ವಿಷಯಕ್ಕೆ ಹೋಗಿ

ಹುಳಿಯಾರು ಸುತ್ತ ಅವರೆ ಬಂಪರ್ ಬೆಳೆ : ಎಲ್ಲೆಡೆ ಹರಡಿದ ಅವರೆ ಸೊಗಡು : ಬೆಲೆಯೂ ಸಸ್ತಾ

ಚಳಿಗಾಲದ ಡಿಸೆಂಬರ್ ನಲ್ಲಿ ಮಾರುಕಟ್ಟೆಯಲ್ಲಿ ಎಲ್ಲೆಲ್ಲೂ ಅವರೆಕಾಯಿಯದ್ದೇ ಸಾಮ್ರಾಜ್ಯವಾಗಿದ್ದು . ಉತ್ತಮ ಮಳೆ ಹಾಗೂ ಇಬ್ಬನಿಯ ವಾತಾವರಣ ಅವರೆಕಾಯಿಗೆ ಬಲುಪೂರಕವಾಗಿ ಬಂಪರ್ ಬೆಳೆ ಬಂದಕಾರಣ ಬೆಲೆ ಸಸ್ತವಾಗಿ ಬೆಳೆಗಾರರು ಕಣ್ ಕಣ್ ಬಿಡುವಂತಾದರೆ ಗ್ರಾಹಕರಲ್ಲಿ ಮಾತ್ರ ಮಂದಹಾಸ ಮೂಡಿಸಿದೆ.

ಹುಳಿಯಾರಿನ ರಾಜ್ ಕುಮಾರ್ ರಸ್ತೆಯ ಅಂಗಡಿಗಳ ಮುಂದೆ ಅವರೆಕಾಯಿ ರಾಶಿಹಾಕಿಕೊಂಡು ಮಾರಾಟದಲ್ಲಿ ನಿರತರಾಗಿರುವ ರೈತರು.

ಪ್ರಕೃತಿಯಲ್ಲಿ ಒಂದೊಂದು ಕಾಲಕ್ಕೂ ಒಂದೊಂದು ರೀತಿಯ ಹಣ್ಣು,ತರಕಾರಿಗಳ ಸೀಸನ್ ಇದ್ದು ಅಂತೆಯೇ ಚಳಿಗಾಲದ ವೇಳೆ ಅಂದರೆ ಡಿಸೆಂಬರ್ ನಿಂದ ಶುರುವಾಗಿ ಜನವರಿ ಅಂತ್ಯದವರೆಗೂ ಅವರೆಕಾಯಿಯದ್ದೇ ಕಾರುಬಾರಾಗಿರುತ್ತದೆ.
ಊರಿನ ಎಲ್ಲೆಲ್ಲೂ ಅವರೆಕಾಯಿಯದ್ದೇ ಕಲರವವಾಗಿದ್ದು ಬೀದಿಬೀದಿಯಲ್ಲೂ ಅವರೆಕಾಯಿಜ್ವರ ವ್ಯಾಪಿಸಿದೆ.ಸಗಟುದರ ೧೦ರೂಗೆ ಮಾರಾಟವಾಗುವ ಅವರೆ ಚಿಲ್ಲರೆಯಾಗಿ ತಳ್ಳುಗಾಡಿ ಹಾಗೂ ಅಂಗಡಿಗಳಲ್ಲಿ ೧೫ ರಿಂದ ೨೦ರೂಗೆ ಮಾರಾಟವಾಗುತ್ತಿದೆ. ಸೊಗಡವರೆಗೆ ಇನ್ನಿಲ್ಲದ ಬೇಡಿಕೆಯಿದ್ದು ಪಟ್ಟಣದ ಬೀದಿ ಬೀದಿಗಳಲ್ಲಿ ಅವರೆಕಾಯ್ ಅವರೆಕಾಯ್ ಕೆಜಿ ೧೫-೨೦ ಎಂದು ಕೂಗುತ್ತಾ ಮಾರಾಟ ಮಾಡುವವರು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಮಾಗಿ ಸಮಯದಲ್ಲಿ ಸಿಗುವ ಅವರೆ ತುಂಬ ರುಚಿಯಾಗಿದ್ದು ಬಾಯಿಗೆ ಹಿತವಾಗಿರುವ ಕಾರಣದಿಂದ ಎಲ್ಲರೂ ಅವರೆ ಕೊಳ್ಳಲು ಮುಗಿಬೀಳುತ್ತಿದ್ದಾರೆ.
ಪ್ರಾರಂಭದಲ್ಲಿ ಕೆ.ಜಿಗೆ ೪೦ರಂತೆ ವಾರಗಳ ಕಾಲ ಮಾರಾಟವಾದ ಅವರೆಕಾಯಿ ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಸಸ್ತಾ ಆಗಿದ್ದು ಕೆಜಿಗೆ ೧೫ ರಿಂದ ೨೦ ರೂಗಳ ಅಸುಪಾಸಿನಲ್ಲಿದೆ. ಈಗ ಎಲ್ಲೆಡೆ ಅವರೆಕಾಯಿ ಬಂದಿರುವುದರಿಂದ ಬೆಲೆ ಕಡಿಮೆ ಎನ್ನಬಹುದು ಆದರೆ ಅವರೆಕಾಯಿ ಸಿಸನ್ ಮುಗಿಯುವ ಹಂತ ಸಮೀಪಿಸುತ್ತಿದ್ದಂತೆ ಬೆಲೆಯಲ್ಲಿಯೂ ಸಹ ಹೆಚ್ಚಳವಾಗಲಿದೆ.
ಅವರೆಕಾಯಿ ಸಾಮಾನ್ಯವಾಗಿ ಹಿಂಗಾರು ಬೆಳೆಯಾಗಿದ್ದು ರಾಗಿ ,ಸಾವೆ ಸೇರಿದಂತೆ ಇನ್ನಿತ ಪ್ರಮುಖ ಬೆಳೆಗಳ ಅಕ್ಕಡಿ ಸಾಲಿನಲ್ಲಿ ಅವರೆಯನ್ನು ಬಿತ್ತುತ್ತಾರೆ. ೪೫ ದಿನನದಲ್ಲಿ ಹೂಬಿಟ್ಟು ಇಬ್ಬನಿಗೆ ಕಾಯಿಕಚ್ಚುವ ಇದಕ್ಕೆ ವರ್ಷವಿಡಿ ಬೇಡಿಕೆ ಹೆಚ್ಚಿರುವುದರಿಂದ ಇತ್ತೀಚೆಗೆ ಇದನ್ನು ಸಂಪೂರ್ಣ ಹೊಲ,ತೋಟಗಳಲ್ಲಿ ಹಾಕಿ ಮಳೆಯಾಶ್ರಿತ ಹಾಗೂ ನೀರಾವರಿ ಮೂಲಕವೂ ಸಹ ಹೆಚ್ಚೆಚ್ಚು ಬೆಳೆಯುತ್ತಾರೆ. ಆದರೆ ಹೊಲದಲ್ಲಿ ಮಳೆಯಾಶ್ರಯದಲ್ಲಿ ಬೆಳೆದ ಅವರೆಕಾಳು ಮಾತ್ರ ಹೆಚ್ಚು ಸೊಗಡಿನಿಂದ ಕೂಡಿರುವುದರಿಂದ ಜನ ಮಳೆಯಾಧರಿತ ಕಾಯಿಯನ್ನು ಹೆಚ್ಚು ಇಷ್ಟಪಡುತ್ತಾರೆ.
ಏನೇನು ಮಾಡುತ್ತಾರೆ : ಅವರೆಕಾಳು ಸೀಸನ್ ಶುರುವಾಯಿತೆಂದರೆ ಅವರೆಕಾಯಿಯ ಉಪ್ಪಿಟ್ಟು,ರೊಟ್ಟಿ ಹಾಗೂ ಕರಿದಕಾಳಿಗೆ ಹೆಚ್ಚಿನ ಆದ್ಯತೆ. ನಿತ್ಯದ ಅಡುಗೆಯಲ್ಲಿ ಬೇಳೆಬದಲು ಅವರೆಕಾಳಿನ ಸಾರು ಹೆಚ್ಚೆಚ್ಚು ಮಾಡುತ್ತಾರೆ. ಅಲ್ಲದೆ ಅವರೆಕಾಯಿಯನ್ನು ಸಿಪ್ಪೆ ಸಮೇತ ಬಿಸಿನೀರಲ್ಲಿ ಬೇಯಿಸಿ ತಿನ್ನುವುದಲ್ಲದೆ, ಅವರೆಕಾಯಿಯ ಸಿಪ್ಪೆ ತೆಗೆದು ಅದನ್ನು ನೀರಿನಲ್ಲಿ ನೆನೆಸಿಟ್ಟು ನಂತರ ಹಿಸುಗವರೆಕಾಯಿ ಪದಾತ ಮಾಡುತ್ತಾರೆ. ಇಂತಹ ಅನೇಕ ಖಾದ್ಯಗಳನ್ನು ಅವರೆಕಾಯಿಯಿಂದ ತಯಾರಿಸಿ ಬಾಯಿಚಪ್ಪರಿಸಿ ತಿನ್ನುತ್ತಾರೆ.ಇದು ಅವರೆಕಾಯಿ ಸಿಸನ್ ನಲ್ಲಿ ಮಾತ್ರ. ಉಳಿದಂತೆ ಅವರೆಕಾಯಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಅವರೆಕಾಳನ್ನು ಒಣಗಿಸಿ ಶೇಖರಿಸಿಟ್ಟುಕೊಂಡು ನಿತ್ಯದ ಅಡುಗೆಯಲ್ಲಿ ಸಾಂಬಾರ್ ಮಾಡಲು ಬಳಸುತ್ತಾರೆ.
ಬೆಳೆಯೋದೆಲ್ಲಲ್ಲಿ: ಹೋಬಳಿಯ ಸುತ್ತಮುತ್ತಲ ಹಳ್ಳಿಗಳಾದ ತಮ್ಮಡಿಹಳ್ಳಿ,ಕೆಂಕೆರೆ,ಯಳನಡು,ಸೂರಗೊಂಡನಹಳ್ಳಿ,ಕೋರಗೆರೆ,ಉಪ್ಪಾರಹಳ್ಳಿ ಎಣ್ಣೆಗೆರೆ,ಬರಕನಹಾಲ್, ದಸೂಡಿ,ದಬ್ಬಗುಂಟೆ,ಹೊಯ್ಸಳಕಟ್ಟೆ,ಗಾಣಧಾಳು ಸೇರಿದಂತೆ ಇನ್ನಿತರ ಹಳ್ಳಿಯಲ್ಲಿ ಹೆಚ್ಚಾಗಿ ಅವರೆಕಾಯಿ ಬೆಳೆಯಲಿದ್ದು ರೈತರು ಹುಳಿಯಾರಿಗೆ ತಂದು ಮಾರಾಟ ಮಾಡುತ್ತಾರೆ.
ಎಲ್ಲೆಲ್ಲೂ ಹೆಚ್ಚಿದ ಮಾರಾಟ: ಈ ಬಾರಿ ಅವರೆಗಿಡ ಕಾಯಿಕಟ್ಟುವ ಸಮಯದಲ್ಲಿ ಹದಮಳೆ ಹಾಗೂ ಹೆಚ್ಚು ಇಬ್ಬನಿ ಸುರಿದ ಕಾರಣ ಕೀಟಬಾಧೆಯಿಂದ ಮುಕ್ತವಾಗಿ ಬಂಪರ್ ಬೆಳೆ ಬಂದಿದು ಅವರೆಕಾಯಿ ಬೆಲೆಯನ್ನು ಇಳಿಯುವಂತೆ ಮಾಡಿದೆ. ಹೆಚ್ಚು ಬೆಳೆ ಬಂದಿರುವುದರಿಂದ ಕೊಳ್ಳಲು ವ್ಯಾಪಾರಸ್ಥರು ಮುಂದಾಗದೆ,ಬಾಯಿಗೆಬಂದಷ್ಟು ಬೆಲೆ ಕೇಳುವ ಹಿನ್ನಲೆಯಲ್ಲಿ ಎಲ್ಲಿ ಮಾರೋದು ಎಂಬ ಚಿಂತೆಯಿಂದ ರೈತರೇ ಸ್ವತ; ತಾವೇ ಮಾರಾಟ ಮಾಡಲು ಮುಂದಾಗಿ ಪಟ್ಟಣದೆಲ್ಲೆಡೆ ತಿರುಗುತ್ತಾ,ರಸ್ತೆಬದಿಯಲ್ಲಿ ಚೀಲಗಳನ್ನು ಇಟ್ಟುಕೊಂಡು ಮಾರುವ ದೃಶ್ಯ ಸಾಮಾನ್ಯವಾಗಿದೆ.
ಪಟ್ಟಣದ ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆಯಲ್ಲಿ ಅವರೆಕಾಯಿ ಮಾರಾಟ ಹೆಚ್ಚಾಗಿದ್ದು ನಾಮೇಲೂ, ತಾಮೇಲೂ ಎಂಬಂತೆ ಬಿಸಿಲನ್ನು ಲೆಖ್ಖಿಸದೇ ಕೆಜಿ ೧೫-೨೦ ಎಂದು ಕೂಗುತ್ತಾ ರೈತರೇ ಮಾರಾಟದಲ್ಲಿ ತೊಡಗಿರುವ ದೃಶ್ಯ ಕಂಡುಬರುತ್ತಿದೆ.
ಉತ್ತಮ ಬೆಳೆಯಿದ್ದಾಗ ಬೆಲೆ ಸಿಗಲ್ಲ, ಉತ್ತಮ ಬೆಲೆ ಬಂದಾಗ ನಮ್ಮ ಹತ್ತಿರ ಬೆಳೆ ಇರಲ್ಲ ಈ ಬಾರಿ ಅವರೆ ಚೆನ್ನಾಗಿ ಬಂದಿದ್ದರೂ ಸಹ ಅದಕ್ಕೆ ಹಾಕಿದ ಗೊಬ್ಬರ,ಬಳಸಿದ ಕೀಟನಾಶಕಕ್ಕೆ ಖರ್ಚು ಮಾಡಿದ ಹಣ ತೆಗೆಯುವುದೆ ಕಷ್ಟವಾಗಿದೆ. ಪ್ರಾರಂಭದಲ್ಲಿ ಕೆಜಿಗೆ ೩೦ರೂ ಇತ್ತು, ಈಗ ಕಡಿಮೆಯಾಗಿರುವುದು ನಮ್ಮನ್ನ ಸಂಕಷ್ಟಕ್ಕೆ ತಳ್ಳಿದೆ ಈಗಾದರೆ ನಾವೇನು ಮಾಡುವುದು, ಕೆಜಿಗೆ ೧೫ರೂ ಎಂದರೂ ಸಹ ಕೊಳ್ಳುವವರು ಅದರಲ್ಲೂ ಚೌಕಾಸಿ ಮಾಡುತ್ತಾರೆಂದು ರೈತ ಪುರದಮಠದ ಬಸಜ್ಜ ನಿರಾಸಕ್ತಿಯಿಂದ ನುಡಿಯುತ್ತಾರೆ.

ಒಟ್ಟಾರೆ ಈಬಾರಿ ಅವರೆ ಬಂಪರ್ ಬೆಳೆಯಾಗಿದ್ದರೂ ಸಹ ಉತ್ತಮ ಬೆಲೆಯಿಲ್ಲದೆ ರೈತರಿಗೆ ಶಾಪವಾಗಿದ್ದರೆ ಕೊಳ್ಳುವವರಿಗೆ ವರವಾಗಿದ್ದು ಕೆಜಿಗಟ್ಟಲೇ ಅವರೆ ಕೊಂಡು ಅವರೆಕಾಳಿನ ಸವಿಸವಿಯುತ್ತಿದ್ದಾರೆ. 
ಈಗ ಎಲ್ಲಾಕಡೆ ಅವರೆ ಹೆಚ್ಚಾಗಿ ಬಂದಿದ್ದು ರೇಟ್ ಇಲ್ಲದಾಗಿದೆ. ಏನ್ ಮಾಡೋದು ಸಿಗೋ ರೇಟ್ ಗೆ ತಕ್ಕಂಕೆ ಮಾರಾಟ ಮಾಡಬೇಕು, ಇಲ್ಲಾಂದ್ರೆ ಅವರೆಯಲ್ಲಾ ಒಣಗಿ ಬಿಡುತ್ತೆ. ತರಕಾರಿ ಅಂಗಡಿಯವರಿಗೆ ಕೊಡೋಣ ಎಂದು ಕೇಳಿದರೆ ಕೆ.ಜಿ. ೧೦ ರೂಗೆ ಕೇಳುತ್ತಾರೆ. ಅದರ ಬದಲೂ ನಾನೇ ಮಾರುತ್ತಿದ್ದೇವೆ : ಮಲ್ಲಿಕಣ್ಣ ಉಪ್ಪಾರಹಳ್ಳಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...