ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಧ್ಯಕ್ಷ ಸ್ಥಾನದ ಕುತೂಹಲಕ್ಕೆ ತೆರೆ

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಹೋಬಳಿ ವ್ಯಾಪ್ತಿಯ ಕೆಲವೊಂದು ಗ್ರಾಮ ಪಂಚಾಯ್ತಿಗಳಲ್ಲಿ ಚುನಾವಣೆ ನಡೆಯಲಿದ್ದು , ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ನಿಟ್ಟುಸಿರು ಬಿಡುವಂತಾಗಿದೆ. ಪಂಚಾಯ್ತಿ ಅಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆ ಆದಾಗಿನಿಂದ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳಲು ಹತ್ತಾರು ರೀತಿಯ ಕಸರತ್ತು ಮಾಡಿ ನಾನಾದಾರಿ ಹಿಡಿದಿದ್ದರು. ಸಾಲದಕ್ಕೆ ಅಧ್ಯಕ್ಷ ಸ್ಥಾನದ ಚುನಾವಣೆ ಘೋಷಣೆ ನಿಧಾನವಾಗಿ ಸಾಕಷ್ಟು ಸಮಯ ಹಿಡಿದಿದ್ದರಿಂದ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಇನ್ನಷ್ಟು ಹೈರಾಣಾಗುವಂತೆ ಮಾಡಿತ್ತು. ಬಹುತೇಕ ಪಂಚಾಯ್ತಿಗಳಲ್ಲಿ ಪ್ರವಾಸ ಎನ್ನುವುದು ಮಾಮೂಲಿ ವಿಚಾರವಾಗಿದ್ದು , ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಮಾರ್ಗವಾಗಿತ್ತು. ಸದಸ್ಯರ ನಾನಾಬೇಡಿಕೆಗಳನ್ನು ಪೂರೈಸುವುದರಲ್ಲಿ ಆಕಾಂಕ್ಷಿಗಳಲ್ಲಿ ಸಾಕಪ್ಪಾ ಪಂಚಾಯ್ತಿ ಸಹವಾಸ ಎನ್ನುವಂತೆ ಮಾಡಿತ್ತು. ಒಟ್ಟಾರೆ ಇಂದಿನಿಂದ ನಾಲ್ಕು ದಿನ ತಾಲ್ಲೂಕಿನಾಧ್ಯಂತ ನಡೆಯಲಿರುವ ಚುನಾವಣೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಪ್ರವಾಸಕ್ಕೆ ಸದಸ್ಯರನ್ನು ಕರೆದು ಕೊಂಡು ಹೋಗಿರುವ ಪಂಚಾಯ್ತಿಗಳ ಚುನಾವಣೆಯಲ್ಲಿ ನೇರ ಹಣಾಹಣಿಯಿದ್ದು ಕುತೂಹಲಕ್ಕೆ ಕಾರಣವಾದರೆ, ಎಲ್ಲೂ ಹೋಗದೆ ಎಲ್ಲಾ ಸದಸ್ಯರುಗಳು ಊರಲ್ಲಿ ಇರುವ ಪಂಚಾಯ್ತಿಗಳಲ್ಲಿ ಅಧಿಕಾರ ವಿಭಜನೆ ಹಾದಿ ಮೂಲಕ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಕೆಂಕೆರೆ : ಒಟ್ಟ

ತಾ.೧ ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಹುಳಿಯಾರು ಹೋಬಳಿಯ ಕೆಂಕೆರೆ, ದಸೂಡಿ,ದೊಡ್ಡಎಣ್ಣೆಗೆರೆ,ಕೋರಗೆರೆ,ತಿರುಮಲಾಪುರ, ಚೌಳಕಟ್ಟೆ ಗ್ರಾಮ ಪಂಚಾಯ್ತಿಗಳಿಗೆ ನೂತನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಯ ಚುನಾವಣೆ  ನಡೆಯಲಿದೆ. ಕೆಂಕೆರೆ ಗ್ರಾ.ಪಂಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಹೊನ್ನದಾಸೇಗೌಡ, ದಸೂಡಿ ಗ್ರಾ.ಪಂ.ಯಲ್ಲಿ ಇಓ ಕೃಷ್ಣಮೂರ್ತಿ,ದೊಡ್ಡಎಣ್ಣೆಗೆರೆ ಗ್ರಾ.ಪಂ.ನಲ್ಲಿ ಬಿಇಓ ಕೃಷ್ಣಮೂರ್ತಿ,ಕೋರಗೆರೆ ಗ್ರಾ.ಪಂ.ನಲ್ಲಿ ಎಂಜಿನಿಯರ್ ದೇವರಾಜು,ತಿರುಮಲಾಪುರ ಗ್ರಾ.ಪಂ.ನಲ್ಲಿ ಪಶುಇಲಾಖೆಯ ಶಶಿಕುಮಾರ್,ಚೌಳಕಟ್ಟೆ ಗ್ರಾ.ಪಂ.ನಲ್ಲಿ ಲೋಕೋಪಯೋಗಿ ಇಲಾಖೆಯ ಗಂಗಾಧರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ಕಾಲಾವಕಾಶವಿದ್ದು, ಮಧ್ಯಾಹ್ನ ೧ ಗಂಟೆಯಿಂದ ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.

ಶ್ರದ್ಧಾಭಕ್ತಿಯಿಂದ ನಡೆದ ಏಕಾದಶಿ ಆಚರಣೆ

ಹುಳಿಯಾರು ಹೋಬಳಿ ಕೆಂಕೆರೆ ಮಜುರೆ ದಮ್ಮಡಿಹಟ್ಟಿಯ ಶ್ರೀಕಾಟಂಲಿಂಗೇಶ್ವರಸ್ವಾಮಿ ಹಾಗೂ ಶ್ರೀ ಹೊರಕೆರೆ ರಂಗನಾಥಸ್ವಾಮಿಯ ಏಕಾದಶಿ ಆಚರಣೆ ವಿವಿಧ ಪೂಜಾಕೈಂಕರ್ಯಗಳೊಂದಿಗೆ ಶ್ರದ್ದಾಭಕ್ತಿಯಿಂದ ನಡೆಯಿತು. ಹುಳಿಯಾರು ಹೋಬಳಿ ದಮ್ಮಡಿಹಟ್ಟಿಯಲ್ಲಿ ಏಕಾದಶಿ ಆಚರಣೆ ಅಂಗವಾಗಿ ನಡೆದ ದೇವರುಗಳ ಮೆರವಣಿಗೆ. ಕುರಿಹಟ್ಟಿಯ ಆಂಜನೇಯಸ್ವಾಮಿಯ ದೇವಾಲಯದಿಂದ ದಾಸಪ್ಪಗಳ ಸಮೇತ ದೊಡ್ಡಬಿದರೆ ಪಾತಲಿಂಗೇಶ್ವರಸ್ವಾಮಿ ವೀರಗಾಸೆ ಕುಣಿತದೊಂದಿಗೆ ಗ್ರಾಮದೇವತೆ ಕೆಂಕೆರೆ ಕಾಳಮ್ಮ ಹಾಗೂ ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿಯ ಮೆರವಣಿಗೆ ನಡೆಸಲಾಯಿತು. ನಂತರ ದೇವಾಲಯದ ಆವರಣದಲ್ಲಿ ತುಪ್ಪದಪೂಜೆ, ಎಡೆಪೂಜೆ,ಮಂಗಳಾರತಿ ನಡೆದು ಪನಿವಾರ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸೋಮವಾರ ಬೆಳಿಗ್ಗೆ ದೊಡ್ಡಮಣೇವು ಹಾಕುವ ಕಾರ್ಯ ನಡೆದು ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಈ ವೇಳೆ ದೇವಾಲಯ ಸಮಿತಿಯವರು, ಕೆಂಕೆರೆ,ಹುಳಿಯಾರು,ಕಂಪನಹಳ್ಳಿ ಸುತ್ತಮುತ್ತಲ ಭಕ್ತಾಧಿಗಳು ಆಗಮಿಸಿದ್ದರು.

ಸನ್ಮಾನ

ಹುಳಿಯಾರಿನಲ್ಲಿ ಮರಾಠ ಹಾಸ್ಟೆಲ್ ಟ್ರಸ್ಟ್ ವತಿಯಿಂದ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಡಾ,ಡಾ.ಶ್ಯಾಂಸುಂದರ್ ಅವರನ್ನು ಸನ್ಮಾನಿಸಲಾಯಿತು.

ಜನರ ನಂಬಿಕೆಯನ್ನು ಹುಸಿ ಮಾಡದೆ, ಅಭಿವೃದ್ದಿಗೆ ಒತ್ತುಕೊಡಿ

ಗ್ರಾಮದ ಹಾಗೂ ಸಂಬಂಧಪಟ್ಟ ವಾರ್ಡಿನ ಬೇಕುಬೇಡಗಳಿಗೆ ಸ್ಪಂದಿಸಿ ಅಭಿವೃದ್ದಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಜನತೆ ನಿಮ್ಮನ್ನು ನಂಬಿ ಚುನಾಯಿಸಿದ್ದು, ಅವರ ನಂಬಿಕೆಯನ್ನು ಹುಸಿ ಮಾಡದೆ ನಡೆದುಕೊಂಡು ೫ ವರ್ಷದ ಬಳಿಕ ಸನ್ಮಾನಕ್ಕೆ ಬಾಜನರಾಗಿ ಎಂದು ಸಮಾಜಸೇವಕ ಕೊರಟಗೆರೆಯ ಸಂಪಂಗಿಕೃಷ್ಣಯ್ಯ ತಿಳಿಸಿದರು. ಹುಳಿಯಾರಿನ ಗ್ರಾ.ಪಂ.ನ ೧ ನೇ ಬ್ಲಾಕ್ ನಿಂದ ಆಯ್ಕೆಯಾದ ಎಲ್.ಆರ್.ಚಂದ್ರಶೇಖರ್ ಹಾಗೂ ಎಂ.ಗಣೇಶ್ ಅವರನ್ನು ಆರ್ಯವೈಶ್ಯ ಮಂಡಳಿವತಿಯಿಂದ ಅಭಿನಂದಿಸಲಾಯಿತು. ಪಟ್ಟಣದ ಆರ್ಯವೈಶ್ಯ ಸಮಾಜದಿಂದ ಇಲ್ಲಿನ ಗ್ರಾ.ಪಂ. ಚುನಾವಣೆಯಲ್ಲಿ ಒಂದನೇ ಬ್ಲಾಕ್ ನ ಸದಸ್ಯರಾಗಿ ಆಯ್ಕೆಯಾದ ಎಲ್.ಆರ್.ಚಂದ್ರಶೇಖರ್ ಹಾಗೂ ಎಂ.ಗಣೇಶ್ ಅವರನ್ನು ಅಭಿನಂದಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮದ ಸ್ವಚ್ಚತೆಯನ್ನು ಪಂಚಾಯ್ತಿಯವರು ಮಾಡಬೇಕಿದ್ದು ಅದಕ್ಕೆ ಸದಸ್ಯರುಗಳು ಕೂಡ ತಂತಮ್ಮ ಬ್ಲಾಕ್ ಗಳಲ್ಲಿ ಸಮಸ್ಯೆಗಳನ್ನು ಅರಿತು ಅವುಗಳನ್ನು ಯಾವರೀತಿ ಬಗೆಹರಿಸಬೇಕು ಎಂಬುದರ ಕಡೆ ಗಮನಹರಿಸಿ ಎಂದರು. ಆರ್ಯವೈಶ್ಯ ಸಮುದಾಯದಿಂದ ತಮ್ಮನ್ನು ಅಭಿನಂದಿಸಿದ್ದು ಆ ಅಭಿಮಾನವನ್ನು ಮುನ್ನೆಡೆಸಿಕೊಂಡು ಹೋಗಿ ಎಂದರು. ಜಿಲ್ಲೆಯಲ್ಲೇ ಹೆಸರಾಗಿರುವ ಹುಳಿಯಾರು ಪಂಚಾಯ್ತಿಯನ್ನು ಆದರ್ಶ ಪಂಚಾಯ್ತಿಯಾಗಿ ಮಾಡಬೇಕೆಂದರು. ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಸ್.ನಟರಾಜ್ ಗುಪ್ತ ಅಧ್ಯಕ್ಷತೆವಹಿಸಿದ್ದ

ಯಶಸ್ವಿ ಆರೋಗ್ಯ ತಪಾಸಣೆ ಶಿಬಿರ : ೪೫೩ ಮಂದಿಗೆ ಆರೋಗ್ಯ ತಪಾಸಣೆ

ತುಮಕೂರಿನ ಆರ್.ವೆಂಕಟರಾವ್ ಮರಾಠಾ ಹಾಸ್ಟೆಲ್ ಟ್ರಸ್ಟ್ ,ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್,ಬೆಂಗಳೂರಿನ ಪಂಚಮುಖಿ ಯುವವೇದಿಕೆ, ತಾಲ್ಲೂಕು ಮರಾಠಾ ಪರಿಷತ್, ಲಯನ್ಸ್ ಕ್ಲಬ್, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ , ಜಿಲ್ಲಾ ಆಂಧತ್ವ ನಿವಾರಣ ಸಂಸ್ಥೆ, ಮೋದಿ ಆಸ್ಪತ್ರೆ ಹಾಗೂ ಹುಳಿಯಾರು ಗ್ರಾ.ಪಂ. ಸಹಯೋಗದಲ್ಲಿ ಪಟ್ಟಣದ ಎಂಪಿಎಸ್ ಶಾಲೆಯಲ್ಲಿ ಭಾನುವಾರ ಅಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ೪೫೦ಕ್ಕೂ ಹೆಚ್ಚು ಮಂದಿಯ ತಪಾಸಣೆ ನಡೆಸಲಾಯಿತು. ಹುಳಿಯಾರಿನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡಿದ್ದ ವೈದ್ಯರು ಹಾಗೂ ಸಂಘಸಂಸ್ಥೆಯ ಪದಾಧಿಕಾರಿಗಳು. ಮರಾಠಾ ಹಾಸ್ಟೆಲ್ ಟ್ರಸ್ಟ್ ಅಧ್ಯಕ್ಷ ವೆಂಕಟರಾವ್ ಚೌಹಾಣ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಜೀವನದಲ್ಲಿ ಹಣ,ಸಂಪತ್ತು ಗಳಿಕೆಗಿಂತ ಉತ್ತಮ ಆರೋಗ್ಯ ಹೊಂದಿರುವವರೇ ನಿಜವಾದ ಶ್ರೀಮಂತರು. ಹಾಗಾಗಿ ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನಕೊಡಬೇಕು ಎಂದರು. ಟ್ರಸ್ಟ್ ನಿಂದ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು ಸಾರ್ವಜನಿಕರು ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಶಿಬಿರದಲ್ಲಿ ಕಣ್ಣಿನ ತಪಾಸಣೆ,ಹೃದಯ ಸಂಬಂಧಿ ತಪಾಸಣೆ, ಗರ್ಭಕೋಶದ ತೊಂದರೆ,ಮೂತ್ರಕೋಶದಲ್ಲಿ ಕಲ್ಲಿನ ಪರೀಕ್ಷೆ,ನರರೋಗ ಪರೀಕ್ಷೆ,ಪೈಲ್ಸ್,ಹರ್ನಿಯಾ,ಕಿವಿ,ಮೂಗು,ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆ, ಮೂಳೆರೋಗ ಪರೀಕ್ಷೆ

ಕಸ ತೆರವಿಗೆ ಮುಂದಾದ ಗ್ರಾ.ಪಂ

ಹುಳಿಯಾರು  ಪಟ್ಟಣದ ಬಸ್ ನಿಲ್ದಾಣದಲ್ಲಿ, ಆಸ್ಪತ್ರೆ ಆವರಣ ಸೇರಿದಂತೆ ಎಲ್ಲೆಂದರಲ್ಲಿ ಕಳೆದ ಕೆಲ ದಿನಗಳಿಂದ ಕಸ ತೆಗೆಯದೆ ಬಿಟ್ಟು ಸಾರ್ವಜನಿಕರ ಅಸಹನೆಗೂ ಕಾರಣವಾಗಿ ತೊಂದರೆ ಬಗ್ಗೆ ಪತ್ರಿಕೆಗಳಲ್ಲಿ ಗಮನ ಸೆಳೆದ ನಂತರ ಎಚ್ಚೆತ್ತ ಗ್ರಾ.ಪಂ.ಯವರು ಇದೀಗ ಕಸ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹುಳಿಯಾರು ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ಕಸದ ತೆರವು ಕಾರ್ಯ ಮಾಡುತ್ತಿರುವ ಪೌರ ಕಾರ್ಮಿಕರು. ಪಟ್ಟಣದ ಬಸ್ ನಿಲ್ದಾಣಕ್ಕೆ ನಿತ್ಯ ಹಲವು ಬಸ್ ಹಾಗೂ ನೂರಾರು ಪ್ರಯಾಣಿಕರು ಬಂದೋಗುತ್ತಾರೆ. ಅಲ್ಲದೆ ನಿಲ್ದಾಣದ ಫ್ಲಾಟ್ ಫಾರಂ ನಲ್ಲಿ ಪೆಟ್ಟಿಗೆ ಅಂಗಡಿಗಳಿದ್ದು ನಿತ್ಯ ಪ್ಲಾಸ್ಟಿಕ್ , ಕಾಗದ, ಟೀಗ್ಲಾಸ್ ಸೇರಿದಂತೆ ಇನ್ನಿತರ ವಸ್ತುಗಳ ತ್ಯಾಜ್ಯ ಉಂಟಾಗುತ್ತದೆ. ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಕಾಪಾಡಬೇಕಿದ್ದ ಗ್ರಾ.ಪಂ.ನವರು ಇತ್ತ ಗಮನ ಹರಿಸದೆ ಸಾರ್ವಜನಿಕರಲ್ಲಿ ಅಸಮಾಧಾನ ಮೂಡುವಂತೆ ಮಾಡಿದ್ದರು. ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ರಾಶಿರಾಶಿ ಕಸ ಬಿದ್ದು ಆಸ್ಪತ್ರೆಗೆ ಬರುವವರ ಹಿಡಿಶಾಪಕ್ಕೆ ಗುರಿಯಾಗಿತ್ತು. ಇಷ್ಟು ಸಾಲದೆಂಬಂತೆ ಪಟ್ಟಣದ್ದೆಲ್ಲೆಡೆ ಕಸದ ರಾಶಿಯೇ ಕಂಡುಬರುತ್ತಿದ್ದು ಸದಸ್ಯರೇ ಸಮಸ್ಯೆ ಬಗ್ಗೆ ಗಮನಹರಿಸಿ ಸ್ವಚ್ಚತೆಗೆ ನಿಂತ ಪರಿಣಾಮ ಇದೀಗ ಇಲ್ಲಿನ ಪಂಚಾಯ್ತಿ ಆಡಳಿತವೂ ಕೂಡ ಮೈಕೊಡವಿ ನಿಂತಿದೆ. ಪಂಚಾಯ್ತಿಯಲ್ಲಿ ಪೌರಕಾರ್ಮಿಕರಿದ್ದರೂ ಸಹ ಅವರಿಂದ ಕೆಲಸ ಮಾಡಿಸಲು ಸಂಬಳ ಕೊಡದಿರುವುದು ಕಾರಣವಾಗ

ಯೋಗಾಭ್ಯಾಸದಿಂದ ಆರೋಗ್ಯವಂತರಾಗೋಣ

ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಮುಖ್ಯವಾಗಿದ್ದು, ಯೋಗಾಭ್ಯಾಸ ಮಾಡುವುದರಿಂದ ದೈನಂದಿನ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವ ಮೂಲ ನಮ್ಮ ಬದುಕನ್ನು ಹಸನುಗೊಳಿಸಿಕೊಳ್ಳಣ ಎಂದು ಶಿಕ್ಷಕ ಹೆಚ್.ಪಿ.ಜಗದೀಶ್ ತಿಳಿಸಿದರು. ಹುಳಿಯಾರಿನ ಕನಕದಾಸ ಪ್ರೌಢಶಾಲೆಯ ಶಿಕ್ಷಕ ಚಂದ್ರಶೇಖರ್ ಅವರ ಮನೆಯಲ್ಲಿ ಕನ್ನಡಸಾಹಿತ್ಯ ಪರಿಷತ್ ವತಿಯಿಂದ ಅಯೋಜಿಸಿದ್ದ ಮನೆಮನೆಗಳಲ್ಲಿ ಕನ್ನಡ ಕವಿಕಾವ್ಯ ಗೋಷ್ಠಿ ಕಾರ್ಯಕ್ರಮದಲ್ಲಿ "ಯೋಗದಿಂದ ಆರೋಗ್ಯ" ವಿಷಯವನ್ನು ಕುರಿತು ಅವರು ಉಪನ್ಯಾಸ ನೀಡಿದರು. ಯೋಗಪಿತಾಮಹರೆನಿಸಿದ ಪತಂಜಲಿಯವರು ತಿಳಿಸಿರುವಂತೆ ಅಷ್ಟಾಂಗ ಯೋಗಗಳನ್ನು ಕುರಿತಂತೆ ವಿವರಣೆ ನೀಡಿದರು ಕಾಯೇನ ವಾಚಾ ಮನಸಾ ಎಂಬ ತ್ರಿಕರಣಗಳಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.  ದಬ್ಬಗುಂಟೆ ಪ್ರೌಢಶಾಲೆಯ ಶಿಕ್ಷಕ ಟಿ.ನಾಗೇಂದ್ರಪ್ಪ ಅಧ್ಯಕ್ಷತೆವಹಿಸಿ ಮಾತನಾಡಿದರ್.ಹುಟ್ಟಿದ್ದ ಮಕ್ಕಳು ಮುಂದೆ ಹೇಗೆ ಸಮಾಜದಲ್ಲಿ ಬಾಳಬೇಕೆಂಬುದನ್ನು ತಾಯಿಯೊಬ್ಬಳು ತನ್ನ ಎದೆಹಾಲುಣಿಸುವಾಗ ಹೇಳುವ ನುಡಿಗಳ ಬಗ್ಗೆ ತಿಳಿಸಿದರು. ಶೈಲಜಾ ಪ್ರಾರ್ಥಿಸಿ, ಚಂದ್ರಶೇಖರ್ ಸ್ವಾಗತಿಸಿ, ನಾರಾಯಣಪ್ಪ ನಿರೂಪಿಸಿ, ಯಲ್ಲಪ್ಪ ವಂದಿಸಿದರು.

ನಮ್ಮ ಗ್ರಾಮ-ನಮ್ಮ ರಸ್ತೆಗೆ ೧೨ ಕೋಟಿ ಅನುದಾನ: ಸಿಬಿಎಸ್

ಚಿಕ್ಕನಾಯಕನಹಳ್ಳಿ ಸುದ್ದಿ ರಾಜ್ಯ ಸರ್ಕಾರದ ಜನೋಪಯೋಗಿ ಯೋಜನೆಯಾದ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಗೆ ತಾಲೂಕಿಗೆ ರೂ.೧೨ ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ಅವರು ಚಿಕ್ಕನಾಯಕನಹಳ್ಳಿಯ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕಳೆದ ಬಿಜೆಪಿ ಸರ್ಕಾರದ, ನಮ್ಮ ಊರು-ನಮ್ಮ ರಸ್ತೆಯ ರೂಪಾಂತರವೇ ನಮ್ಮ ಗ್ರಾಮ-ನಮ್ಮ ರಸ್ತೆ ಎಂದಾಗಿದೆ. ಸದರಿ ಯೋಜನೆಯಲ್ಲಿ ರೂ ೧೨,೬೧,೮೬೦೦೦ ಅನುದಾನ ಬಿಡುಗಡೆಯಾಗಿ, ಕಾಮಗಾರಿ ಟೆಂಡರ್ ಪ್ರಕ್ರಿಯೆಯು ಮುಗಿದಿದೆ. ಈ ಮೂಲಕ ತಾಲೂಕಿನಲ್ಲಿ ಎಂಟು ರಸ್ತೆ ಕಾಮಗಾರಿ ಮತ್ತು ಒಂದು ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ಭಾವನಹಳ್ಳಿ-ಹೊನ್ನೆಬಾಗಿ, ಚಿಕ್ಕರಾಂಪುರ-ಬರಶಿಡ್ಲಹಳ್ಳಿ, ಆಶ್ರೀಹಾಲ್-ರಾಮನಹಳ್ಳಿ, ನುಲೇನೂರು-ಕಲ್ಲೇನಹಳ್ಳಿ, ರಸ್ತೆಗಳು ಮತ್ತು ಸಿದ್ದನಕಟ್ಟೆ ಬಳಿ ಸೇತುವೆ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಇದೇ ತಿಂಗಳ ೨೭ರಂದು ಶುಕ್ರವಾರ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಹೇಮಾವತಿ ಕಾಮಗಾರಿ ಪ್ರಾರಂಭದ ಬಗ್ಗೆ ಮಾತನಾಡಿ ಪರಿಹಾರ ನೀಡಿಕೆಯಲ್ಲಿ ಆದ ವಿಳಂಬದಿಂದಾಗಿ ಕಾಮಗಾರಿ ಪ್ರಗತಿಗೆ ಹಿನ್ನಡೆಯಾಗಿದೆ. ಪರಿಹಾರ ವಿತರಣೆಗಾಗಿ ಸರ್ಕಾರ ರೂ ೨೫ ಕೋಟಿ ಮೀಸಲಾಗಿಟ್ಟಿದೆ. ಆದಷ್ಟು ಶೀಘ್ರವಾಗಿ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭಕ್ಕೆ ಪ್ರಯತ್ನಿಸಲ

ತಾಲೂಕು ಪಂಚಾಯ್ತಿ ನೂತನ ಅಧ್ಯಕ್ಷರ ಆಯ್ಕೆ

ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯ್ತಿಯ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಳನಾಡು ಕ್ಷೇತ್ರದ ಸದಸ್ಯೆ ಜಯಲಕ್ಷ್ಮಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಹಾಲಿ ಅಧ್ಯಕ್ಷೆಯಾಗಿದ್ದ ಲತಾ ಅವರು ಬಿಜೆಪಿ ಅಧಿಕಾರ ಹಂಚಿಕೆ ಸೂತ್ರದನ್ವಯ ರಾಜಿನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಮೊದಲಿಗೆ ಆಗಿದ್ದ ಒಪ್ಪಂದದನ್ವಯ ಮೊದಲ ಅವಧಿಗೆ ಅಧ್ಯಕ್ಷರಾಗಿ ತಮ್ಮ ಅವಧಿ ಮುಗಿದ ನಂತರ ಲತಾ ರಾಜಿನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಯಲಕ್ಷ್ಮಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮತಿಘಟ್ಟ ಕ್ಷೇತ್ರದ ಸದಸ್ಯ ಎ. ನಿರಂಜನ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸುವ ಅವಧಿ ಮುಗಿದರೂ, ಯಾರೂ ನಾಮಪತ್ರ ಸಲ್ಲಿಸದ ಕಾರಣ, ಜಯಲಕ್ಷ್ಮಿ ಅವಿರೋ‘ವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ ಘೋಷಿಸಿದರು. ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಎಚ್.ಎನ್. ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷರಾದ ಎಂ. ಎಂಜಗದೀಶ್, ಕೆಂಕೆರೆ ನವೀನ್, ಸೀತಾರಾಮಯ್ಯ, ಸದಸ್ಯರಾದ ಜಯಣ್ಣ, ಆರ್.ಪಿ. ವಸಂತ್, ಲತಾ ವಿಶ್ವೇಶ್ವರಯ್ಯ ಮುಂತಾದವರು ಉಪಸ್ಥಿತರಿದ್ದರು.

ತಾ.೨೮- ದಮ್ಮಡಿಹಟ್ಟಿಯಲ್ಲಿ ಏಕಾದಶಿ

ಹುಳಿಯಾರು  ಹೋಬಳಿ ಕೆಂಕೆರೆ ಮಜುರೆ ದಮ್ಮಡಿಹಟ್ಟಿಯ ಶ್ರೀಕಾಟಂಲಿಂಗೇಶ್ವರಸ್ವಾಮಿ ಹಾಗೂ ಶ್ರೀ ಹೊರಕೆರೆ ರಂಗನಾಥಸ್ವಾಮಿಯ ಏಕಾದಶಿ ಆಚರಣೆ (ತಾ.೨೮) ಭಾನುವಾರ ಸಂಜೆ ನಡೆಯಲಿದೆ. ಏಕಾದಶಿ ಅಂಗವಾಗಿ ಗ್ರಾಮದೇವತೆ ಕೆಂಕೆರೆ ಕಾಳಮ್ಮ, ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿಯನ್ನು ಕರೆದುತಂದು , ಸಂಜೆ ಕುರಿಹಟ್ಟಿಯ ಆಂಜನೇಯಸ್ವಾಮಿಯ ದೇವಾಲಯದಿಂದ ದಾಸಪ್ಪಗಳ ಸಮೇತ ದೊಡ್ಡಬಿದರೆ ಪಾತಲಿಂಗೇಶ್ವರಸ್ವಾಮಿ ವೀರಗಾಸೆ ಕುಣಿತದೊಂದಿಗೆ ಮೆರವಣಿ ನಡೆಯಲಿದೆ. ನಂತರ ತುಪ್ಪದಪೂಜೆ, ಎಡೆಪೂಜೆ,ಮಂಗಳಾರತಿ ನಡೆದ ನಂತರ ಪನಿವಾರ ವೀತರಣೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ. ಸೋಮವಾರ ಬೆಳಿಗ್ಗೆ ದೊಡ್ಡಮಣೇವು ಹಾಕುವ ಕಾರ್ಯ ನಡೆದು ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ವಿತರಣೆ ನಡೆಯಲಿರುವುದಾಗಿ ದೇವಾಲಯ ಸಮಿತಿಯ ಗಜಣ್ಣ ತಿಳಿಸಿದ್ದಾರೆ.

ತಾ.೨೮ - ಅಭಿನಂದನಾ ಸಮಾರಂಭ

ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಗ್ರಾ.ಪಂ.ನ ಒಂದನೇ ಬ್ಲಾಕ್ ನಿಂದ ಸದಸ್ಯರಾಗಿ ಆಯ್ಕೆಯಾದ ಎಲ್.ಆರ್.ಚಂದ್ರಶೇಖರ್ ಹಾಗೂ ಎಂ.ಗಣೇಶ್ ಅವರನ್ನು ಅಭಿನಂದಿಸುವ ನಿಟ್ಟಿನಲ್ಲಿ ಪಟ್ಟಣದ ಆರ್ಯವೈಶ್ಯ ಮಂಡಳಿಯವರು ನಾಳೆ(ತಾ.೨೮) ಭಾನುವಾರ ಸಂಜೆ ವಾಸವಿ ಕಲ್ಯಾಣ ಮಂದಿರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ. ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಸ್.ನಟರಾಜ್ ಗುಪ್ತ ಅಧ್ಯಕ್ಷತೆವಹಿಸಲಿದ್ದು, ಸಮಾಜಸೇವಕ ಕೊರಟಗೆರೆಯ ಸಂಪಂಗಿಕೃಷ್ಣಯ್ಯ ಅಭಿನಂದನಾ ವಾಚನ ಮಾಡಲಿದ್ದಾರೆ. ರಾಜ್ಯ ಆರ್ಯವೈಶ್ಯ ಮಹಾಸಭಾದ ತುಮಕೂರು ಜಿಲ್ಲಾಸಮಿತಿಯ ಅಧ್ಯಕ್ಷ ಬಾಗೇಪಲ್ಲಿ ಎಸ್.ನಟರಾಜ್, ನಿರ್ದೇಶಕರಾದ ಹೆಚ್.ವಿ.ಗೋವಿಂರಾಜು ,ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಶ್ಮಿಕಾಂತ್ ಸೇರಿದಂತೆ ಇತರರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಭಿನಂದನಾ ಸಮಾರಂಭಕ್ಕೆ ಒಂದನೇ ಬ್ಲಾಕ್ ನ ಮತದಾರರು ಹಾಗೂ ಸಾರ್ವಜನಿಕರು ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ.

ಸಮುದಾಯದ ಆರ್ಥಿಕ ಅಭಿವೃದ್ದಿ ಸಂಘದ ಉದ್ದೇಶ

ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯದ ಅಭಿವೃದ್ದಿಗೆ ಒತ್ತುನೀಡಿ ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆಯಿಂದ ಸಹಕಾರ ಸಂಘ ಸ್ಥಾಪನೆಗೆ ಚಾಲನೆ ನೀಡಲಾಗಿದೆ ಎಂದು ಮುಖ್ಯಪ್ರವರ್ತಕ ಎಂ.ವಿ.ಲೋಕೇಶ್ ತಿಳಿಸಿದರು. ಮುಖ್ಯಪ್ರವರ್ತಕ ಎಂ.ವಿ.ಲೋಕೇಶ್ , ವಿಪ್ರಹಿತರಕ್ಷಣಾ ವೇದಿಕೆಯ ಅಧ್ಯಕ್ಷ ನರೇಂದ್ರಬಾಬು, ಗೌರವಾಧ್ಯಕ್ಷ ಸಿ.ಡಿ.ರವಿ, ಶಿಸ್ತು ಸಮಿತಿ ಅಧ್ಯಕ್ಷ ಹು.ಕೃ.ವಿಶ್ವನಾಥ್ ಹುಳಿಯಾರಿನ ತಮ್ಮ ನಿವಾಸದಲ್ಲಿ ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದ ಸದಸ್ಯತ್ವ ಹಾಗೂ ಷೇರು ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ತಾಲ್ಲೂಕ್ ಬ್ರಾಹ್ಮಣ ಸಭಾ, ತಾಲ್ಲೂಕ್ ವಿಪ್ರ ಹಿತರಕ್ಷಣಾ ವೇದಿಕೆ ಹಾಗೂ ವಿಪ್ರ ಮಿತ್ರಕೂಟದ ವತಿಯಿಂದ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಸ್ಥಾಪಿಸಲಾಗುತ್ತಿರುವ ಸಹಕಾರಿ ಸಂಘಕ್ಕೆ ಸಮುದಾಯದ ಪ್ರತಿಯೊಬ್ಬರು ಸದಸ್ಯರಾಗುವ ಮೂಲಕ ಸಂಘದ ಏಳ್ಗೆಗೆ ಸಹಕರಿಸುವಂತೆ ಮನವಿ ಮಾಡಿದರು. ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘದ ಸದಸ್ಯತ್ವ ಹಾಗೂ ಷೇರು ಸಂಗ್ರಹಣಾ ಕಾರ್ಯಕ್ಕೆ ಮುಖ್ಯಪ್ರವರ್ತಕ ಎಂ.ವಿ.ಲೋಕೇಶ್ ಚಾಲನೆ ನೀಡಿದರು. ಆರ್ಥಿಕವಾಗಿ ಹಿಂದುಳಿದ ಸಮುದಾಯದ ಸದಸ್ಯರಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು, ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ತರಬೇತಿ ಮುಂತಾದ ಧ್ಯೇಯೋದ್ದೇಶಗಳನ್ನು ಸಂಘ ಹೊಂದಿದೆ ಎಂದರು. ಮುಂದಿನ ನಾಲ್ಕು ದಿನಗಳ ಕಾಲ ತಾಲ್ಲೂಕಿನ ಪ್ರತಿಯೊಂದು ಹಳ್ಳಿಗೆ ಭ

ನೆಟ್ ವರ್ಕ್ ಸಮಸ್ಯೆ : ವಹಿವಾಟು ಸ್ಥಗಿತ

           ಹುಳಿಯಾರು ಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ ಬುಧವಾರದಂದು ಮೊಡೆಮ್ ಕೆಟ್ಟು ಹೋದ ಪರಿಣಾಮ ನೆಟ್ ವರ್ಕ ಸಮಸ್ಯೆ ಉಂಟಾಗಿ ಯಾವುದೇ ವಹಿವಾಟು ನಡೆಯದೆ ಬ್ಯಾಂಕ್ ಗೆ ಬಂದ ಗ್ರಾಹಕರು ವಾಪಸ್ಸ್ ಹಿಂತಿರುಗುವಂತಾಗಿತ್ತು. ಕಳೆದೊಂದು ವಾರದ ಹಿಂದೆ ಪಟ್ಟಣದಲ್ಲಿ ಮಳೆ ಸುರಿದಾಗ ಸಿಡುಲುಂಟಾದ ಪರಿಣಾಮ ಪಟ್ಟಣದಲ್ಲಿನ ಕೆಲ ಬಿಎಸ್.ಎನ್.ಎಲ್ ಮೊಡೆಮ್ ಗಳು ಸ್ಥಗಿತಗೊಂಡಿದ್ದವು. ಅಂತೆಯೇ ಬ್ಯಾಂಕ್ ಗಳಲ್ಲೂ ಸಹ ಅಂದಿನಿಂದಲೂ ನೆಟ್ ವರ್ಕ್ ಸಮಸ್ಯೆ ಉಂಟಾಗುತ್ತಿತ್ತು. ಕೆಲ ಸಮಯ ನೆಟ್ ವರ್ಕ್ ಸಿಗುತ್ತಿದ್ದು ಮತ್ತೆ ನೆಟ್ ವರ್ಕ್ ಇಲ್ಲದಂತಾಗುತ್ತಿತ್ತು. ಬ್ಯಾಂಕ್ ಗೆ ಅಳವಡಿಸಿದ್ದ ಬಿಎಸ್.ಎಲ್.ಎಲ್ ಮೊಡಮ್ ಬುಧವಾರದಂದು ಸಂಪೂರ್ಣವಾಗಿ ಕೆಟ್ಟು ಹೋಗಿದ್ದರ ಪರಿಣಾಮವಾಗಿ ನೆಟ್ ವರ್ಕ್ ಸಿಗದೆ ಕಂಪ್ಯೂಟರ್ ಗಳೆಲ್ಲಾ ಸ್ಥಗಿತಗೊಂಡು, ಸಿಬ್ಬಂದಿಯವರು ಕೈಕಟ್ಟಿಕೂರುವಂತಾಗಿತ್ತು. ಎಂದಿನಂತೆ ಹಣಕಟ್ಟಲು, ಬಿಡಿಸಲು ಹಾಗೂ ಆಕೌಂಟ್ ಮಾಡಿಸಲು ಬಂದ ಗ್ರಾಹಕರು ಯಾವುದೇ ಕೆಲಸವಾಗದೆ ವಾಪಸ್ಸ್ ಹಿಂತಿರುಗುವಂತಾಯಿತು. ಮಧ್ಯಾಹ್ನದ ವೇಳೆಗೆ ಸರಿಯಾಗುತ್ತದೆನೋ ಎಂದು ಕೆಲ ಗ್ರಾಹಕರು ಕಾದು ಕುಳಿತರೂ ಸಹ ಯಾವುದೇ ಪ್ರಯೋಜವಾಗಲಿಲ್ಲ.     ಬ್ಯಾಂಕ್ ನಲ್ಲಿ ಅಳವಡಿಸಿದ್ದ ಮೊಡೆಮ್ ಕೆಟ್ಟುಹೋಗಿರುವ ಬಗ್ಗೆ ತಾವು ಮೇಲಾಧಿಕಾರಿಗಳಿಗೆ ತಿಳಿಸಿದ್ದು ಸರಿ ಪಡಿಸುವ ಕಾರ್ಯ ಮಾಡಿಸುತ್ತಿದ್ದೇವೆ. ಮಳೆ, ಸಿಡಿಲು ಹಾಗೂ ಮೊಡಮುಸುಕಿದ ವಾತಾವರಣದಿಂದಾ

ವಿದ್ಯಾವಾರಿಧಿ ಶಾಲೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳಿಂದ ಯೋಗಾಭ್ಯಾಸ

ಇಲ್ಲಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿಶ್ವಯೋಗ ದಿನಾಚರಣೆ ಅಂಗವಾಗಿ ಶಾಲೆಯ ಕಾರ್ಯದಶಿ ಕವಿತಾ ಕಿರಣ್ ಕುಮಾರ್ ನೇತೃತ್ವದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಯೋಗ ಪ್ರದರ್ಶನ ನಡೆಸಿದರು. ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶಾಲಾಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಯೋಗಾಭ್ಯಾಸ ನಡೆಸಿದರು. ಪ್ರತಿ ದಿನ ಯೋಗಾಭ್ಯಾಸ ಹಾಗೂ ಧ್ಯಾನ ಮಾಡುವುದರಿಂದ ದೇಹ ಹಾಗೂ ಮನಸ್ಸು ಸದೃಡಗೊಳ್ಳಲಿದ್ದು ಉತ್ತಮ ಆರೋಗ್ಯ ಲಭಿಸಲಿದೆ. ವಿದ್ಯಾರ್ಥಿಗಳು ತಪ್ಪದೇ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವುದರಿಂದ ಏಕಾಗ್ರತೆ ಹೆಚ್ಚುವುದಲ್ಲದೆ ಹೆಚ್ಚಿನ ಅಭ್ಯಾಸಕ್ಕೆ ನೆರವಾಗಲಿದೆ. ಮಕ್ಕಳೊಂದಿಗೆ ಸೇರಿ ತಾವು ಯೋಗ ಮಾಡುತ್ತಿರುವುದು ಸಂತಸ ತಂದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ತಿಳಿಸಿದರು. ಈ ವೇಳೆ ಪ್ರಾಂಶುಪಾಲ ರವಿ, ಶಿಕ್ಷಕರಾದ ವಿಜಯ್, ಮಹಂತೇಶ್ ಹಾಗೂ ಶಿಕ್ಷಕರು, ಸಿಬ್ಬಂದಿಯವರು ಉಪಸ್ಥಿತರಿದ್ದರು.

ಆಂಜನೇಯಸ್ವಾಮಿ ಕುಂಭಾಭಿಷೇಕ ಕಾರ್ಯ

ಹುಳಿಯಾರು ಹೋಬಳಿ ಕಂಪನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ಆಂಜನೇಯಸ್ವಾಮಿಯ ಕುಂಭಾಭಿಷೇಕ ಕಾರ್ಯ ಹಾಗೂ ೪೮ ದಿನದ ಮಂಡಲ ಪೂಜೆ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಮಲ್ಲಿಕಾರ್ಜುನದೇಶಿಕೇಂದ್ರ ಮಹಾಸ್ವಾಮಿ ಅವರ ಸಮ್ಮುಖದಲ್ಲಿ ಜರುಗಿತು. ಕಂಪನಹಳ್ಳಿ ಆಂಜನೇಯಸ್ವಾಮಿಗೆ ಕುಂಭಾಭಿಷೇಕದ ಅಂಗವಾಗಿ ಮಾಡಿದ್ದ ವಿಶೇಷ ಅಲಂಕಾರ. ಕುಂಭಾಭಿಷೇಕದ ಅಂಗವಾಗಿ ಗ್ರಾಮದೇವತೆ ಕೆಂಕೆರೆ ಕಾಳಮ್ಮ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ,ಗೊಲ್ಲರಹಟ್ಟಿ ಕರಿಯಮ್ಮ ದೇವರುಗಳ ಉಪಸ್ಥಿತಿಯಲ್ಲಿ ಗಂಗಾಪೂಜೆ,ಪೂರ್ಣಕುಂಭಪೂಜೆ, ಮಹಾಗಣಪತಿ ಪೂಜೆ ನಡೆದು ನಂತರ ಆಂಜನೇಯಸ್ವಾಮಿಗೆ ಕುಂಭಾಭಿಷೇಕ ಹಾಗೂ ನೂತನ ಶಿಖರಕ್ಕೆ ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ ನಡೆಸಲಾಯಿತು. ಮಹಾಮಂಗಳಾರತಿಯ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಂಪನಹಳ್ಳಿ,ಹುಳಿಯಾರು,ಕೆಂಕೆರೆ ಸುತ್ತಮುತ್ತಲಿನ ಭಾಕ್ತಾಧಿಗಳು ಆಗಮಿಸಿದ್ದು ಸ್ವಾಮಿಯ ದರ್ಶನ ಪಡೆದರು.ಈ ವೇಳೆ ದೇವಾಲಯ ಸಮಿತಿಯವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ; ಜಾನಮ್ಮ

ಸರ್ಕಾರದಿಂದ ರೈತರ ಅಭಿವೃದ್ದಿಗಾಗಿ ಹತ್ತಾರು ಯೋಜನೆಗಳು ಹಾಗೂ ಸೌಲಭ್ಯಗಳಿದ್ದು ರೈತರು ಅವುಗಳನ್ನು ಪಡೆಯುವ ಮೂಲಕ ಸದುಪಯೋಗ ಪಡಿಸಿಕೊಳ್ಳಿ ಎಂದು ಜಿ.ಪಂ.ಸದಸ್ಯೆ ಜಾನಮ್ಮರಾಮಂಚ್ರಯ್ಯ ತಿಳಿಸಿದರು. ಹುಳಿಯಾರು ಸಮೀಪದ ಹಂದನಕೆರೆಯಲ್ಲಿ ಕೃಷಿ ಇಲಾಖೆಯಿಂದ ಅಯೋಜಿಸಿದ್ದ ಕೃಷಿ ಅಭಿಯಾನ ಸಂವಾದ ಕಾರ್ಯಕ್ರಮವನ್ನು ಜಿ.ಪಂ.ಸದಸ್ಯೆ ಜಾನಮ್ಮ ಉದ್ಘಾಟಿಸಿದರು. "ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ" ಎಂಬ ಧ್ಯೇಯದೊಂದಿಗೆ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ತಾಲ್ಲೂಕ್ ಪಂಚಾಯ್ತಿ, ಕಂದಾಯ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ರೇಷ್ಮೆ,ಮೀನುಗಾರಿಕೆಯ ಸಹಭಾಗಿತ್ವದಲ್ಲಿ ಹಂದನಕೆರೆಯಲ್ಲಿ ಮಂಗಳವಾರ ಅಯೋಜಿಸಿದ್ದ " ಕೃಷಿ ಅಭಿಯಾನ-೨೦೧೫-೧೬" ರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಇಲಾಖೆಯಲ್ಲಿ ರೈತರಿಗಾಗಿ ಕೃಷಿ ಯಾಂತ್ರೀಕರಣಯೋಜನೆ,ಕೃಷಿಭಾಗ್ಯ,ಸಾವಯವ ಭಾಗ್ಯ ಯೋಜನೆಯಂತಹ ಹಲವು ಯೋಜನೆಗಳಿದ್ದು ಅವುಗಳ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕೆಂದರು. ಉತ್ತಮ ಇಳುವರಿಯ ಬಿತ್ತನೆಬೀಜ, ಗೊಬ್ಬರ, ಕೀಟನಾಶಕ ಇನ್ನಿತರ ವಸ್ತುಗಳನ್ನು ಸಬ್ಸಿಡಿದರಲ್ಲಿ ಕೃಷಿ ಇಲಾಖೆಯಲ್ಲಿ ದೊರೆಯುವುದಿದ್ದು ಅವುಗಳನ್ನು ತಮ್ಮ ಹೊಲಗಳಿಗೆ ಹಾಕುವ ಮೂಲಕ ಉತ್ತಮ ಇಳುವರಿ ಪಡೆದು ಆರ್ಥಿಕವಾಗಿ ಅಭಿವೃದ್ದಿಯಾಗುವಂತೆ ತಿಳಿಸಿದರು. ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ಕೃಷಿ ಅಧಿಕಾರಿಗಳು ತಮ್ಮ ವ್ಯಾಪ್

ಇನ್ನೂ ತಪ್ಪಿಲ್ಲ ಹುಳಿಯಾರು ಬಸ್ ನಿಲ್ದಾಣದ ಕೆಸರಿನ ಸಮಸ್ಯೆ

ಮಳೆ ಬಂದರೆ ಸಾಕು ಪಟ್ಟಣದ ಬಸ್ ನಿಲ್ದಾಣದ ತುಂಬ ನೀರು ನಿಂತು ಕೆಸರುಂಟಾಗುವುದಿದ್ದು ಈ ಬಗ್ಗೆ ಎಷ್ಟೇ ಬಾರಿ ಪಂಚಾಯ್ತಿಯವರ ಗಮನಕ್ಕೆ ತಂದರೂ ಪ್ರಯೋಜನವಾಗದೆಯಿದ್ದು ಇಂದಿಗೂ ಸಹ ಬಸ್ ನಿಲ್ದಾಣಲ್ಲಿ ಉಂಟಾಗುವ ಕೆಸರಿನ ಸಮಸ್ಯೆ ಜೀವಂತವಾಗಿದ್ದು ಪ್ರಯಾಣಿಕರನ್ನು ಪರದಾಡುವಂತೆ ಮಾಡಿದೆ. ಬಸ್ ನಿಲ್ದಾಣದಲ್ಲಿರುವ ಚರಂಡಿಯ ತುಂಬೆಲ್ಲಾ ಮಣ್ಣು, ಪ್ಲಾಸ್ಟಿಕ್ , ಕಸಕಡ್ಡಿ ತುಂಬಿದ್ದು ಮಳೆ ಬಂದಾಗ ನೀರು ಸರಾಗವಾಗಿ ಹರಿದು ಹೋಗಲಾರದೆ ಬಸ್ ನಿಲ್ದಾಣದಲ್ಲೇ ನಿಲ್ಲುವಂತಾಗಿದೆ. ನಿಂತ ನೀರಿನ ನಡುವೆಯೇ ಬಸ್ ಗಳು ಸಂಚರಿಸುವುದರಿಂದ ಕೆಸರುಂಟಾಗಿದ್ದು ಪ್ರಯಾಣಿಕರು ಓಡಾಡಲು ಪ್ರಯಾಸ ಪಡುವಂತಾಗಿದೆ. ಬಸ್ ಹತ್ತಲು , ಇಳಿಯಲು ಪ್ರಯಾಸ ಪಡಬೇಕಿದ್ದು, ವೃದ್ದರು, ಮಕ್ಕಳು ಕೆಸರಿನಲ್ಲಿ ಜಾರಿ ಬಿದ್ದು ಮೈಗೆ ಕೆಸರು ಮೆತ್ತಿಸಿಕೊಂಡಿದ್ದಾರೆ. ನಿಲ್ದಾಣಕ್ಕೆ ಸರ್ಕಾರಿ ಹಾಗೂ ಖಾಸಗಿ ಬಸ್ ಸೇರಿ ಸಾಕಷ್ಟು ಬಸ್ ಬಂದು ಹೋಗುತ್ತಿದ್ದು , ಖಾಸಗಿ ಬಸ್ ನವರಿಂದ ಪಂಚಾಯ್ತಿಯವರು ಸುಂಕ ಕಟ್ಟಿಸಿಕೊಳ್ಳುತ್ತಿದ್ದಾರೆ ಹೊರತು ನಿಲ್ದಾಣದ ಸಮಸ್ಯೆ ಬಗ್ಗೆ ಮಾತ್ರ ಗಮನಹರಿಸಿಲ್ಲ. ಪ್ರಯಾಣಿಕರಿಗೆ ಕುಡಿಯುವ ನೀರಾಗಲಿ, ಕೂರಲು ಆಸನದ ವ್ಯವಸ್ಥೆಯಾಗಲಿ ಇಲ್ಲದೆ ಸಾರ್ವಜನಿಕರು ಪರಿತಪಿಸುವಂತಾಗಿದೆ. ನಿಲ್ದಾಣದಲ್ಲಿ ನೀರು ನಿಂತಿರುವುದರಿಂದ ಬೈಕ್ ಹಾಗೂ ಆಟೋ ಸಂಚಾರವೂ ದುಸ್ಥರವಾಗಿದ್ದು ಎಲ್ಲಿ ಜಾರಿ ಬಿಡುತ್ತೇವೆ ಎಂಬ ಭಯದಲ್ಲಿ ವಾಹನವನ್ನು ಚಲಾಯ

ರಸ್ತೆ ಬದಿಯ ತ್ಯಾಜ್ಯದ ತೆರವಿಗೆ ಮುಂದಾದ ಗ್ರಾ.ಪಂ. ಸದಸ್ಯ

ಹುಳಿಯಾರು ಪಟ್ಟಣದ ಒಂದನೇ ಬ್ಲಾಕ್ ನಿಂದ ಆಯ್ಕೆಯಾಗಿರುವ ಸದಸ್ಯ ಎಲ್.ಆರ್.ಚಂದ್ರಶೇಕರ್ ತಮ್ಮ ಬ್ಲಾಕ್ ನ ರಸ್ತೆ ಬದಿಯಲ್ಲಿ ಬಿದಿದ್ದ ತ್ಯಾಜ್ಯವನ್ನು ಜೆಸಿಬಿ ಬಳಸಿ ತೆಗೆದು ಹಾಕಿಸುವ ಮೂಲಕ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ. ಒಂದನೇ ಬ್ಲಾಕ್ ನ ಗಾಂಧಿಪೇಟೆ ರಸ್ತೆ , ಮಾಜಿ ಛೇರ್ಮನ್ ವೆಂಕಟಾಚಲಪತಿ ಶೆಟ್ಟಿಯವರ ಮನೆಯ ರಸ್ತೆ, ವಿವೇಕಾನಂದ ರಸ್ತೆ ಸೇರಿದಂತೆ ಇನ್ನಿತರ ರಸ್ತೆ ಬದಿಯ ಚರಂಡಿಗೆ ಹೊಂದಿಕೊಂಡಂತೆ ರಾಶಿರಾಶಿ ಕಸ,ಕಡ್ಡಿ, ಮಣ್ಣು ಬಿದ್ದಿತ್ತು. ಅಲ್ಲದೆ ಚರಂಡಿ ಸ್ವಚ್ಚಗೊಳಿಸುವಾಗಿನ ತ್ಯಾಜ್ಯ ಸಹ ಚರಂಡಿ ಪಕ್ಕದಲ್ಲೇ ಹಾಕಿದ್ದು ರಸ್ತೆಯನ್ನು ಕಿರಿದಾಗಿಸಿತ್ತು. ಇದರಿಂದಾಗಿ ಇಲ್ಲಿ ಸಂಚರಿಸುವರಿಗೆ ಕಿರಿಕಿರಿಯಾಗುತ್ತಿತ್ತಲ್ಲದೆ ವಾಹನಗಳು ಸಂಚರಿಸಲು ಪರದಾಡುವಂತಾಗಿತ್ತು. ಚರಂಡಿ ಪಕ್ಕದಲ್ಲೇ ಇದ್ದ ಮಣ್ಣು ಚರಂಡಿಯಲ್ಲಿ ಬಿದ್ದು ನೀರು ನಿಂತು ದುರ್ವಾಸನೆ ಉಂಟುಮಾಡಿತ್ತು. ಇಂತಹ ಹತ್ತಾರೂ ಸಮಸ್ಯೆಗಳನ್ನು ಕಂಡಿದ್ದ ಇದೇ ಬ್ಲಾಕ್ ನವರೇ ಆದ ಎಲ್.ಆರ್.ಚಂದ್ರಶೇಖರ್ ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸಿ, ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ವೇಳೆ ಮತದಾರಿಗೆ ನೀಡಿದ ಭರವಸೆಯಂತೆ ಕಾರ್ಯಗಳನ್ನು ಮಾಡಿಸಲು ಮುಂದಾಗಿದ್ದಾರೆ. ಈ ಕಾರ್ಯ ಮಾಡಿಸಲು ಪಂಚಾಯ್ತಿಂದ ಬರುವ ಹಣವನ್ನು ಕಾದುಕೂತರೆ ತಡವಾಗುತ್ತದೆ ಅವರು ಹಣಕೊಡಲಿ ಬಿಡಲಿ ತಮ್ಮ ಖರ್ಚಿನಲ್ಲಿ ಕೆಲಸ ಮಾಡಿಸ

ಶಾಲಾಮಕ್ಕಳಿಗೆ ನೋಟ್ ಬುಕ್ ವಿತರಣೆ

ಹುಳಿಯಾರು  ಪಟ್ಟಣದ ಕಾಮನಬಿಲ್ಲು ಫೌಂಡೇಷನ್ ವತಿಯಿಂದ ಪಟ್ಟಣದ ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಉರ್ದು ಫ್ರೌಢಶಾಲೆ, ಇಂದಿರಾಗಾಂಧಿ ಪ್ರಾಥಮಿಕ ಶಾಲೆ, ಕನಕದಾಸ ಪ್ರಾಠಮಿಕ ಶಾಲೆ, ಕೇಶವಾ ವಿದ್ಯಾಮಂದಿರ, ಮಾರುತಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಲಾಯಿತು. ಶಾಲಾಮಕ್ಕಳು ತಾವು ಪಡೆದ ನೋಟ್ ಬುಕ್ ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಹಾಗೂ ಉತ್ತಮವಾಗಿ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸುವ ಮೂಲಕ ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತನ್ನಿ ಎಂದು ಫೌಂಡೇಷನ್ನ ಅಧ್ಯಕ್ಷ ಚನ್ನಕೇಶವ ಮಕ್ಕಳಿಗೆ ಕಿವಿಮಾತು ಹೇಳಿದರು. ಈ ವೇಳೆ ಫೌಂಡೇಷನ್ನ ಪದಾಧಿಕಾರಿಗಳಾದ ಸ್ಟುಡಿಯೋ ರವಿ, ಕಂಪನಹಳ್ಳಿ ಪ್ರಕಾಶ್, ಕೋಳಿಶ್ರೀನಿವಾಸ್, ಚೇತನ್,ಚನ್ನಬಸವಯ್ಯ,ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದೇವಾಲಯದ ಹುಂಡಿ ಕಳವು

ತಾಲೂಕಿನ ಕೊಡಲಾಗರ ಗ್ರಾಮದ ಬ್ಯಾಟೆರಂಗನಾಥ ಸ್ವಾಮಿ ದೇವಾಲಯದ ಹುಂಡಿಯನ್ನು ಕಳ್ಳರು ದೋಚಿದ್ದಾರೆ. ಗುರುವಾರ ರಾತ್ರಿ ಊರ ಹೊರಗಿನ ದೇವಾಲಯದ ಹುಂಡಿಯನ್ನು ಕಳ್ಳರು ಹೊಡೆದು ತೆಗೆದಿದ್ದಾರೆ. ನಂತರ ದೇವಾಲಯದ ಬೀಗವನ್ನು ಸಹ ಒಡೆದಿದ್ದಾರೆ. ತಾಲೂಕಿನಲ್ಲಿ ಇತ್ತೀಚೆಗೆ ನಡೆದಿರುವ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ. ಊರಹೊರಗಿರುವ ದೇವಾಲಯಗಳಿಗೆ ಗ್ರಾಮಸ್ಥರು ಸೂಕ್ತ ರಕ್ಷಣೆ ಒದಗಿಸಿಕೊಳ್ಳ ಬೇಕಾಗಿದೆ. ಇಲ್ಲದಿದ್ದರೆ, ನಿಧಿಯ ಆಸೆಗೆ ದೇವರ ವಿಗ್ರಹಗಳನ್ನೇ ಕಿತ್ತುಹಾಕಿದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಸ್ಥಳಕ್ಕೆ ಪೋಲೀಸ್ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ಭೇಟಿ ನೀಡಿ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಲೇರಿಯಾ ವಿರೋಧಿ ಮಾಸಾಚರಣೆ

ಮಲೇರಿಯಾ ರೋಗ ಸಾಂಕ್ರಾಮಿಕ ರೋಗವಾಗಿದ್ದು,ಪ್ಲಾಸ್ಮೋಡಿಯಾ ಎಂಬ ಪರಾವಲಂಬಿ ಸೂಕ್ಷ್ಮಾಣು ಜೀವಿಯಾದ ಸೊಳ್ಳೆಯಿಂದ ಬರುವ ರೋಗವನ್ನು ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣ ಅಗತ್ಯವಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಎನ್.ಎಂ.ಶಿವಕುಮಾರ್ ತಿಳಿಸಿದರು. ಅವರಿಂದು ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಸೊಳ್ಳೆಗಳ ನಿಂಯತ್ರಣಕ್ಕಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆರಿಗೆ ಮಾರ್ಗದರ್ಶನ ನೀಡಿ ಮಾತನಾಡುತ್ತಿದ್ದರು. ಮಲೇರಿಯಾ ಮಾನವನನ್ನು ಬಹುವಾಗಿ ಕಾಡುವ ರೋಗವಾಗಿದ್ದು,ಎಚ್ಚರ ವಹಿಸಿದರೆ ನಿಯಂತ್ರಣ ಸುಲಭಸಾಧ್ಯ.ನಿಂತನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಬರುವ ರೋಗ ಇದಾಗಿರುವುದರಿಂದ,ಅವುಗಳ ನಾಶ್ಕಕೆ ಕೈಗೊಳ್ಳುವ ಮುಂಜಾಗ್ರತೆಯಿಂದ ರೋಗ ಹರಡುವುದನ್ನು ತಪ್ಪಿಸಬಹುದು..ಮುಖ್ಯವಾಗಿ ನಿಂತನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಮಾನವರಿಗೆ ಅನೇಕ ರೀತಿಯ ಸಾಂಕ್ರಾಮಿಕ ರೋಗಗಳು ಉಂಟಾಗುತ್ತವೆ.ಸಿಬ್ಬಂದಿಯ ಕೊರತೆಯಿಂದ ಪಟ್ಟಣದಲ್ಲಿ ಇದುವರೆಗೆ ಪರಿಣಾಮಕಾರಿಯಾಗಿ ಸೊಳ್ಳೆಗಳ ನಿಯಂತ್ರಣ ಕಾರ್ಯವನ್ನು ಕೈಗೊಳ್ಳುವಲ್ಲಿ ಹಿನ್ನೆಡೆಯಾಗಿದ್ದು,ಗ್ರಾಮೀಣ ಭಾಗದ ಆಶಾ ಕಾರ್ಯಕರ್ತೆಯರ ಮೂಲಕ ಪಟ್ಟಣದ ೫೫೦೦ ಮನೆಗಳಿಗೆ ಭೇಟಿ ನೀಡಿ ನೀರಿಗೆ ದ್ರಾವಣ ಹಕಲಾಗುವುದು. ಕಾಯರ್ಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ವೈದ್

ಗ್ರಾಮೀಣ ಮಕ್ಕಳಿಗೆ ಸೌಲಭ್ಯ ಕೊಡಿ: ಜಯಮಾಲ

ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿರುವವರಲ್ಲಿ ಹಲವರು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದವರೇ ಆಗಿದ್ದು ಅಗತ್ಯ ಸವಲತ್ತು ನೀಡಬೇಕೆಂದು ವಿಧಾನ ಪರಿಷತ್‌ ಸದಸ್ಯೆ ಹಾಗೂ ಚಲನಚಿತ್ರ ನಟಿ ಜಯಮಾಲ ಹೇಳಿದರು. ಚಿಕ್ಕನಾಯಕನಹಳ್ಳಿಯ ಕನಕ ಭವನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ 2014-15ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ, ಚಿಕ್ಕನಾಯಕನಹಳ್ಳಿಯಿಂದ ಬಂದಂತಹ ಸಾ.ಶಿ.ಮರುಳಯ್ಯನವರ, ಲಿಂಗದೇವರು ಹಳೆಮನೆಯಂತಹವರು ಸಾಹಿತ್ಯ ಕ್ಷೇತ್ರದಲ್ಲಿ, ಚಲನಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿರುವ ಬಿ.ಎಸ್‌. ಲಿಂಗದೇವರು, ಮೇಕಪ್‌ಮ್ಯಾನ್‌ ರಾಜು ಇನ್ನಿತರರು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆಂದರು. ವಿದ್ಯಾಭ್ಯಾಸ ಮುಂದುವರಿಸಲು ಯಾರಿಗೆ ತೊಂದರೆ ಇದ್ದರೂ ತನ್ನ ಬಳಿ ಬಂದು ಸಮಸ್ಯೆ ಹೇಳಿಕೊಂಡರೆ ವಿದ್ಯಾಭ್ಯಾಸಕ್ಕೆ ನೆರವಾಗುತ್ತೇನೆ. ಇನ್ನು ಚಿಕ್ಕನಾಯಕನಹಳ್ಳಿಗೆ ತಾಂತ್ರಿಕ ಶಿಕ್ಷಣ ತರಲು ಶ್ರಮಿಸುತ್ತೇನೆಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಮಾತನಾಡಿ, ಪ್ರಜಾಪ್ರಗತಿ ಸಂಪಾದಕ ಎಸ್‌.ನಾಗಣ್ಣ ಮಾತನಾಡಿ, ಬೆಂಗಳೂರು ಬಿಬ

ಪರಿಸರ ಮಾಹಿತಿ ಕಾರ್ಯಾಗಾರ

ಹುಳಿಯಾರು  ಹೋಬಳಿಯ ಚಿಕ್ಕಬಿದರೆ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಪರಿಸರ ಮಾಹಿತಿ ಕಾರ್ಯಾಗಾರ ಜರುಗಿತು. ವಿಜ್ಞಾನ ಕೇಂದ್ರದ ರಾಮಕೃಷ್ಣಪ್ಪ ಉದ್ಘಾಟಿಸಿ ಮಾತನಾಡಿ, ಹಳ್ಳಿಗಳಲ್ಲಿ ಇಂದಿಗೂ ಪರಿಸರ ಸಂರಕ್ಷಣೆಯ ಮಹತ್ವ ಅರಿಯದಿರುವುದು ವಿಷಾದನೀಯ ಎಂದರು. ಹಳ್ಳಿಗಳಲ್ಲಿ ಇಂದು ಕೆರೆಕಟ್ಟೆಗಳು ಮಾಯವಾಗಿ ಪ್ರತಿಯೊಬ್ಬರು ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸುತ್ತಿದ್ದು , ಜೀವಜಲ ಬತ್ತಿದಲ್ಲಿ ಗತಿಯೇನು ಯೋಚಿಸದಿರುವುದು ದುರಂತ. ಇಲ್ಲಿ ಗುಡ್ಡಕ್ಕೆ ಬೆಂಕಿ ಇಟ್ಟರು ಪ್ರಶ್ನಿಸದೆ, ಮರಕಡಿದರೂ ಕೇಳದೆ ಪರಿಸರ ನಾಶದ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಈ ಬಗ್ಗೆ ಸ್ವಯಂಸೇವಾ ಸಂಘಟನೆಗಳು ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದರು. ಶಾಲೆಯ ಕಾರ್ಯದರ್ಶಿ ಚಿಕ್ಕಬಿದರೆ ಚಂದ್ರಣ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ರಾಮಲಿಂಗಯ್ಯ,ಒಕ್ಕೂಟದ ಅಧ್ಯಕ್ಷ ಮುದ್ದಣ್ಣ, ಕೃಷಿ ಅಧಿಕಾರಿ ಗೋಪಿ, ಮೇಲ್ವಿಚಾರಕ ಸುರೇಶ್ ಸೇರಿದಂತೆ ಇನ್ನಿತರರಿದ್ದರು.

ಬಿತ್ತನೆ ಬೀಜದ ಕೊರತೆ

ಹುಳಿಯಾರು  ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ಕೃಷಿ ಇಲಾಖೆ ನಿರ್ಲಕ್ಷದಿಂದ ಕೃಷಿಗೆ ಅಗತ್ಯವಾದ ಬಿತ್ತನೆ ಬೀಜದ ಕೊರತೆ ಉಂಟಾಗಿದೆ ಎಂದು ರೈತ ಸಂಘದ ಪುಟ್ಟಣ್ಣಯ್ಯ ಬಣದ ಅಧ್ಯಕ್ಷ ಹೊಸಳ್ಳಿ ಚಂದ್ರಪ್ಪ ದೂರಿದ್ದಾರೆ. ರೈತರ ಕೃಷಿ ಕಾರ್ಯಕ್ಕೆ ಅಗತ್ಯವಾದ ರಾಗಿ, ತೊಗರಿ , ಅಲಸಂದೆ ಬಿತ್ತನೆ ಬೀಜ ಕೃಷಿ ಇಲಾಖೆಯಲ್ಲಿ ಲಭ್ಯವಿಲ್ಲದೆ ಹೊರಗಡೆ ಅಂಗಡಿಗಳಲ್ಲಿ ಕೇಳಿದಷ್ಟು ಬೆಲೆಕೊಟ್ಟು ತರುವ ಸ್ಥಿತಿ ಉಂಟಾಗಿದೆ. ಅಲ್ಲದೆ ಈಗಾಗಲೇ ಉತ್ತಮವಾಗಿ ಬೆಳೆ ಬಂದಿರುವ ಹೆಸರಿಗೆ ಕೀಟಬಾಧೆ ಉಂಟಾಗಿದ್ದು ಇವುಗಳ ನಿಯಂತ್ರಣಕ್ಕೆ ಅಗತ್ಯ ಔಷಧಿ ಸರಬರಾಜು ಮಾಡುವಲ್ಲಿ ಸಹ ವಿಫಲಾಗಿದೆ ಎಂದು ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಬೀಜ, ಔಷಧಿ , ಗೊಬ್ಬರವನ್ನು ಉಚಿತವಾಗಿ ನೀಡುವಂತೆ ಆಗ್ರಹಿಸಿದ್ದಾರೆ.  

ಶ್ರದ್ದಾಭಕ್ತಿಯಿಂದ ಜರುಗಿತು ಮಂಡಲಪೂಜೆ

ಹುಳಿಯಾರು ಸಮೀಪದ ಗೋಪಾಲಪುರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ ಮಂಡಲ ಪೂಜಾ ಕಾರ್ಯಕ್ರಮ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ಜರುಗಿತು.   ಹುಳಿಯಾರು ಸಮೀಪದ ಗೋಪಾಲಪುರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಂಡಲಪೂಜೆ ಅಂಗವಾಗಿ ಹೋಮ ನಡೆಸಲಾಯಿತು.   ಹುಳಿಯಾರು ಸಮೀಪದ ಗೋಪಾಲಪುರದ ಆಂಜನೇಯಸ್ವಾಮಿಗೆ ಮಂಡಲ ಪೂಜೆ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ವಿನೋದಭಟ್ ಹಾಗೂ ಸಂಗಡಿಗರ ಪೌರೋಹಿತ್ಯದಲ್ಲಿ ಗಂಗಾಪೂಜೆ, ಪೂರ್ಣಕುಂಭಪೂಜೆ,ಮಹಾಗಣಪತಿಪೂಜೆ, ಅಷ್ಟೋತ್ತರ, ಹೋಮ ಕಾರ್ಯ ಹಾಗೂ ಪೂರ್ಣಾಹುತಿ ನಡೆಯಿತು. ದೇವಾಲಯದ ಧರ್ಮದರ್ಶಿಗಳಾದ ವಾಸುದೇವಮೂರ್ತಿ ದಂಪತಿಗಳು ಪೂಜಾವಿಧಿವಿಧಾನ ನೆರವೇರಿಸಿದರು.ಮಹಾಮಂಗಳಾರತಿ ನಂತರ ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದವಿನಿಯೋಗ ಕಾರ್ಯ ನಡೆಸಲಾಯಿತು. ಈ ವೇಳೆ ದೇವಾಲಯ ಸಮಿತಿಯವರು ಹಾಗೂ ಗೋಪಾಲಪುರದ ಸುತ್ತಮುತ್ತಲಿನ ಹಳ್ಳಿಯ ಭಕ್ತಾಧಿಗಳು ಆಗಮಿಸಿದ್ದು ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಮಕ್ಕಳಿಗೆ ನೋಟ್ ಬುಕ್, ಲೇಖನ ಸಾಮಗ್ರಿ ವಿತರಣೆ

ಹುಳಿಯಾರು  ಪಟ್ಟಣದ ಶ್ರೀರೇಣುಕಾ ಎಲ್ಲಮ್ಮದೇವಿ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಚಿ.ನಾ.ಹಳ್ಳಿಯ ಬೆಳಸಿರಿ ಸೇವಾಟ್ರಸ್ಟ್ ವತಿಯಿಂದ ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಯನ್ನು ವಿತರಿಸಲಾಯಿತು. ಹುಳಿಯಾರಿನ ಶ್ರೀರೇಣುಕಾ ಎಲ್ಲಮ್ಮದೇವಿ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಚಿ.ನಾ.ಹಳ್ಳಿಯ ಬೆಳಸಿರಿ ಸೇವಾಟ್ರಸ್ಟ್ ವತಿಯಿಂದ ಶಾಲಾಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಯನ್ನು ವಿತರಿಸಲಾಯಿತು. ಈ ವೇಳೆ ಟ್ರಸ್ಟ್ ನ ಅಧ್ಯಕ್ಷ ಹೆಚ್.ಎಂ.ತ್ಯಾಗರಾಜ್ ಮಾತನಾಡಿ , ವಿದ್ಯಾರ್ಥಿಗಳ ಓದಿಗೆ ಪೂರಕವಾಗುವ ನಿಟ್ಟಿನಲ್ಲಿ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿ ವಿತರಿಸಿದ್ದು ಇವುಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವಂತೆ ತಿಳಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಲ್ಲಿ ಟಿವಿ ವೀಕ್ಷಣೆಯ ಗೀಳು ಹೆಚ್ಚಿದ್ದು ಓದಿನಲ್ಲಿ ಹಿಂದುಳಿಯುತ್ತಿದ್ದಾರೆ. ವಿದ್ಯಾರ್ಥಿಗಳು ಅದಷ್ಟು ಟಿವಿಯ ಕಡೆ ಗಮನಗೊಡದೆ ಪ್ರತಿನಿತ್ಯ ಶಾಲೆಯಲ್ಲಿ ತಿಳಿಸುವ ವಿಚಾರಗಳನ್ನು ಅಭ್ಯಾಸಿಸಿ ಎಂದು ಕಿವಿಮಾತು ಹೇಳಿದರು. ಈ ವೇಳೆ ಟ್ರಸ್ಟ್ ನ ಕಾರ್ಯದರ್ಶಿಹೆಚ್.ಟಿ.ರಾಜು, ಖಜಾಂಚಿ ಆರ್.ಗಂಗರಾಜು, ಎಸ್.ಬಿ.ಐ ಬ್ಯಾಂಕ್ ನ ಮಹೇಶ್ ,ಬೆಳಸಿರಿ ಟ್ರಸ್ಟ್ ನ ಸಿ.ಹೆಚ್.ನಾಗರಾಜ್, ಬೆಂಗಳೂರಿನ ಡಾ||ಜಿ.ಪುರುಷೋತ್ತಮ್ ಸೇರಿದಂತೆ ಇತರರಿದ್ದರು.

ಗ್ರಾಮದ ಅಭಿವೃದ್ದಿಯನ್ನ ಮೂಲಮಂತ್ರವಾನ್ನಾಗಿಸಿಕೊಳ್ಳಿ

ಪ್ರಸ್ತುತ ಗ್ರಾಮ ಪಂಚಾಯ್ತಿಗಳಲ್ಲಿ ಗೆದ್ದ ಸದಸ್ಯರು ಗ್ರಾಮದ ಅಭಿವೃದ್ದಿಯತ್ತ ಗಮನಗೊಡದೆ ಜನರ ಹಿಡಿಶಾಪಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ರೈತ ಸಂಘದಿಂದ ಆಯ್ಕೆಯಾಗಿರುವ ಅಭ್ಯರ್ಥಿಗಳು ಗ್ರಾಮದ ಅಭಿವೃದ್ದಿಯನ್ನೇ ಮೂಲಮಂತ್ರವನ್ನಾಗಿಸಿಕೊಂಡು ಸಾಗಿ ಎಂದು ಸಾಹಿತಿ ಪ್ರೋ.ಗಂಗಾಧರಪ್ಪ ತಿಳಿಸಿದರು. ಹುಳಿಯಾರು ಹೋಬಳಿಯ ವಿವಿಧ ಗ್ರಾ.ಪಂ.ಯಲ್ಲಿ ರೈತಸಂಘದಿಂದ ಆಯ್ಕೆಯಾದ ಸದಸ್ಯರನ್ನು ಸಾಹಿತಿ ಪ್ರೋ.ಗಂಗಾಧರಪ್ಪ ಅಭಿನಂದಿಸಿದರು. ಹುಳಿಯಾರು ಹೋಬಳಿಯ ವಿವಿಧ ಗ್ರಾಮ ಪಂಚಾಯ್ತಿಯಲ್ಲಿ ರೈತಸಂಘದ ಮೂಲಕ ಸ್ಪರ್ಧಿಸಿ ಚುನಾಯಿತರಾದ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು. ದೇಶದ ಬೆನ್ನೆಲುಬಾಗಿರುವ ಹಳ್ಳಿಗಳು ಮೊದಲು ಅಭಿವೃದ್ದಿಯಾಗಬೇಕು ಅದಕ್ಕೆ ಸ್ಥಳೀಯ ಆಡಳಿತ ವ್ಯವಸ್ಥೆ ಚುರುಕಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು. ವಿವಿಧ ರಾಜಕೀಯ ಪಕ್ಷದ ಹೆಸರಿನಲ್ಲಿ ಗೆಲ್ಲುವ ಸದಸ್ಯರು ಅಮಿಷಕ್ಕೆ ಒಳಗಾಗಿ ತಮ್ಮ ಪಕ್ಷವನ್ನೇ ಬದಲಿಸಿ ತಮ್ಮಿಷ್ಟದಂತೆ ಆಡಳಿತ ನಡೆಸುತ್ತಾರೆ. ರೈತಸಂಘದ ಹೆಸರಿನಲ್ಲಿ ಆಯ್ಕೆಯಾದ ಸದಸ್ಯರುಗಳು ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷ ಸೇರದೆ ಸ್ವತಂತ್ರವಾಗಿಯೇ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿ ಎಂದರು. ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯಗಳಿಂದ ಗ್ರಾಮೀಣ ಭಾಗದ ರೈತರು ವಂಚಿತರಾಗುತ್ತಿದ್ದು ಅಂತಹ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗುವ

ತಾ.೨೨) ಕಂಪನಹಳ್ಳಿ ; ಆಂಜನೇಯಸ್ವಾಮಿ ಕುಂಭಾಭಿಷೇಕ

ಹುಳಿಯಾರು : ಹೋಬಳಿ ಕಂಪನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ (ತಾ.೨೨) ಸೋಮವಾರ ಆಂಜನೇಯಸ್ವಾಮಿಯ ಕುಂಭಾಭಿಷೇಕ ಕಾರ್ಯ ನಡೆಯಲಿದೆ. ಇದರ ಅಂಗವಾಗಿ ಭಾನುವಾರ ಸಂಜೆ ಗ್ರಾಮದೇವತೆ ಕೆಂಕೆರೆ ಕಾಳಮ್ಮ, ದಮ್ಮಡಿಹಟ್ಟಿಈರಬೊಮ್ಮಕ್ಕದೇವಿ,ಗೊಲ್ಲರಹಟ್ಟಿ ಕರಿಯಮ್ಮ ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆಯಲಿದೆ. ಸೋಮವಾರ ಮುಂಜಾನೆ ಗಂಗಾಪೂಜೆ,ಪೂರ್ಣಕುಂಭಪೂಜೆ,ಮಹಾಗಣಪತಿ ಪೂಜೆ ನಡೆದು ನಂತರ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಮಲ್ಲಿಕಾರ್ಜುನದೇಶಿಕೇಂದ್ರ ಮಹಾಸ್ವಾಮಿ ಅವರಿಂದ ಆಂಜನೇಯಸ್ವಾಮಿಗೆ ಕುಂಭಾಭಿಷೇಕ ನಡೆದು ನಂತರ ನೂತನ ಶಿಖರಕ್ಕೆ ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ ನಡೆಯಲಿದೆ. ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವಂತೆ ಆಂಜನೇಯಸ್ವಾಮಿ ಛಾರಿಟಬಲ್ ಟ್ರಸ್ಟ್ ನವರು ತಿಳಿಸಿದ್ದಾರೆ.

ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನಸಾರ ನಾಶ

ಪ್ರಸ್ತುತದಲ್ಲಿ ಸಾಕಷ್ಟು ರೈತರು ಹೆಚ್ಚು ಇಳುವರಿ ಪಡೆಯುವ ಹಂಬಲದಲ್ಲಿ ಏತೆಚ್ಚವಾಗಿ ರಾಸಾಯನಿಕ ಗೊಬ್ಬರ, ಕೀಟಾನಾಶಕವನ್ನು ಭೂಮಿಗೆ ಹಾಕುತ್ತಿರುವುದರಿಂದ ಭೂಮಿಯ ಫಲವತ್ತತೆಯ ಸಾರ ನಾಶವಾಗುತ್ತಿದೆ ಎಂದು ತಾಲ್ಲೂಕು ಸಹಾಯಕ ಕೃಷಿನಿರ್ದೇಶಕ ಡಾ.ಹೆಚ್.ಹೊನ್ನದಾಸೇಗೌಡ ವಿಷಾದಿಸಿದರು. ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ಕೃಷಿ ಇಲಾಖೆ ಅಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಕೃಷಿ ಪರಿಕರಗಳ ಸ್ಟಾಲ್ ಗಳನ್ನು ಜಿ.ಪಂ.ಸದಸ್ಯೆ ಮಂಜುಳಾ ಉದ್ಘಾಟಿಸಿದರು. ಎಪಿಎಂಸಿ ಅಧ್ಯಕ್ಷ ಸಣ್ಣಯ್ಯ, ಎಡಿಓ ಹೊನ್ನದಾಸೇಗೌಡ ಇತರರಿದ್ದಾರೆ. ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ನಡೆದ ಕೃಷಿ ಅಭಿಯಾನ ಸಂವಾದ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿನಿರ್ದೇಶಕ ಡಾ.ಹೆಚ್.ಹೊನ್ನದಾಸೇಗೌಡ ಮಾತನಾಡಿದರು. "ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ" ಎಂಬ ಧ್ಯೇಯದೊಂದಿಗೆ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ತಾಲ್ಲೂಕ್ ಪಂಚಾಯ್ತಿ, ಕಂದಾಯ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ರೇಷ್ಮೆ,ಮೀನುಗಾರಿಕೆ,ಕೃಷಿ ಮಾರುಕಟ್ಟೆ,ಲೀಡ್ ಬ್ಯಾಂಕ್ ಹಾಗೂ ಆರಕ್ಷಕ ಇಲಾಖೆಯ ಸಹಭಾಗಿತ್ವದಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರದಂದು ಅಯೋಜಿಸಿದ್ದ " ಕೃಷಿ ಅಭಿಯಾನ-೨೦೧೫-೧೬" ರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ರೈತರು ರಾಸಯನಿಕ ಗೊಬ್ಬರ ಹಾಕುವ ಬದ

ಹಿಪ್ಕೋ ಕ್ಯಾಂಪಸ್ ಕಾನ್ವೆಂಟ್ ಪ್ರಾರಂಭ

ಗ್ರಾಮೀಣ ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಕಾನ್ವೆಂಟನ್ನು ತೆರೆಯಲಾಗಿದ್ದು ಇದರ ಉಪಯೋಗವನ್ನು ಗ್ರಾಮಸ್ಥರು ಪಡೆಯುವಂತೆ ಪಿಎಲ್.ಡಿ ಬ್ಯಾಂಕ್ ನಿರ್ದೇಶಕ ಕೆ.ಸಿ.ಶಿವಕುಮಾರ್ ತಿಳಿಸಿದರು. ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಹಿಪ್ಕೋ ಕ್ಯಾಂಪಸ್ ಕಾನ್ವೆಂಟ್ ನ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಈ ವೇಳೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಬಸವರಾಜು, ಪ್ರಾಥಮಿಕ ಕೃಷಿ ಸಹಕಾರ ಸಂಘದ ನಿರ್ದೇಶಕ ಈಶ್ವರಯ್ಯ ಶಾಲೆಯ ಸಿಬ್ಬಂದಿ ಅಮೃತ , ಕಾವ್ಯ ಉಪಸ್ಥಿತರಿದ್ದರು.

ಎಸ್.ಬಿ.ಐ ನಲ್ಲಿ ಖಾತೆ ತೆರೆಯಲು ವಿದ್ಯಾರ್ಥಿಗಳ ಪರದಾಟ ಸೈಬರ್ ಸೆಂಟರ್ ಗೆ ದೂಡುತ್ತಿರುವ ಮ್ಯಾನೇಜರ್

ಹುಳಿಯಾರು  ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರಯಲು ಬರುವ ಹೋಬಳಿಯ ವಿವಿಧ ಭಾಗದ ಪೋಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಬ್ಯಾಂಕಿನವರು ಸ್ಪಂದಿಸದಿದೆ ಪರದಾಡಿಸುತ್ತಿದ್ದಾರೆ. ಒಂದು ಖಾತೆ ತೆರೆಯಲು ಬೆಳಿಗ್ಗಿನಿಂದ ಸಂಜೆಯವರೆಗೆ ಕಾದುಕೂರುವಂತಾಗಿರುವುದಲ್ಲದೆ , ಉಚಿತ ಫಾರಂಗಳನ್ನು ನೀಡದ ಮ್ಯಾನೇಜರ್ ಸೈಬರ್ ಸೆಂಟರ್ ನಲ್ಲಿ ಆನ್ ಲೈನ್ ಮೂಲಕ ಖಾತೆ ಓಪನ್ ಮಾಡಿಸಿಕೊಂಡು ಬರುವಂತೆ ಹೇಳಿ ಕಳುಹಿಸುತ್ತಿರುವುದು ಸಮಸ್ಯೆಯಾಗಿದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬರುವ ವಿದ್ಯಾರ್ಥಿ ವೇತನ ಬ್ಯಾಂಕ್ ಖಾತೆಗೆ ಸಂದಾಯವಾಗುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಬ್ಯಾಂಕ್ ಖಾತೆ ಹೊಂದಿರಬೇಕಿದೆ. ಹಾಗಾಗಿ ಪೋಷಕರು ಹಾಗೂ ವಿದ್ಯಾರ್ಥಿಗಳು ಅಕೌಂಟ್ ಮಾಡಿಸಲು ಬ್ಯಾಂಕ್ ನತ್ತ ಮುಗಿಬಿದ್ದಿದ್ದಾರೆ. ಪಟ್ಟಣದಲ್ಲಿ ಎಸ್.ಬಿ.ಐ , ಎಸ್.ಬಿ.ಎಂ ಹಾಗೂ ಕೆನರಾಬ್ಯಾಂಕ್ ಸೇರಿ ಒಟ್ಟು ಮೂರು ರಾಷ್ಟ್ರೀಕೃತ ಬ್ಯಾಂಕ್ ಇವೆ. ಈ ಎಲ್ಲಾ ಬ್ಯಾಂಕ್ ಗಳಲ್ಲೂ ಸಹ ಹೆಚ್ಚುಮಂದಿ ವಿದ್ಯಾರ್ಥಿಗಳೆ ತುಂಬಿರುವುದು ಕಂಡುಬರುತ್ತಿದೆ. ಕೆನರಾ ಬ್ಯಾಂಕ್ ಹಾಗೂ ಎಸ್.ಬಿ.ಎಂ ಬ್ಯಾಂಕ್ ಗಳಲ್ಲಿ ಬ್ಯಾಂಕ್ ನವರೇ ಆಕೌಂಟ್ ಓಪನಿಂಗ್ ಫಾರಂಗಳನ್ನು ಉಚಿತವಾಗಿ ಕೊಟ್ಟು ಖಾತೆ ತೆರೆಯುತ್ತಿದ್ದರೆ. ಎಸ್.ಬಿ.ಐ ನಲ್ಲಿ ಮಾತ್ರ ವಿನಾಕಾರಣ ಆಕೌಂಟ್ ಓಪನಿಂಗ್ ಫಾರಂ ನೀಡದೆ ಸೈಬರ್ ಸೆಂಟರ್ ಗೆ ಕಳುಹಿಸಿ ಅಲ್ಲಿ ಆನ್ ಲೈನ್ ನಲ್ಲ

ಕೆಂಕೆರೆ : ಯಾರಿಗೊಲಿಯಲಿದೆ ಅಧ್ಯಕ್ಷ ಸ್ಥಾನ

ಹುಳಿಯಾರು ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕೆಂಕೆರೆ ಗ್ರಾಮ ಪಂಚಾಯ್ತಿ ಒಟ್ಟು ೧೭ ಸ್ಥಾನ ಹೊಂದಿದ್ದು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನ ಬಿಸಿಎಂ-ಬಿ ವರ್ಗದ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ. ಕೆಂಕೆರೆ ಪಂಚಾಯ್ತಿಯು ಒಟ್ಟು ೫ ಬ್ಲಾಕ್ ಗಳಾಗಿ ವಿಂಗಡಣೆಯಾಗಿದ್ದು ೮ ಜನ ಮಹಿಳೆಯರು ಆರಿಸಿಬಂದಿದ್ದು ಅದರಲ್ಲಿ ನಾಲ್ವರು ಬಿಸಿಎಂ-ಬಿ ವರ್ಗದವರಾದರೆ ಇಬ್ಬರು ಬಿಸಿಎಂ-ಅ ವರ್ಗದವರು ಹಾಗೂ ಇಬ್ಬರು ಪರಿಶಿಷ್ಟಜಾತಿಯವರಾಗಿದ್ದಾರೆ. .ಬಿಸಿಎಂ-ಬಿ ವರ್ಗಕ್ಕೆ ಅಧ್ಯಕ್ಷ ಸ್ಥಾನ ಬಂದಿದ್ದು ಹಾಲಿ ಗೆದ್ದಿರುವ ಮಹಿಳೆಯರಲ್ಲಿ ಬಿಸಿಎಂ-ಬಿ ಯಿಂದ ಗೆದ್ದಿರುವ ಮಹಿಳೆ ಒಬ್ಬರೇ ಆಗಿದ್ದರೂ ಸಹ ನಿಯಮದಂತೆ ಈ ವರ್ಗಕ್ಕೆ ಸೇರಿ ಸಾಮಾನ್ಯ ಮಹಿಳೆ ಸ್ಥಾನದಿಂದಲೂ ಗೆದ್ದು ಬಂದಿದ್ದರೂ ಸಹ ಬಿಸಿಎಂ-ಬಿ ಯಿಂದಲೂ ಸ್ಪರ್ಧಿಸುವ ಅವಕಾಶವಿರುವುದರಿಂದ ಇವರುಗಳ ಸಂಖ್ಯೆ ಒಟ್ಟು ನಾಲ್ಕಾಗಿದೆ. ೫ ನೇ ಬ್ಲಾಕ್ ನಿಂದ ಗೆದ್ದಿರುವ ಜಯಮ್ಮ, ೧ನೇ ಬ್ಲಾಕ್ ನಲ್ಲಿ ಆಶಾ, ೨ನೇ ಬ್ಲಾಕ್ ನಲ್ಲಿ ವಿಜಯಕುಮಾರಿ ಹಾಗೂ ೪ನೇ ಬ್ಲಾಕ್ ನಲ್ಲಿ ಮಂಗಳಮ್ಮ ಇವರುಗಳು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಪಂಚಾಯ್ತಿಯ ಒಟ್ಟು ೧೭ ಸದಸ್ಯರ ಪೈಕಿ ಹೆಚ್ಚು ಮಂದಿ ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದರೂ ಸಹ ಅವರೊಳಗೆ ಮೂಲ ಬಿಜೆಪಿ ಹಾಗೂ ಕೆಜೆಪಿ ಎರಡು ಗುಂಪುಗಳನ್ನು ಮಾಡಿಕೊಂಡಿರುವುದರಿಂದ ತಿಕ್ಕಾಟ ಕಂಡುಬಂದಿದ್ದು ಯಾರಿಗೆ ಅಧ್ಯಕ

ದೊಡ್ಡಬಿದರೆಯಿಂದ ಪ್ರಾರಂಭವಾಯ್ತು ಕೃಷಿ ಅಭಿಯಾನ

ಲಾಖೆಗಳ ನಡಿಗೆ ರೈತರ ಬಾಗಿಲಿಗೆ ಎಂಬ ಧ್ಯೇಯದೊಂದಿಗೆ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ತಾಲ್ಲೂಕ್ ಪಂಚಾಯ್ತಿ, ಕಂದಾಯ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ರೇಷ್ಮೆ,ಮೀನುಗಾರಿಕೆ,ಕೃಷಿ ಮಾರುಕಟ್ಟೆ,ಲೀಡ್ ಬ್ಯಾಂಕ್ ಹಾಗೂ ಆರಕ್ಷಕ ಇಲಾಖೆಯ ಸಹಭಾಗಿತ್ವದಲ್ಲಿ ಅಯೋಜಿಸಿರುವ " ಕೃಷಿ ಅಭಿಯಾನ-೨೦೧೫-೧೬" ಕಾರ್ಯಕ್ರಮವು ಗುರುವಾರದಂದು ದೊಡ್ಡಬಿದರೆಯಿಂದ ಪ್ರಾರಂಭಗೊಂಡಿತು. ಕಂದಿಕೆರೆ ಹೋಬಳಿಯಾದ್ಯಂತ ಕೃಷಿ ಅಭಿಯಾನವನ್ನು ಮುಗಿಸಿದ ಕೃಷಿ ಮಾಹಿತಿ ಸಂಚಾರಿ ವಾಹನವು ಗುರುವಾರ ಹುಳಿಯಾರು ಹೋಬಳಿ ದೊಡ್ಡಬಿದರೆಗೆ ಆಗಮಿಸಿದ್ದು ಜಿ.ಪಂ.ಸದಸ್ಯೆ ಮಂಜುಳಾ ಗವಿರಂಗಯ್ಯ ಅಭಿಯಾನಕ್ಕೆ ಚಾಲನೆ ನೀಡಿದರು. ದೊಡ್ಡಬಿದರೆಯಿಂದ ಪ್ರಾರಂಭಗೊಂಡ ಅಭಿಯಾನದ ಯಾತ್ರೆ ಬರಕನಹಾಳ್,ಯಳನಡು,ಕೋರಗೆರೆ, ತಿರುಮಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಾ ರೈತರಿಗೆ ಮಾಹಿತಿ ನೀಡಲಾಯಿತು. ಅಭಿಯಾನದ ನಿರ್ವಹಣೆ ಹೊತ್ತಿದ್ದ ಕೃಷಿ ಅಧಿಕಾರಿ ಕರಿಬಸವಯ್ಯ ಮಾತನಾಡಿ, ರೈತರು ತಮ್ಮ ಜಮೀನಿನ ಮಣ್ಣಿನ ಗುಣ, ಫಲವತ್ತತೆಗೆ ಅನುಗುಣವಾಗಿ ಬಿತ್ತನೆ ಮಾಡಿದಾಗ ಹೆಚ್ಚು ಇಳುವರಿ ಸಾಧ್ಯ ಎಂದು ತಿಳಿಸಿದರು. ಕೃಷಿ ಇಲಾಖೆಯಿಂದ ರೈತರಿಗೆ ಅನೇಕ ಯೋಜನೆಗಳಿರುವುದರ ಜೊತೆಗೆ ಸಬ್ಸಿಡಿ ದರದಲ್ಲಿ ಗೊಬ್ಬರ,ಕೀಟನಾಶಕ, ಯಂತ್ರೋಪಕರಣಗಳನ್ನು ನೀಡುತ್ತಿದ್ದು ರೈತರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಈ ವೇಳೆ ಸಹಾಯಕ ಕೃಷಿ

ನಿಧನ : ಸ್ನೇಹಜೀವಿ ಬೀರಪ್ಪ

ಹುಳಿಯಾರು  ಹೋಬಳಿ ಕರ್ನಾಟಕ ರಕ್ಷಣಾ ವೇದಿಯ ಸಂಚಾಲಕ ಹಾಗೂ ಸ್ನೇಹಜೀವಿ ಹೋಟೆಲ್ ನ ಲಿಂಗಪ್ಪನಪಾಳ್ಯದ ಬೀರಪ್ಪ(೪೩) ಬುಧವಾರ ಮುಂಜಾನೆ ಕೊನೆಯುಸಿರೆಳೆದರು. ಪಟ್ಟಣದಲ್ಲಿ ಸ್ನೇಹಜೀವಿ ಹೆಸರಿನ ಹೋಟೆಲ್ ನಡೆಸುತ್ತಿದ್ದ ಈತ ಬಸ್ ಏಜೆಂಟರ್ ಸಹ ಆಗಿದ್ದು ಜನರೊಂದಿಗೂ ಸಹ ಸ್ನೇಹಜೀವಿಯಾಗಿದ್ದರು. ದುರ್ಗಾಪರಮೇಶ್ವರಿ ದೇವಸ್ಥಾನದ ಗುಂಚಿಗೌಡರಾಗಿದ್ದ ಈತ ಕೆಂಚಮ್ಮನ ದೇವಸ್ಥಾನ ಸಮಿತಿಯ ಸದಸ್ಯರಾಗಿ ಅಲ್ಲದೆ ಕರ್ನಾಟಕ ರಕ್ಷಣಾ ವೇದಿಯ ಹೋಬಳಿ ಘಟಕದಲ್ಲಿ ಗೌರವಾಧ್ಯಕ್ಷರಾಗಿ ಸಕ್ರಿಯರಾಗಿದ್ದರು .ಕಳೆದ ರಾತ್ರಿ ಅಸ್ವಸ್ಥರಾದ ಇವರನ್ನು ತುಮಕೂರಿನ ಸಿದ್ದಾರ್ಥ ಆಸ್ಪತ್ರೆ ಕರೆದೊಯ್ದರು ಸಹ ಫಲಕಾರಿಯಾಗದೆ ಮುಂಜಾನೆ ಅಸುನೀಗಿದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸ್ವಗ್ರಾಮ ಲಿಂಗಪ್ಪನಪಾಳ್ಯದಲ್ಲಿ ಅಂತಿಮಸಂಸ್ಕಾರ ನಡೆಯಿತು. ಖಾಸಗಿ ಬಸ್ ಏಜೆಂಟರ್ ಸೇವಾ ಛಾರಿಟಬಲ್ ಟ್ರಸ್ಟ್ ನಿಂದ ಮೃತರ ಅಂತಿಮ ಸಂಸ್ಕಾರಕ್ಕೆ ಮೂರು ಸಾವಿರರೂ ನೆರವು ನೀಡಲಾಯಿತು. ಅನೇಕ ಗಣ್ಯರು ಸೇರಿದಂತೆ ದೇವಸ್ಥಾನ ಸಮಿತಿಯವರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಪಂಚಾಯ್ತಿ ಸದಸ್ಯರುಗಳು ಮೃತರ ಅಂತಿಮ ದರ್ಶನ ಪಡೆದರು.

ರಂಗನಾಥಸ್ವಾಮಿಗೆ ಕೊಬ್ಬರಿ ತುರಿ ಅಲಂಕಾರ

ಹುಳಿಯಾರು ಪಟ್ಟಣದ ಅನಂತಶಯನ ಶ್ರೀ ರಂಗನಾಥಸ್ವಾಮಿಗೆ ಮಂಗಳವಾರದಂದು ವಿಶೇಷವಾಗಿ ಅಮವಾಸ್ಯೆ ಪೂಜೆ ಜರುಗಿತು. ಪಟ್ಟಣದ ಆರ್.ಜಿ.ಸರ್ಕಲ್ ಗ್ರೂಪ್ಸ್ ಅವರ ಸೇವಾರ್ಥದಲ್ಲಿ ಸ್ವಾಮಿಯನ್ನು ಕೊಬ್ಬರಿ ತುರಿಯಿಂದ ಅಲಂಕರಿಸಿದ್ದು, ಹುಳಿಯಾರಿನ ಅನಂತಶಯನ ಶ್ರೀರಂಗನಾಥಸ್ವಾಮಿಗೆ ಅಮವಾಸ್ಯೆ ಪೂಜೆ ಅಂಗವಾಗಿ ಮಾಡಿರುವ ಕೊಬ್ಬರಿ ತುರಿಅಲಂಕಾರ. ಪಟ್ಟಣದ ಶೇಷಾದ್ರಿ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಮಹಾಮಂಗಳಾರತಿಯ ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು. ಆಗಮಿಸಿದ ಭಕ್ತರು ಸ್ವಾಮಿಗೆ ಮಾಡಿದ್ದ ಅಲಂಕಾರವನ್ನು ಕಣ್ತುಂಬಿಕೊಂಡರು. ಈ ವೇಳೆ ಆರ್.ಜಿ.ಸರ್ಕಲ್ ಗ್ರೂಪ್ಸ್ ನ ಪದಾಧಿಕಾರಿಗಳು, ದೇವಾಲಯ ಸಮಿತಿಯವರು ಸೇರಿದಂತೆ ಇತರರಿದ್ದರು.

ಪ್ರವಾಸದಲ್ಲಿ ಹುಳಿಯಾರು ಗ್ರಾಪಂ ಸದಸ್ಯರು

ಜೆಡಿಎಸ್ ಬೆಂಬಲಿತರಿಗೆ ಒಲಿಯಲಿದೆಯೇ ಗದ್ದುಗೆ ಭಾಗ್ಯ ? ----------------------------------------- ಹುಳಿಯಾರು: ಸ್ಥಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಇನ್ನೂ ಘೋಷಣೆಯಾಗದಿದ್ದು ಈಗ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರುಗಳು ಗದ್ದುಗೆ ಏರಲಿರುವ ಸಂಭವನೀಯತೆ ಹೆಚ್ಚಿದೆ. ಸಾರ್ವಜನಿಕರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹುಳಿಯಾರು ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಹುದ್ದೆಗೆ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದೆ ತಡ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಾಳೆಯದ ಸದಸ್ಯರುಗಳಲ್ಲಿ ಹುಳಿಯಾರು ಪಂಚಾಯ್ತಿಯ ಗದ್ದುಗೆ ಏರಲು ಇನ್ನಿಲ್ಲದ ಕಸರತ್ತು ನಡೆದರೂ ಸಹ ಕಡೆಕ್ಷಣದಲ್ಲಿ ಜೆಡಿಎಸ್ ಶಾಸಕ ಸುರೇಶ್ ಬಾಬು ಖುದ್ದಾಗಿ ಅಖಾಡಕ್ಕಿಳಿದಿದ್ದರಿಂದ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲ ಜೆಡಿಎಸ್ ಗೆ ವ್ಯಕ್ತವಾಯಿತು. ಅಂದೇ ಪ್ರವಾಸದ ನೆಪದಲ್ಲಿ ಮೈಸೂರು ಹಾದಿ ಹಿಡಿದ ಜೆಡಿಎಸ್ ಬೆಂಬಲಿಗರ ಸಂಖ್ಯೆ ದಿನೇದಿನೆ ಏರುತ್ತಿದೆ. ಹುಳಿಯಾರು ಗ್ರಾ.ಪಂ. ಬರೋಬರಿ ೩೯ ಸದಸ್ಯರನ್ನೊಳಗೊಂಡು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸದಸ್ಯ ಸ್ಥಾನ ಹೊಂದಿರುವ ಪಂಚಾಯ್ತಿ ಎಂಬ ಹೆಗ್ಗಳಿಕೆ ಹೊಂದಿದೆ. ಪಂಚಾಯ್ತಿಯ ಒಟ್ಟು ೩೯ ಸದಸ್ಯರ ಪೈಕಿ ಪುರುಷ ಸದಸ್ಯರು ೧೯ ಮಂದಿ ಹಾಗೂ ಮಹಿಳಾ ಸದಸ್ಯರು ೨೦ ಮಂದಿ ಚುನಾಯಿತರಾಗಿದ್ದಾರೆ. ಅಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೊಲಿದರೆ ಉಪಾಧ್ಯ

ತಾ.೧೮ : ಹೋಬಳಿಯಾದ್ಯಂತ ಕೃಷಿ ಅಭಿಯಾನ

ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ತಾಲ್ಲೂಕ್ ಪಂಚಾಯ್ತಿ, ಕಂದಾಯ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ರೇಷ್ಮೆ,ಮೀನುಗಾರಿಕೆ,ಕೃಷಿ ಮಾರುಕಟ್ಟೆ,ಲೀಡ್ ಬ್ಯಾಂಕ್ ಹಾಗೂ ಆರಕ್ಷಕ ಇಲಾಖೆಯ ಸಹಭಾಗಿತ್ವದಲ್ಲಿ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಎಂಬ ಧ್ಯೇಯದೊಂದಿಗೆ " ಕೃಷಿ ಅಭಿಯಾನ-೨೦೧೫-೧೬" ಕಾರ್ಯಕ್ರಮ (ತಾ.೧೮) ಗುರುವಾರದಿಂದ ತಾ.೨೦ರ ಶನಿವಾರದವರೆಗೆ ಮೂರು ದಿನಗಳ ಕಾಲ ಹುಳಿಯಾರು ಹೋಬಳಿಯಾದ್ಯಂತ ನಡೆಯಲಿದೆ. ತಾ.೧೮ರ ಗುರುವಾರದಂದು ಬರಕನಹಾಳ್, ದೊಡ್ಡಬಿದರೆ, ತಿಮ್ಲಾಪುರ,ಕೋರಗೆರೆ, ಯಳನಡು ಗ್ರಾಮಗಳಲ್ಲಿ, ತಾ.೧೯ರ ಶುಕ್ರವಾರ ದಸೂಡಿ,ಗಾಣಧಾಳು,ಹೊಯ್ಸಳಕಟ್ಟೆ,ಕೆಂಕೆರೆ ಗ್ರಾಮ ಪಂಚಾಯ್ತಿಯಲ್ಲಿ ಅಭಿಯಾನ ಕಾರ್ಯಕ್ರಮ ನಡೆಯಲಿದೆ. ಅಂದು ಕೃಷಿ ಮಾಹಿತಿ ಸಂಚಾರಿ ವಾಹನ ಹಾಗೂ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಸಹ ಆಗಮಿಸಲಿದ್ದಾರೆ. ರೈತರು ತಮ್ಮ ಸಮಸ್ಯೆಗಳನ್ನು ಅವರಲ್ಲಿ ತಿಳಿಸಿ ಮಾಹಿತಿ ಪಡೆಯಬಹುದಾಗಿದೆ. ತಾ.೨೦ರ ಶನಿವಾರ ಹುಳಿಯಾರಿನ ಆಂಬೇಡ್ಕರ್ ಭವನದಲ್ಲಿ ಸಂವಾದ ಕಾರ್ಯಕ್ರಮವಿದ್ದು ಹೋಬಳಿ ವ್ಯಾಪ್ತಿಯ ಎಲ್ಲಾ ರೈತರು ಆಗಮಿಸಬಹುದಾಗಿದೆ. ಈ ವೇಳೆ ರೈತರು ತಾವು ಮಾಡೂತ್ತಿರುವ ಕೃಷಿಯಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಹಾಗೂ ಯಾವರೀತಿ ಕೃಷಿ ಕಾರ್ಯ ಮಾಡಬೇಕು, ಯಾವ ಬೆಳೆಯಿಂದ ಉತ್ತಮ ಇಳುವರಿ ಪಡೆಯಬಹುದು ಹಾಗೂ ಕೃಷಿ ಇಲಾಖೆಯಲ್ಲಿ ರೈತರಿಗಾಗಿ ಇರುವ ವಿವಿಧ ಯೋಜನೆಗಳ ಬಗ್ಗೆ ಸಂವಾದ ನಡ

ನಿಲುಗಡೆ ಸೌಲಭ್ಯವಿದ್ದರೂ ನಿಲ್ಲದ ಸರ್ಕಾರಿ ಬಸ್

ಹುಳಿಯಾರು  ಹೋಬಳಿಯ ಗ್ರಾಮಾಂತರ ಪ್ರದೇಶವಾದ ಕೆರೆಸೂರಗೊಂಡನಹಳ್ಳಿಯಲ್ಲಿ ಗ್ರಾಮಸ್ಥರ ಸೌಕರ್ಯಕ್ಕಾಗಿ ಕೋರಿಕೆ ಮೇರೆ ಬಸ್ ನಿಲುಗಡೆ ಸೌಕರ್ಯವಿದ್ದರೂ ಸಹ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರು ಮಾತ್ರ ಕೈನೀಡಿದರೂ ನಿಲ್ಲಿಸದೆ ಸಾಗುತ್ತಿದ್ದು , ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯಾಗಿದೆ. ಕೆರೆಸೂರಗೊಂಡನಹಳ್ಳಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು. ಕೆರೆಸೂರಗೊಂಡನಹಳ್ಳಿ, ತಮ್ಮಡಿಹಳ್ಳಿ,ಗೊಲ್ಲರಹಟ್ಟಿ ಸೇರಿದಂತೆ ಸುತ್ತಮುತ್ತಲ ಹಳ್ಳಿಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿ ನಿತ್ಯ ಹುಳಿಯಾರು ಹಾಗೂ ತಿಪಟೂರಿನ ಕಾಲೇಜಿಗೆ ಹೋಗುತ್ತಿದ್ದಾರೆ. ಹುಳಿಯಾರು- ಹೊಸದುರ್ಗ ಮಾರ್ಗದಲ್ಲಿ ಕೆರೆಸೂರಗೊಂಡನಹಳ್ಳಿಯಿದ್ದು ಈ ಭಾಗದ ವಿದ್ಯಾರ್ಥಿಗಳು ಬಸ್ ಪಾಸ್ ಸಹ ಮಾಡಿಸಿದ್ದಾರೆ. ಬಸ್ ಪಾಸ್ ಇದ್ದರೂ ಹಾಗೂ ನಿಲುಗಡೆ ಸೌಲಭ್ಯದ ನಾಮಫಲಕ ಹಾಕಿದ್ದರೂ ಸಹ ಬಸ್ ಮಾತ್ರ ನಿಲ್ಲುತ್ತಿಲ್ಲ. ಸಮಸ್ಯೆ ಏನು: ಹುಳಿಯಾರು ಬಿಟ್ಟರೆ ಮುಂದಿನ ಸ್ಟೇಜ್ ಯಳನಡಾಗಿದ್ದು ಕೆರೆಸೂರಗೊಂಡನಹಳ್ಳಿಯನ್ನು ಎಲೆಕ್ಟಾನಿಕ್ ಯಂತ್ರದಲ್ಲಿ ಸೇರಿಸಿಲ್ಲ ಹಾಗಾಗಿ ಬಸ್ ನಿಲ್ಲಿಸಲು ಆಗುವುದಿಲ್ಲ ಎಂದು ಕಂಡಕ್ಟರ್ ಹೇಳುತ್ತರಾದರೂ ಯಳನಡುಗೆ ಟಿಕೆಟ್ ಕೊಂಡರೂ ಸಹ ನಿಲ್ಲಿಸದಿರುವುದು ಸಮಸ್ಯೆಯಾಗಿದೆ. ಪಾಸ್ ವಿದ್ಯಾರ್ಥಿಗಳಿಗೆ ಕೆರೆಸೂರಗೊಂಡನಹಳ್ಳಿ ಇಳಿಸಿ, ಹತ್ತಿಸಿಕೊಳ್ಳಬಹುದಿದ್ದರೂ ಸಹ ಬಸ್ಸೇ ನ

ಮುಳಕಟ್ಟಮ್ಮನ ಮಡೆಗೆ ಬಾಳೆಹಣ್ಣಿನ ಗುಡ್ಡೆ!

                ಹಳ್ಳಿಗಳಲ್ಲಿ ಇವತ್ತಿಗೂ ಗ್ರಾಮದೇವತೆ ಹಬ್ಬ ಎಂದ್ರೆ ಅದೇನೊ ಸಂಭ್ರಮ.ಪ್ರತಿ ವರ್ಷ ತಪ್ಪದೆ ಆಚರಿಸುವ ಜಾತ್ರೆಗಳಲ್ಲಿ ಒಂದೊಂದು ಊರಲ್ಲೂ ಒಂದೊಂದೊ ರೀತಿಯ ಆಚರಣೆ ಇರುತ್ತೆ.ಹೆಚ್ಚಿನ ಕಡೆ ಪ್ರಾಣಿ ಬಲಿ ಕೊಡುವುದು ಮಾಮೂಲು.              ಆದ್ರೆ ತುರುವೇಕೆರೆ ಸಮೀಪದ ಕೊಟ್ಟೂರನ ಕೊಟ್ಟಿಗೆ ಯಲ್ಲಿ ಗ್ರಾಮದೇವತೆಗಳ ಹಬ್ಬದಲ್ಲಿ ಮಡೆ ಉತ್ಸವದ ನಡೆಯುವಾಗ ಮಾಡುವ ಬಾಳೆಹಣ್ಣಿನ ಗುಡ್ಡೆ ಆಚರಣೆ ಮಾತ್ರ ವಿಶಿಷ್ಟವಾಗಿದ್ದು ಸುತ್ತಮುತ್ತಲ ಗ್ರಾಮಗಳಲ್ಲಿ ಭಾರೀ ಪ್ರಸಿದ್ಧಿ ಪಡೆದಿದೆ.               ಈ ಊರಲ್ಲಿ ಗ್ರಾಮ ದೇವರಾಗಿ ಮುತ್ತುರಾಯಸ್ವಾಮಿ ಹಾಗೂ ಕೊಲ್ಲಾಪುರದಮ್ಮ ಹಾಗೂ ಮುಳಕಟ್ಟಮ್ಮನನ್ನು ಗ್ರಾಮದೇವತೆಗಳನ್ನಾಗಿಯೂ ಆರಾಧಿಸುತ್ತಿದ್ದಾರೆ.            ಯುಗಾದಿ ಹಬ್ಬದ ನಂತರ ಒಂದು ವಾರಕ್ಕೆ ಗ್ರಾಮದಲ್ಲಿ ಗ್ರಾಮ ದೇವತೆಗಳ ಜಾತ್ರೆ, ರಥೋತ್ಸವ ನಡೆಯುತ್ತದೆ. ಈ ಬಾರಿ ಊರ ಹೊರಗಿರುವ ಮುಳಕಟ್ಟಮ್ಮನ ನೆಲೆದೇವಾಲಯಕ್ಕೆ ಪೀಠ ಪ್ರತಿಷ್ಠಾಪನೆ ಮಾಡಿದ್ದರಿಂದ ಚೈತ್ರ ಮಾಸದಲ್ಲಿ ನಡೆಯಬೇಕಿದ್ದ ಊರಹಬ್ಬ ಹಾಗೂ ಮಡೆ ಉತ್ಸವ ಮೊನ್ನೆ ನಡಿತು.                ಬೆಳಗ್ಗೆ ಗ್ರಾಮ ದೇವತೆಗಳಿಗೆ ಗಂಗಾಸ್ನಾನ, ಊರೊಳಗಿನ ದೇವಾಲಯದಲ್ಲಿ ಪೂಜೆ ನಂತರ ಮುಳಕಟ್ಟಮ್ಮನನ್ನು ಊರಾಚೆ 2 ಕಿ.ಮೀ. ದೂರದ ನೆಲೆ ದೇವಾಲಯಕ್ಕೆ ವಾದ್ಯದೊಂದಿಗೆ ಉತ್ಸವದಲ್ಲಿ ಕರೆದೊಯ್ಯಲಾಗುತ್ತದೆ. ಅಷ್ಟರಲ್ಲೆ ಊರಿನ ಪ್ರತಿ ಮನೆಯ ಎಲ್ಲಾ ಗ್ರಾಮಸ್

ಆರಂಭವಾಯ್ತು ಶಾಲೆ : ಶುರುವಾಯ್ತು ಜಾತಿ,ಆದಾಯ ಪ್ರಮಾಣ ಪತ್ರಕ್ಕೆ ನೂಕುನುಗ್ಗಲು

ಎಲ್ಲೆಡೆ ಶಾಲಾ-ಕಾಲೇಜುಗಳು ಆರಂಭಗೊಂಡಿದ್ದು ಶಾಲೆಯಲ್ಲಿ ಮಕ್ಕಳ ಪ್ರವೇಶಕ್ಕೆ ಹಾಗೂ ವಿದ್ಯಾರ್ಥಿ ವೇತನ ಪಡೆಯಲು ಬೇಕಾದ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಪಡೆಯಲು ಪಟ್ಟಣದ ನಾಡಕಛೇರಿಯ ಆಟಲ್ ಜನಸ್ನೇಹಿಕೇಂದ್ರ ಪೋಷಕರುಗಳಿಂದ ತುಂಬಿ ತುಳುಕುತ್ತಿತ್ತು. ವಿದ್ಯಾರ್ಥಿಗಳು ಹಾಗೂ ಅವರ ಪೋಷಕರುಗಳು ಪ್ರಮಾಣ ಪತ್ರಕ್ಕಾಗಿ ಅರ್ಜಿಸಲ್ಲಿಸಲು ನಾಡಕಛೇರಿಗೆ ಅಲೆದಾಡುತ್ತಿರುವ ದೃಶ್ಯ ಕಳೆದೊಂದುವಾರದಿಂದ ಸಾಮಾನ್ಯವಾಗಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನಾನುಕೂಲಗಳನ್ನು ತಪ್ಪಿಸಲು ಶಾಲೆಗಳಲ್ಲೇ ಅರ್ಜಿ ಪಡೆದು ಪ್ರಮಾಣ ಪತ್ರ ವಿತರಿಸಲು ಸರ್ಕಾರ ವ್ಯವಸ್ಥೆ ಮಾಡಿದ್ದರೂ ಕೂಡ ಕೇವಲ ಸರ್ಕಾರಿ ಶಾಲೆಗೆ ಮಾತ್ರ ಸೀಮಿತವಾಗಿರುವುದರಿಂದ ಖಾಸಗಿಶಾಲೆ ವಿದ್ಯಾರ್ಥಿಗಳು ಹಾಗೂ ಇನ್ನಿತರ ಉದ್ದೇಶಕ್ಕಾಗಿ ಬೇಕಾದ ಪ್ರಮಾಣಪತ್ರ ಪಡೆಯಲು ಅಟಲ್ ಜನಸ್ನೇಹಿ ಕೇಂದ್ರಕ್ಕೆ ಹೋಗಲೇ ಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ತಿಂಗಳುಗಟ್ಟಲೇ ಅಲೆದಾಟ ಮತ್ತು ಲಂಚದ ಕಾಟ ತಪ್ಪಿಸಲು ರಾಜ್ಯ ಸರ್ಕಾರ ಕಾಗದ ರಹಿತ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು ತಂದಿರುವುದಾಗಿ ಹೇಳಿದರು ಸದ್ಯ ಅದಿನ್ನು ಜಾರಿಗೆ ಬಂದಿಲ್ಲ. ವಿದ್ಯಾಭ್ಯಾಸಕ್ಕಾಗಿ ನೀಡುವ ಪ್ರಮಾಣ ಪತ್ರ ಅರ್ಜಿಸಲ್ಲಿಸಿದ ೨೧ ದಿನದ ಕಾಲಾವಕಾಶವಿದ್ದರೂ ಸದ್ಯ ೧೦ ದಿನದ ಒಳಗೆ ಪ್ರಮಾಣಪತ್ರ ನೀಡಲಾಗುತ್ತಿದ್ದರು ಸಹ ಕೆಲವೊಮ್ಮ

ಹಿರಿಯ ವಿದ್ಯಾರ್ಥಿ ಸಂಘದಿಂದ ಪ್ರತಿಭಾಪುರಸ್ಕಾರ

ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಹೋಬಳಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಟ್ಟಣದ ಕನಕದಾಸ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ಶನಿವಾರದಂದು ಕನಕದಾಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಪುರಸ್ಕಾರ ವಿತರಿಸಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಾಜಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತಮ್ಮದೇ ಆದ ಪ್ರತಿಭೆಯಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡುವ ಮೂಲಕ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಳಿಸಿ ಪ್ರತಿಭಾಪುರಸ್ಕಾರವನ್ನು ಪಡೆಯುವಂತಾಗಬೇಕು ಎಂದರು. ಸಂಘದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಕಳೆದ ೮ ವರ್ಷದಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಸಂಘದ ಸದಸ್ಯರಾದ ಶಂಕರ್ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದರು. ಈ ವೇಳೆ ಶಾಲೆಯ ಮುಖ್ಯಶಿಕ್ಷಕ ಚನ್ನಬಸಪ್ಪ, ಸಂಸ್ಥೆಯ ಕಾರ್ಯದರ್ಶಿ ಶಿವಪ್ರಕಾಶ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಶಿವಣ್ಣ,ಖಜಾಂಚಿ ಪುಷ್ಪಲತಾ, ಸದಸ್ಯರಾದ ಸ್ಟುಡಿಯೋ ದುರ್ಗರಾಜು,ರವಿ,ಯತೀಶ್,ರಾಜೇಂದ್ರನಾಯಕ್,ಶಿವಯ್ಯ, ಸುರೇಶ್,ಲೋಕೇಶ್, ರಾಘವೇಂದ್ರನಾಯಕ್ ಸೇರಿದಂತೆ ಶಾಲಾಶಿಕ್ಷಕರು ಉಪಸ್ಥಿತರಿದ್ದರು.

ಇಂದು (ಜೂನ್ ೧೪) ವಿಶ್ವ ರಕ್ತದಾನಿಗಳ ದಿನ

ಇಂದು (ಜೂನ್ ೧೪) ವಿಶ್ವ ರಕ್ತದಾನಿಗಳ ದಿನ -------------------------------------- ರಕ್ತದಾನ - ಮಹಾದಾನ --------------------------- ಪ್ರತಿ ವರ್ಷದ ಜೂನ್ ೧೪ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸುತ್ತಾರೆ. ನಿಮ್ಮ ಸುತ್ತ-ಮುತ್ತಲಲ್ಲೇ ಎಷ್ಟೊ ಜನಕ್ಕೆ ರಕ್ತದ ಅವಶ್ಯಕತೆ ಇರುತ್ತದೆ, ಹಾದಿ ಬೀದಿಯಲ್ಲಿ ದಿನಕ್ಕೊಬ್ಬರಾದರೂ ರಸ್ತೆ ಅಫಘಾತ, ಮತ್ಯಾವುದೋ ತೊಂದರೆಯಿಂದ ಬಳಲುತ್ತಾ ಇರುವವರಿಗೆ ರಕ್ತದ ಅವಶ್ಯಕತೆ ಇರುತ್ತದೆ, ರಕ್ತದ ಅವಶ್ಯಕತೆ ಇರುವವರಿಗೆ ನಮ್ಮಿಂದ -ನಿಮ್ಮಿಂದ ಸಹಾಯವಾದರೆ ಅದಕ್ಕೆ ಸಿಗುವ ತುಂಬು ಹೃದಯದ ಅಭಿನಂದನೆಯೇ ವರ್ಣಾತೀತ. ನಿಮಗಿದು ತಿಳಿದಿರಲಿ ----------------------- * ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ. * ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. * ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಬಹುದು. * ರಕ್ತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿಯಾಗಿ 24 ಗಂಟೆಯ ಒಳಗಾಗಿ ದಾನ ಮಾಡಿದ ಪ್ರಮಾಣದ ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ. *ಒಂದೆರಡು ವಾರಗಳಲ್ಲಿ ರಕ್ತದ ಎಲ್ಲಾ ಅಂಶಗಳು ದಾನಿಯ ರಕ್ತದಲ್ಲಿ ಸಂಪೂರ್ಣವಾಗಿ ತುಂಬಿಕೊಳ್ಳುತ್ತದೆ. * ರಕ್ತದಾನ ಮಾಡುವಾಗ ಒಂದು ಚುಚ್ಚು ಮದ್ದು ತೆಗೆದು ಕೊಂಡಷ್ಟೇ ನೋವಾಗುತ್ತದೆ. * ರಕ್ತದಾನ ಮಾಡಲು ಮತ್ತು ಸುಧಾರಿಸಿಕೊಳ್ಳಲು ಕೇವಲ 20 ನಿಮಿಷ ಮಾತ್ರ ಸಾಕು. * ರಕ್ತದಾನ ಮ