ವಿಷಯಕ್ಕೆ ಹೋಗಿ

ಕೇಂದ್ರ ಬಜೆಟ್ : ಹುಳಿಯಾರಿನಲ್ಲಿ ವ್ಯಕ್ತವಾದ ಪ್ರತಿಕ್ರಿಯೆ

              ಅಭಿವೃದ್ದಿಯ ನಿಟ್ಟಿನಲ್ಲಿ ಜನರ ಹತ್ತುಹಲವಾರು ಭರವಸೆಗಳನ್ನು ಈಡೇರಿಸುವ ಅಂಶಗಳನ್ನೊಳಗೊಂಡಂತೆ ಮೋದಿ ಸಾರಥ್ಯದ ಎನ್ ಡಿಎ ಸರ್ಕಾರದ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರದಂದು ಕೇಂದ್ರದ ಬಜೆಟ್ ಮಂಡಿಸಿದ್ದು , ಬಜೆಟ್ ಬಗ್ಗೆ ಹುಳಿಯಾರಿನಲ್ಲಿ ಜನರಲ್ಲಿ ವ್ಯಕ್ತವಾದ ಪ್ರತಿಕ್ರಿಯೆ
ವ್ಯಕ್ತವಾದ ಪ್ರತಿಕ್ರಿಯೆಗಳು:


 ಬಿಪಿಎಲ್ ಕಾರ್ಡ್ ಹೊಂದಿದ ವಯೋವೃದ್ದರಿಗೆ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಮುಂದಾಗಿರುವುದು ಸ್ವಾಗತಾರ್ಹ ವಿಷಯ. ದೇಶಾದ್ಯಂತ ಈಗಾಗಲೇ ಸ್ವಚ್ಚ ಭಾರತ್ ಹೆಸರಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದಾಗ್ಯೂ ಸಹ ಮತ್ತೆ ೬ ಕೋಟಿ ಶೌಚಾಲಯ ನಿರ್ಮಾಣ ಗುರಿಹೊಂದಿರುವುದು ಯಶಸ್ವಿಯಾಗುತ್ತದೆಯೇ : 
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೆಂಕಟಾಛಲಪತಿ ಶೆಟ್ರು.

 ದೇಶಾದ್ಯಂತ ಹಾಲಿ ಇರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು , ಅನೇಕ ಶಾಲೆಗಳು ಮುಚ್ಚಿವೆ ಹೀಗಿದ್ದರೂ ಸಹ ಬಜೆಟ್ ನಲ್ಲಿ ಪ್ರತಿ ೫ ಕಿ.ಮೀ ಗೆ ಶಾಲೆ ನಿರ್ಮಾಣ ಮಾಡಲು ಮುಂದಾಗಿರುವುದು ಸರಿಯೇ? : ಸ್ಟುಡಿಯೋ ಸುದರ್ಶನ್ 

 ಜನಸಾಮಾನ್ಯರಿಗೆ ನಿತ್ಯ ಅವಶ್ಯಕವಾಗಿರುವ ವಸ್ತುಗಳ ಬೆಲೆ ಹೆಚ್ಚಿಸಿರುವುದಲ್ಲದೆ, ಶಿಕ್ಷಣ ಶುಲ್ಕ, ಹೋಟೆಲ್ ಆಹಾರ , ವಾಟರ್ ಬಿಲ್ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆಮಾಡಿರುವುದು ಜನ ಸಾಮಾನ್ಯರ ಆದಾಯದ ಮೇಲೆ ಹೊರೆ ಹೇರಿದಂತಾಗಿದೆ : ಏಜೆಂಟರ್ ಸಂಘದ ಅಧ್ಯಕ್ಷ ಲೋಕೇಶಣ್ಣ.

ಸಾಕಷ್ಟು ಜನ ಉಪಯೋಗಿಸುವ ಕಂಪ್ಯೂಟರ್, ಲ್ಯಾಪ್ ಟಾಪ್, ವೈಫೈ ಇನ್ನಿತರ ಸೇವೆಗಳ ಬೆಲೆಯನ್ನು ಏರಿಕೆ ಮಾಡಿ, ಕಡಿಮೆ ಜನ ಬಳಸುವಂತಹ ಚಿನ್ನ, ಎಲ್ ಇಡಿ ಹಾಗೂ ಎಲ್ ಸಿ ಡಿ ಟಿವಿಗಳ ಬೆಲೆಯನ್ನು ಕಡಿಮೆ ಮಾಡಿರುವುದು ಸಮರ್ಪಕವೇ : ಎಸ್.ಎಲ್.ಆರ್ ಬಸ್ ಮಾಲೀಕ ಪ್ರದೀಪ್

ಕಾಮೆಂಟ್‌ಗಳು