ವಿಷಯಕ್ಕೆ ಹೋಗಿ

ಹುಳಿಯಾರು ಗ್ರಾ.ಪಂ. ಚುನಾವಣೆ ಫಲಿತಾಂಶ ೧೬೨ ಮಂದಿಯಲ್ಲಿ ಗೆದ್ದ ೩೯ ಮಂದಿ

ಎಲ್ಲೆಡೆ ಕುತೂಹಲ ಮೂಡಿಸಿದ್ದ ಹುಳಿಯಾರು ಗ್ರಾಮ ಪಂಚಾಯ್ತಿ ಚುನಾವಣೆಯ ಫಲಿತಾಂಶ ಶುಕ್ರವಾರ ಹೊರಬಿದಿದ್ದು , ಇಷ್ಟು ದಿನ ಯಾರು ಗೆಲ್ಲುತ್ತಾರೆ, ಸೋಲುತ್ತಾರೆಂಬ ಕುತೂಹಲಕ್ಕೆ ತೆರೆಬಿದ್ದಿದೆ.
ಮುಂಜಾನೆ ೮ ಗಂಟೆಯಿಂದ ಚಿ.ನಾ.ಹಳ್ಳಿಯ ಸರ್ಕಾರಿ ಕಾಲೇಜಿನಲ್ಲಿ ಮತಎಣಿಕೆ ಪ್ರಾರಂಭವಾಗಿದ್ದು ಸಂಜೆಯಾದರೂ ಮತಎಣಿಕೆ ಮುಂದುವರೆದಿತ್ತು. ಹುಳಿಯಾರಿನ ಒಟ್ಟು ೧೩ ಬ್ಲಾಕ್ ಗಳಿಗೆ ೧೬೨ ಮಂದಿ ಸ್ಪರ್ಧಿಸಿದ್ದರಿಂದ ಸಂಜೆ ೬ ರವರೆಗೆ ೮ ಬ್ಲಾಕ್ ನ ಮತಎಣಿಕೆ ಮಾತ್ರ ಮುಗಿದಿತ್ತು.
ಹುಳಿಯಾರು ಗ್ರಾ.ಪಂ.ಯ ವಿವಿಧ ಬ್ಲಾಕ್ ಗಳ ಮತ ಎಣಿಕೆ ಕಾರ್ಯ ಚಿ.ನಾ.ಹಳ್ಳಿಯಲ್ಲಿ ಶುಕ್ರವಾರ ನಡೆಯಿತು.
1 ನೇ ಬ್ಲಾಕ್ ನ ೨ ಸ್ಥಾನಕ್ಕೆ ( ಎಸ್.ಸಿ ೧ , ಸಾಮಾನ್ಯ ೧ ) ಒಟ್ಟು ೧೮ ಮಂದಿ ಸ್ಪರ್ಧಿಸಿದ್ದು ಎಲ್.ಆರ್.ಚಂದ್ರಶೇಖರ್ (160ಮತ, ಸಾಮಾನ್ಯ ) ಹಾಗೂ ಗಣೇಶ್ (125 ಮತ, ಎಸ್.ಸಿ) ಜಯಗಳಿಸಿದ್ದಾರೆ. 2 ನೇ ಬ್ಲಾಕ್ ನ ೨ ಸ್ಥಾನಕ್ಕೆ (ಸಾಮಾನ್ಯ ,ಬಿಸಿಎಂ-ಎ ಮಹಿಳೆ) ಒಟ್ಟು ೯ ಮಂದಿ ಸ್ಪರ್ಧಿಸಿದ್ದು ಸೈಯ್ಯದ್ ಜಬೀಉಲ್ಲಾ (230 ಮತ, ಸಾಮಾನ್ಯ ) ಸಿದ್ದಗಂಗಮ್ಮ (158 ಮತ ಬಿಸಿಎಂ-ಎ) ಗೆದ್ದರೆ. 3 ನೇ ಬ್ಲಾಕ್ ನ ೩ ಸ್ಥಾನಕ್ಕೆ( ಎಸ್.ಸಿ ಮಹಿಳೆ, ಬಿಸಿಎಂ-ಎ ಮಹಿಳೆ, ಸಾಮಾನ್ಯ ಮಹಿಳೆ) ಒಟ್ಟು ೧೨ ಮಂದಿ ಸ್ಪರ್ಧಿಸಿದ್ದು ಗೀತಾ (332), ನೂರ್ ಜಾನ್ ಬೀ (235), ರೇಣುಕಮ್ಮ (175) ವಿಜೇತರಾಗಿದ್ದಾರೆ. 4 ನೇ ಬ್ಲಾಕ್ ನ ೨ ಸ್ಥಾನಕ್ಕೆ (ಬಿಸಿಎಂ-ಎ , ಸಾಮಾನ್ಯ) ಒಟ್ಟು ೬ ಮಂದಿ ಸ್ಪರ್ಧಿಸಿದ್ದು ಶಂಕರ್ (255) ಧನುಷ್ ರಂಗನಾಥ್ (238) ಜಯಗಳಿಸಿದ್ದಾರೆ. 6 ನೇ ಬ್ಲಾಕ್ ನ ೩ ಸ್ಥಾನಕ್ಕೆ(ಬಿಸಿಎಂ-ಎ , ಸಾಮಾನ್ಯ ಮಹಿಳೆ, ಸಾಮಾನ್ಯ) ಒಟ್ಟು ೧೦ ಮಂದಿ ಸ್ಪರ್ಧಿಸಿದ್ದು ಕೋಳಿಶ್ರೀನಿವಾಸ್ (273), ರಾಘವೇಂದ್ರ (26೦), ಎಚ್.ಅರ್.ದುರ್ಗಮ್ಮ (169), 7 ನೇ ಬ್ಲಾಕ್ ನ ೩ ಸ್ಥಾನಕ್ಕೆ (ಬಿಸಿಎಂ-ಎ, ಸಾಮಾನ್ಯ, ಸಾಮಾನ್ಯ ಮಹಿಳೆ) ಒಟ್ಟು ೧೦ ಮಂದಿ ಸ್ಪರ್ಧಿಸಿದ್ದು ಪಟಾಕಿಶಿವಣ್ಣ (239), ಹೇಮಂತ್ (307), ಜೆ.ಇಂದ್ರಕಲಾ (201), ೮ ನೇ ಬ್ಲಾಕ್ ೪ ಸ್ಥಾನಕ್ಕೆ (ಸಾಮಾನ್ಯ, ಸಾಮಾನ್ಯ ಮಹಿಳೆ, ಬಿಸಿಎಂ-ಎ ಮಹಿಳೆ, ಬಿಸಿಎಂ-ಬಿ ಮಹಿಳೆ)ಒಟ್ಟು ೯ ಮಂದಿ ಸ್ಪರ್ಧಿಸಿದ್ದು ಪುಟ್ಟರಾಜು ಬಡ್ಡಿ (677), ಕೆಂಪಮ್ಮ (254), ಮಾಮಾಜಿಗ್ನಿ (236), ಜಯಮ್ಮ (121) ಆಯ್ಕೆಯಾಗಿದ್ದಾರೆ.
ತೀವ್ರ ಪೈಪೋಟಿ ನಡೆದಿದ್ದ ೫ ನೇ ಬ್ಲಾಕ್ ನಲ್ಲಿ ಇಬ್ಬರೂ ಸ್ಪರ್ಧಿಗಳು ಸಮಾನವಾಗಿ ಮತಪಡೆದಿದ್ದಾರೆಂದು ಘೋಷಣೆಯಾಗುತ್ತಿದ್ದಂತೆ ಇಡಿಸಿ ಮತದ ಗೊಂದಲವೇರ್ಪಟ್ಟು ಮರು ಎಣಿಕೆಗೆ ಮುಂದಾಗಿದ್ದಾರೆ.

ಹುಳಿಯಾರು ಗ್ರಾಮ ಪಂಚಾಯ್ತಿಯ ಪ್ರಥಮವಾಗಿ ಪ್ರಕಟಗೊಂಡ ಎರಡನೇ ಬ್ಲಾಕ್ ನ ಅಭ್ಯರ್ಥಿ ಸೈಯದ್ ಜಬೀಉಲ್ಲಾ ಅವರು ತಮ್ಮ ಬೆಂಬಲಿಗರೊಂದಿಗೆ ಸಂಭ್ರಮಿಸಿದ ಕ್ಷಣ.
ಇನ್ನುಳಿದ ಬ್ಲಾಕ್ ಗಳ ಮತಎಣಿಕೆ ಸಂಜೆಯ ನಂತರವೂ ಮುಂದುವರೆದಿದ್ದು ರಾತ್ರಿ ವೇಳೆಗೆ ಫಲಿತಾಂಶ ಹೊರಬೀಳಲಿದೆ.. ವಿಜೇತರಾಗಿದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತಂತಮ್ಮ ಬ್ಲಾಕ್ ಗಳಲ್ಲಿ ಮೆರವಣಿಗೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು.
ಹುಳಿಯಾರು ಗ್ರಾ.ಪಂ.ಯ ಸದಸ್ಯರಾಗಿ 6 ನೇ ಬ್ಲಾಕ್ ನಿಂದ ಇದೇ ಪ್ರಥಮಬಾರಿಗೆ ಆಯ್ಕೆಯಾದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೋಳಿ ಶ್ರೀನಿವಾಸ್ ಅವರನ್ನು ಕರವೇ ಕಾರ್ಯಕರ್ತರು ಅಭಿನಂಧಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.