ವಿಷಯಕ್ಕೆ ಹೋಗಿ

ಸರ್ವೆ ನ್ಯಾಯಸಮ್ಮತವಾಗಿಲ್ಲ : ಅಂಗಡಿದಾರರ ಪ್ರತಿಭಟನೆ - ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಅಂಗಡಿ ತೆರವು

ಕಳೆದ ಮೂರು ತಿಂಗಳಿಂದ ಮುಂದೂಡುತಲೆ ಬಂದಿದ್ದ ಪಟ್ಟಣದ ಬಸ್ ನಿಲ್ದಾಣದ ಕೆರೆ ಜಾಗದಲ್ಲಿನ ಅಂಗಡಿ ತೆರವು ವಿವಾದದ ನಡುವೆಯೂ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ತೆರವು ಮಾಡಲಾಯಿತು. ಸುಪ್ರಿಂಕೋರ್ಟ್ ಆದೇಶದನ್ವಯ ತಾಲ್ಲೂಕ್ ಆಡಳಿತದಿಂದ ಕೈಗೊಳ್ಳಲಾಗಿದ್ದ ಒತ್ತುವರಿ ಕಾರ್ಯಕ್ರಮ ಒತ್ತಡದ ನಡುವೆ ಸಾಕಷ್ಟು ಕಾಲಾವಾಕಾಶ ನೀಡಿದ ನಂತರ ಸೋಮವಾರ ಅಂತಿಮವಾಗಿ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳ ಸಮಕ್ಷಮದಲ್ಲಿ ನಡೆಯಿತು.
ಕೆರೆಒತ್ತುವರಿ ತೆರವುಗೊಳಿಸಿದ ತಹಸೀಲ್ದಾರ್ ಕಾಮಾಕ್ಷಮ್ಮ 
 ಕಳೆದ ಮೂರು ತಿಂಗಳಿನಿಂದಲೂ ರಾಜಕೀಯ ಒತ್ತಡದಿಂದ ಮುಂದೂಡತ್ತಲೆ ಬಂದಿದ್ದ ತೆರವು ಇಂದು ಯಾವುದೇ ಕಾರಣದಿಂದಲೂ ನಿಲ್ಲುವುದಿಲ್ಲ ಎಂದು ಅರಿತ ಅಂಗಡಿದಾರರು ಸ್ವಯಂಪ್ರೇರಿತರಾಗಿ ತಮ್ಮತಮ್ಮ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ಮುಂದಾಗಿದ್ದರು. ಆದರೆ ಅಧಿಕಾರಿಗಳು ಈ ಹಿಂದೆ ಅಳತೆಯಲ್ಲಿ ಮಾಡಿದ ಎಡವಟ್ಟಿನಿಂದ ಸಮಸ್ಯೆತಲೆದೂರಿ ವಿಕೋಪಕ್ಕೆ ತಿರುಗಿ ಪ್ರತಿಭಟನೆಯೂ ಸಹ ನಡೆಯುವಂತೆ ಮಾಡಿತು. ಹಿಂದಿನ ಪಟ್ಟಿಯಲ್ಲಿದ್ದ ಅಂಗಡಿಯಾತನೊಬ್ಬನನ್ನು ಕೈಬಿಟ್ಟು ಉಳಿದ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಿದ್ದೆ ಎಲ್ಲರ ಆಕ್ರೋಶಕ್ಕೆ ಕಾರಣವಾಯಿತು.

ಲಕ್ಷ್ಮಿಹಾರ್ಡ್ ವೇರ್ಅಂಗಡಿಯನ್ನು ಕೈಬಿಟ್ಟಿದ್ದಾರೆಂದು ಆರೋಪಿಸಿ ಅಂಗಡಿದಾರರು ಪ್ರತಿಭಟನೆ ನಡೆಸಿದರು.
ಸಮಸ್ಯೆ ಏನು: ಸೋಮವಾರ ಬೆಳಿಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕೆರೆಯ ಗಡಿ ಗುರ್ತಿಸಲು ಬಂದಾಗ ಕಳೆದ ಬಾರಿ ಮಾಡಿ ಸರ್ವೆ ಮಾಡಿ ಗುರ್ತಿಸಿದ್ದ ಕರೆಯ ಗಡಿಯೂ ಸದ್ಯ ತೋರಿಸುತ್ತಿರುವ ಗಡಿಯೂ ಸಾಕಷ್ಟು ವ್ಯತ್ಯಾಸ ಕಂಡುಬಂತು. ಕಳೆದ ಬಾರಿ ಶಂಕರಪುರ ಬಡಾವಣೆ ಕಡೆಯಲ್ಲಿರುವ ಲಕ್ಷ್ಮಿ ಹಾರ್ಡ್ ವೇರ್ ಸೇರಿದಂತೆ ಮೂರ್ನಾಲ್ಕು ಅಂಗಡಿಗಳು ಕೆರೆ ಒತ್ತುವರಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಕೆರಳಿದ ಸಾರ್ವಜನಿಕರು ಕಳೆದ ಬಾರಿ ಸರ್ವೆ ಮಾಡಿದಾಗ ಲಕ್ಷ್ಮಿ ಹಾರ್ಡ್ ವೇರ್ ನ ಅಂಗಡಿಯ ಪಕ್ಕದ ಸುಮಾರು ಹತ್ತನಡೆರಡು ಅಡಿಯಷ್ಟು ಜಾಗ ಕೆರೆಗೆ ಸೇರುತ್ತದೆ ಎಂದು ಹೇಳಿ ಇದೀಗ ಇಲ್ಲ ಎಂದು ಹೇಳುತ್ತಿದ್ದಿರಾ ಎಂದು ಅಧಿಕಾರಿಗಳೊಂದಿಗೆ ಮಾತಿನ ಚಕಮುಕಿಗೆ ಮುಂದಾದರು.
ಎಲ್ಲರ ಒತ್ತಡಕ್ಕೆ ಮಣಿದ ತಹಸೀಲ್ದಾರ್ ಕಾಮಾಕ್ಷಮ್ಮ ಸರ್ವೆಯರ್ ರೊಂದಿಗೆ ಎಲ್ಲರ ಎದುರೆ ಮತ್ತೊಮ್ಮೆ ಆಳತೆ ಮಾಡಿಸಿದರು ಸಹ ಒಪ್ಪದ ಜನ ನೀವು ಈಹಿಂದೆ ಕೆರೆಬಾವಿಯಿಂದ ಅಳತೆ ಮಾಡಿದ್ದು, ಈಗ ಅಲ್ಲಿಂದ ೫೦೦ ಅಡಿ ದೂರವಿರುವ ಕೆರೆಯ ತೂಬಿನ ಬಳಿಯಿಂದ ಅಳತೆ ಮಾಡಿಸುತ್ತಿರುವುದು ತಪ್ಪೆಂದು ವಾಗ್ವಾದ ನಡೆಸಿದರು. ಕೇವಲ ಅಂಗಡಿಯೊಬ್ಬಾತನನ್ನು ಉಳಿಸುವ ನೆಪದಲ್ಲಿ ಬೇರೆ ಪಾಯಿಂಟ್ ನಿಂದ ಸರ್ವೆ ಮಾಡುತ್ತಿದ್ದು ನಿಮ್ಮ ಅಳತೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಗಾದೆ ತೆಗೆದರು.
ಧಿಕ್ಕಾರ: ಇವರ ಮನವಿಯನ್ನು ಪುರಸ್ಕರಿಸದ ತಹಸೀಲ್ದಾರ್ ವಿರುದ್ದ ಧಿಕ್ಕಾರ ಕೂಗಿದ ಅಂಗಡಿದಾರರು ಕಂದಾಯ ಇಲಾಖೆ ಅಧಿಕಾರಿಗಳು ೨೫ ಲಕ್ಷರೂಪಾಯಿ ಹಣಪಡೆದು ಅಳತೆಯಲ್ಲಿ ವ್ಯತ್ಯಾಸ ತೋರಿಸುತ್ತಿದ್ದಾರೆಂದು ಕೆಲ ಸಮಯ ಉರಿಬಿಸಿಲಲ್ಲಿ ಲಕ್ಷ್ಮಿ ಹಾರ್ಡ್ ವೇರ್ ಮುಂದೆ ಪ್ರತಿಭಟನೆ ಕುಳಿತರು. ಇದು ಬಡಜನರಿಗೆ ಮಾಡುತ್ತಿರುವ ಅನ್ಯಾಯ ಇದರಿಂದ ಸಾವಿರಾರು ಬಡಪಾಯಿಗಳ ಬದುಕು ಬೀದಿಗೆ ಬಂದಿದೆ ಎಂದು ಅಲವತ್ತು ಕೊಂಡರು.
ಸಮಸ್ಯೆಯನ್ನು ಅವಲೋಕಿಸಿದ ತಹಸೀಲ್ದಾರ್ ಸಂಜೆಯವರೆಗೂ ತಟಸ್ಥವಾಗಿದ್ದು ನಂತರ ಹುಳಿಯಾರು ಪೊಲೀಸ್ ಸೇರಿದಂತೆ ಹಂದನಕೆರೆ, ಚಿಕ್ಕನಾಯಕನಹಳ್ಳಿಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ತರಿಸಿ ಸಂಜೆ ೫ ಗಂಟೆ ವೇಳೆಗೆ ೨ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿದರು.
ಮುಂಜಾನೆಯೇ ಅಂಗಡಿಯನ್ನು ಸ್ವಯಂಪ್ರೇರಿತರಾಗಿ ತೆರವುಗೊಳಿಸಿದ್ದ ಪ್ರತಿಭಟನೆಕಾರರು ಅಳತೆ ನೆಪದಲ್ಲಿ ಈಗ ಬಿಟ್ಟಿರುವ ಲಕ್ಷ್ಮಿಹಾರ್ಡ್ ವೇರ್ ಅಂಗಡಿಯ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿ ತೆರವುಗೊಳಿಸಿಯೇ ಸಿದ್ದ ಎಂದು ಹೆಚ್ಚಿನ ಸಮಸ್ಯೆವೊಡ್ಡದೆ ಸುಮ್ಮನಾದರು.

  ಕಳೆದ ಬಾರಿ ಸರ್ವೆ ಮಾಡಿದಾಗ ಇದ್ದ ಪಟ್ಟಿಗೂ ಹಾಗೂ ಈಬಾರಿ ಹೇಳುತ್ತಿರುವ ಅಂಗಡಿದಾರರ ಪಟ್ಟಿಗೂ ಸಾಕಷ್ಟು ವ್ಯತ್ಯಾಸವಿದೆ ಇಲಾಖೆಯವರು ಅಂಗಡಿದಾರನೊಬ್ಬನ ಅಮೀಷಕ್ಕೆ ಒಳಗಾಗಿ ಆತನ ಅಂಗಡಿ ಕೆರೆ ಒತ್ತುವರಿಗೆ ಸೇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಇಲಾಖೆಯವರು ಆ ಅಂಗಡಿದಾರನಿಂದ ಲಂಚ ಪಡೆದಿದ್ದಾರೆ ಎಂಬ ಗುಮಾನಿ ಹುಟ್ಟುತ್ತದೆ :
ಮಲ್ಲೇಶಣ್ಣ , ಶನೇಶ್ವರದೇವಸ್ಥಾನದ ಅಧ್ಯಕ್ಷ .
ಸರ್ವೆಕಾರ್ಯದಲ್ಲಿ ತಹಸೀಲ್ದಾರ್ ಕಾಮಾಕ್ಷಮ್ಮ, ಸಿಪಿಐ ಜಯಕುಮಾರ್ , ಹುಳಿಯಾರು ಪಿಎಸೈ ಪ್ರವೀಣ್ ಕುಮಾರ್, ಹಂದನಕೆರೆ ಪಿಎಸೈ ಸುನಿಲ್ ಕುಮಾರ್, ಚಿ.ನಾ.ಹಳ್ಳಿ ಪಿಎಸೈ ಮಹಾಲಕ್ಷ್ಮಿ ,ತಾಲ್ಲೂಕ್ ಸರ್ವೆಯರ್ ಬಸವರಾಜ್, ಲಕ್ಷ್ಮಿನರಸಿಂಹಯ್ಯ, ಸರ್ವೆ ಸೂಪರ್ ವೈಸರ್ ಮಹೇಶ್, ಡಿಟಿ ಸತ್ಯನಾರಾಯಣ್, ಆರ್ ಐ ಹನುಮಂತನಾಯಕ್, ಗ್ರಾಮಖ್ಖಿಗರಾದ ಶ್ರೀನಿವಾಸ್,ಸುಬ್ಬರಾಯಪ್ಪ ಮುಂತಾದವರಿದ್ದರು.
 ಇಲಾಖೆಯವರು ಮಾಡಿರುವ ಸರ್ವೆ ನ್ಯಾಯಸಮ್ಮತವಾಗಿಲ್ಲ. ತಮಗೆ ೮೦ ವರ್ಷವಯಸ್ಸಾಗಿದ್ದು ಈ ಹಿಂದೆಯಿದ್ದ ಕೆರೆಯ ಜಾಗ ಎಲ್ಲಿಯವರೆಗಿದೆ ಎಂದು ತಮಗೂ ತಿಳಿದಿದ್ದು , ಈಗ ಇಲ್ಲ ಸಲ್ಲದಂತೆ ಹೇಳುತ್ತಿದ್ದು, ಒಬ್ಬ ವ್ಯಕ್ತಿಯ ಅಂಗಡಿಯನ್ನು ಉಳಿಸುವನಿಟ್ಟಿನಲ್ಲಿ ಕೆರೆ ಅಳತೆಯನ್ನು ತಿರುಚುವಕಾರ್ಯ ಮಾಡುತ್ತಿದ್ದಾರೆ : ಮಾಜಿ ಗ್ರಾ.ಪಂ.ಸದಸ್ಯ ಮೀಸೆರಂಗಪ್ಪ

ಈ ಹಿಂದೆ ಸರ್ವೆ ಮಾಡಿಸಿ ಒತ್ತುವರಿದಾರರ ಪಟ್ಟಿ ತಯಾರಿಸಿ ಎಲ್ಲರಿಗೂ ಅಂತಿಮ ನೋಟೀಸ್ ನೀಡಿದ್ದ ಅಧಿಕಾರಿಗಳು ಇದೀಗ ಕೆರೆಜಾಗವನ್ನು ಸುಮಾರು ನೂರು ಅಡಿಯಷ್ಟು ಹಿಂದಕ್ಕೆ ತೋರಿಸುತ್ತಿದ್ದು ಗೊಂದಲಕ್ಕೆ ಕಾರಣವಾಗಿದೆ ಸರ್ವೆಯರ್ ಮಾಡಿದ ತಪ್ಪೇ ಇಂದಿನ ಗೊಂದಲಕ್ಕೆ ಕಾರಣ :
ಹೇಮಂತ್ .ಗ್ರಾ.ಪಂ.ಸದಸ್ಯ.
       ಕೆರೆ ಅಂಗಳದ ಅಂಗಡಿ ತೆರವಿನಿಂದ ಅನೇಕ ಮಂದಿ ಬೀದಿಗೆ ಬಂದಿದ್ದಾರಲ್ಲದೆ ಇಲಾಖೆಯವರು ಒತ್ತುವರಿ ತೆರವಿಗಾಗಿ ಮಾಡಿರುವ ಸರ್ವೆಯಲ್ಲಿ ಲೋಪವಿದ್ದು ಈ ಬಗ್ಗೆ ಸರಿಯಾಗಿ ಸರ್ವೆಯಾಗಬೇಕು ಇಲ್ಲವಾದರೆ ಅಂಗಡಿದಾರರೆಲ್ಲಾ ಸೇರಿ ಲೋಕಾಯುಕ್ತರಿಗೆ ಈ ಬಗ್ಗೆ ದೂರು ನೀಡುತ್ತೇವೆ : 
ಕರವೇ ಶ್ರೀನಿವಾಸ್ .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್...

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...