿಯಿಡುವುದು ತಪ್ಪಾದರೆ ಹುಳಿಯಾರಿನ ತುಂಬಾ ಸರ್ಕಾರಿ ಜಾಗ ಅತಿಕ್ರಮಿಸಿ ಅಂಗಡಿಗಳನ್ನಿಟ್ಟಿರುವುದನ್ನು ತೆರವುಗೊಳಿಸಿ ಅಲ್ಲದೆ ಹೆದ್ದಾರಿ ಜಾಗ ಕಂದಾಯ ಇಲಾಖೆಯವರಿಗೆ ಸೇರದಿರುವುದರಿಂದ ನಮ್ಮನ್ನು ತೆರವುಗೊಳಿಸಲು ತಮಗೆ ಅಧಿಕಾರವೇಯಿಲ್ಲ ಎಂದು ಗ್ರಾ.ಪಂ.ಮಾಜಿ ಅಧ್ಯಕ್ಷ್ಯ ಕೃಷ್ಣಪ್ಪ ಮಾತಿನಚಕಮುಕಿ ನಡೆಸಿದರು.
ಅಂಗಡಿದಾರು ಇಲ್ಲಿಯೂ ಜಾಗದ ಸಿಗದ ಹಿನ್ನಲೆಯಲ್ಲಿ ಆಕ್ರೋಶಗೊಂಡು ನಮ್ಮ ಅಂಗಡಿಗಳನ್ನು ಸ್ವಲ್ಪವೂ ಕರುಣೆಯಿಲ್ಲದೆ ತೆರವು ಮಾಡಿದ್ದೀರಿ. ಈಗ ನಾವು ಬೀದಿಗೆ ಬಿದ್ದಿದ್ದು ಜೀವನಕ್ಕಾಗಿ ಅಂಗಡಿಯಿಡಲು ಸೂಕ್ತ ಜಾಗ ಕೊಡಿಸಿ ಎಂದು ಅಂಗಲಾಚಿದರು.
ಈವೇಳೆ ಡಿಟಿ ಸತ್ಯನಾರಾಯಣ್,ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ,ಸದಸ್ಯರುಗಳಾದ ರಾಘವೇಂದ್ರ, ವೆಂಕಟಮ್ಮ, ಬಾಲರಾಜ್,ಪ್ರದೀಪ, ಏಜೆಂಟ್ ಕುಮಾರ್ ,ಕರವೇ ಶ್ರೀನಿವಾಸ್, ಬಸವರಾಜು,ಇನ್ನಿತರರಿದ್ದರು.
----------------

ಪಟ್ಟಣದಲ್ಲಿ ಅತಿಕ್ರಮವಾಗಿರುವ ಸರ್ಕಾರಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಗುರ್ತಿಸಿ ಸರ್ವೆ ಮಾಡಿ ಅತಿಕ್ರಮಣದಾರರ ಪಟ್ಟಿ ಮಾಡಿ. ಸೂಕ್ತ ನೋಟೀಸ್ ನೀಡಿದ ನಂತರ ತೆರವುಗೊಳಿಸಿ : ಇಓ ಕೃಷ್ಣಮೂರ್ತಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...