ವಿಷಯಕ್ಕೆ ಹೋಗಿ

ಹುಳಿಯಾರು ಗ್ರಾ.ಪಂ.ಗೆ ಹೊಸಮುಖಗಳ ಆಯ್ಕೆ

ಈ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಳೆಯ ಸದಸ್ಯರುಗಳ ಪೈಕಿ ೧೧ ಮಂದಿಯನ್ನು ಮಾತ್ರ ಪುರಸ್ಕರಿಸಿರುವ ಮತದಾರ ಹೊಸಮುಖಗಳಿಗೆ ಒತ್ತು ನೀಡಿರುವುದು ವಿಶೇಷವೆನಿಸಿದೆ. ಶೇಕಡವಾರು ಮತದಾನದಲ್ಲಿ ೧೨ ನೇ ಬ್ಲಾಕ್ ನಲ್ಲಿ ಶೇ.೯೨.೪ ರಷ್ಟು ಮತದಾನವಾಗಿರುವುದು ಗರಿಷ್ಟವಾಗಿದ್ದರೆ, ೮ ನೇ ಬ್ಲಾಕ್ ನಲ್ಲಿ ಶೇ.೭೧.೮೦ ಮತದಾನವಾಗಿರುವುದು ಕನಿಷ್ಟವಾಗಿದೆ.
ದಾಖಲೆ ಮತಗಳನ್ನು ಪಡೆದು ಆಯ್ಕೆಯಾದ ಬಡ್ಡಿಪುಟ್ಟರಾಜು(೬೭೭ಮತ)
ಗರಿಷ್ಠ ಹಾಗೂ ಹೆಚ್ಚಿನ ಅಂತರದ ಮತ ಪಡೆದವರಲ್ಲಿ ೮ ನೇ ಬ್ಲಾಕಿನ ಎಸ್.ಪುಟ್ಟರಾಜು ದಾಖಲೆ ಮಾಡಿದ್ದು. ಇವರು ಸರಾಸರಿ ಶೇ.೯೨ ರಷ್ಟು ಮತಗಳಿಸಿದ್ದಾರೆ. ೮ನೇಬ್ಲಾಕಿನಲ್ಲಿ ಒಟ್ಟು ೭೩೬ ಮತ ಚಲಾವಣೆಯಾಗಿದ್ದು ಆ ಪೈಕಿ ಇವರು ೬೭೭ ಮತಗಳನ್ನು ಪಡೆದಿರುವುದು ದಾಖಲೆ ಎನ್ನಲಾಗಿದೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿದ್ಧರಾಜು (91) ಅವರಿಗಿಂತ 586 ಭಾರಿ ಅಂತರಗಳಷ್ಟು ಮತಗಳಿಂದ ಪಡೆದು ಜಯಗಳಿಸಿದ್ದಾರೆ.೧೦ ನೇಬ್ಲಾಕಿನ ಅಹಮದ್ ಖಾನ್ ಚಲಾವಣೆಯಾದ ೧೧೮೭ ಮತಗಳ ಪೈಕಿ ೩೮೧ ಮತಗಳಿಸುವ ಮೂಲಕ ಶೇ.೩೨.೦೯ ಮತಪಡೆದಿರುವುದು ಕನಿಷ್ಟವಾಗಿದೆ.
ಈ ಬಾರಿ ಆಯ್ಕೆಯಾಗಿರುವವರಲ್ಲಿ ಎಸ್.ಪುಟ್ಟರಾಜು, ಎಚ್‌.ಆರ್‌.ರಂಗನಾಥ್‌(ಧನುಷ್), ಡಿ.ಸಿದ್ದಗಂಗಮ್ಮ, ಪಟಾಕಿ ಶಿವಣ್ಣ, ಪುಟ್ಟಮ್ಮ, ಡಿಶ್‌ ಬಾಬು, ಎನ್. ಹೇಮಂತ್‌ ಕುಮಾರ್, ಹೆಚ್.ಎನ್. ರಾಘವೇಂದ್ರ, ಎಸ್‌.ಶಶಿಕಲಾ ,ಗೀತಾ ಅಶೊಕ್ ಬಾಬು ಹಾಗೂ ಅಹಮದ್‌ ಖಾನ್‌ ಅವರುಗಳು ಕಳೆದ ಚುನಾವಣೆಯಲ್ಲೂ ಸಹ ಸದಸ್ಯರಾಗಿ ಆಯ್ಕೆಯಾಗಿದ್ದರು.
ಕಳೆದ ಬಾರಿ ೩೩ ಸದಸ್ಯರ ಪೈಕಿ ೧೩ ಜನ ಮುಸ್ಲಿಂ ಸದಸ್ಯರೇ ಕೂಡಿದ್ದರೆ ಈ ಬಾರಿ ೩೯ ಸದಸ್ಯರುಗಳಲ್ಲಿ ಅವರುಗಳ ಸಂಖ್ಯೆ ೭ ಕ್ಕಿಳಿದಿದೆ. ಮಹಿಳಾ ಸದಸ್ಯರು ೨೦ ಮಂದಿ ಹಾಗೂ ಪುರುಷ ಸದಸ್ಯರು ೧೯ ಮಂದಿಯಿಂದ ಕೂಡಿದೆ.
ಒಟ್ಟು ೩೯ ಸದಸ್ಯರ ಒಂದು ಗ್ರಾಮ ಪಂಚಾಯ್ತಿಗೆ ಆಯ್ಕೆಯಾದವರು ಪಟ್ಟಿ ಹೀಗಿದೆ.
1ನೇ ಬ್ಲಾಕ್‌ನಲ್ಲಿ ಎಲ್‌.ಆರ್‌.ಚಂದ್ರಶೇಖರ್‌ (160 ಮತ), ಗಣೇಶ್‌ (125)
2ನೇ ಬ್ಲಾಕ್‌ನಲ್ಲಿ ಜಬೀಉಲ್ಲಾ (230), ಡಿ.ಸಿದ್ಧಗಂಗಮ್ಮ(158)
3ನೇ ಬ್ಲಾಕ್‌ನಲ್ಲಿ ಎಚ್‌.ಎಸ್‌.ಗೀತಾ (332), ನೂರ್‌ಜಾನ್‌ಬೀ (334), ರೇಣುಕಮ್ಮ (175)
4ನೇ ಬ್ಲಾಕ್‌ನಲ್ಲಿ ಎಚ್‌.ಆರ್‌.ಶಂಕರ್‌ (255), ಎಚ್‌.ಆರ್‌.ರಂಗನಾಥ್‌ (239)
5ನೇ ಬ್ಲಾಕ್‌ನಲ್ಲಿ ಎಸ್‌.ಎಸ್‌.ದಯಾನಂದ್‌ (419), ಗೀತಾಬಾಬು (50೩), ನಗೀನಾಬಾನು (257), ರಂಗಮ್ಮ (256)
6ನೇ ಬ್ಲಾಕ್‌ನಲ್ಲಿ ಕೋಳಿ ಶ್ರೀನಿವಾಸ್‌ (273), ರಾಘವೇಂದ್ರ (261), ಎಚ್‌.ಆರ್‌.ದುರ್ಗಮ್ಮ (169)
7ನೇ ಬ್ಲಾಕ್‌ನಲ್ಲಿ ಹೇಮಂತ್‌ ಕುಮಾರ್‌(307), ಪಟಾಕಿಶಿವಣ್ಣ (239), ಜೆ.ಇಂದ್ರಕಲಾ (201)
8 ನೇ ಬ್ಲಾಕ್‌ನಲ್ಲಿ ಎಸ್‌.ಪುಟ್ಟರಾಜು (677), ಕೆಂಪಮ್ಮ (254), ಮಾಮಾಜಿಗ್ನಿ (236), ಜಯಮ್ಮ (121)
9ನೇ ಬ್ಲಾಕ್‌ನಲ್ಲಿ ಕೆ.ಎಸ್‌.ಸುರೇಶ್‌ (362), ಬಿ.ಸಿ.ಬಿಂಧು (331), ಸೈಯದ್‌ ಶಫಿ (306),ಎಚ್.ಆರ್.ವೆಂಕಟೇಶ್(೨೯೨)
10ನೇ ಬ್ಲಾಕ್‌ನಲ್ಲಿ ಅಹಮದ್‌ ಖಾನ್‌(381), ಪುಟ್ಟಮ್ಮ (170), ಎನ್‌.ಜಾನಕಮ್ಮ (242), ಎಸ್‌.ಶಶಿಕಲಾ (246)
11ನೇ ಬ್ಲಾಕ್‌ನಲ್ಲಿ ಎಸ್‌.ಎಚ್‌.ಲತಾ(224), ಎಸ್‌.ಡಿ.ನಾಗರಾಜು (169)
12 ನೇ ಬ್ಲಾಕ್‌ನಲ್ಲಿ ಕುಮಾರಸ್ವಾಮಿ (391), ಚಂದ್ರಮ್ಮ (315)

13ನೇ ಬ್ಲಾಕ್‌ನಲ್ಲಿ ಜಬೀನ್‌ ತಾಜ್‌ (220), ಸುಭದ್ರಬಾಯಿ (324), ಚಂದ್ರಶೇಖರ ರಾವ್‌ (348), ವಿ.ಎನ್‌.ಶಿವಾಜಿ ರಾವ್‌ (314) ಜಯಗಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.