ವಿಷಯಕ್ಕೆ ಹೋಗಿ

ಹುಳಿಯಾರು ಗ್ರಾ.ಪಂ.ಗೆ ಹೊಸಮುಖಗಳ ಆಯ್ಕೆ

ಈ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಳೆಯ ಸದಸ್ಯರುಗಳ ಪೈಕಿ ೧೧ ಮಂದಿಯನ್ನು ಮಾತ್ರ ಪುರಸ್ಕರಿಸಿರುವ ಮತದಾರ ಹೊಸಮುಖಗಳಿಗೆ ಒತ್ತು ನೀಡಿರುವುದು ವಿಶೇಷವೆನಿಸಿದೆ. ಶೇಕಡವಾರು ಮತದಾನದಲ್ಲಿ ೧೨ ನೇ ಬ್ಲಾಕ್ ನಲ್ಲಿ ಶೇ.೯೨.೪ ರಷ್ಟು ಮತದಾನವಾಗಿರುವುದು ಗರಿಷ್ಟವಾಗಿದ್ದರೆ, ೮ ನೇ ಬ್ಲಾಕ್ ನಲ್ಲಿ ಶೇ.೭೧.೮೦ ಮತದಾನವಾಗಿರುವುದು ಕನಿಷ್ಟವಾಗಿದೆ.
ದಾಖಲೆ ಮತಗಳನ್ನು ಪಡೆದು ಆಯ್ಕೆಯಾದ ಬಡ್ಡಿಪುಟ್ಟರಾಜು(೬೭೭ಮತ)
ಗರಿಷ್ಠ ಹಾಗೂ ಹೆಚ್ಚಿನ ಅಂತರದ ಮತ ಪಡೆದವರಲ್ಲಿ ೮ ನೇ ಬ್ಲಾಕಿನ ಎಸ್.ಪುಟ್ಟರಾಜು ದಾಖಲೆ ಮಾಡಿದ್ದು. ಇವರು ಸರಾಸರಿ ಶೇ.೯೨ ರಷ್ಟು ಮತಗಳಿಸಿದ್ದಾರೆ. ೮ನೇಬ್ಲಾಕಿನಲ್ಲಿ ಒಟ್ಟು ೭೩೬ ಮತ ಚಲಾವಣೆಯಾಗಿದ್ದು ಆ ಪೈಕಿ ಇವರು ೬೭೭ ಮತಗಳನ್ನು ಪಡೆದಿರುವುದು ದಾಖಲೆ ಎನ್ನಲಾಗಿದೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿದ್ಧರಾಜು (91) ಅವರಿಗಿಂತ 586 ಭಾರಿ ಅಂತರಗಳಷ್ಟು ಮತಗಳಿಂದ ಪಡೆದು ಜಯಗಳಿಸಿದ್ದಾರೆ.೧೦ ನೇಬ್ಲಾಕಿನ ಅಹಮದ್ ಖಾನ್ ಚಲಾವಣೆಯಾದ ೧೧೮೭ ಮತಗಳ ಪೈಕಿ ೩೮೧ ಮತಗಳಿಸುವ ಮೂಲಕ ಶೇ.೩೨.೦೯ ಮತಪಡೆದಿರುವುದು ಕನಿಷ್ಟವಾಗಿದೆ.
ಈ ಬಾರಿ ಆಯ್ಕೆಯಾಗಿರುವವರಲ್ಲಿ ಎಸ್.ಪುಟ್ಟರಾಜು, ಎಚ್‌.ಆರ್‌.ರಂಗನಾಥ್‌(ಧನುಷ್), ಡಿ.ಸಿದ್ದಗಂಗಮ್ಮ, ಪಟಾಕಿ ಶಿವಣ್ಣ, ಪುಟ್ಟಮ್ಮ, ಡಿಶ್‌ ಬಾಬು, ಎನ್. ಹೇಮಂತ್‌ ಕುಮಾರ್, ಹೆಚ್.ಎನ್. ರಾಘವೇಂದ್ರ, ಎಸ್‌.ಶಶಿಕಲಾ ,ಗೀತಾ ಅಶೊಕ್ ಬಾಬು ಹಾಗೂ ಅಹಮದ್‌ ಖಾನ್‌ ಅವರುಗಳು ಕಳೆದ ಚುನಾವಣೆಯಲ್ಲೂ ಸಹ ಸದಸ್ಯರಾಗಿ ಆಯ್ಕೆಯಾಗಿದ್ದರು.
ಕಳೆದ ಬಾರಿ ೩೩ ಸದಸ್ಯರ ಪೈಕಿ ೧೩ ಜನ ಮುಸ್ಲಿಂ ಸದಸ್ಯರೇ ಕೂಡಿದ್ದರೆ ಈ ಬಾರಿ ೩೯ ಸದಸ್ಯರುಗಳಲ್ಲಿ ಅವರುಗಳ ಸಂಖ್ಯೆ ೭ ಕ್ಕಿಳಿದಿದೆ. ಮಹಿಳಾ ಸದಸ್ಯರು ೨೦ ಮಂದಿ ಹಾಗೂ ಪುರುಷ ಸದಸ್ಯರು ೧೯ ಮಂದಿಯಿಂದ ಕೂಡಿದೆ.
ಒಟ್ಟು ೩೯ ಸದಸ್ಯರ ಒಂದು ಗ್ರಾಮ ಪಂಚಾಯ್ತಿಗೆ ಆಯ್ಕೆಯಾದವರು ಪಟ್ಟಿ ಹೀಗಿದೆ.
1ನೇ ಬ್ಲಾಕ್‌ನಲ್ಲಿ ಎಲ್‌.ಆರ್‌.ಚಂದ್ರಶೇಖರ್‌ (160 ಮತ), ಗಣೇಶ್‌ (125)
2ನೇ ಬ್ಲಾಕ್‌ನಲ್ಲಿ ಜಬೀಉಲ್ಲಾ (230), ಡಿ.ಸಿದ್ಧಗಂಗಮ್ಮ(158)
3ನೇ ಬ್ಲಾಕ್‌ನಲ್ಲಿ ಎಚ್‌.ಎಸ್‌.ಗೀತಾ (332), ನೂರ್‌ಜಾನ್‌ಬೀ (334), ರೇಣುಕಮ್ಮ (175)
4ನೇ ಬ್ಲಾಕ್‌ನಲ್ಲಿ ಎಚ್‌.ಆರ್‌.ಶಂಕರ್‌ (255), ಎಚ್‌.ಆರ್‌.ರಂಗನಾಥ್‌ (239)
5ನೇ ಬ್ಲಾಕ್‌ನಲ್ಲಿ ಎಸ್‌.ಎಸ್‌.ದಯಾನಂದ್‌ (419), ಗೀತಾಬಾಬು (50೩), ನಗೀನಾಬಾನು (257), ರಂಗಮ್ಮ (256)
6ನೇ ಬ್ಲಾಕ್‌ನಲ್ಲಿ ಕೋಳಿ ಶ್ರೀನಿವಾಸ್‌ (273), ರಾಘವೇಂದ್ರ (261), ಎಚ್‌.ಆರ್‌.ದುರ್ಗಮ್ಮ (169)
7ನೇ ಬ್ಲಾಕ್‌ನಲ್ಲಿ ಹೇಮಂತ್‌ ಕುಮಾರ್‌(307), ಪಟಾಕಿಶಿವಣ್ಣ (239), ಜೆ.ಇಂದ್ರಕಲಾ (201)
8 ನೇ ಬ್ಲಾಕ್‌ನಲ್ಲಿ ಎಸ್‌.ಪುಟ್ಟರಾಜು (677), ಕೆಂಪಮ್ಮ (254), ಮಾಮಾಜಿಗ್ನಿ (236), ಜಯಮ್ಮ (121)
9ನೇ ಬ್ಲಾಕ್‌ನಲ್ಲಿ ಕೆ.ಎಸ್‌.ಸುರೇಶ್‌ (362), ಬಿ.ಸಿ.ಬಿಂಧು (331), ಸೈಯದ್‌ ಶಫಿ (306),ಎಚ್.ಆರ್.ವೆಂಕಟೇಶ್(೨೯೨)
10ನೇ ಬ್ಲಾಕ್‌ನಲ್ಲಿ ಅಹಮದ್‌ ಖಾನ್‌(381), ಪುಟ್ಟಮ್ಮ (170), ಎನ್‌.ಜಾನಕಮ್ಮ (242), ಎಸ್‌.ಶಶಿಕಲಾ (246)
11ನೇ ಬ್ಲಾಕ್‌ನಲ್ಲಿ ಎಸ್‌.ಎಚ್‌.ಲತಾ(224), ಎಸ್‌.ಡಿ.ನಾಗರಾಜು (169)
12 ನೇ ಬ್ಲಾಕ್‌ನಲ್ಲಿ ಕುಮಾರಸ್ವಾಮಿ (391), ಚಂದ್ರಮ್ಮ (315)

13ನೇ ಬ್ಲಾಕ್‌ನಲ್ಲಿ ಜಬೀನ್‌ ತಾಜ್‌ (220), ಸುಭದ್ರಬಾಯಿ (324), ಚಂದ್ರಶೇಖರ ರಾವ್‌ (348), ವಿ.ಎನ್‌.ಶಿವಾಜಿ ರಾವ್‌ (314) ಜಯಗಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...