ವಿಷಯಕ್ಕೆ ಹೋಗಿ

ಹುಳಿಯಾರು ಸುತ್ತ ಅವರೆ ಬಂಪರ್ ಬೆಳೆ : ಎಲ್ಲೆಡೆ ಹರಡಿದ ಅವರೆ ಸೊಗಡು : ಬೆಲೆಯೂ ಸಸ್ತಾ

ಚಳಿಗಾಲದ ಡಿಸೆಂಬರ್ ನಲ್ಲಿ ಮಾರುಕಟ್ಟೆಯಲ್ಲಿ ಎಲ್ಲೆಲ್ಲೂ ಅವರೆಕಾಯಿಯದ್ದೇ ಸಾಮ್ರಾಜ್ಯವಾಗಿದ್ದು . ಉತ್ತಮ ಮಳೆ ಹಾಗೂ ಇಬ್ಬನಿಯ ವಾತಾವರಣ ಅವರೆಕಾಯಿಗೆ ಬಲುಪೂರಕವಾಗಿ ಬಂಪರ್ ಬೆಳೆ ಬಂದಕಾರಣ ಬೆಲೆ ಸಸ್ತವಾಗಿ ಬೆಳೆಗಾರರು ಕಣ್ ಕಣ್ ಬಿಡುವಂತಾದರೆ ಗ್ರಾಹಕರಲ್ಲಿ ಮಾತ್ರ ಮಂದಹಾಸ ಮೂಡಿಸಿದೆ.

ಹುಳಿಯಾರಿನ ರಾಜ್ ಕುಮಾರ್ ರಸ್ತೆಯ ಅಂಗಡಿಗಳ ಮುಂದೆ ಅವರೆಕಾಯಿ ರಾಶಿಹಾಕಿಕೊಂಡು ಮಾರಾಟದಲ್ಲಿ ನಿರತರಾಗಿರುವ ರೈತರು.

ಪ್ರಕೃತಿಯಲ್ಲಿ ಒಂದೊಂದು ಕಾಲಕ್ಕೂ ಒಂದೊಂದು ರೀತಿಯ ಹಣ್ಣು,ತರಕಾರಿಗಳ ಸೀಸನ್ ಇದ್ದು ಅಂತೆಯೇ ಚಳಿಗಾಲದ ವೇಳೆ ಅಂದರೆ ಡಿಸೆಂಬರ್ ನಿಂದ ಶುರುವಾಗಿ ಜನವರಿ ಅಂತ್ಯದವರೆಗೂ ಅವರೆಕಾಯಿಯದ್ದೇ ಕಾರುಬಾರಾಗಿರುತ್ತದೆ.
ಊರಿನ ಎಲ್ಲೆಲ್ಲೂ ಅವರೆಕಾಯಿಯದ್ದೇ ಕಲರವವಾಗಿದ್ದು ಬೀದಿಬೀದಿಯಲ್ಲೂ ಅವರೆಕಾಯಿಜ್ವರ ವ್ಯಾಪಿಸಿದೆ.ಸಗಟುದರ ೧೦ರೂಗೆ ಮಾರಾಟವಾಗುವ ಅವರೆ ಚಿಲ್ಲರೆಯಾಗಿ ತಳ್ಳುಗಾಡಿ ಹಾಗೂ ಅಂಗಡಿಗಳಲ್ಲಿ ೧೫ ರಿಂದ ೨೦ರೂಗೆ ಮಾರಾಟವಾಗುತ್ತಿದೆ. ಸೊಗಡವರೆಗೆ ಇನ್ನಿಲ್ಲದ ಬೇಡಿಕೆಯಿದ್ದು ಪಟ್ಟಣದ ಬೀದಿ ಬೀದಿಗಳಲ್ಲಿ ಅವರೆಕಾಯ್ ಅವರೆಕಾಯ್ ಕೆಜಿ ೧೫-೨೦ ಎಂದು ಕೂಗುತ್ತಾ ಮಾರಾಟ ಮಾಡುವವರು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಮಾಗಿ ಸಮಯದಲ್ಲಿ ಸಿಗುವ ಅವರೆ ತುಂಬ ರುಚಿಯಾಗಿದ್ದು ಬಾಯಿಗೆ ಹಿತವಾಗಿರುವ ಕಾರಣದಿಂದ ಎಲ್ಲರೂ ಅವರೆ ಕೊಳ್ಳಲು ಮುಗಿಬೀಳುತ್ತಿದ್ದಾರೆ.
ಪ್ರಾರಂಭದಲ್ಲಿ ಕೆ.ಜಿಗೆ ೪೦ರಂತೆ ವಾರಗಳ ಕಾಲ ಮಾರಾಟವಾದ ಅವರೆಕಾಯಿ ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಸಸ್ತಾ ಆಗಿದ್ದು ಕೆಜಿಗೆ ೧೫ ರಿಂದ ೨೦ ರೂಗಳ ಅಸುಪಾಸಿನಲ್ಲಿದೆ. ಈಗ ಎಲ್ಲೆಡೆ ಅವರೆಕಾಯಿ ಬಂದಿರುವುದರಿಂದ ಬೆಲೆ ಕಡಿಮೆ ಎನ್ನಬಹುದು ಆದರೆ ಅವರೆಕಾಯಿ ಸಿಸನ್ ಮುಗಿಯುವ ಹಂತ ಸಮೀಪಿಸುತ್ತಿದ್ದಂತೆ ಬೆಲೆಯಲ್ಲಿಯೂ ಸಹ ಹೆಚ್ಚಳವಾಗಲಿದೆ.
ಅವರೆಕಾಯಿ ಸಾಮಾನ್ಯವಾಗಿ ಹಿಂಗಾರು ಬೆಳೆಯಾಗಿದ್ದು ರಾಗಿ ,ಸಾವೆ ಸೇರಿದಂತೆ ಇನ್ನಿತ ಪ್ರಮುಖ ಬೆಳೆಗಳ ಅಕ್ಕಡಿ ಸಾಲಿನಲ್ಲಿ ಅವರೆಯನ್ನು ಬಿತ್ತುತ್ತಾರೆ. ೪೫ ದಿನನದಲ್ಲಿ ಹೂಬಿಟ್ಟು ಇಬ್ಬನಿಗೆ ಕಾಯಿಕಚ್ಚುವ ಇದಕ್ಕೆ ವರ್ಷವಿಡಿ ಬೇಡಿಕೆ ಹೆಚ್ಚಿರುವುದರಿಂದ ಇತ್ತೀಚೆಗೆ ಇದನ್ನು ಸಂಪೂರ್ಣ ಹೊಲ,ತೋಟಗಳಲ್ಲಿ ಹಾಕಿ ಮಳೆಯಾಶ್ರಿತ ಹಾಗೂ ನೀರಾವರಿ ಮೂಲಕವೂ ಸಹ ಹೆಚ್ಚೆಚ್ಚು ಬೆಳೆಯುತ್ತಾರೆ. ಆದರೆ ಹೊಲದಲ್ಲಿ ಮಳೆಯಾಶ್ರಯದಲ್ಲಿ ಬೆಳೆದ ಅವರೆಕಾಳು ಮಾತ್ರ ಹೆಚ್ಚು ಸೊಗಡಿನಿಂದ ಕೂಡಿರುವುದರಿಂದ ಜನ ಮಳೆಯಾಧರಿತ ಕಾಯಿಯನ್ನು ಹೆಚ್ಚು ಇಷ್ಟಪಡುತ್ತಾರೆ.
ಏನೇನು ಮಾಡುತ್ತಾರೆ : ಅವರೆಕಾಳು ಸೀಸನ್ ಶುರುವಾಯಿತೆಂದರೆ ಅವರೆಕಾಯಿಯ ಉಪ್ಪಿಟ್ಟು,ರೊಟ್ಟಿ ಹಾಗೂ ಕರಿದಕಾಳಿಗೆ ಹೆಚ್ಚಿನ ಆದ್ಯತೆ. ನಿತ್ಯದ ಅಡುಗೆಯಲ್ಲಿ ಬೇಳೆಬದಲು ಅವರೆಕಾಳಿನ ಸಾರು ಹೆಚ್ಚೆಚ್ಚು ಮಾಡುತ್ತಾರೆ. ಅಲ್ಲದೆ ಅವರೆಕಾಯಿಯನ್ನು ಸಿಪ್ಪೆ ಸಮೇತ ಬಿಸಿನೀರಲ್ಲಿ ಬೇಯಿಸಿ ತಿನ್ನುವುದಲ್ಲದೆ, ಅವರೆಕಾಯಿಯ ಸಿಪ್ಪೆ ತೆಗೆದು ಅದನ್ನು ನೀರಿನಲ್ಲಿ ನೆನೆಸಿಟ್ಟು ನಂತರ ಹಿಸುಗವರೆಕಾಯಿ ಪದಾತ ಮಾಡುತ್ತಾರೆ. ಇಂತಹ ಅನೇಕ ಖಾದ್ಯಗಳನ್ನು ಅವರೆಕಾಯಿಯಿಂದ ತಯಾರಿಸಿ ಬಾಯಿಚಪ್ಪರಿಸಿ ತಿನ್ನುತ್ತಾರೆ.ಇದು ಅವರೆಕಾಯಿ ಸಿಸನ್ ನಲ್ಲಿ ಮಾತ್ರ. ಉಳಿದಂತೆ ಅವರೆಕಾಯಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಅವರೆಕಾಳನ್ನು ಒಣಗಿಸಿ ಶೇಖರಿಸಿಟ್ಟುಕೊಂಡು ನಿತ್ಯದ ಅಡುಗೆಯಲ್ಲಿ ಸಾಂಬಾರ್ ಮಾಡಲು ಬಳಸುತ್ತಾರೆ.
ಬೆಳೆಯೋದೆಲ್ಲಲ್ಲಿ: ಹೋಬಳಿಯ ಸುತ್ತಮುತ್ತಲ ಹಳ್ಳಿಗಳಾದ ತಮ್ಮಡಿಹಳ್ಳಿ,ಕೆಂಕೆರೆ,ಯಳನಡು,ಸೂರಗೊಂಡನಹಳ್ಳಿ,ಕೋರಗೆರೆ,ಉಪ್ಪಾರಹಳ್ಳಿ ಎಣ್ಣೆಗೆರೆ,ಬರಕನಹಾಲ್, ದಸೂಡಿ,ದಬ್ಬಗುಂಟೆ,ಹೊಯ್ಸಳಕಟ್ಟೆ,ಗಾಣಧಾಳು ಸೇರಿದಂತೆ ಇನ್ನಿತರ ಹಳ್ಳಿಯಲ್ಲಿ ಹೆಚ್ಚಾಗಿ ಅವರೆಕಾಯಿ ಬೆಳೆಯಲಿದ್ದು ರೈತರು ಹುಳಿಯಾರಿಗೆ ತಂದು ಮಾರಾಟ ಮಾಡುತ್ತಾರೆ.
ಎಲ್ಲೆಲ್ಲೂ ಹೆಚ್ಚಿದ ಮಾರಾಟ: ಈ ಬಾರಿ ಅವರೆಗಿಡ ಕಾಯಿಕಟ್ಟುವ ಸಮಯದಲ್ಲಿ ಹದಮಳೆ ಹಾಗೂ ಹೆಚ್ಚು ಇಬ್ಬನಿ ಸುರಿದ ಕಾರಣ ಕೀಟಬಾಧೆಯಿಂದ ಮುಕ್ತವಾಗಿ ಬಂಪರ್ ಬೆಳೆ ಬಂದಿದು ಅವರೆಕಾಯಿ ಬೆಲೆಯನ್ನು ಇಳಿಯುವಂತೆ ಮಾಡಿದೆ. ಹೆಚ್ಚು ಬೆಳೆ ಬಂದಿರುವುದರಿಂದ ಕೊಳ್ಳಲು ವ್ಯಾಪಾರಸ್ಥರು ಮುಂದಾಗದೆ,ಬಾಯಿಗೆಬಂದಷ್ಟು ಬೆಲೆ ಕೇಳುವ ಹಿನ್ನಲೆಯಲ್ಲಿ ಎಲ್ಲಿ ಮಾರೋದು ಎಂಬ ಚಿಂತೆಯಿಂದ ರೈತರೇ ಸ್ವತ; ತಾವೇ ಮಾರಾಟ ಮಾಡಲು ಮುಂದಾಗಿ ಪಟ್ಟಣದೆಲ್ಲೆಡೆ ತಿರುಗುತ್ತಾ,ರಸ್ತೆಬದಿಯಲ್ಲಿ ಚೀಲಗಳನ್ನು ಇಟ್ಟುಕೊಂಡು ಮಾರುವ ದೃಶ್ಯ ಸಾಮಾನ್ಯವಾಗಿದೆ.
ಪಟ್ಟಣದ ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆಯಲ್ಲಿ ಅವರೆಕಾಯಿ ಮಾರಾಟ ಹೆಚ್ಚಾಗಿದ್ದು ನಾಮೇಲೂ, ತಾಮೇಲೂ ಎಂಬಂತೆ ಬಿಸಿಲನ್ನು ಲೆಖ್ಖಿಸದೇ ಕೆಜಿ ೧೫-೨೦ ಎಂದು ಕೂಗುತ್ತಾ ರೈತರೇ ಮಾರಾಟದಲ್ಲಿ ತೊಡಗಿರುವ ದೃಶ್ಯ ಕಂಡುಬರುತ್ತಿದೆ.
ಉತ್ತಮ ಬೆಳೆಯಿದ್ದಾಗ ಬೆಲೆ ಸಿಗಲ್ಲ, ಉತ್ತಮ ಬೆಲೆ ಬಂದಾಗ ನಮ್ಮ ಹತ್ತಿರ ಬೆಳೆ ಇರಲ್ಲ ಈ ಬಾರಿ ಅವರೆ ಚೆನ್ನಾಗಿ ಬಂದಿದ್ದರೂ ಸಹ ಅದಕ್ಕೆ ಹಾಕಿದ ಗೊಬ್ಬರ,ಬಳಸಿದ ಕೀಟನಾಶಕಕ್ಕೆ ಖರ್ಚು ಮಾಡಿದ ಹಣ ತೆಗೆಯುವುದೆ ಕಷ್ಟವಾಗಿದೆ. ಪ್ರಾರಂಭದಲ್ಲಿ ಕೆಜಿಗೆ ೩೦ರೂ ಇತ್ತು, ಈಗ ಕಡಿಮೆಯಾಗಿರುವುದು ನಮ್ಮನ್ನ ಸಂಕಷ್ಟಕ್ಕೆ ತಳ್ಳಿದೆ ಈಗಾದರೆ ನಾವೇನು ಮಾಡುವುದು, ಕೆಜಿಗೆ ೧೫ರೂ ಎಂದರೂ ಸಹ ಕೊಳ್ಳುವವರು ಅದರಲ್ಲೂ ಚೌಕಾಸಿ ಮಾಡುತ್ತಾರೆಂದು ರೈತ ಪುರದಮಠದ ಬಸಜ್ಜ ನಿರಾಸಕ್ತಿಯಿಂದ ನುಡಿಯುತ್ತಾರೆ.

ಒಟ್ಟಾರೆ ಈಬಾರಿ ಅವರೆ ಬಂಪರ್ ಬೆಳೆಯಾಗಿದ್ದರೂ ಸಹ ಉತ್ತಮ ಬೆಲೆಯಿಲ್ಲದೆ ರೈತರಿಗೆ ಶಾಪವಾಗಿದ್ದರೆ ಕೊಳ್ಳುವವರಿಗೆ ವರವಾಗಿದ್ದು ಕೆಜಿಗಟ್ಟಲೇ ಅವರೆ ಕೊಂಡು ಅವರೆಕಾಳಿನ ಸವಿಸವಿಯುತ್ತಿದ್ದಾರೆ. 
ಈಗ ಎಲ್ಲಾಕಡೆ ಅವರೆ ಹೆಚ್ಚಾಗಿ ಬಂದಿದ್ದು ರೇಟ್ ಇಲ್ಲದಾಗಿದೆ. ಏನ್ ಮಾಡೋದು ಸಿಗೋ ರೇಟ್ ಗೆ ತಕ್ಕಂಕೆ ಮಾರಾಟ ಮಾಡಬೇಕು, ಇಲ್ಲಾಂದ್ರೆ ಅವರೆಯಲ್ಲಾ ಒಣಗಿ ಬಿಡುತ್ತೆ. ತರಕಾರಿ ಅಂಗಡಿಯವರಿಗೆ ಕೊಡೋಣ ಎಂದು ಕೇಳಿದರೆ ಕೆ.ಜಿ. ೧೦ ರೂಗೆ ಕೇಳುತ್ತಾರೆ. ಅದರ ಬದಲೂ ನಾನೇ ಮಾರುತ್ತಿದ್ದೇವೆ : ಮಲ್ಲಿಕಣ್ಣ ಉಪ್ಪಾರಹಳ್ಳಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.