ವಿಷಯಕ್ಕೆ ಹೋಗಿ

ಅನಧಿಕೃತ ಸಂಪರ್ಕ ಮೌನವಹಿರುವ ಇಲಾಖೆ ರೈತರಿಂದ ಠೇವಣಿ ವಸೂಲಿ ಹುನ್ನಾರ : ಪಂಪ್ ಸೆಟ್ ದಾರರ ಆರೋಪ

ವರದಿ : ಡಿ.ಆರ್.ನರೇಂದ್ರಬಾಬು
------------
ಹುಳಿಯಾರು : ಆಕ್ರಮ-ಸಕ್ರಮದಡಿ ಅನಧಿಕೃತ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗಳಿಸಿಕೊಳ್ಳುವಂತೆ ಮಾರ್ಚ್ ೩೧ ಅಂತಿಮ ಗಡುವು ನೀಡಿ ಮತ್ತೆ ವಿಸ್ತರಣೆ ಪ್ರಶ್ನೆಯೇ ಇಲ್ಲ ನಂತರದ ದಿನದಿಂದಲೆ ಸಕ್ರಮ ಮಾಡಿಕೊಳ್ಳದವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಬೆಸ್ಕಾಂ ಇದೀಗ ಮತ್ತೆ ಮೇ.೧೫ರ ವರೆಗೆ ಸಕ್ರಮಕ್ಕೆ ಗಡುವು ನೀಡಿದೆ.

ಆಕ್ರಮ-ಸಕ್ರಮದಡಿ ರೈತರು ಅರ್ಜಿಸಲ್ಲಿಸಿ ತಮ್ಮ ಬೋರ್ ವೆಲ್ ಗಳನ್ನು ಸಕ್ರಮಗಳಿಸಿಕೊಂಡಲ್ಲಿ ಸಮರ್ಪಕ ವಿದ್ಯುತ್ ಸಂಪರ್ಕ ಕೊಡುವುದಾಗಿ ಹೇಳುತ್ತಾ ಸಾಗುತ್ತಿದ್ದಾರೆ ಹೊರತು ಇದುವರೆಗೂ ಸಕ್ರಮಗಳಿಕೊಂಡವರಿಗೆ ಯಾವುದೇ ರೀತಿಯ ಸೌಲಭ್ಯ ಮಾತ್ರ ದೊರೆತಿಲ್ಲ.ಜೊತೆಗೆ ಆಕ್ರಮ ಸಂಪರ್ಕ ಪಡೆದವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡ ಉದಾಹರಣೆಯಿಲ್ಲ. ಬಹುತೇಕ ಮಂದಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಪಂಪ್ ಸೆಟ್ ಗಳನ್ನು ಓಡಿಸುತ್ತಿದ್ದು ಗೊತ್ತಿದ್ದರೂ ಕಂಡುಕಾಣದಂತೆ ಇಲಾಖೆ ವರ್ತಿಸುತ್ತಿದೆ.
ಪ್ರಸ್ತುತದಲ್ಲಿ ಮಳೆಯ ಕೊರತೆಯಿಂದಾಗಿ ರೈತರು ಹೊಲ,ಗದ್ದೆ,ತೋಟಗಳಿಗೆ ಬೋರ್ ವೆಲ್ ಗಳನ್ನೆ ಆಶ್ರಯಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುವಲ್ಲಿ ಇಲಾಖೆ ವಿಫಲವಾಗಿದ್ದು ಕೇವಲ ೨ ರಿಂದ ೩ ಗಂಟೆ ಅದೂ ರಾತ್ರಿ ಸಮಯದಲ್ಲಿ ಕೊಡಲಷ್ಟೆ ಶಕ್ತವಾಗಿದೆ. ಹಳ್ಳಿಪ್ರದೇಶಗಳಲ್ಲಿ ಒಂದೊಂದು ಟಿಸಿ ಗಳಲ್ಲೂ ಮೂರ್ನಾಲ್ಕು ಸಂಪರ್ಕ ಸಕ್ರಮವಿದ್ದರೆ ಹತ್ತಕ್ಕು ಹೆಚ್ಚು ಆಕ್ರಮ ಸಂಪರ್ಕವಿದೆ. ಆಕ್ರಮ ಸಕ್ರಮಡಿ ಹಣ ಪಾವತಿ ಮಾಡಿದವರೂ ಹಾಗೂ ಹಣಕಟ್ಟದ ಇಬ್ಬರೂ ಸಹ ಒಂದೇ ಟಿಸಿಯಲ್ಲಿ ಸಂಪರ್ಕ ಹೊಂದಿದ್ದಾರೆ. ಆಕ್ರಮ-ಸಕ್ರಮದಡಿ ಹಣಕಟ್ಟಿದ್ದರ ಪ್ರಯೋಜನ ಮಾತ್ರ ಏನು ಎಂಬುದು ತಿಳಿಯಾದಾಗಿ ಎನ್ನುತ್ತಾರೆ ಕೆಲ ರೈತರು. ಈ ಬಗ್ಗೆ ಇಲಾಖೆಯವರು ಜಾಣಕುರುಡು ಪ್ರದರ್ಶಿಸಿ ಮೌನವಹಿಸಿದ್ದಾರೆ.
ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಆಕ್ರಮ-ಸಕ್ರಮದಡಿ ಜುಲೈ೨೦೧೩ ರಿಂದ ಮಾರ್ಚ್ ೨೦೧೫ ರವರ ಅವಧಿಯಲ್ಲಿ ಒಟ್ಟು ೪೫೬ ಜನ ಮಾತ್ರ ಹಣಕಟ್ಟಿ ಸಕ್ರಮಗೊಳಿಸಿಕೊಂಡಿದ್ದು, ಇನ್ನೂ ಸಾವಿರಾರು ಮಂದಿ ಆಕ್ರಮವಾಗಿ ವಿದ್ಯುತ್ ಸಂಪರ್ಕ ಹೊಂದಿದ್ದಾರೆ. ಹಲವಾರು ಬಾರಿ ಆಕ್ರಮ-ಸಕ್ರಮದಡಿ ಪಂಪ್ ಸೆಟ್ ಗಳನ್ನು ನೊಂದಾಯಿಸಿಕೊಳ್ಳಿ ಎಂದು ಇಲಾಖೆ ಹಣ ಕಟ್ಟಿಸಿಕೊಳ್ಳುತ್ತಿದೆ ಹೊರತು ಆಕ್ರಮವಾಗಿ ಸಂಪರ್ಕ ಹೊಂದಿದವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ.
ಆಕ್ರಮ-ಸಕ್ರಮದಡಿ ಹಣ ಕಟ್ಟಿದರೆ ಉತ್ತಮ ವಿದ್ಯುತ್ ನೀಡುತ್ತೇವೆ, ಹಣಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಟ್ ಮಾಡುವುದಾಗಿ ತಿಳಿಸುವ ಅಧಿಕಾರಿಗಳು, ನಮ್ಮಿಂದ ಹಣಕಟ್ಟಿಸಿಕೊಂಡಿದ್ದರೂ ಸಹ ಇದುವರೆಗೂ ಉತ್ತಮ ವೋಲ್ಟೇಜ್ ನ ವಿದ್ಯುತ್ ನೀಡಿಲ್ಲ, ಹಣಕಟ್ಟಿದವರೂ ,ಹಣಕಟ್ಟದವರೂ ಇಬ್ಬರೂ ಒಂದೇ ಟಿಸಿಗಳಲ್ಲಿ ಕನೆಕ್ಷನ್ ಹಾಕಿಕೊಂಡು ಪಂಪ್ ಸೆಟ್ ಚಲಾಯಿಸುತ್ತಿದ್ದು ಹಣಕಟ್ಟುವುದು ವ್ಯರ್ಥವಾಯಿತೇನೊ ಎಂಬುದು ಹಣಕಟ್ಟಿರುವ ರೈತರು ಪ್ರಶ್ನೆಯಾಗಿದೆ.
ಆಕ್ರಮ ಸಂಪರ್ಕದವರ ವಿರುದ್ದ ಕ್ರಮ ಏನು ಎಂದು ಬೆಸ್ಕಾಂನವರನ್ನು ಕೇಳಿದರೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮೇಲಾಧಿಕಾರಿಗಳು ಏನು ಹೇಳುತ್ತಾರೋ ಆ ರೀತಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಅನಧಿಕೃತವಾಗಿ ಪಂಪ್ ಸೆಟ್ ಗಳು ಓಡುತ್ತಲೆ ಇವೆ. ಈ ಬಾರಿಯೂ ಸಹ ಅದೇ ಪುನರಾವರ್ತನೆಯಾಗುತ್ತದೆಯೋ ಏನೋ. ನಾವು ಸಾವಿರಾರು ರೂ ಹಣ ಕಟ್ಟಿದ್ದು ವ್ಯರ್ಥವೆನೋ ಎಂದು ಈಗಾಗಲೇ ಹಣ ಕಟ್ಟಿ ನೋಂದಣಿ ಮಾಡಿಸಿಕೊಂಡವರು ಕೇಳುತ್ತಿದ್ದಾರೆ.
-------------

ಆಕ್ರಮ-ಸಕ್ರಮದಡಿ ಪಂಪ್ ಸೆಟ್ ಗಳನ್ನು ಸಕ್ರಮ ಮಾಡಿಕೊಳ್ಳುವ ಬಗ್ಗೆ ನಮಗೆ ಯಾವುದೇ ಮಾಹಿತಿ ಸರಿಯಾಗಿ ದೊರೆತಿಲ್ಲ. ಇದಕ್ಕಾಗಿ ೧೫ ಸಾವಿರ ಕಟ್ಟಬೇಕೆಂದು ಅವರಿವರು ಹೇಳಿದ್ದರು. ಈಗಾಗಲೇ ಸಾಲ ಮಾಡಿ ಬೋರ್ ಹಾಕಿಸಿರುವ ರೈತ ಬಳಿ ಅಷ್ಟೊಂದು ಹಣವೆಲ್ಲಿರುತ್ತೆ, ವಿದ್ಯುತ್ ಉಚಿತ ಎಂದು ಸರ್ಕಾರ ಹೇಳಿದ್ದು ಹಣಕಟ್ಟಿ ಎನ್ನುವುದು ರೈತರ ಮೇಲೆ ಗದಾಪ್ರಹಾರ ಮಾಡಿದಂತಾಗುತ್ತದೆ : ಕೃಷ್ಣಮೂರ್ತಿ ,ಗೂಬೆಹಳ್ಳಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.