ವಿಷಯಕ್ಕೆ ಹೋಗಿ

ಸರ್ವೆ ನ್ಯಾಯಸಮ್ಮತವಾಗಿಲ್ಲ : ಅಂಗಡಿದಾರರ ಪ್ರತಿಭಟನೆ - ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಅಂಗಡಿ ತೆರವು

ಕಳೆದ ಮೂರು ತಿಂಗಳಿಂದ ಮುಂದೂಡುತಲೆ ಬಂದಿದ್ದ ಪಟ್ಟಣದ ಬಸ್ ನಿಲ್ದಾಣದ ಕೆರೆ ಜಾಗದಲ್ಲಿನ ಅಂಗಡಿ ತೆರವು ವಿವಾದದ ನಡುವೆಯೂ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ತೆರವು ಮಾಡಲಾಯಿತು. ಸುಪ್ರಿಂಕೋರ್ಟ್ ಆದೇಶದನ್ವಯ ತಾಲ್ಲೂಕ್ ಆಡಳಿತದಿಂದ ಕೈಗೊಳ್ಳಲಾಗಿದ್ದ ಒತ್ತುವರಿ ಕಾರ್ಯಕ್ರಮ ಒತ್ತಡದ ನಡುವೆ ಸಾಕಷ್ಟು ಕಾಲಾವಾಕಾಶ ನೀಡಿದ ನಂತರ ಸೋಮವಾರ ಅಂತಿಮವಾಗಿ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳ ಸಮಕ್ಷಮದಲ್ಲಿ ನಡೆಯಿತು.
ಕೆರೆಒತ್ತುವರಿ ತೆರವುಗೊಳಿಸಿದ ತಹಸೀಲ್ದಾರ್ ಕಾಮಾಕ್ಷಮ್ಮ 
 ಕಳೆದ ಮೂರು ತಿಂಗಳಿನಿಂದಲೂ ರಾಜಕೀಯ ಒತ್ತಡದಿಂದ ಮುಂದೂಡತ್ತಲೆ ಬಂದಿದ್ದ ತೆರವು ಇಂದು ಯಾವುದೇ ಕಾರಣದಿಂದಲೂ ನಿಲ್ಲುವುದಿಲ್ಲ ಎಂದು ಅರಿತ ಅಂಗಡಿದಾರರು ಸ್ವಯಂಪ್ರೇರಿತರಾಗಿ ತಮ್ಮತಮ್ಮ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ಮುಂದಾಗಿದ್ದರು. ಆದರೆ ಅಧಿಕಾರಿಗಳು ಈ ಹಿಂದೆ ಅಳತೆಯಲ್ಲಿ ಮಾಡಿದ ಎಡವಟ್ಟಿನಿಂದ ಸಮಸ್ಯೆತಲೆದೂರಿ ವಿಕೋಪಕ್ಕೆ ತಿರುಗಿ ಪ್ರತಿಭಟನೆಯೂ ಸಹ ನಡೆಯುವಂತೆ ಮಾಡಿತು. ಹಿಂದಿನ ಪಟ್ಟಿಯಲ್ಲಿದ್ದ ಅಂಗಡಿಯಾತನೊಬ್ಬನನ್ನು ಕೈಬಿಟ್ಟು ಉಳಿದ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಿದ್ದೆ ಎಲ್ಲರ ಆಕ್ರೋಶಕ್ಕೆ ಕಾರಣವಾಯಿತು.

ಲಕ್ಷ್ಮಿಹಾರ್ಡ್ ವೇರ್ಅಂಗಡಿಯನ್ನು ಕೈಬಿಟ್ಟಿದ್ದಾರೆಂದು ಆರೋಪಿಸಿ ಅಂಗಡಿದಾರರು ಪ್ರತಿಭಟನೆ ನಡೆಸಿದರು.
ಸಮಸ್ಯೆ ಏನು: ಸೋಮವಾರ ಬೆಳಿಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕೆರೆಯ ಗಡಿ ಗುರ್ತಿಸಲು ಬಂದಾಗ ಕಳೆದ ಬಾರಿ ಮಾಡಿ ಸರ್ವೆ ಮಾಡಿ ಗುರ್ತಿಸಿದ್ದ ಕರೆಯ ಗಡಿಯೂ ಸದ್ಯ ತೋರಿಸುತ್ತಿರುವ ಗಡಿಯೂ ಸಾಕಷ್ಟು ವ್ಯತ್ಯಾಸ ಕಂಡುಬಂತು. ಕಳೆದ ಬಾರಿ ಶಂಕರಪುರ ಬಡಾವಣೆ ಕಡೆಯಲ್ಲಿರುವ ಲಕ್ಷ್ಮಿ ಹಾರ್ಡ್ ವೇರ್ ಸೇರಿದಂತೆ ಮೂರ್ನಾಲ್ಕು ಅಂಗಡಿಗಳು ಕೆರೆ ಒತ್ತುವರಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಕೆರಳಿದ ಸಾರ್ವಜನಿಕರು ಕಳೆದ ಬಾರಿ ಸರ್ವೆ ಮಾಡಿದಾಗ ಲಕ್ಷ್ಮಿ ಹಾರ್ಡ್ ವೇರ್ ನ ಅಂಗಡಿಯ ಪಕ್ಕದ ಸುಮಾರು ಹತ್ತನಡೆರಡು ಅಡಿಯಷ್ಟು ಜಾಗ ಕೆರೆಗೆ ಸೇರುತ್ತದೆ ಎಂದು ಹೇಳಿ ಇದೀಗ ಇಲ್ಲ ಎಂದು ಹೇಳುತ್ತಿದ್ದಿರಾ ಎಂದು ಅಧಿಕಾರಿಗಳೊಂದಿಗೆ ಮಾತಿನ ಚಕಮುಕಿಗೆ ಮುಂದಾದರು.
ಎಲ್ಲರ ಒತ್ತಡಕ್ಕೆ ಮಣಿದ ತಹಸೀಲ್ದಾರ್ ಕಾಮಾಕ್ಷಮ್ಮ ಸರ್ವೆಯರ್ ರೊಂದಿಗೆ ಎಲ್ಲರ ಎದುರೆ ಮತ್ತೊಮ್ಮೆ ಆಳತೆ ಮಾಡಿಸಿದರು ಸಹ ಒಪ್ಪದ ಜನ ನೀವು ಈಹಿಂದೆ ಕೆರೆಬಾವಿಯಿಂದ ಅಳತೆ ಮಾಡಿದ್ದು, ಈಗ ಅಲ್ಲಿಂದ ೫೦೦ ಅಡಿ ದೂರವಿರುವ ಕೆರೆಯ ತೂಬಿನ ಬಳಿಯಿಂದ ಅಳತೆ ಮಾಡಿಸುತ್ತಿರುವುದು ತಪ್ಪೆಂದು ವಾಗ್ವಾದ ನಡೆಸಿದರು. ಕೇವಲ ಅಂಗಡಿಯೊಬ್ಬಾತನನ್ನು ಉಳಿಸುವ ನೆಪದಲ್ಲಿ ಬೇರೆ ಪಾಯಿಂಟ್ ನಿಂದ ಸರ್ವೆ ಮಾಡುತ್ತಿದ್ದು ನಿಮ್ಮ ಅಳತೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಗಾದೆ ತೆಗೆದರು.
ಧಿಕ್ಕಾರ: ಇವರ ಮನವಿಯನ್ನು ಪುರಸ್ಕರಿಸದ ತಹಸೀಲ್ದಾರ್ ವಿರುದ್ದ ಧಿಕ್ಕಾರ ಕೂಗಿದ ಅಂಗಡಿದಾರರು ಕಂದಾಯ ಇಲಾಖೆ ಅಧಿಕಾರಿಗಳು ೨೫ ಲಕ್ಷರೂಪಾಯಿ ಹಣಪಡೆದು ಅಳತೆಯಲ್ಲಿ ವ್ಯತ್ಯಾಸ ತೋರಿಸುತ್ತಿದ್ದಾರೆಂದು ಕೆಲ ಸಮಯ ಉರಿಬಿಸಿಲಲ್ಲಿ ಲಕ್ಷ್ಮಿ ಹಾರ್ಡ್ ವೇರ್ ಮುಂದೆ ಪ್ರತಿಭಟನೆ ಕುಳಿತರು. ಇದು ಬಡಜನರಿಗೆ ಮಾಡುತ್ತಿರುವ ಅನ್ಯಾಯ ಇದರಿಂದ ಸಾವಿರಾರು ಬಡಪಾಯಿಗಳ ಬದುಕು ಬೀದಿಗೆ ಬಂದಿದೆ ಎಂದು ಅಲವತ್ತು ಕೊಂಡರು.
ಸಮಸ್ಯೆಯನ್ನು ಅವಲೋಕಿಸಿದ ತಹಸೀಲ್ದಾರ್ ಸಂಜೆಯವರೆಗೂ ತಟಸ್ಥವಾಗಿದ್ದು ನಂತರ ಹುಳಿಯಾರು ಪೊಲೀಸ್ ಸೇರಿದಂತೆ ಹಂದನಕೆರೆ, ಚಿಕ್ಕನಾಯಕನಹಳ್ಳಿಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ತರಿಸಿ ಸಂಜೆ ೫ ಗಂಟೆ ವೇಳೆಗೆ ೨ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿದರು.
ಮುಂಜಾನೆಯೇ ಅಂಗಡಿಯನ್ನು ಸ್ವಯಂಪ್ರೇರಿತರಾಗಿ ತೆರವುಗೊಳಿಸಿದ್ದ ಪ್ರತಿಭಟನೆಕಾರರು ಅಳತೆ ನೆಪದಲ್ಲಿ ಈಗ ಬಿಟ್ಟಿರುವ ಲಕ್ಷ್ಮಿಹಾರ್ಡ್ ವೇರ್ ಅಂಗಡಿಯ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿ ತೆರವುಗೊಳಿಸಿಯೇ ಸಿದ್ದ ಎಂದು ಹೆಚ್ಚಿನ ಸಮಸ್ಯೆವೊಡ್ಡದೆ ಸುಮ್ಮನಾದರು.

  ಕಳೆದ ಬಾರಿ ಸರ್ವೆ ಮಾಡಿದಾಗ ಇದ್ದ ಪಟ್ಟಿಗೂ ಹಾಗೂ ಈಬಾರಿ ಹೇಳುತ್ತಿರುವ ಅಂಗಡಿದಾರರ ಪಟ್ಟಿಗೂ ಸಾಕಷ್ಟು ವ್ಯತ್ಯಾಸವಿದೆ ಇಲಾಖೆಯವರು ಅಂಗಡಿದಾರನೊಬ್ಬನ ಅಮೀಷಕ್ಕೆ ಒಳಗಾಗಿ ಆತನ ಅಂಗಡಿ ಕೆರೆ ಒತ್ತುವರಿಗೆ ಸೇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಇಲಾಖೆಯವರು ಆ ಅಂಗಡಿದಾರನಿಂದ ಲಂಚ ಪಡೆದಿದ್ದಾರೆ ಎಂಬ ಗುಮಾನಿ ಹುಟ್ಟುತ್ತದೆ :
ಮಲ್ಲೇಶಣ್ಣ , ಶನೇಶ್ವರದೇವಸ್ಥಾನದ ಅಧ್ಯಕ್ಷ .
ಸರ್ವೆಕಾರ್ಯದಲ್ಲಿ ತಹಸೀಲ್ದಾರ್ ಕಾಮಾಕ್ಷಮ್ಮ, ಸಿಪಿಐ ಜಯಕುಮಾರ್ , ಹುಳಿಯಾರು ಪಿಎಸೈ ಪ್ರವೀಣ್ ಕುಮಾರ್, ಹಂದನಕೆರೆ ಪಿಎಸೈ ಸುನಿಲ್ ಕುಮಾರ್, ಚಿ.ನಾ.ಹಳ್ಳಿ ಪಿಎಸೈ ಮಹಾಲಕ್ಷ್ಮಿ ,ತಾಲ್ಲೂಕ್ ಸರ್ವೆಯರ್ ಬಸವರಾಜ್, ಲಕ್ಷ್ಮಿನರಸಿಂಹಯ್ಯ, ಸರ್ವೆ ಸೂಪರ್ ವೈಸರ್ ಮಹೇಶ್, ಡಿಟಿ ಸತ್ಯನಾರಾಯಣ್, ಆರ್ ಐ ಹನುಮಂತನಾಯಕ್, ಗ್ರಾಮಖ್ಖಿಗರಾದ ಶ್ರೀನಿವಾಸ್,ಸುಬ್ಬರಾಯಪ್ಪ ಮುಂತಾದವರಿದ್ದರು.
 ಇಲಾಖೆಯವರು ಮಾಡಿರುವ ಸರ್ವೆ ನ್ಯಾಯಸಮ್ಮತವಾಗಿಲ್ಲ. ತಮಗೆ ೮೦ ವರ್ಷವಯಸ್ಸಾಗಿದ್ದು ಈ ಹಿಂದೆಯಿದ್ದ ಕೆರೆಯ ಜಾಗ ಎಲ್ಲಿಯವರೆಗಿದೆ ಎಂದು ತಮಗೂ ತಿಳಿದಿದ್ದು , ಈಗ ಇಲ್ಲ ಸಲ್ಲದಂತೆ ಹೇಳುತ್ತಿದ್ದು, ಒಬ್ಬ ವ್ಯಕ್ತಿಯ ಅಂಗಡಿಯನ್ನು ಉಳಿಸುವನಿಟ್ಟಿನಲ್ಲಿ ಕೆರೆ ಅಳತೆಯನ್ನು ತಿರುಚುವಕಾರ್ಯ ಮಾಡುತ್ತಿದ್ದಾರೆ : ಮಾಜಿ ಗ್ರಾ.ಪಂ.ಸದಸ್ಯ ಮೀಸೆರಂಗಪ್ಪ

ಈ ಹಿಂದೆ ಸರ್ವೆ ಮಾಡಿಸಿ ಒತ್ತುವರಿದಾರರ ಪಟ್ಟಿ ತಯಾರಿಸಿ ಎಲ್ಲರಿಗೂ ಅಂತಿಮ ನೋಟೀಸ್ ನೀಡಿದ್ದ ಅಧಿಕಾರಿಗಳು ಇದೀಗ ಕೆರೆಜಾಗವನ್ನು ಸುಮಾರು ನೂರು ಅಡಿಯಷ್ಟು ಹಿಂದಕ್ಕೆ ತೋರಿಸುತ್ತಿದ್ದು ಗೊಂದಲಕ್ಕೆ ಕಾರಣವಾಗಿದೆ ಸರ್ವೆಯರ್ ಮಾಡಿದ ತಪ್ಪೇ ಇಂದಿನ ಗೊಂದಲಕ್ಕೆ ಕಾರಣ :
ಹೇಮಂತ್ .ಗ್ರಾ.ಪಂ.ಸದಸ್ಯ.
       ಕೆರೆ ಅಂಗಳದ ಅಂಗಡಿ ತೆರವಿನಿಂದ ಅನೇಕ ಮಂದಿ ಬೀದಿಗೆ ಬಂದಿದ್ದಾರಲ್ಲದೆ ಇಲಾಖೆಯವರು ಒತ್ತುವರಿ ತೆರವಿಗಾಗಿ ಮಾಡಿರುವ ಸರ್ವೆಯಲ್ಲಿ ಲೋಪವಿದ್ದು ಈ ಬಗ್ಗೆ ಸರಿಯಾಗಿ ಸರ್ವೆಯಾಗಬೇಕು ಇಲ್ಲವಾದರೆ ಅಂಗಡಿದಾರರೆಲ್ಲಾ ಸೇರಿ ಲೋಕಾಯುಕ್ತರಿಗೆ ಈ ಬಗ್ಗೆ ದೂರು ನೀಡುತ್ತೇವೆ : 
ಕರವೇ ಶ್ರೀನಿವಾಸ್ .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...