ವಿಷಯಕ್ಕೆ ಹೋಗಿ

ಹುಳಿಯಾರಿನಲ್ಲಿ ಮುಂದುವರಿದ ಕಾರ್ಯಾಚರಣೆ

ಕಂದಾಯ ಇಲಾಖೆಯಿಂದ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಪಟ್ಟಣದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಹುಳಿಯಾರು ಅಮಾನಿಕೆರೆಯ ಮತ್ತೊಂದು ಭಾಗವಾದ ವಳಗೆರೆಹಳ್ಳಿ ಭಾಗದಲ್ಲಿ ಕೆರೆ ಒತ್ತುವರಿ ತೆರವು ಕಾರ್ಯ ನಡೆಯಿತು.
ಹುಳಿಯಾರಿನ ವಳಗೆರೆಹಳ್ಳಿಯ ತೆಂಗಿನ ತೋಟವೊಂದರಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿರುವುದು.
ಶುಕ್ರವಾರದಂದು ಕೇಶವಾಪುರ ಭಾಗದಿಂದ ಕೆರೆ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿದ್ದು , ಶನಿವಾರ ವಳಗೆರೆಹಳ್ಳಿಯ ಸುತ್ತಮುತ್ತಲ ಕೆರೆ ಅಂಗಳದಲ್ಲಿದ್ದ ತೆಂಗಿನ ತೋಟಗಳಲ್ಲಿನ ಫಸಲು ಭರಿತ ತೆಂಗಿನ ಮರಗಳನ್ನು ಉರುಳಿಸುವ ಮೂಲಕ ಲಕ್ಷಾಂತರ ರೂ ಬೆಲೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ನರಸಿಂಹರಾವ್ ಹನುಂತರಾವ್ ಅವರಿಗೆ ಸೇರಿದ ೨೫ ತೆಂಗಿನ ಗಿಡ,ಲಿಂಗರಾಜ್ ಅವರ ೪ ತೆಂಗಿನಗಿಡ, ನರಸಣ್ಣ ೧೮,ಉಪ್ಪಿರಗಯ್ಯ ಅವರ ೬೦ ತೆಂಗಿನ ಮರಗಳನ್ನು ಧರೆಗುರುಳಿಸಲಾಯಿತು.೪೮೦ ಎಕರೆ ವಿಸ್ತೀರ್ಣವಿರುವ ಕೆರೆಯಲ್ಲಿ ೩ ಜೆಸಿಬಿ ಯಂತ್ರಗಳನ್ನು ಬಳಸಿ ಒತ್ತುವರಿ ತೆರವು ಮಾಡಲಾಗುತ್ತಿದೆ. ತಾಲ್ಲೂಕು ಸರ್ವೆಯರ್ ಬಸವರಾಜು,ಲಕ್ಷ್ಮಿನರಸಿಂಹಯ್ಯ, ಗ್ರಾಮ ಲೆಖ್ಖಿಗರಾದ ಸುಬ್ಬರಾಯಪ್ಪ, ಶ್ರೀನಿವಾಸ್ , ಕುಲಕರ್ಣಿ, ಜಕಣಾಚಾರಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಯವರಿದ್ದರು.

ಕಾಮೆಂಟ್‌ಗಳು