ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆಕ್ರಮ ಕೃಷಿ ಪಂಪ್ ಸೆಟ್ ಸಕ್ರಮ ಸಚಿವರ ಎಚ್ಚರಿಕೆ ಪಾಲನೆಯಾಗುವುದೆ?

ವರದಿ : ಡಿ.ಆರ್.ನರೇಂದ್ರಬಾಬು ಹುಳಿಯಾರು : ಅಕ್ರಮ ಕೃಷಿ ಪಂಪ್ ಸೆಟ್ ಸಕ್ರಮ ಮಾಡಿಕೊಳ್ಳಲು ಇದೇ ತಿಂಗಳ ೩೧ ಅಂತಿಮ ಗಡುವು ನೀಡಿದ್ದು, ಅರ್ಜಿಸಲ್ಲಿಸಿ ಹಣ ಪಾವತಿಸಿ ಸಕ್ರಮಗೊಳಿಸಿಕೊಳ್ಳದವರ ಆಕ್ರಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಇಲಾಖೆ ಮುಂದಾಗುವುದೆ ಎಂಬ ಪ್ರಶ್ನೆ ಪಂಪ್ ಸೆಟ್ ದಾರರಲ್ಲಿ ಮೂಡಿದೆ. ಹುಳಿಯಾರಿನ ಬೆಸ್ಕಾಂ ಕಛೇರಿ ಮುಂದೆ ಆಕ್ರಮ-ಸಕ್ರಮದ ಬಗ್ಗೆ ಪ್ರಚಾರ ಕಾಣದಿರುವುದು. ಅಕ್ರಮ-ಸಕ್ರಮ ಯೋಜನೆಯಡಿ ಇಂದು ಅರ್ಜಿಸಲ್ಲಿಸಲು ಕಡೆಯ ದಿನವಾಗಿದ್ದು ಕೃಷಿ ಬಳಕೆಯ ಅಕ್ರಮ ಕೃಷಿ ಪಂಪ್‌ ಸೆಟ್‌ಗಳನ್ನು ಸಕ್ರಮ ಮಾಡಿಕೊಳ್ಳದಿದ್ದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದಾಗಿ ಹೇಳುತ್ತಾ ಬಂದಿದ್ದರೂ ಸಹ ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳಲು ರೈತರಲ್ಲಿ ನಿರಾಸಕ್ತಿ ಕಂಡುಬರುತ್ತಿದೆ. ಅಲ್ಲದೆ ಈ ಬಗ್ಗೆ ರೈತರಿಗೆ ಅರಿವುಂಟು ಮಾಡಬೇಕಿದ್ದ ಬೆಸ್ಕಾಂ ಕೂಡ ರೈತರಿಗೆ ಯಾವುದೇ ಸೂಚನೆಯನ್ನೂ ನೀಡದೆ ಕೇವಲ ಕಚೇರಿಯ ಫಲಕದಲ್ಲಿ ಪ್ರಕಟಣೆಗಷ್ಟೆ ಸೀಮಿತಗೊಳಿಸಿಕೊಂಡಿದ್ದು ಹಿನ್ನಡೆಗೆ ಕಾರಣವಾಗಿದೆ. ಅಂತಿಮ ದಿನ ಸಮೀಪಿಸುತ್ತಿದ್ದರೂ ಸಹ ಹೋಬಳಿಯ ಬೆಸ್ಕಾಂ ಇಲಾಖೆಯಿಂದ ಯಾವುದೇ ಪ್ರಚಾರ ಕಂಡುಬರದೆಯಿದ್ದು ರೈತರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯದಂತಾಗಿದೆ. ಸದ್ಯ ಕೃಷಿ ಚಟುವಟಿಕೆ ಕೂಡ ವಾಣಿಜ್ಯಕರಣವಾಗಿದ್ದು ಪ್ರತಿಯೊಬ್ಬ ರೈತರು ತಮ್ಮ ಜಮೀನಿನಲ್ಲಿ ಬೋರ್ ವೆಲ್ ಹಾಕಿಸಿಕೊಳ

ನೂರೊಂದೆಡೆ ಸೇವೆ

ಹುಳಿಯಾರು ಹೋಬಳಿ ಲಿಂಗಪ್ಪನಪಾಳ್ಯದಲ್ಲಿ ರಾಮನವಮಿ ಅಂಗವಾಗಿ ಗ್ರಾಮಸ್ಥರೆಲ್ಲಾ ಸೇರಿ ಶ್ರೀರಾಮದೇವರ ಸಮ್ಮುಖದಲ್ಲಿ ನೂರೊಂದೆಡೆ ಸೇವೆ ನಡೆಸಿದರು.

ವಾರ್ಷಿಕ ಕ್ರೀಡಾಕೂಟ

ಇಲ್ಲಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಉದ್ಘಾಟಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಉದ್ಘಾಟಿಸಿದರು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಲಿ ಎಂಬ ದೃಷ್ಠಿಯಿಂದ ವಾಲಿಬಾಲ್,ಕಬಡ್ಡಿ, ಥ್ರೋಬಾಲ್, ಷಟಲ್ ಕಾಕ್, ಬಾಲ್ ಬ್ಯಾಡ್ಮಿಂಟನ್ , ಕೇರಂ ಚೆಸ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಅಯೋಜಿಸಿದ್ದು , ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ ಆಟೋಟಗಳನ್ನು ನಡೆಸಿದರು. ಈ ವೇಳೆ ತೀರ್ಪುಗಾರರಾದ ಮಂಜುನಾಥ್ ಹಾಗೂ ರಾಮಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ಶಿವಯ್ಯ, ಉಪನ್ಯಾಸಕರಾದ ಸೈಯ್ಯದ್ ಇಬ್ರಾಹಿಂ, ಶ್ರೀನಿವಾಸಪ್ಪ, ಅಶೋಕ್,ಶಂಕರಲಿಂಗಯ್ಯ,ಉಮೇಶ್,ಹನುಮಂತಪ್ಪ ಸೇರಿದಂತೆ ಇತರರಿದ್ದರು. ಈ ಕ್ರೀಡೆಗಳಲ್ಲಿ ವಿಜೇತರಾದವರಿಗೆ ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಣೆ ನಡೆಯಲಿದೆ.

ಎಸ್ಸೆಸ್ಸಲ್ಸಿ ಪರೀಕ್ಷೆ

ಹುಳಿಯಾರು ಹೋಬಳಿಯ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆ, ಪಟ್ಟಣದ ವಾಸವಿ ಶಾಲೆ ಹಾಗೂ ಕನಕದಾಸ ಶಾಲೆಯಲ್ಲಿ ಸೋಮವಾರದಂದು ಪ್ರಾರಂಭವಾದ ಎಸ್ಸೆಸ್ಸಲ್ಸಿ ಪರೀಕ್ಷೆ ಯನ್ನು ವಿದ್ಯಾರ್ಥಿಗಳು ಉತ್ಸಾಹದಿಂದ ಬರೆದರು. ಎಸ್,ಎಸ್,ಎಲ್.ಸಿ. ಪರೀಕ್ಷೆ ಬರೆಯಲು ಸೋಮವಾರ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ಮುಂದೆ ಹಾಜರಿದ್ದ ವಿದ್ಯಾರ್ಥಿಗಳು.          ಪರೀಕ್ಷೆ ಪ್ರಾರಂಭದ ಮೊದಲವಾಗಿದ್ದರಿಂದ ಸೋಮವಾರದಂದು ಕೆಲ ಪೋಷಕರು ಹಾಗೂ ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭಕ್ಕೂ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಬಂದು ಕಾಯುತ್ತಿದ್ದಲ್ಲದೆ, ತಮ್ಮ ನೊಂದಣಿ ಸಂಖ್ಯೆಯಲ್ಲಿ ಹುಡುಕಾಟದಲ್ಲಿದ್ದರು. ಹೋಬಳಿಯ ಎಲ್ಲಾ ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಮೂರು ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಬರೆಯಲು ಹಾಕಿದ್ದು ಕೆಲ ವಿದ್ಯಾರ್ಥಿಗಳಿಗೆ ತಮ್ಮ ಶಾಲೆ ಬಿಟ್ಟು ಬೇರೆ ಶಾಲೆಯಲ್ಲಿ ಪರೀಕ್ಷೆ ಬರೆಯ ಬೇಕಲ್ಲ ಎಂಬ ಆತಂಕ ಉಂಟಾಗಿತ್ತು. ಮೊದಲ ದಿನ ಕನ್ನಡ ಪರೀಕ್ಷೆಯಾಗಿದ್ದರಿಂದ ಪರೀಕ್ಷಾರ್ಥಿಗಳು ತುಸು ಆರಾಮಾಗಿದ್ದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪರೀಕ್ಷಾಕೇಂದ್ರಗಳಲ್ಲಿ ಪೋಲಿಸ್ ನವರನ್ನು ನಿಯೋಜಿಸಿದ್ದಲ್ಲದೆ, ಮೊಬೈಲ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿತ್ತು. ಪ್ರಶ್ನೆಪತ್ರಿಕೆಗಳ ಬಂಡಲ್ ಗಳ ಮೇಲೆ ಪರೀಕ್ಷಾರ್ಥಿಗಳ ಸಹಿ ಪಡೆದು ನಂತರ ಅವರ

ನಿಧನ : ಪೂಜಾರ್ ಭೈರಪ್ಪ

ಹುಳಿಯಾರು  ಪಟ್ಟಣದ ಶ್ರೀದುರ್ಗಾಪರಮೇಶ್ವರಿ ದೇವಿ ದೇವಾಲಯದ ಪೂಜಾರ್ ಆಗಿದ್ದ ಭೈರಪ್ಪ(೮೨) ಅವರು ಭಾನುವಾರ ನಿಧನರಾದರು. ಕಳೆದ ಕೆಲವಾರು ತಿಂಗಳಿಂದ ಅಸ್ವಾಸ್ಥ್ಯರಾಗಿದ್ದ ಅವರು ಸ್ವಗೃಹದಲ್ಲಿ ಬೆಳಗಿನಜಾವ ಕೊನೆಯುಸಿರೆಳೆದರು. ಮೃತರು ೫ಜನ ಗಂಡುಮಕ್ಕಳು, ೪ ಜನ ಹೆಣ್ಣುಮಕ್ಕಳು ಹಾಗೂ ಅಪಾರ ಬಂಧುಬಾಂಧವರನ್ನು ಅಗಲಿದ್ದು ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಜರುಗಿತು.

ಅರ್ಧಕ್ಕೆ ಹಾರುತ್ತಿದ್ದ ಬಾವುಟ

ಎಲ್ಲಾ ಗ್ರಾ.ಪಂ. ಹಾಗೂ ತಾಪಂ. ಗಳಲ್ಲಿ ವಾರದ ಏಳು ದಿನವೂ ತ್ರೀವರ್ಣ ಧ್ವಜ ಬೆಳಿಗ್ಗಿನಿಂದ ಸೂರ್ಯಾಸ್ತದವರೆಗೆ ಹಾರಬೇಕೆನ್ನುವ ನಿಯಮ ಮಾಡಲಾಗಿದೆ. ಇದರ ನಿರ್ವಹಣೆ ಮಾಡುವವರಿಗೆ ಪ್ರತಿ ದಿನ ೩೦ರೂ ಭತ್ಯೆ ಸಹ ನೀಡಲಾಗುತ್ತಿದೆ. ಇದರ ಜವಬ್ದಾರಿ ಹೊತ್ತವರು ರಾಷ್ಟ್ರಧ್ವಜದ ಬಗ್ಗೆ ಸರಿಯಾಗಿ ನಿಗಾವಹಿಸದಿದ್ದಲ್ಲಿ ಎಂತಹ ಅವಮಾನಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಈ ಚಿತ್ರವನ್ನು ನೋಡಿದರೆ ಕಾಣುತ್ತದೆ. ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾ.ಪಂ.ಮುಂದೆ ಅರ್ಧದಲ್ಲಿ ಹಾರಾಡುತ್ತಿದ್ದ ಬಾವುಟ. ಬಾನೆತ್ತರಕ್ಕೆ ಹಾರಬೇಕಾದ ರಾಷ್ಟ್ರಧ್ವಜ ಅರ್ಧಮಟ್ಟಕ್ಕೆ ಇಳಿಸುವುದು ರಾಷ್ಟ್ರದ ಅಥವಾ ರಾಜ್ಯದ ಅತಿಗಣ್ಯವ್ಯಕ್ತಿಯ ಶೋಕಾಚರಣೆ ಸಂದರ್ಭದಲ್ಲಿ ಮಾತ್ರ . ಇಂತಹ ಅರ್ಧಮಟ್ಟದ ಬಾವುಟ ಭಾನುವಾರ ಮಧ್ಯಾಹ್ನದ ಸಮಯದಲ್ಲಿ ಹೋಬಳಿಯ ದೊಡ್ಡಬಿದರೆ ಗ್ರಾ.ಪಂ.ಯಲ್ಲಿ ಕಂಡುಬಂದು ಹಲವು ಅನುಮಾನಗಳಿಗೆ ಕಾರಣವಾಯಿತು. ಭಾನುವಾರವಾದ್ದರಿಂದ ಪಂಚಾಯ್ತಿಗೆ ರಜಾ ದಿನವಾಗಿದ್ದು ಈ ಬಗ್ಗೆ ಯಾರು ಗಮನ ಹರಿಸಿರಲಿಲ್ಲ. ಹೆದ್ದಾರಿ ಪಕ್ಕದಲ್ಲಿ ಪಂಚಾಯ್ತಿ ಇರುವುದರಿಂದ ಅರ್ಧ ಮಟ್ಟದಲ್ಲಿ ಹಾರುತ್ತಿದ್ದ ಬಾವುಟ ಪಂಚಾಯ್ತಿಯವರ ನಿರ್ಲಕ್ಷವನ್ನು ಎದ್ದುಕಾಣುವಂತೆ ಮಾಡಿತ್ತು. ಈಗಾಗಲೇ ಬೇಸಿಗೆಯು ಕೆಂಡಕಾರುತ್ತಿದ್ದು ಇದರ ಸುಡು ಬಿಸಿಲಿಗೆ ಬಾವುಟಗಳು ಬಣ್ಣಕಳೆದುಕೊಳ್ಳುತ್ತಿದ್ದು ಇಂತಹ ಬಾವುಟಗಳು ಕೆಲವೊಂದು ಪಂಚಾಯ್ತಿಯಲ್ಲಿ ನಿತ್ಯ ಹಾರಾಡು

ಸನ್ಮಾನ

ಹುಳಿಯಾರಿನ ಶ್ರೀಆಂಜನೇಯಸ್ವಾಮಿಗೆ ಬೆಳ್ಳಿಯ ವಜ್ರಾಂಗಿಯನ್ನು ಅರ್ಪಿಸಿದ ಹಂದನಕೆರೆ ರಾಮಶೆಟ್ಟಿ ರಂಗನಾಥ್ ದಂಪತಿಯವರನ್ನು ದೇವಾಲಯಸಮಿತಿಯವರು ಹಾಗೂ ಜೈಮಾರುತಿ ಸಂಘದವರು ಸನ್ಮಾನಿಸಿದರು. 

ವಜ್ರಾಂಗಿ ಅಲಂಕಾರ.

ಹುಳಿಯಾರಿನ ಮಾರುತಿನಗರದ ಆಂಜನೇಯಸ್ವಾಮಿಗೆ ಶ್ರೀರಾಮನವಮಿ ಅಂಗವಾಗಿ ಮಾಡಿರುವ ವಿಶೇಷ ವಜ್ರಾಂಗಿ ಅಲಂಕಾರ.

ಅಭಿಮಾನಿಗಳಿದ್ದರೆ ಕಲಾವಿದರು : ವೀಣಾ ಬಾಲಾಜಿ

ಸಿನಿಮಾ ಹಾಗೂ ಕಿರುತೆರೆ ಕಲಾವಿದರು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದರೂ ಸಹ ಅವರ ಬದುಕು ಕಟ್ಟಿ ಕೊಡುವಲ್ಲಿ ಅಭಿಮಾನಿಗಳ ಪಾತ್ರ ಮಹತ್ವದಾಗಿದ್ದು ಅಭಿಮಾನಿಗಳಿದ್ದರೆ ನಾವು ಎಂದು ಕಿರುತೆರೆ ಕಲಾವಿದೆ ವೀಣಾ ಬಾಲಾಜಿ ತಿಳಿಸಿದರು. ಹುಳಿಯಾರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಅಂಗವಾಗಿ ಅಯೋಜಿಸಿದ್ದ ರಸಸಂಜೆ ಕಾರ್ಯಕ್ರಮದಲ್ಲಿ ಕಿರುತೆರೆ ನಟಿ ವೀಣಾಬಾಲಾಜಿ ಮಾತನಾಡಿದರು. ಹುಳಿಯಾರಿನ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮನವಮಿ ಅಂಗವಾಗಿ ಜೈಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಜೀರ್ಣೋದ್ಧಾರ ಸಮಿತಿಯವರು ಅಯೋಜಿಸಿದ್ದ ಬೆಂಗಳೂರಿನ ನಟರಾಜ್ ಎಂಟರ್ ಟ್ರೈನರ್ಸ್ ಅವರ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಗರಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಜನಸೇರುವುದು ಮಾಮೂಲಿಯಾಗಿದ್ದು, ಹುಳಿಯಾರಿನಂತಹ ಗ್ರಾಮೀಣ ಭಾಗದಲ್ಲೂ ಸಹ ಸಾಕಷ್ಟು ಜನ ಕಿರುತೆರೆ ಕಲಾವಿದರ ಮೇಲೆ ಅಭಿಮಾನವಿಟ್ಟು ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತಸವನ್ನುಂಟು ಮಾಡಿದೆ ಎಂದರು. ನಿಮ್ಮಗಳ ಅಭಿಮಾನ ಕಲಾವಿದರ ಮೇಲೆ ಇದೇ ರೀತಿ ಸದಾ ಇರಲಿ ಎಂದು ಅಶಿಸಿದರು. ಈ ವೇಳೆ ಕಿರುತೆರೆ ಕಲಾವಿದರುಗಳಾದ ರೂಪೇಶ್ ಕುಮಾರ್,ಚಿತ್ರಾ ಮೈಸೂರು,ಪ್ರಿಯಾ ಕೆಸರೆ,ಚಲನಚಿತ್ರಗಳಲ್ಲಿ ಖಳನಟರಾಗಿರುವ ನಟರಾಜ್ (ಸಂತ), ಹುಳಿಯಾರಿನ ಗೌಡಿರಂಗನಾಥ್ ಉಪಸ್ಥಿತರಿದ್ದು ಸನ್ಮಾನ ಸ್ವೀಕರಿಸಿದರು. ಜೈಮಾರುತ

ತ್ರಿಕರಣ ಶುದ್ದಿಯಿಂದ ಮಾತ್ರವೇ ಬಾಳು ಸಾರ್ಥಕ

ತ್ರಿಕರಣ ಶುದ್ದಿಯಿಂದ ಮಾತ್ರವೇ ನಾವು ನಮ್ಮ ಬಾಳನ್ನು ಸಾರ್ಥಕ ಪಡಿಸಿಕೊಳ್ಳಬಹುದು ಎಂದು ಹುಳಿಯಾರಿನ ಕನಕದಾಸ ಶಾಲೆಯ ಶಿಕ್ಷಕ ಹೆಚ್.ಸಿ.ಜಗದೀಶ್ ನುಡಿದರು. ಪಟ್ಟಣದ ವೀರಭದ್ರೇಶ್ವರಸ್ವಾಮಿ ದೇವಾಲಯದ ಅರ್ಚಕ ಮಲ್ಲಿಕಾರ್ಜುನಯ್ಯಅವರ ನಿವಾಸದಲ್ಲಿ ಹೋಬಳಿ ಕನ್ನಡಸಾಹಿತ್ಯ ಪರಿಷತ್ ವತಿಯಿಂದ ಅಯೋಜಿಸಿದ್ದ ಮನೆಮನೆಗಳಲ್ಲಿ ಪಾಕ್ಷಿಕ ಕನ್ನಡ ಕವಿಕಾವ್ಯ ಗೋಷ್ಠಿಕಾರ್ಯಕ್ರಮದಲ್ಲಿ "ಜೀವನ ಮೌಲ್ಯಗಳನ್ನು ಕುರಿತು ಅವರು ಉಪನ್ಯಾಸ ನೀಡಿದರು. ಮಾನವ ಜನ್ಮ ದೊಡ್ಡದು,ಇದ ಹಾನಿ ಮಾಡ ಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದು ದಾಸವಾಣಿಯನ್ನು ಉಲ್ಲೇಖಿಸುತ್ತಾ ಅದರ ಸಾರವನ್ನು ತಿಳಿಸಿದರು. ಅಧ್ಯಕ್ಷತೆವಹಿಸಿದ್ದ ಕೆಂಕೆರೆಯ ನಿವೃತ್ತಶಿಕ್ಷಕ ಅಡವಪ್ಪ ಮಾತನಾಡಿ,ಶಿವಶರಣರು ಹಾಗೂ ದಾಸರು, ಸಾಧು ಸಂತರು ಮಾನವರು ತಮ್ಮ ಜೀವನವನ್ನು ಉತ್ತಮವಾಗಿ ಸಾಗಿಸಲು ಸೂಕ್ತ ಮಾರ್ಗದರ್ಶನವನ್ನು ನೀಡಿದ್ದಾರೆ.ಅದನ್ನು ನಾವು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟುಮಟ್ಟಿಗೆ ಅನುಷ್ಠಾನಗೊಳಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಕಸಾಪದ ತ.ಶಿ.ಬಸಮೂರ್ತಿ ಉಪಸ್ಥಿತರಿದ್ದು ಐಶ್ವರ್ಯ ಮತು ತೇಜಸ್ವಿನಿ ಪ್ರಾರ್ಥಿಸಿ,ಅಭಿನಂದ್ ಸ್ವಾಗತಿಸಿ ,ಶಿಕ್ಷಕ ನಾರಾಯಣಪ್ಪ ನಿರೂಪಿಸಿ,ವಂದಿಸಿದರು

ರಾಮತಾರಕ ಮಂತ್ರ ಉಪದೇಶ

ಅವಧೂತರಾದ ಬೆಲಗೂರಿನ ಶ್ರೀಬಿಂಧುಮಾಧವ ಸ್ವಾಮೀಜಿಯವರು ಹುಳಿಯಾರಿನ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ರಾಮತಾರಕ ಮಂತ್ರ ಉಪದೇಶಿಸಿದರು. 

ನೀರಾ ಮಾರಾಟ : ಈರಣ್ಣನ ಕೇಸು ವಜಾಗೊಳಿಸಿ

ಆರೋಗ್ಯಪೇಯ ನೀರಾವನ್ನು ಇಳಿಸುತ್ತಿದ್ದ ವ್ಯಕ್ತಿಯನ್ನು ಸಾರಾಯಿ ಮಾರಾಟ ಕೇಸಿನಡಿ ಬಂಧಿಸಿದ್ದು ಆತನ ಮೇಲೆ ಹಾಕಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಹೋಬಳಿಯ ರೈತಸಂಘ(ಪುಟ್ಟಣ್ಣಯ್ಯ ಬಣ)ದವವರು ಒತ್ತಾಯಿಸಿದರು. ಈರಣ್ಣನ ಕೇಸು ವಜಾಗೊಳಿಸಲು ಒತ್ತಾಯಿಸಿ ರೈತಸಂಘದವರು ನಾಡಕಛೇರಿಯ ಉಪತಹಸೀಲ್ದಾರ್ ಸತ್ಯನಾರಾಯಣ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತಾಲ್ಲೂಕು ರೈತಸಂಘದ ಹೊಸಹಳ್ಳಿ ಚಂದ್ರಪ್ಪ ಮಾತನಾಡಿ , ತೆಂಗಿನ ಮರದಿಂದ ತಯಾರಾಗುವ ನೀರಾ ಶುದ್ದ ಆರೋಗ್ಯಕರಪೇಯವಾಗಿದ್ದು ರೈತರು ಇದನ್ನು ಸ್ವಂತ ಬಳೆಕೆಗೆ ಮುಂದಾಗಿದ್ದೆ ಘೊರ ಅಪರಾಧವೆಂದು ಬಿಂಬಿಸಿ ವಾಹನ ಜಪ್ತಿಮಾಡಿ ಕೇಸು ದಾಖಲಿಸಿರುವುದು ಖಂಡನೀಯ. ಹಳ್ಳಿಹಳ್ಳಿಗಳಲ್ಲೂ ಆಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಅಬಕಾರಿ ಇಲಾಖೆ ಅಮಾಯಕ ರೈತರ ಮೇಲೆ ಸುಳ್ಳು ನೆಪವೊಡ್ಡಿ ದೂರು ದಾಖಲಿಸಿರುವುದು ಅಧಿಕಾರಿಗಳ ರೈತವಿರೋಧಿ ನೀತಿ ಎತ್ತಿತೋರಿಸುತ್ತಿದೆ. ರೈತರು ಸಿಡಿದೇಳುವ ಮುನ್ನವೇ ಸರ್ಕಾರ ಎಚ್ಚೆತ್ತು ರೈತ ಈರಣ್ಣನ ಮೇಲಿನ ಮೊಕದ್ದಮೆ ಹಾಗೂ ಜಪ್ತಿಮಾಡಿರುವ ವಾಹನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೂ ಬಗ್ಗದಿದ್ದಲ್ಲಿ ಮುಖ್ಯಮಂತ್ರಿಗಳ ಮನೆಮುಂದೆ ಧರಣಿ ಕೂರುವುದಾಗಿ ಎಚ್ಚರಿಸಿದರು. ಈ ಸಂಬಂಧ ನಾಡಕಛೇರಿಯ ಉಪತಹಸೀಲ್ದಾರ್ ಸತ್ಯನಾರಾಯಣ ಅವರಿಗೆ ಮನವಿ ಪತ್ರ ಸಲ್ಲಿಸಿದರು. ರೈತಸಂಘದ ಹನುಂತಣ್ಣ,ಜಯಣ್ಣ,ಅರುಣ್ ಕುಮಾರ್, ಮಹಿಳಾ

ರಾಮನವಮಿ ಅಂಗವಾಗಿ ಶ್ರೀರಾಮಭಜನೋತ್ಸವ

ಹುಳಿಯಾರು ಪಟ್ಟಣದ ಶ್ರಿಆಂಜನೇಯಸ್ವಾಮಿ ದೇವಾಲಯದಲ್ಲಿ ೬ನೇ ವರ್ಷದ ರಾಮನವಮಿ ಅಂಗವಾಗಿ ಜೈ ಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ಆಂಜನೇಯ ಜೀರ್ಣೋದ್ಧಾರ ಸಮಿತಿವತಿಯಿಂದ ಇದೇ ಪ್ರಥಮಬಾರಿಗೆ ಶುಕ್ರವಾರ ಸಂಜೆ ಶ್ರೀರಾಮಭಜನೋತ್ಸವ ಕಾರ್ಯಕ್ರಮ ನಡೆಸಲಾಯಿತು. ರಾಮನವಮಿ ಅಂಗವಾಗಿ ಹುಳಿಯಾರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮಭಜನೋತ್ಸವದಲ್ಲಿ ಪ್ರಶಸ್ತಿಪತ್ರದೊಂದಿಗೆ ಮುಖ್ಯಪ್ರಾಣ ಭಜನಾ ಮಂಡಳಿ. ಈ ಕಾರ್ಯಕ್ರಮದಲ್ಲಿ ಪಟ್ಟಣದ ಮುಖ್ಯಪ್ರಾಣ ಭಜನಾ ಮಂಡಳಿ, ವೃಷಭಾದ್ರಿ,ಆನಂದಾದ್ರಿ, ಗರುಡಾದ್ರಿ, ವೆಂಕಟಾದ್ರಿ,ಶೇಷಾದ್ರಿ,ಅಕ್ಕಮಹಾದೇವಿ, ಅಂಜನಾದ್ರಿ ಭಜನಾ ಮಂದಳಿ, ಕೆಂಕೆರೆಯ ಶ್ರೀರಂಗನಾಥಸ್ವಾಮಿ ಹಾಗೂ ಶ್ರೀಕಾಳಿಕಾಂಬ ಭಜನಾ ಮಂಡಳಿಯವರು ಆಗಮಿಸಿದ್ದು ಶ್ರೀರಾಮನ ಹಾಗೂ ಆಂಜನೇಯಸ್ವಾಮಿ ಕುರಿತ ಗೀತೆಗಳನ್ನು ಗಾಯನ ಮಾಡಿದರು. ತಲಾ ಎರಡೆರಡು ತಂಡದವರು ನಾಲ್ಕೈದು ಗಂಟೆಗಳ ಕಾಲ ಸುಧೀರ್ಘವಾಗಿ ರಾಮಭಜನೆ ಮಾಡಿದರು. ಆಗಮಿಸಿದ್ದ ಭಜನಾ ಮಂಡಳಿಯ ಸದಸ್ಯರುಗಳಿಗೆ ಟ್ರಸ್ಟ್ ವತಿಯಿಂದ ನೆನಪಿನ ಕಾಣಿಕ,ಪ್ರಶಸ್ತಿ ಪತ್ರವಿತರಿಸಲಾಯಿತು. ಈ ವೇಳೆ ಟ್ರಸ್ಟ್ ನ ಗೌರವಾಧ್ಯಕ್ಷ ಅಶೋಕ್ ಬಾಬು, ಅಧ್ಯಕ್ಷ ಚನ್ನಬಸವಯ್ಯ,ಉಪಾಧ್ಯಕ್ಷ ಮಂಜುನಾಥ್, ದಯಾನಂದ್, ಸತೀಶ್,ನರಸಿಂಹಮುರ್ತಿ,ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹುಳಿಯಾರು : ರಾಮನವಮಿ ಪ್ರಯುಕ್ತ ಪಾನಕಪನಿವಾರ ಸಂಭ್ರಮ

ಹುಳಿಯಾರು ಪಟ್ಟಣದ ವಿವಿಧ ದೇವಾಲಯಗಳಲ್ಲಿ ಹಾಗೂ ಸುತ್ತಮುತ್ತಲ ಸೀಗೆಬಾಗಿ,ಹೊಸಹಳ್ಳಿ, ಕೆಂಕೆರೆ, ತಿರುಮಲಾಪುರ,ದಸೂಡಿ,ನಂದಿಹಳ್ಳಿ ಗ್ರಾಮಗಳ ದೇವಾಲಯಗಳಲ್ಲಿ ಶನಿವಾರ ರಾಮನವಮಿಯ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಿ ಪಾನಕ,ಮಜ್ಜಿಗೆ ವಿತರಿಸುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹುಳಿಯಾರಿನಲ್ಲಿ ರಾಮನವಮಿ ಅಂಗವಾಗಿ ಲಿಂಗಪ್ಪನಪಾಳ್ಯದ ಶ್ರೀರಾಮದೇವರನ್ನು ಗ್ರಾಮದೇವತೆಗಳಾದ ದುರ್ಗಮ್ಮ, ಹುಳಿಯಾರಮ್ಮನವರೊಂದಿಗೆ ಮೆರವಣೆಯಲ್ಲಿ ಆಂಜನೇಯಸ್ವಾಮಿ ದೇವಾಲಯಕ್ಕೆ ಕರೆದೊಯ್ಯಲಾಯಿತು. ಪಟ್ಟಣದ ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಮುಂಜಾನೆ ಪೂಜೆ, ಹೋಮ ಹಾಗೂ ಮಹಾಮಂಗಳಾರತಿ ನಡೆಸಲಾಯಿತು. ಆಂಜನೇಯಸ್ವಾಮಿಗೆ ಭಕ್ತರೊಬ್ಬರು ಬೆಳ್ಳಿಯ ವಜ್ರಾಂಗಿ ಸಮರ್ಪಿಸಿದ ಹಿನ್ನಲೆಯಲ್ಲಿ ಅರ್ಚಕ ಶ್ರೀಧರ್ ಅವರಿಂದ ಹೋಮಹವನಾದಿಗಳು ನಡೆಯಿತು. ಇದೇ ಸಂದರ್ಭದಲ್ಲಿ ಬೆಲುಗೂರಿನ ಬಿಂಧುಮಾಧವ ಸ್ವಾಮಿಯವರು ದೇವಾಲಯಕ್ಕೆ ಆಗಮಿಸಿ ಭಕ್ತಾಧಿಗಳಿಗೆ ಆಶೀರ್ವಚನ ನೀಡಿದರು. ರಾಮಭಜನೆ ನಂತರ ದೇವಾಲಯ ಸಮಿತಿ ಹಾಗೂ ಜೈ ಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತಾಧಿಗಳಿಗೆ ಪಾನಕ,ಮಜ್ಜಿಗೆ,ಕಡಲೆಕಾಳು ಉಸ್ಲಿ ವಿತರಿಸಲಾಯಿತು.   ಹುಳಿಯಾರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ಜೈ ಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್ ನ ಯುವಕರು ಪಾನಕ,ಮಜ್ಜಿಗೆ ವಿತರಿಸಿದರು. ಪಟ್ಟಣದ ಸೀತಾ

ಲಿಂಗಪ್ಪನಪಾಳ್ಯದಲ್ಲಿ ರಾಮನವಮಿ ಊರಹಬ್ಬ

ವರದಿ : ಡಿ.ಆರ್.ನರೇಂದ್ರಬಾಬು ಹುಳಿಯಾರು: ರಾಮನವಮಿ ಬಂತೆಂದರೆ ಹುಳಿಯಾರು ಸಮೀಪದ 2೦೦ ಮನೆಗಳ ಗ್ರಾಮವಾದ ಲಿಂಗಪ್ಪನಪಾಳ್ಯದಲ್ಲಿ ಸಡಗರ. ಎಲ್ಲ ಹಬ್ಬಗಳನ್ನು ಇಲ್ಲಿ ಆಚರಿಸುತ್ತಾರಾದರೂ ರಾಮನವಮಿ ಮಾತ್ರ ವಿಶೇಷವಾಗಿ ಆಚರಿಸಲಾಗುತ್ತದೆ. ಇಡೀ ಗ್ರಾಮದ ಮಂದಿಯೆಲ್ಲ ಇಲ್ಲಿ ಶ್ರೀರಾಮನ ಭಕ್ತರಾಗಿದ್ದು ಇಲ್ಲಿರುವ ಶ್ರೀರಾಮನ ಮೂರ್ತಿ ದರ್ಶನ ಮಾಡಿದಲ್ಲಿ ಸಕಲಪಾಪ ಪರಿಹಾರವಾಗಲಿದೆ ಎಂಬ ನಂಬಿಕೆ ಈ ಜನರಲ್ಲಿದೆ. ಈ ಹಳ್ಳಿಯಲ್ಲಿ ಯುಗಾದಿ, ದೀಪಾವಳಿ,ಮಹಾನವಮಿಗಿಂತ ರಾಮನವಮಿಯೇ ವಿಶೇಷ.ಯುಗಾದಿ ಕಳೆದು ಒಂಬತ್ತನೆ ದಿನವೇ ಶ್ರೀ ರಾಮ ನವಮಿ. ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಬರುವ ರಾಮನವಮಿಯನ್ನು ಗ್ರಾಮದ ಮುಖ್ಯ ಹಬ್ಬವಾಗಿ ಆಚರಿಸುವ ಮೂಲಕ 9 ದಿನಗಳ ಕಾಲ ವಸಂತ ನವರಾತ್ರಿಯನ್ನು ಊರಿನಲ್ಲಿ ಆಚರಿಸುವುದು ರೂಢಿಯಲ್ಲಿದೆ. ಗ್ರಾಮದ ಸುತ್ತ ನಡೆಯುವ ರಾಮಭಜನೆ( ಸಂಗ್ರಹ ಚಿತ್ರ) ಗ್ರಾಮದ ಕಷ್ಟ ನಿವಾರಿಸುವ ಶ್ರೀರಾಮ . ಈ ಹಬ್ಬದಲ್ಲಿ ಸಾಕಷ್ಟು ಕಟ್ಟುಪಾಡಿದ್ದು ಹೊಸ ಸಂವತ್ಸರದ ಮೊದಲ ಹಬ್ಬವಾದ ಯುಗಾದಿಯ ದಿನದಿಂದ ರಾಮ ನವಮಿಯವರೆಗೆ ಗ್ರಾಮದಲ್ಲಿ ಎಲ್ಲರೂ ಮಡಿಯಾಗಿರುತ್ತಾರೆ. ಗ್ರಾಮದ ಬಹುಪಾಲು ಮಂದಿ ತಿಂದುಣ್ಣುವವರಾದರೂ ಈ ಒಂಭತ್ತು ದಿನ ಮಾತ್ರ ಗ್ರಾಮದಲ್ಲಿ ಮಾಂಸಹಾರ ನಿಷಿದ್ಧ. ನಿತ್ಯ ಮುಂಜಾನೆ ಅಭಿಷೇಕಕ್ಕೆ ಹಾಜರಾಗಿ, ಸಂಜೆ ಮಡಿಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ಗ್ರಾಮಸ್ಥರು

ನಿಂಬೆಹಣ್ಣಿಗೆ ಡಿಮ್ಯಾಂಡೋ.....ಡಿಮ್ಯಾಂಡು

ಮಾರುಕಟ್ಟೆಯಲ್ಲಿ ಎರಡರಿಂದ ಮೂರು ರೂಪಾಯಿಗೆ ಒಂದರಂತೆ ದೊರೆಯುತ್ತಿದ್ದ ನಿಂಬೆಹಣ್ಣು ದುಬಾರಿಯಾಗಿದ್ದು ದೊರೆಯುವುದೆ ಕಷ್ಟವಾಗಿದೆ. ಕಳೆದೊಂದು ವಾರದಿಂದ ಸುತ್ತಮುತ್ತಲ ಹಳ್ಳಿಗಳಲ್ಲಿ ಜಾತ್ರೆ ಪ್ರಯುಕ್ತ ಮಾಂಸದೂಟದ ಬಾನದ ಪರಿಣಾಮವಾಗಿ ನಿಂಬೆಹಣ್ಣಿಗೆ ಹೆಚ್ಚು ಬೇಡಿಕೆಯಾಗಿ ದರ ಗಗನಕ್ಕೇರಿದೆ. ಸುತ್ತ ಶ್ರೀರಾಂಪುರ, ಹೊಸದುರ್ಗದಲ್ಲೂ ಸಹಿತ ನಿಂಬೆಹಣ್ಣು ದೊರೆಯದಂತಾಗಿ ದುಡ್ಡು ಎಷ್ಟಾದರೂ ಸರಿ ನಿಂಬೆಹಣ್ಣು ಬೇಕೆಂದರೂ ಸಿಗದಂತಾಗಿದೆ.  ಸದ್ಯ ರಾಮನವಮಿ ಕೂಡ ಬಂದಿದ್ದು ಪಾನಕಕ್ಕೆ ಪ್ರತಿಯೊಂದು ಮನೆಯಲ್ಲೂ ಸಹ ನಿಂಬೆಹಣ್ಣು ಬೇಕಾಗಿದೆ. ನಾಡಕಛೇರಿ ಬಳಿಯ ನಿತ್ಯ ತರಕಾರಿ ಮಾರುಕಟ್ಟೆಯಲ್ಲೂ ನಿಂಬೆಹಣ್ಣು ಸಿಗದೆ ಇದ್ದೊಬ್ಬರು ೨೦ ರೂ ಗೆ ಎರಡುಮೂರರಂತೆ ಮಾರಿ ಹುಬ್ಬೇರಿಸುವಂತೆ ಮಾಡಿದ್ದಾರೆ. ಪಟ್ಟಣದಲ್ಲಿ ಸ್ಥಳೀಯವಾಗಿ ದೊರೆಯುತ್ತಿದ್ದ ನಿಂಬೆಹಣ್ಣು ಈ ಬೇಸಿಗೆಯಲ್ಲಿ ಇಳುವರಿ ಇಲ್ಲದಂತಾಗಿ ಬೇಡಿಕೆ ಉಂಟಾಗಿದೆ. ಸುತ್ತಮುತ್ತ ಹಳ್ಳಿಗಳಿಂದ , ಹಾಸನ, ತಿಪಟೂರು ಮಾರುಕಟ್ಟೆಯಿಂದ ವಾರಕ್ಕೆ ಕನಿಷ್ಟ ೩೦೦೦ ನಿಂಬೆಹಣ್ಣು ತಂದು ಮಾರುತ್ತಿದ್ದು ಇಂದು ಬೇಕೆಂದರೂ ಒಂದೇಒಂದು ನಿಂಬೆಹಣ್ಣು ದೊರೆಯದಂತಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಖಾಜಾಪೀರ್. ಒಟ್ಟಾರೆ ಬೇಸಿಗೆಯ ಬಿಸಿಲಿಗೂ, ಹಬ್ಬಗಳ ಬಾನಗಳಿಗೂ, ರಾಮನವಮಿಯ ಪಾನಕಕ್ಕೂ ಬೇಕಾಗಿದ್ದ ನಿಂಬೆಹಣ್ಣು ಇಷ್ಟೊಂದು ಬೇಡಿಕೆಯುಂಟಾಗಿರುವುದು ಅಚ್ಚರಿ ಮೂಡಿಸಿದೆ.

ಹುಳಿಯಾರಿನ ವಿವಿಧೆಡೆ ನಾಳೆ (ತಾ.೨೮) ರಾಮನವಮಿ

ಹುಳಿಯಾರು ಪಟ್ಟಣದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ವಿಪ್ರ ಸಂಘದಿಂದ,ವಾಸವಿ ದೇವಾಲಯದಲ್ಲಿ ಆರ್ಯವೈಶ್ಯ ಮಂಡಳಿಯಿಂದ,ಆಂಜನೇಯಸ್ವಾಮಿ ದೇವಾಲಯದಲ್ಲಿ ಜೈ ಮಾರುತಿ ಯುವಕ ಸಂಘದಿಂದ,ರಂಗನಾಥಸ್ವಾಮಿ ದೇವಾಲಯದಲ್ಲಿ ರಾಮನವಮಿ ಆಚರಣೆ ಅದ್ಧೂರಿಯಾಗಿ ನಡೆಯಲಿದೆ. ಪಟ್ಟಣದ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ಆಂಜನೇಯಸ್ವಾಮಿಗೆ ಅಭಿಷೇಕ ನಂತರ ಗ್ರಾಮದೇವತೆಗಳಾದ ಹುಳಿಯಾರಮ್ಮ, ದುರ್ಗಮ್ಮ ಹಾಗೂ ಲಿಂಗಪ್ಪನಪಾಳ್ಯದ ಶ್ರೀರಾಮದೇವರುಗಳ ಆಗಮನದೊಂದಿಗೆ ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ ನಡೆದು ಪಾನಕಪನಿವಾರ ಸೇವೆ ನಡೆಯಲಿದೆ. ಸಂಜೆ ೬ಕ್ಕೆ ಬೆಂಗಳೂರಿನ ನಟರಾಜ್ ಎಂಟರ್ ಟ್ರೈನರ್ಸ್ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ಗ್ರಾಮಗಳಲ್ಲಿ : ಸಮೀಪದ ಲಿಂಗಪ್ಪನಪಾಳ್ಯದ ಶ್ರೀರಾಮದೇವಾಲಯದಲ್ಲಿ,ಕೆಂಕೆರೆಯ ಶ್ರೀ ಆಂಜನೇಯಸ್ವಾಮಿ ದೇವಾಲಯ,ಹೊಸಹಳ್ಳಿ ಆಂಜನೇಯಸ್ವಾಮಿ ದೇವಾಲಯ,ತಿರುಮಾಲಪುರದ ಆಂಜನೇಯಸ್ವಾಮಿ ದೇವಾಲಯದಲ್ಲಿ,ನಂದಿಹಳ್ಳಿಯ ನಂದಿಬಸವೇಶ್ವರಸ್ವಾಮಿ ದೇವಾಲಯದಲ್ಲಿ,ಸೀಗೆಬಾಗಿಯ ವರದರಾಜಸ್ವಾಮಿ ದೇವಾಲಯದಲ್ಲಿ,ದಸೂಡಿಯ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಾಮನವಮಿ ಅಂಗವಾಗಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ನೂರೊಂದೆಡೆ ಸೇವೆ,ಪಾನಕಫಲಹಾರ ವಿನಿಯೋಗವಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಿತಿಯವರು ಕೋರಿದ್ದಾರೆ.

ನಂದಿಹಳ್ಳಿ ನಂದಿಬಸವೇಶ್ವರ ಜಾತ್ರಾಮಹೋತ್ಸವ

ಹುಳಿಯಾರು  ಹೋಬಳಿ ನಂದಿಹಳ್ಳಿ ಗ್ರಾಮದ ಶ್ರೀನಂದಿಬಸವೇಶ್ವರ ಸ್ವಾಮಿಯ ಜಾತ್ರಾಮಹೋತ್ಸವ ಇದೇ ೨೮ರ ಶನಿವಾರದಿಂದ ಪ್ರಾರಂಭವಾಗಿ ತಾ.೩೧ರ ಮಂಗಳವಾರದವರೆಗೆ ನಾಲ್ಕು ದಿನಗಳಕಾಲ ನಡೆಯಲಿದೆ. ನಂದಿಹಳ್ಳಿ ನಂದಿಬಸವೇಶ್ವರ. ತಾ.೨೮ರ ಶನಿವಾರ ಬೆಳಿಗ್ಗೆ ೮ ಗಂಟೆಗೆ ರಾಮನವಮಿ, ಆಂಜನೇಯಸ್ವಾಮಿ ರುದ್ರಾಭಿಷೇಕ,ಕುಂಕುಮಾರ್ಚನೆ,ಧ್ವಜಾರೋಹಣ, ಸಂಜೆ ಆಂಜನೇಯಸ್ವಾಮಿಯ ಉತ್ಸವ ,೬ಗಂಟೆಗೆ ಬಿಲ್ಲುಗೂಡು ಸೇವೆ, ನಂದಿಬಸವೇಶ್ವರ ಕಲಾತಂಡದವರಿಂದ ರಾಮಭಜನೆ ನಡೆಯಲಿದೆ.ತಾ.೨೯ರ ಭಾನುವಾರ ನಂದಿಬಸವೇಶ್ವರಸ್ವಾಮಿ, ಆಂಜನೇಯಸ್ವಾಮಿ,ಶನೇಶ್ವರಸ್ವಾಮಿ, ಕ್ಯಾತಲಿಂಗೇಶ್ವರಸ್ವಾಮಿ,ಹುಲ್ಕಲ್ ದುರ್ಗಮ್ಮ,ತೊರೆಮನೆಯ ಅಂತರಘಟ್ಟೆ ಕರಿಯಮ್ಮ ಎಲ್ಲಾ ದೇವರುಗಳ ಆಗಮ ಹಾಗೂ ಕೂಡುಭೇಟಿ, ರಾತ್ರಿ ನೂರೊಂದೆಡೆ ಸೇವೆ, ಗುರುಪರುವಿನೊಂದಿಗೆ ಅನ್ನಸಂತರ್ಪಣೆ ನಡೆಯಲಿದೆ. ತಾ.೩೦ರ ಸೋಮವಾರದಂದು ಸ್ವಾಮಿಯವರ ಬೆಳ್ಳಿ ಪಾಲಿಕೆಯ ಅಡ್ಡಪಲ್ಲಕ್ಕಿ ಉತ್ಸವ, ದೋಣು ಸೇವೆ ಹಾಗೂ ಮುತ್ತಿನ ಮಂಟಪೋತ್ಸವ,ತಾ.೩೧ರ ಮಂಗಳವಾರ ಬೆಳಿಗ್ಗೆ ಸ್ವಾಮಿಯ ರಥೋತ್ಸವ ನಡೆದು ನಂತರ ಗಂಗಾಪೂಜೆಯೊಂದಿಗೆ ನಡೆಮುಡಿಯಲ್ಲಿ ರುದ್ರದೇವರ ನೃತ್ಯದೊಂದಿಗೆ ಮೂಲಸ್ಥಾನಕ್ಕೆ ದಯಮಾಡಿಸಿ ಹಣ್ಣುಕಾಯಿ ಸೇವೆ, ಮಹಾಮಂಗಳಾರತಿ ಕಾರ್ಯ ನಡೆಯಲಿದೆ. ಅದೇ ದಿನ ರಾತ್ರಿ ನಂದಿಬಸವೇಶ್ವರ ಕಲಾಸಂಘದವರಿಂದ ಸಂಪೂರ್ಣರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದ್ದು ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ

ಹುಳಿಯಾರಿನಲ್ಲಿ ೨ ದಿನ ರಾಮನವಮಿ ಆಚರಣೆ

ಹುಳಿಯಾರು  ಪಟ್ಟಣದ ಮಾರುತಿನಗರದ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಜೈಮಾರುತಿ ಯುವಕ ಸೇವಾ ಛಾರಿಟಬಲ್ ಟ್ರಸ್ಟ್, ಆಂಜನೇಸ್ವಾಮಿ ಜೀರ್ಣೋದ್ಧಾರ ಸಮಿತಿ ಹಾಗೂ ಭಕ್ತಾಧಿಗಳ ಸಹಯೋಗದಲ್ಲಿ  ೨ ದಿನ ನಗಳ ಕಾಲ    ೬ನೇ ವರ್ಷದ ಶ್ರೀರಾಮನವಮಿ ಆಚರಣೆ ನಡೆಯಲಿದೆ. ಇದರ ಅಂಗವಾಗಿ ಶ್ರೀಕ್ಷೇತ್ರ ಬೆಲಗೂರಿನ ಬಿಂಧುಮಾಧವ ಸ್ವಾಮೀಜಿ ಹಾಗೂ ಹೊಸದುರ್ಗ ಕನಕಗುರುಪೀಠ ಶಾಖಾಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ಅವರುಗಳ ಸಾನಿಧ್ಯದಲ್ಲಿ  (ತಾ.೨೭) ಶುಕ್ರವಾರ ಸಂಜೆ ೬ ಗಂಟೆಗೆ ಪಟ್ಟಣದ ಎಲ್ಲಾ ಭಜನಾ ಮಂಡಳಿಯವರಿಂದ ಶ್ರೀರಾಮಭಜನೋತ್ಸವ ನಡೆಯಲಿದೆ ತಾ.೨೮ರ ಶನಿವಾರ ಬೆಳಿಗ್ಗೆ ಆಂಜನೇಯಸ್ವಾಮಿಗೆ ಅಭಿಷೇಕ ನಡೆದು ನಂತರ ಗ್ರಾಮದೇವತೆಗಳಾದ ಹುಳಿಯಾರಮ್ಮ, ದುರ್ಗಮ್ಮ ಹಾಗೂ ಲಿಂಗಪ್ಪನಪಾಳ್ಯದ ಶ್ರೀರಾಮದೇವರುಗಳ ಆಗಮನದೊಂದಿಗೆ ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ ನಡೆದು ಪಾನಕಪನಿವಾರ ಸೇವೆ ನಡೆಯಲಿದೆ. ಇದೇ ದಿನ ಸಂಜೆ ೬ಕ್ಕೆ ಬೆಂಗಳೂರಿನ ನಟರಾಜ್ ಎಂಟರ್ ಟ್ರೈನರ್ಸ್ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದ್ದು ಹುಳಿಯಾರು ಹಾಗೂ ಸುತ್ತಮುತ್ತಲಿನ ಹಳ್ಳಿಯವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಟ್ರಸ್ಟ್ ನವರು ಕೋರಿದ್ದಾರೆ.

ನಮ್ಮ ಸುತ್ತಮುತ್ತಲಿನ ಕಸವನ್ನು ನಾವೇ ಕ್ಲೀನ್ ಮಾಡಿಕೊಳ್ಳಬೇಕು : ಎಲ್.ಆರ್.ಸಿ

ಪ್ರಸ್ತುತದಲ್ಲಿ ನಮ್ಮ ಸುತ್ತಲಿನ ಪರಿಸರದ ಸ್ವಾಸ್ಥ್ಯವನ್ನು ನಾವೇ ಹದಗೆಡುವಂತೆ ಮಾಡುವ ಮೂಲಕ ಅನೈರ್ಮಲ್ಯತೆಯನ್ನು ಸೃಷ್ಠಿಸಿ ಅನೇಕ ಮಾರಕ ರೋಗಗಳ ಬಾಯಿಗೆ ತುತ್ತಾಗುತ್ತಿದ್ದೇವೆ. ಇದರಿಂದ ದೂರವಿರಬೇಕೆಂದರೆ ಜನಸಮುದಾಯದವರೆಲ್ಲಾ ನಮ್ಮನಮ್ಮ ಮನೆಯ ಅಕ್ಕಪಕ್ಕದಲ್ಲಿನ ತ್ಯಾಜ್ಯವನ್ನು ನಾವೇ ಕ್ಲೀನ್ ಮಾಡಿಕೊಳ್ಳುವ ಮೂಲಕ ಸ್ವಚ್ಚತೆ ಕಡೆ ಗಮನಕೊಡುವಂತೆ ಎಲ್.ಆರ್.ಚಂದ್ರಶೇಖರ್ ತಿಳಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ ಹಾಗೂ ಯುವರೆಡ್ ಕ್ರಾಸ್ ಸಹಯೋಗದಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಜಾಥಾ ನಡೆಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ ಹಾಗೂ ಯುವರೆಡ್ ಕ್ರಾಸ್ ಸಹಯೋಗದಲ್ಲಿ ಸ್ವಚ್ಚ ಭಾರತ್ ಅಭಿಯಾನದಡಿ ಸಾರ್ವಜನಿಕರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ನಡೆಸಿದ ಜಾಥಾದಲ್ಲಿ ಅವರು ಮಾತನಾಡಿದರು. ಹುಳಿಯಾರು ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿರಾಶಿಯೇ ಗೋಚರಿಸುತ್ತಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದೆ. ಇದನ್ನು ಕಂಡರೂ ಕಾಣದಂತೆ ಜನ ಓಡಾಡುತ್ತಿದ್ದಾರೆ, ಪಟ್ಟಣದಲ್ಲಿ ಸ್ವಚ್ಚತಾ ಕಾರ್ಯ ಮಾಡಬೇಕಾದ ಗ್ರಾ.ಪಂ.ನವರು ಸಹ ಮೌನವಹಿಸಿದ್ದಾರೆ ಎಂದರು. ಗ್ರಾ.ಪಂಯವರು ಮಾಡಬೇಕಾದ ಸ್ವಚ್ಚತಾ ಕಾರ್ಯವನ

ದಾಸಿಮಯ್ಯನವರ ವಚನಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

 ೧೨ ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಜಾತಿಧರ್ಮಗಳ ಮೂಲಕ ಸಿಡಿದೆದ್ದು ಎಲ್ಲರೂ ಸಮಾನರು ಎಂದು ಸಾರಿದ ದೇವರ ದಾಸಿಮಯ್ಯನವರು ಸಾಮಾಜಿಕ ಕ್ರಾಂತಿಗೆ ಬುನಾದಿ ಹಾಕಿದರು ಎಂದು ನಿವೃತ್ತ ಶಿಕ್ಷಕ ತ.ಶಿ.ಬಸವಮೂರ್ತಿ ಅವರು ಹೇಳಿದರು. ಹುಳಿಯಾರಿನ ಶ್ರೀಬನಶಂಕರಿ ದೇವಾಲಯದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿಯಲ್ಲಿ ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ತ.ಶಿ.ಬಸವಮೂರ್ತಿ ಮಾತನಾಡಿದರು. ಹುಳಿಯಾರಿನ ಶ್ರೀಬನಶಂಕರಿ ದೇವಾಲಯದಲ್ಲಿ ದೇವಾಂಗ ಮಂಡಳಿ ಹಾಗೂ ದೇವರ ದಾಸಿಮಯ್ಯ ನೇಕಾರ ಅಭಿವೃದ್ದಿ ಸೇವಾ ಟ್ರಸ್ಟ್ ವತಿಯಿಂದ ಬುಧವಾರ ಬೆಳಿಗ್ಗೆ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು. ಪಟ್ಟಣದ ಶ್ರೀಬನಶಂಕರಿ ದೇವಾಲಯದಲ್ಲಿ ಬನಶಂಕರಿ ಛಾರಿಟಬಲ್ ಟ್ರಸ್ಟ್ , ದೇವಾಂಗ ಮಂಡಳಿ ಹಾಗೂ ದೇವರ ದಾಸಿಮಯ್ಯ ನೇಕಾರ ಅಭಿವೃದ್ದಿ ಸೇವಾ ಟ್ರಸ್ಟ್ ವತಿಯಿಂದ ಬುಧವಾರ ಬೆಳಿಗ್ಗೆ ದೇವರ ದಾಸಿಮಯ್ಯ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು. ಬಟ್ಟೆ ನೇಯುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ ದಾಸಿಮಯ್ಯನವರ ಜನ್ಮ ಸ್ಥಳ ಯಾದಗಿರಿ ಜಿಲ್ಲೆಯ ಮುದನೂರು ಗ್ರಾಮವಾಗಿದ್ದು ದುಗ್ಗಳೆ ಆತನ ಪತ್ನಿ.ಇವರ ವಚನಗಳ ಅಂಕಿತ ರಾಮನಾಥ ಎಂದಾಗಿದ್ದು ಈವರೆಗೂ ಇವರು ೧೫೦ಕ್ಕೂ ಹೆಚ್ಚು ವಚನಗಳು ದೊರೆತಿವೆ ಎಂದು ದಾಸಿಮಯ್ಯನ ಪರಿಚಯ ಮಾಡಿಕೊಟ್ಟರು. ದಾಸಿಮಯ್ಯನ ವಚನಗಳಲ್ಲಿನ ಚಿಂತನೆಗಳನ್ನು ಹಾಗೂ ತೀವ್ರವಾದ ಅನುಭಾವವನ್ನು ಜೀವನದಲ್ಲಿ ಅನುಷ್ಠಾನಗೊಳಿಸಿಕೊಳ್ಳುವ ಮೂಲಕ ಹಿರಿಯ ಹಾ

ತರಕಾರಿ ಮಾರುಕಟ್ಟೆ ರೈತರಿಂದ ಶ್ರದ್ಧಾಂಜಲಿ

ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದ ಡಿ.ಕೆ.ರವಿಯವರು ಸಾವು ನಾಡಿನ ಜನತೆಗೆ ಆಘಾತವನ್ನುಂಟು ಮಾಡಿದ್ದು ಇಂತಹ ವ್ಯಕ್ತಿ ಇಲ್ಲದಾರಿರುವುದು ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ನಿವೃತ್ತ ಶಿಕ್ಷಕ ಹಾಗೂ ಕೃಷಿಕ ನಂದಿಹಳ್ಳಿ ಸಿದ್ದಬಸವಯ್ಯ ಕಳವಳ ವ್ಯಕ್ತಪಡಿಸಿದರು. ಹುಳಿಯಾರಿನ ಮುಂಜಾನೆ ತರಕಾರಿ ಮಾರುಕಟ್ಟೆಯ ರೈತರು ಹಾಗೂ ರೈತಸಂಘದಿಂದ ಡಿ.ಕೆ.ರವಿ ಅವರ ಸ್ಮರಣಾರ್ಥ ಬುಧವಾರ ಬೆಳಿಗ್ಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಪಟ್ಟಣದ ನಾಡಕಛೇರಿಯ ಮುಂದೆ "ಮುಂಜಾನೆ ತರಕಾರಿ ಮಾರುಕಟ್ಟೆ" ರೈತರಿಂದ ನಡೆದ ಡಿ.ಕೆ.ರವಿ ಅವರಿಗೆ ಬುಧವಾರ ಬೆಳಿಗ್ಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರವಿ ಅವರ ಸಾವು ಉನ್ನತ ಸ್ಥಾನದಲ್ಲಿದ್ದುಕೊಂಡು ಪ್ರಾಮಾಣಿಕ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ಧೃತಿಗೆಡುವಂತೆ ಮಾಡಿದೆ ಎಂದರು. ಮಾರುಕಟ್ಟೆಯ ರೈತರುಗಳೆಲ್ಲಾ ಮೌನ ಆಚರಿಸುವ ಮೂಲಕ ಸಂತಾಪ ವ್ಯಕ್ತಪಡಿಸಿದರು. ಇಂಜಿನಿಯರ್ ಲಿಂಗರಾಜ್, ಕೃಷಿಕರಾದ ಮುರುಳಿ, ಗೊಲ್ಲರಹಟ್ಟಿ ಕೊಟ್ರೇಶ್, ಪೈಂಟರ್ ಲೋಕೇಶ್,ಮಹೇಶ್, ಪಂಡಿತ್ ಬಸವರಾಜು ಸೇರಿದಂತೆ ರೈತ ಮಹಿಳೆಯರು ಹಾಗೂ ಇತರರಿದ್ದರು.

ಹುಳಿಯಾರು ಗ್ರಾ.ಪಂ.ನಲ್ಲಿ ದಾಸಿಮಯ್ಯ ಜಯಂತಿ ಆಚರಣೆ

 ೧೨ ನೇ ಶತಮಾನದಲ್ಲಿ ವಚನಕಾರರು ತಮ್ಮ ವಚನದ ಮೂಲಕ ಸಾಮಾಜಿಕ ಕ್ರಾಂತಿ ಉಂಟುಮಾಡಿದರು.ಜಾತಿ ಧರ್ಮಗಳ ವಿರುದ್ದ ಮೆಟ್ಟಿನಿಂತು ಶೋಷಣೆ , ಅಸಮಾನತೆ ವಿರುದ್ದ ಹೋರಾಡಿದರು. ದೇವರ ದಾಸಿಮಯ್ಯನಂತ ವಚನಕಾರರು ತಮ್ಮ ಕ್ರಾಂತಿಕಾರಿ ನಿಲುವಿನಿಂದ ಇಂದಿಗೂ ಪ್ರಸ್ತುತವಾಗಿದ್ದಾರೆಂದು ಪಿಡಿಓ ಅಡವೀಶ್ ಕುಮಾರ್ ತಿಳಿಸಿದರು. ಹುಳಿಯಾರು ಗ್ರಾ.ಪಂ.ಕಛೇರಿಯಲ್ಲಿ ಅಧ್ಯಕ್ಷೆ ಕಾಳಮ್ಮ ಅವರ ಅಧ್ಯಕ್ಷತೆಯಲ್ಲಿ ದೇವರ ದಾಸಿಮಯ್ಯನವರ ಜಯಂತಿ ಆಚರಿಸಲಾಯಿತು. ಹುಳಿಯಾರು ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷೆ ಕಾಳಮ್ಮ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಿಗ್ಗೆ ನಡೆದ ದೇವರ ದಾಸಿಮಯ್ಯನವರ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು. ಅಧ್ಯಕ್ಷೆ ಕಾಳಮ್ಮ ಮಾತನಾಡಿ ಸಾಮಾಜಿಕ ಕ್ರಾಂತಿ ಉಂಟುಮಾಡಿದ ದಾಸಿಮಯ್ಯ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ತಮ್ಮ ಪಂಚಾಯ್ತಿಯಲ್ಲಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು. ಗ್ರಾ.ಪಂ.ಸದಸ್ಯ ಗಂಗಣ್ಣ, ದೇವಾಂಗ ಮಂಡಳಿಯ ಅಧ್ಯಕ್ಷ ಅನಂತ್ ಕುಮಾರ್,ಶೇಖರಪ್ಪ, ಪಂಚಾಯ್ತಿ ಸಿಬ್ಬಂದಿಗಳದ ಆನಂದ್, ಕೃಷ್ಣಮೂರ್ತಿ,ವೆಂಕಟೇಶ್,ಪಾಂಡುರಂಗಯ್ಯ ಮುಂತಾದವರಿದ್ದರು.

ತಾ.೨೫ : ದಾಸಿಮಯ್ಯ ಜಯಂತಿ

ಹುಳಿಯಾರು  ಪಟ್ಟಣದ ಶ್ರೀಬನಶಂಕರಿ ದೇವಿ ದೇವಾಲಯದಲ್ಲಿ ದೇವಾಂಗ ಮಂಡಳಿ ಹಾಗೂ ದಾಸಿಮಯ್ಯ ಸಂಘದವತಿಯಿಂದ (ತಾ.೨೫) ಬುಧವಾರ ಬೆಳಿಗ್ಗೆ ಆದ್ಯವಚನಕಾರ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲಿದ್ದಾರೆ. ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ನಡೆಸಿ ನಂತರ ಪಾನಕ ,ಪ್ರಸಾದ ವಿತರಣೆ ನಡೆಯಲಿದೆ. ದೇವಾಂಗ ಸಮುದಾಯದವರು ಸೇರಿದಂತೆ ಸಾರ್ವಜನಿಕರು ಆಗಮಿಸುವಂತೆ ಬಿ.ಟಿ.ರಾಜ್ ಗೋಪಾಲ್ ಕೋರಿದ್ದಾರೆ.

ಪಂಚಫಲ ಹಣ್ಣಿನ ಅಲಂಕಾರ

ಹುಳಿಯಾರಿನ ಶ್ರೀ ಅನಂತಶಯನ ರಂಗನಾಥಸ್ವಾಮಿಗೆ ಅಮವಾಸ್ಯೆಯಂದು ಮಂಜುನಾಥ್,ಮಧು,ಮೋಹನ್,ತಾಂಡವಮೂರ್ತಿ ಅವರ ಸೇವಾರ್ಥದಲ್ಲಿ ಮಾಡಿದ್ದ ಪಂಚಫಲ ಹಣ್ಣಿನ ಅಲಂಕಾರ ಮಾಡಿದ್ದು ಆಕರ್ಷವಾಗಿತ್ತು.

ಬೆಳ್ಳಾರದಲ್ಲಿ ಡಿ.ಕೆ.ರವಿಗೆ ಶ್ರದ್ಧಾಂಜಲಿ

ದಕ್ಷ ಅಧಿಕಾರಿಯಾಗಿ ಹೆಸರಾಗಿದ್ದ ಡಿ.ಕೆ.ರವಿ ಅಸಹಜವಾಗಿ ಸಂಶಯಾಸ್ಪದ ರೀತಿಯಲ್ಲಿ ಸಾವನಪ್ಪಿರುವುದು ದುರಂತವಾಗಿದ್ದು ನಾಡು ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಜಿ.ಪಂ.ಸದಸ್ಯ ಬೆಳ್ಳಾರದ ಈರಣ್ಣ ಕಂಬನಿ ಮಿಡಿದರು. ಹುಳಿಯಾರು ಹೋಬಳಿ ಬೆಳ್ಳಾರದ ಸರ್ಕಾರಿ ಶಾಲಾವರಣದಲ್ಲಿ ಸಾರ್ವಜನಿಕರಿಂದ ಮಂಗಳವಾರ ಡಿ.ಕೆ.ರವಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಹುಳಿಯಾರು ಹೋಬಳಿ ಬೆಳ್ಳಾರದ ಸರ್ಕಾರಿ ಶಾಲಾವರಣದಲ್ಲಿ ಸಾರ್ವಜನಿಕರಿಂದ ಮಂಗಳವಾರ ಅಯೋಜಿಸಿದ್ದ ಡಿ.ಕೆ.ರವಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾವಿನ ಬಗ್ಗೆ ಈಗಾಗಲೇ ಸಿಬಿಐ ತನಿಖೆಗೆ ಸರ್ಕಾರ ಮುಂದಾಗಿದ್ದು ಶೀಘ್ರವೇ ನಿಸ್ಪಕ್ಷಪಾತ ತನಿಖೆಯಿಂದ ಸತ್ಯ ಹೊರಬೀಳಲಿದ್ದು , ಅಲ್ಲಿಯವರೆಗೂ ಎಲ್ಲರೂ ತಾಳ್ಮೆಯಿಂದಿರುವಂತೆ ಕೋರಿದರು. ಈ ಸಂದರ್ಭದಲ್ಲಿ ಪವನ್,ರಾಘವೇಂದ್ರ,ಚಿದಾನಂದ,ಗಿರೀಶ್ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

ಭಗತ್ ಸಿಂಗ್ ಯುವಪೀಳಿಗೆಗೆ ಮಾದರಿ

ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಿ ಸ್ವಾತಂತ್ರ ದೇಶವನ್ನಾಗಿ ಕಟ್ಟುವಲ್ಲಿ ಅನೇಕ ಮಹಾನ್ ವ್ಯಕ್ತಿಗಳು ಶ್ರಮಿಸಿದ್ದು ಅಂತಹ ವ್ಯಕ್ತಿಗಳಲ್ಲಿ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡಿದ್ದ ಭಗತ್ ಸಿಂಗ್ ಸಹ ಒಬ್ಬರಾಗಿದ್ದು ಅವರು ಆದರ್ಶಗಳು ಇಂದಿನ ಯುವಪೀಳಿಗೆಗೆ ಮಾದರಿಯಾಗಿವೆ ಎಂದು ನಿವೃತ್ತ ಶಿಕ್ಷಕ ಹು.ಲ.ವೆಂಕಟೇಶ್ ತಿಳಿಸಿದರು. ಹುಳಿಯಾರಿನ ಕಿಯೋನಿಕ್ಸ್ ಯುವ ಡಾಟ್ ಕಾಮ್ ಕಂಪ್ಯೂಟರ್ ಕೇಂದ್ರದಲ್ಲಿ ಭಗತ್ ಸಿಂಗ್ ಅವರ ಸ್ಮರಣಾ ಕಾರ್ಯಕ್ರಮ ನಡೆಸಲಾಯಿತು. ಹುಳಿಯಾರಿನ ಕಿಯೋನಿಕ್ಸ್ ಯುವ ಡಾಟ್ ಕಾಮ್ ಕಂಪ್ಯೂಟರ್ ಕೇಂದ್ರದಲ್ಲಿ ಅಯೋಜಿಸಿದ್ದ ಭಗತ್ ಸಿಂಗ್ ಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಗತ್ ಸಿಂಗ್ ಅಹಿಂಸಾವಾದಿಯಾಗಿದ್ದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅವರು ಕ್ರಾಂತಿಯ ಮಾರ್ಗ ಹಿಡಿದರೂ ಸಹ ಹಿಂಸೆ ಮಾಡಲಿಲ್ಲ. ತಾನೂ ಅಹಿಂಸಾ ಮಾರ್ಗದಿಂದಲೇ ಬ್ರಿಟಿಷರ ವಿರುದ್ದ ಹೋರಾಡುವೆ ಎಂಬ ಛಲಹೊಂದಿದ್ದ ಮಹಾನ್ ವ್ಯಕ್ತಿಯಾಗಿದ್ದರು ಎಂದರು. ಎಬಿವಿಪಿ ಮುಖಂಡ ಹಾಗೂ ಉಪನ್ಯಾಸಕ ನರೇಂದ್ರಬಾಬು ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಅವರು ತಮ್ಮದೇ ಆದ ಛಾಪು ಮೂಡಿಸಿದ್ದು ಅವರ ಬಗ್ಗೆ ರಚಿತವಾಗಿರುವ ಲೇಖನಗಳನ್ನು ಓದುವಾಗ ಮೈರೋಮಾಂಚನವಾಗುತ್ತದೆ ಎಂದರು. ಭಗತ್ ಸಿಂಗ್ ದಕ್ಷ ಹಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದು ಬ್ರಿಟಿಷಯ ಯಾವುದೇ ಆಮಿಷಕ್ಕೂ ಒಳಗಾಗದೆ ತನ್ನ ಜನ್ಮಭೂಮಿಯ

ದಸೂಡಿ ಆಂಜನೇಯಸ್ವಾಮಿ ಜಾತ್ರೆ

ಹುಳಿಯಾರು  ಹೋಬಳಿ ದಸೂಡಿ ಗ್ರಾಮದ ಶೀ ಆಂಜನೇಯಸ್ವಾಮಿ ಜಾತ್ರಾಮಹೋತ್ಸವ ಹಾಗೂ ದನಗಳ ಜಾತ್ರೆ (ತಾ.೨೬) ಗುರುವಾರದಿಂದ ಪ್ರಾರಂಭಗೊಳ್ಳಲಿದ್ದು ತಾ.೫ರ ಭಾನುವಾರದವರೆಗೆ ಹನ್ನೊಂದು ದಿನಗಳ ಕಾಲ ನಡೆಯಲಿದೆ. ತಾ.೨೬ರ ಗುರುವಾರ ಆಂಜನೇಯಸ್ವಾಮಿ ಮೂಲವಿಗ್ರಹಕ್ಕೆ ಅಂಕುರಾರ್ಪಣೆ,ಚಂದ್ರಮಂಡಲೋತ್ಸವ ಹಾಗೂ ಉತ್ಸವ ಮೂರ್ತಿಗೆ ಅಂಕುರಾರ್ಪಣೆ ,ತಾ.೨೭ರ ಶುಕ್ರವಾರ ಬೆಳಿಗ್ಗೆ ಧ್ವಜಾರೋಹಣ , ಅಡ್ಡಪಲ್ಲಕ್ಕಿ ಉತ್ಸವ ನಡೆದು ರಾತ್ರಿ ಸರ್ಪವಾಹನೋತ್ಸವ ನಡೆಯಲಿದೆ.ತಾ.೨೮ರ ಶನಿವಾರ ಇಂದ್ರಜಿತುವಾಹನೋತ್ಸವ,ತಾ.೨೯ರ ಭಾನುವಾರ ಬೆಳಿಗ್ಗೆ ಅಭಿಷೇಕ,ಸಹಸ್ರನಾಮ ಪೂಜೆ,ಅಷ್ಟೋತ್ತರ, ಪ್ರಸಾದವಿನಿಯೋಗ ನಂತರ ರಾಮೋತ್ಸವ ಪಾನಕಪೂಜೆ,ಭಜನಾ ಕಾರ್ಯಕ್ರಮ, ಮಧ್ಯಾಹ್ನ ನೂರೊಂದೆಡೆ ಸೇವೆ,ಮಹಾಸಂತರ್ಪಣೆ ನಡೆದು ಅದೇ ದಿನ ಸಂಜೆ ಗೊಯ್ಡಗೆರೆದುರ್ಗಮ್ಮದೇವರ ಆಗಮನವಾಗಲಿದೆ. ತಾ.೩೦ರ ಸೋಮವಾರ ಬೆಳಗಿನ ಜಾವ ಗಜವಾಹನೋತ್ಸವ.ಶ್ರೀ ಸ್ವಾಮಿಯ ಪುರ ಪ್ರವೇಶ,ತಾ.೩೧ರ ಮಂಗಳವಾರ ಬೆಳಗ್ಗೆ ಬ್ರಹ್ಮ ರಥೋತ್ಸವ ನಡೆದು ನಂತರ ಬ್ರಾಹ್ಮಣ ಸಂತರ್ಪಣೆ,ಪಾನಕಾನಿವಾರ ನಡೆದು ಇದೇ ದಿನ ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ತಾ.೧ರ ಬುಧವಾರ ಬ್ರಾಹ್ಮಣರಿಗೆ ಸಂತರ್ಪಣೆ ಹಾಗೂ ಕೊಠಾರೋತ್ಸವ, "ಮುಳ್ಳುಪಾದಿಕೆ ಸೇವೆ", ತಾ.೨ರ ಗುರುವಾರ ಮುಂಜಾನೆ ಹಾಲು ಪಲ್ಲಕ್ಕಿ ಉತ್ಸವ, ಮಂಗಳ ಸ್ನಾನ(ಓಕುಳಿ) ಪಾನಕ ಪೂಜೆ,ತಾ.೩ರ ಶುಕ್ರವಾರ ರಾತ್ರಿ ಮುತ್ತಿನಪಲ್ಲಕ್ಕಿ ಉತ್ಸವ, ಅನ್ನಸಂತರ್ಪಣೆ.

ಬಸ್ಸಿಗಾಗಿ ಬಸವಳಿದ ಜನ ಬೆಂಗ್ಳೂರ್ ಕಡೆ ಹೋಗ ಬಸ್ ಗಳೆಲ್ಲಾ ರಶೋ....ರಶ್

ಯುಗಾದಿ ಹಬ್ಬಕ್ಕೆಂದು ತಮ್ಮ ತಮ್ಮ ಊರುಗಳಿಗೆ ಆಗಮಿಸಿದ್ದ ಜನ ಹಬ್ಬ ಮುಗಿಸಿ ವಾಪಸ್ಸ್ ಬೆಂಗಳೂರಿಗೆ ಹೋಗಲು ಬಸ್ ಗಾಗಿ ಪರದಾಡುವಂತಾಗಿತ್ತು. ಪಟ್ಟಣದ ಬಸ್ ನಿಲ್ದಾಣ ರಾತ್ರಿಯಿಂದಲೇ ಹೆಚ್ಚು ಜನದಟ್ಟಣೆ ಉಂಟಾಗಿತ್ತಲ್ಲದೆ, ಬೆಂಗಳೂರು ಕಡೆ ಹೋಗುವ ಸರ್ಕಾರಿ ಹಾಗೂ ಖಾಸಗಿ ಬಸ್ ಗಳೆಲ್ಲಾ ತುಂಬಿ ಕಾಲಿಡಲು ಸ್ಥಳಾವಕಾಶವಿಲ್ಲದಾಗಿತ್ತು. ಹುಳಿಯಾರು ಬಸ್ ನಿಲ್ದಾಣಕ್ಕೆ ಬಂದ ಬಸ್ ಹತ್ತಲು ಪರದಾಡುತ್ತಿರುವ ಪ್ರಯಾಣಿಕರು. ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಸಾಕಷ್ಟು ಹಳ್ಳಿಯವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಯುಗಾದಿ ಹಬ್ಬದ ಆಚರಣೆಗಾಗಿ ಶುಕ್ರವಾರ ಆಗಮಿಸಿದ್ದರು. ಮನೆ ಮಂದಿಯಲ್ಲ ಸೇರಿ ಎರಡು ದಿನಗಳ ಕಾಲ ಹಬ್ಬ ಆಚರಿಸಿದ ಬಳಿಕ ವಾಪಸ್ಸ್ ಕೆಲಸಕ್ಕೆ ಹೋಗುವ ಸಲುವಾಗಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಂಗಳೂರುಕಡೆ ಹೊರಟಿದ್ದಾರೆ. ಪಟ್ಟಣದ ಅಕ್ಕಪಕ್ಕದ ಹಳ್ಳಿಯವರು ಬೆಂಗಳೂರಿಗೆ ಹೋಗಬೇಕೆಂದರೆ ಹುಳಿಯಾರು ಪಟ್ಟಣಕ್ಕೆ ಬಂದು ಹೋಗಬೇಕಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಹುಳಿಯಾರಿನಿಂದ ಬೆಂಗಳೂರಿಗೆ ತೆರಳುವ ಬಸ್ಸುಗಳು ಹೊಸದುರ್ಗದಿಂದಲೇ ಬರಬೇಕಿದ್ದು ಅಲ್ಲಿಂದ ಬರುವ ಬಸ್ ಗಳೆಲ್ಲಾ ಭರ್ತಿಯಾಗಿರುತ್ತಿದ್ದರಿಂದ ಪ್ರಯಾಣಿಕರು ಸೀಟಿಗಾಗಿ ಹರಸಾಹಸ ಪಡುವಂತಾಯಿತು. ಸೀಟ್ ಬೇಡ ನಿಂತುಕೊಂಡೆ ಹೋಗೋಣವೆಂದರೂ ಸಹ ಕಾಲಿಡಲು ಜಾಗವಿಲ್ಲದಂತೆ ಬಸ್ ಗಳು ರಶ್ ಆಗಿದ್ದವು. ಖಾಸಗಿ ಬಸ್ ಗಳು ಭಾನುವಾ

ರೈತಸಂಘಕ್ಕೆ ಮಹಿಳೆಯರ ಸೇರ್ಪಡೆ

ಹುಳಿಯಾರು  ಹೋಬಳಿ ಸೀಗೆಬಾಗಿ ಗ್ರಾಮದ ಹತ್ತಕ್ಕೂ ಅಧಿಕ ಮಂದಿ ಮಹಿಳೆಯರು ಕಾರ್ಯಕ್ರಮವೊಂದರಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ದೇವರಾಜು ಅವರ ಸಮ್ಮುಖದಲ್ಲಿ ರೈತಸಂಘಕ್ಕೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಸೇರ್ಪಡೆಯಾದರು. ಹುಳಿಯಾರು ಹೋಬಳಿ ಸೀಗೆಬಾಗಿಯ ಮಹಿಳೆಯರು ರೈತ ಸಂಘದ ಹಸಿರುಶಾಲು ಹೊದ್ದು ಸಂಘಕ್ಕೆ ಸೇರ್ಪಡೆಯಾದರು ರೈತ ಸಂಘದ ಹೋರಾಟದ ಹಾದಿ ಹಾಗೂ ರೈತರ ಬಗ್ಗೆ ಉತ್ತಮ ನಿಲುವುಗಳನ್ನು ಕೈಗೊಳ್ಳುವ ಮೂಲಕ ರೈತರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ರೈತಸಂಘ ಮುಂದಾಗಿದ್ದು, ರೈತರ ಸಂಘಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುವ ಮೂಲಕ ಸಂಘಕ್ಕೆ ಬಲ ನೀಡಬೇಕೆಂದು ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಕರೆನೀಡಿದರು. ಈ ವೇಳೆ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಧನಂಜಯರಾಧ್ಯ, ಸಂಚಾಲಕ ಶಂಕರಣ್ಣ, ತಾಲ್ಲೂಕ್ ಅಧ್ಯಕ್ಷ ಕೆ.ಪಿ.ಮಲ್ಲೇಶ್, ಹೋಬಳಿ ಘಟಕದ ಅಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಣ್ಣ, ಸಂಚಾಲಕರಾದ ಪಾತ್ರೆ ಸತೀಶ್,ಶಿವಣ್ಣ, ಹೂವಿನರಘು, ಸೇರಿದಂತೆ ಇತರರಿದ್ದರು.

ವರ್ಷತೊಡಕಿನ ಅಂಗವಾಗಿ ಪಾನಕವಿತರಣೆ

ಹುಳಿಯಾರು ಪಟ್ಟಣದ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಬಸವ ಸಮಿತಿ ಹಾಗೂ ಮಲ್ಲೇಶ್ವರ ಸ್ವಾಮಿ ದೇವಾಲಯ ಸಮಿತಿವತಿಯಿಂದ ಯುಗಾದಿ ವರ್ಷ ತೊಡಕಿನ ಅಂಗವಾಗಿ ಪಾನಕವಿತರಣೆ ಮಾಡಲಾಯಿತು. ಹುಳಿಯಾರಿನ ಶ್ರೀಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಯುಗಾದಿ ವರ್ಷತೊಡಕಿನಂದು ಸಾರ್ವಜನಿಕರಿಗೆ ಪಾನಕ ವಿತರಿಸಲಾಯಿತು. ಬೆಳಿಗ್ಗೆ ಸ್ವಾಮಿಗೆ ಅಭಿಷೇಕ , ಅರ್ಚನೆ ಹಾಗೂ ಮಹಾಮಂಗಳಾರತಿ ನಡೆಸಲಾಯಿತು. ನಂತರ ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಪಾನಕ ಪನಿವಾರ ವಿತರಿಸಲಾಯಿತು. ಈ ವೇಳೆ ದೇವಾಲಯ ಸಮಿತಿಯ ನಂಜುಂಡಯ್ಯ, ಪಟೇಲ್ ರಾಜ್ ಕುಮಾರ್,ಈಶ್ವರಪ್ಪ,ಮರುಳಪ್ಪ,ಷಡಕ್ಷರಿ ಸೇರಿದಂತೆ ಇತರರಿದ್ದರು.ಹೋಬಳಿಯ ಕೆಂಕೆರೆಯ ಹಳೆಮಠದಲ್ಲೂ ಸಹ ವರ್ಷ ತೊಡಕಿನಂದು ಸಾರ್ವಜನಿಕರಿಗೆ ಪಾನಕಪನಿವಾರ ವಿತರಿಸಲಾಯಿತು. 

ಡಿ.ಕೆ.ರವಿ ಕೇಸು ಸಿಬಿಐ ನಿಂದ ಸೂಕ್ತ ತನಿಖೆಯಾಗಲಿ

ಪ್ರಾಮಾಣಿಕ, ಜನಾನುರಾಗಿದ್ದ ಹಾಗೂ ದಕ್ಷ ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ ರವಿ ಅವರ ಸಾವಿನ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ನವರು ತ್ವರಿತವಾಗಿ ತನಿಖೆ ಕೈಗೊಂಡು ರವಿಅವರ ಸಾವಿನ ಹಿಂದಿನ ರಹಸ್ಯವನ್ನು ಪತ್ತೆ ಮಾಡುವಂತೆ ಆಗ್ರಹಿಸಿ ಹೋಬಳಿಯ ಯಗಚಿಹಳ್ಳಿಯ ಶ್ರೀವಿನಾಯಕ ಗೆಳೆಯರ ಬಳಗ ಹಾಗೂ ಸುತ್ತಮುತ್ತಲ ಹಳ್ಳಿಯವರು ಸೋಮವಾರ ಬೆಳಿಗ್ಗೆ ಪಾದಯಾತ್ರೆ ಮೂಲಕ ಪಟ್ಟಣದ ನಾಡಕಛೇರಿಯಲ್ಲಿಗೆ ಆಗಮಿಸಿ ಮನವಿಪತ್ರ ಸಲ್ಲಿಸಿದರು. ಹುಳಿಯಾರು ಹೋಬಳಿ ಯಗಚಿಹಳ್ಳಿಯ ಶ್ರೀವಿನಾಯಕ ಗೆಳೆಯರ ಬಳಗ ಹಾಗೂ ಸುತ್ತಮುತ್ತಲ ಹಳ್ಳಿಯವರು ಡಿ.ಕೆ.ರವಿ ಸಾವಿನ ರಹಸ್ಯವನ್ನು ಸಿಬಿಐ ನವರು ತ್ವರಿತವಾಗಿ ಬಯಲು ಮಾಡಲಿ ಎಂದು ಉಪತಹಸೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಯಗಚಿಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಿಂದ ಪಾದಯಾತ್ರೆ ಪ್ರಾರಂಭವಾಗಿ ಕಂಪನಹಳ್ಳಿ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸಿ, ರಾಂಗೋಪಾಲ್ ಸರ್ಕಲ್ ,ಬಿಎಚ್ ರಸ್ತೆ, ರಾಜ್ ಕುಮಾರ್ ರಸ್ತೆ,ಬಸ್ ನಿಲ್ದಾಣದಲ್ಲಿ ಸಂಚರಿಸಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಸಾಗಿದರು.ನಂತರ ನಾಢಕಛೇರಿಗೆ ಆಗಮಿಸಿದ ಪಾದಯಾತ್ರಿಗಳು ಉಪತಹಸೀಲ್ದಾರ್ ಸತ್ಯನಾರಾಯಣ ಅವರಿಗೆ ಮನವಿ ಪತ್ರಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಉಪತಹಸೀಲ್ದಾರ್ ಮಾತನಾಡಿ ತಮ್ಮ ಮನವಿಪತ್ರವನ್ನು ಮೇಲಾಧಿಕಾರಿಗಳಿಗೆ ಕಳುಹಿಸುವುದಾಗಿ ತಿಳಿಸಿದರು. ಪಾದಯಾತ್ರೆಯಲ್ಲಿ ವಕೀಲ ಕರಿಯಪ್ಪ,ಮಧುಸ

ಯುಗಾದಿ ವರ್ಷತೊಡಕು ಕೋಳಿ ಕೊಳ್ಳಲು ಮುಗಿಬಿದ್ದ ಜನ

ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷತೊಡಕು ಎಂದು ಆಚರಿಸಿಕೊಂಡು ಬರುವ ಪರಿಪಾಟವಿದ್ದು, ವರ್ಷ ತೊಡಕಿನಂದು ಖಾರದಊಟ ಸರ್ವೆ ಸಾಮಾನ್ಯವಾಗಿರುವ ಹಿನ್ನಲೆಯಲ್ಲಿ ಖಾರದ ಅಡುಗೆ ಅಂದರೆ ಮಾಂಸದ ಅಡುಗೆಗಾಗಿ ಕೋಳಿ ಕೊಂಡುಕೊಳ್ಳಲು ಮಾಂಸಾಹಾರಿಗಳು ಪಟ್ಟಣಕ್ಕೆ ಆಗಮಿಸಿದ್ದು ಕೋಳಿ ವ್ಯಾಪಾರ ಕಳೆಗಟ್ಟುವಂತೆ ಮಾಡಿತ್ತು. ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ ಇದೆ. ಕೋಳಿ ವ್ಯಾಪಾರ ; ಯುಗಾದಿ ಹಬ್ಬದ ಮೊದಲ ದಿನ ಎಲ್ಲರೂ ಒಬ್ಬಟ್ಟಿನ ಅಡುಗೆ ಮಾಡಿ ಹಬ್ಬ ಆಚರಿಸುವುದು ಒಂದೆಡೆಯಾದರೆ, ಗ್ರಾಮೀಣ ಭಾಗದಲ್ಲಿ ಯುಗಾದಿ ಹಬ್ಬದ ಮಾರನೆಯ ದಿನ ಮಾಂಸಹಾರಿ ವರ್ಗದ ಜನ ಈ ಹಬ್ಬವನ್ನು ಕುರಿ ಕೋಳಿ ಮಾಂಸದಿಂದ ಅಡುಗೆ ಮಾಡಿ ವರ್ಷದ ತೊಡಕಾಗಿ ಆಚರಿಸುತ್ತಾರೆ. ಮಾಂಸಾಹಾರಿಗಳು ಯುಗಾದಿ ದಿನಕ್ಕಿಂತ ವರ್ಷತೊಡಕಿನ ದಿನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಲ್ಲದೆ ಅಂದು ತಮಗೆ ಬೇಕಾದಷ್ಟು ಕೋಳಿ ,ಕುರಿ ಮಾಂಸವನ್ನು ಕೊಂಡು ತಂದು ಅದರ ಖಾದ್ಯ ಸಿದ್ದಗೊಳಿಸಿ ಸಂಬಂಧಿಕರನ್ನು ಹಾಗೂ ಸ್ನೇಹಿತರನ್ನು ಮನೆಗೆ ಕರೆದು ಊಣಬಡಿಸುವುದು ವಾಡಿಕೆಯಾಗಿದೆ. ಹಬ್ಬದ ಹೊಸ ತೊಡಕು ಪ್ರಯುಕ್ತ ಮುಂಜಾನೆಯಿಂದಲೆ ಪಟ್ಟಣದ ಕೋಳಿ ಅಂಗಡಿಗಳಲ್ಲ

ಆಡಂಬರದ ಮದುವೆಗಳ ಆಚರಣೆ ಬೇಡ : ಮುರುಘ ಶರಣರು ವಚನ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ

ಪ್ರಸ್ತುತದಲ್ಲಿ ಮದುವೆ ಸಮಾರಂಭಗಳು ಹೆಚ್ಚು ಆಡಂಬರದಿಂದ ನಡೆಯುತ್ತಿವೆ ಹೊರತು ಅದರಿಂದ ಯಾವುದೇ ರೀತಿಯ ಪ್ರಯೋಜವಾಗುತ್ತಿಲ್ಲ ಅಂತಹ ಆಡಂಬರದ ಮದುವೆಆಚರಣೆ ಮಾಡುವ ಬದಲು ಸರಳವಾಗಿ ಮದುವೆ ಸಮಾರಂಭಗಳನ್ನು ಕೈಗೊಳ್ಳುವಂತೆ ಚಿತ್ರದುರ್ಗ ಮುರುಘಮಠದ ಡಾ.ಶಿವಮೂರ್ತಿ ಮುರುಘ ಶರಣರು ಕರೆ ನೀಡಿದರು. ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಗ್ಯಾರಳ್ಳದಲ್ಲಿ ಮುರುಘಮಠದ ಡಾ.ಶಿವಮೂರ್ತಿ ಮುರುಘ ಶರಣ ಸಮ್ಮುಖದಲ್ಲಿ ವಚನಮಾಂಗಲ್ಯ ವಿವಾಹ ನಡೆಯಿತು ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಗ್ಯಾರಳ್ಳದ ಕೆ.ಪಿ.ಮಲ್ಲೇಶ್ ಅವರ ಮನೆಯಲ್ಲಿ ಭಾನುವಾರ ನಡೆದ ರೂಪಾ ಮತ್ತು ನವೀನ್ ಅವರ ವಚನಮಾಂಗಲ್ಯ ಕಲ್ಯಾಣ ಮಹೋತ್ಸವದಲ್ಲಿ ವಧುವರರಿಗೆ ಪ್ರತಿಜ್ಞಾವಿಧಿ ಬೋಧಿಸಿ ಆಶೀರ್ವಚನ ನೀಡಿ ಮಾತನಾಡಿದರು. ಬಸವಾದಿ ಶರಣರು ತಿಳಿಸಿರುವಂತೆ ಸಮಾಜದಲ್ಲಿ ಎಲ್ಲರೂ ಒಂದೇ ಹೆಣ್ಣು-ಗಂಡು ಇಬ್ಬರೂ ಸಮಾನರೇ ಆಗಿದ್ದು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ನಡೆಯುವುದೇ ಸಂಸಾರ ಎಂದು ತಿಳಿಸಿದರು. ಜೀವನದಲ್ಲಿ ಎಲ್ಲದಕ್ಕಿಂತ ಮುಖ್ಯ ಉತ್ತಮ ಆರೋಗ್ಯವಾಗಿದ್ದು ನಾವು ನಮ್ಮದೇಹದ ಆರೋಗ್ಯದ ಹೆಚ್ಚು ಗಮನಕೊಡಬೇಕು ಎಂದರಲ್ಲದೆ ಮಾನವರ ನಡುವಿನ ಸಂಬಂಧದಲ್ಲಿ ಬಿರುಕುಂಟಾಗುತ್ತಿದ್ದು ತಂದೆ,ತಾಯಿ,ಮಕ್ಕಳಲ್ಲಿ ಭಿನ್ನಾಭಿಪ್ರಾಯ ಮೂಡಿ ಸಂಸಾರಗಳಲ್ಲಿ ಸುಖಶಾಂತಿ ಕಣ್ಮರೆಯಾಗುತ್ತಿದೆ ಎಂದರು. ಸತಿಪತಿಗಳಿಬ್ಬರು ತಮ್ಮನ್ನು ತಾವು ಅರಿತು ಮತ್ತೊಬ್ಬರಿಗೆ ಆದರ್ಶವಾಗ

ಹುಳಿಯಾರು : ಯುಗಾದಿ ಹಬ್ಬಕ್ಕೆ ಸಿದ್ದತೆ ಎಲ್ಲೆಲ್ಲೂ ಬೇವಿನ ಹೂ ಕಂಪು

ನೂತನ ಸಂವತ್ಸರದ ಮೊದಲ ಹಬ್ಬವಾಗಿರುವ ಹಾಗೂ ರೈತಾಪಿ ಜನರ ಹೊಸವರ್ಷದ ಹಬ್ಬವಾಗಿ ಬಿಂಬಿತವಾಗಿರುವ ಯುಗಾದಿ ಹಬ್ಬದ ಆಚರಣೆಗೆ ಹುಳಿಯಾರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಸಡಗರದ ಸಿದ್ದತೆ ಕಂಡುಬಂತು. ಯುಗಾದಿಗೆ ಮಾವು ಬೇವಿನೊಂದಿಗೆ ಸಿದ್ದತೆ ನಡೆಸುತ್ತಿರುವ ರೈತ. ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಲು ಅಕ್ಕಪಕ್ಕದ ಹಳ್ಳಿಗಳಿಂದ ಜನ ಹಬ್ಬದ ಮುನ್ನಾದಿನವಾದ ಶುಕ್ರವಾರವೂ ಸಹ ಪಟ್ಟಣಕ್ಕೆ ಆಗಮಿಸಿದ್ದು ರಾಜ್ ಕುಮಾರ್ ರಸ್ತೆ, ರಂಗನಾಥಸ್ವಾಮಿ ದೇವಾಲಯ ರಸ್ತೆ ಹಾಗೂ ಬಸ್ ನಿಲ್ದಾಣದಲ್ಲಿ ಹೆಚ್ಚು ಜನದಟ್ಟಣೆ ಸೇರಿತ್ತು. ದಿನಸಿ ಹಾಗೂ ಬಟ್ಟೆ ಅಂಗಡಿಗಳಲ್ಲಿ ಜನರು ಜೇನುನೊಣದಂತೆ ಮುತ್ತಿಕೊಂಡಿದ್ದರಿಂದ ಅಂಗಡಿದಾರರಿಗೆ ಸ್ವಲ್ಪವೂ ವಿರಾಮವಿಲ್ಲದ ಹಾಗೆ ವ್ಯಾಪಾರ ನಡೆಯುತ್ತಿತ್ತು. ಈ ಭಾಗದ ಹೆಚ್ಚು ಜನ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಹಬ್ಬ ಹಿನ್ನಲೆಯಲ್ಲಿ ಆಗಮಿಸಿದ್ದರಿಂದ ಬೆಂಗಳೂರು ಕಡೆಯಿಂದ ಬರುವ ಬಸ್ ಗಳು ಸಹ ರಶ್ ಆಗಿದ್ದವು. ಪಟ್ಟಣದ ಮನೆಗಳಲ್ಲಿ ಹಬ್ಬಕ್ಕೆ ಸಿದ್ದತೆ ನಡೆದಿದ್ದು ಮಹಿಳೆಯರು ಮನೆಯ ಸ್ವಚ್ಚಗೊಳಿಸುವ ಕಾರ್ಯ ಮಾಡಿಕೊಂಡರೆ ಮನೆ ಯಜಮಾನರು ತೋಟಕ್ಕೆ ಹೋಗಿ ಮಾವಿನಸೊಪ್ಪು, ಬೇವಿನ ಹೂ ತರುವಲ್ಲಿ ಮುಂದಾಗಿದ್ದರು. ಸಂಜೆಯ ನಂತರ ಮಹಿಳೆಯರು ಮನೆ ಮುಂದೆ ಸಾರಿಸಿ ಬಗೆಬಗೆಯ ಬಣ್ಣದ ರಂಗೋಲಿ ಹಾಕಿದ್ದಲ್ಲದೆ ಹಬ್ಬದ ಶುಭಾಷಯದ ನುಡಿಗಳನ್ನು ಸಹ ಬರೆದಿದ್ದರು. ಕಳೆದ ವರ

ಶ್ರದ್ದಾಭಕ್ತಿಯಿಂದ ನಡೆದ ಶನೇಶ್ವರಸ್ವಾಮಿ ಉತ್ಸವ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಶ್ರೀಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿವತಿಯಿಂದ ಶ್ರೀ ಶನೇಶ್ವರಸ್ವಾಮಿಯ ೬೧ನೇ ವರ್ಷದ ಪಾನಕಪನಿವಾರ ಸೇವೆ ಅಂಗವಾಗಿ ಶುಕ್ರವಾರ ಮಧ್ಯಾಹ್ನ ಶನೇಶ್ವರಸ್ವಾಮಿ ಹಾಗೂ ಕಾಳಿಕಾಂಭದೇವಿಯ ಉತ್ಸವ ನಡೆಯಿತು. ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ಶ್ರೀ ಶನೇಶ್ವರಸ್ವಾಮಿಯ ೬೧ನೇ ವರ್ಷದ ಪಾನಕಪನಿವಾರ ಸೇವೆ ಅಂಗವಾಗಿ ಶ್ರೀಶನೇಶ್ವರಸ್ವಾಮಿ ಹಾಗೂ ಕಾಳಿಕಾಂಭದೇವಿಯ ಉತ್ಸವ ನಡೆಸಲಾಯಿತು. ಶ್ರೀಶನೇಶ್ವರಸ್ವಾಮಿ ಹಾಗೂ ಗ್ರಾಮದೇವತೆ ಶ್ರೀ ಕಾಳಮ್ಮ ದೇವರುಗಳನ್ನು ಮಂಟಪದಲ್ಲಿ ಕುಳ್ಳಿರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಮನೆಯವರು ದೇವರಿಗೆ ಹಣ್ಣುಕಾಯಿ ಮಾಡಿಸುವ ಮೂಲಕ ಆಶೀರ್ವಾದ ಪಡೆದರು. ನಂತರ ಊರಮುಂದಿನ ವಿಶಾಲ ಜಾಗದಲ್ಲಿ ಚಪ್ಪರಹಾಕಿ ನವಗ್ರಹಹೋಮ, ಸಹಸ್ರ ಬಿಲ್ಚಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದರು. ಮಹಾಮಂಗಳಾರತಿಯ ನಂತರ ಭಕ್ತಾರಿಗಾಗಿ ಸಿದ್ದಗೊಳಿಸಿದ್ದ ಬೆಲವತ್ತೆ ಹಣ್ಣಿನ ಪಾನಕ ಹಾಗೂ ಪನಿವಾರವನ್ನು ವಿತರಿಸಿದರು. ಈ ವೇಳೆ ನಾಟಕ ಮಂಡಳಿಯ ಕೆ.ಬಿ.ರಮೇಶ್, ಈಶ್ವರಯ್ಯ,ವರದಯ್ಯ, ಚನ್ನಬಸವಯ್ಯ, ಶರತ್, ಗಂಗಾಧರ್, ಬಾಬು, ಕಂಠೇಶ್,ಕೊಟ್ಟುರಯ್ಯ, ವಿರೂಪಾಕ್ಷ, ಶೇಖರಪ್ಪ, ಯುವರಾಜ,ಬಳ್ಳಾರಿಗಂಗಣ್ಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಪೌರಾಣಿಕ ನಾಟಕಗಳಿಗೆ ಪ್ರೋತ್ರಾಹ ನೀಡಿ : ಲೋಕೇಶ್

ಪ್ರಸ್ತುತದಲ್ಲಿ ವಿಭಿನ್ನ ಚಲನಚಿತ್ರಗಳು ಹೆಚ್ಚೆಚ್ಚು ಬಿಡುಗಡೆಯಾಗುತ್ತಿದ್ದು ಚಲನಚಿತ್ರಗಳನ್ನು ನೋಡಲು ಜನ ಮುಗಿಬೀಳುತ್ತಾರೆ ಹೊರತು ಪೌರಾಣಿಕ ಹಿನ್ನಲೆಯನ್ನು ಪ್ರತಿಬಿಂಬಿಸುವ ನಾಟಕಗಳನ್ನು ವೀಕ್ಷಿಸಲು ಪ್ರೇಕ್ಷಕರು ಬರುತ್ತಿಲ್ಲ ಹಾಗೂ ಪ್ರೋತ್ಸಾಹ ನೀಡುವವರ ಸಂಖ್ಯೆಯೂ ವಿರಳವಾಗಿದೆಯೆಂದು ಸಹಾಯಕ ಇಂಜಿನಿಯರ್ ಟಿ.ಎಲ್.ಲೋಕೇಶ್ ವಿಷಾಧಿಸಿದರು. ಹುಳಿಯಾರು ಹೋಬಳಿ ತೊರೆಮನೆಯ ಶ್ರೀ ಅಂತರಗಟ್ಟೆ ಕರಿಯಮ್ಮದೇವಿ ಕೃಪಾಪೋಷಿತ ನಾಟಕ ಮಂಡಳಿವತಿಯ ಕಲಾವಿದರು ಅಭಿನಯಿಸಿದ ಶ್ರೀರಾಮಪಟ್ಟಾಭಿಷೇಕ ಪೌರಾಣಿಕ ನಾಟಕದ ದೃಶ್ಯ. ಹುಳಿಯಾರು ಹೋಬಳಿ ತೊರೆಮನೆಯಲ್ಲಿ ಶ್ರೀ ಅಂತರಗಟ್ಟೆ ಕರಿಯಮ್ಮದೇವಿ ಕೃಪಾಪೋಷಿತ ನಾಟಕ ಮಂಡಳಿವತಿಯಿಂದ ಅಯೋಜಿಸಿದ್ದ ಶ್ರೀರಾಮಪಟ್ಟಾಭಿಷೇಕ ಅಥವಾ ಪಾತಾಳಹೋಮ ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೌರಾಣಿಕ ನಾಟಕಗಳು ಸಾಮಾಜಿಕ ಮೌಲ್ಯಗಳನ್ನು ತಿಳಿಸುವ ಹಾಗೂ ಹತ್ತಾರು ವರ್ಷಗಳ ಹಿಂದೆ ನಡೆದ ಹಲವು ಐತಿಹಾಸಿಕ ಘಟನೆಗಳನ್ನು ಪ್ರಚುರಪಡೆಸುವಂತವಾಗಿವೆ ಎಂದರು. ಈ ಹಿಂದೆ ಪ್ರತಿಯೊಂದು ಹಳ್ಳಿಗಳಲ್ಲೂ ನಾಟಕ ಮಂಡಲಿ ಕಟ್ಟಿಕೊಂಡು, ನಾಟಕ ಅಭಿನಯಿಸಲು ಜನ ಹೆಚ್ಚು ಮುಂದುಬರುತ್ತಿದ್ದರು ಆದರೆ ಇದೀಗ ನಾಟಕಗಳನ್ನು ಕಲಿಯಲು ಯುವಪೀಳಿಗೆ ಮುಂದೆಬಾರದೆ ನಾಟಕ ಪ್ರದರ್ಶನ ಕ್ಷಿಣಿಸುವಂತಾಗಿದೆ ಎಂದರು. ಈ ವೇಳೆ ಭಾಗವತರಾದ ಹೊಸಹಳ್ಳಿ ನಾಗೋಜಿರಾವ್, ಕುರ

ಕೆಂಕೆರೆಯಲ್ಲಿ ಶನೇಶ್ವರಸ್ವಾಮಿಯ ಪಾನಕಪನಿವಾರ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಶ್ರೀಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿವತಿಯಿಂದ ಶ್ರೀ ಶನೇಶ್ವರಸ್ವಾಮಿಯ ೬೧ನೇ ವರ್ಷದ ಪಾನಕಪನಿವಾರ ಸೇವೆ (ತಾ.೨೦) ಶುಕ್ರವಾರ ಬೆಳಿಗ್ಗೆ ನಡೆಯಲಿದೆ. ಇದರ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಶ್ರೀಶನೇಶ್ವರಸ್ವಾಮಿ ಹಾಗೂ ಗ್ರಾಮದೇವತೆ ಶ್ರೀ ಕಾಳಮ್ಮ ದೇವರುಗಳ ಉತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು ನಂತರ ದೇವರುಗಳ ಸಮ್ಮುಖದಲ್ಲಿ ನವಗ್ರಹಹೋಮ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಮಹಾಮಂಗಳಾರತಿಯ ನಂತರ ಆಗಮಿಸಿದ ಭಕ್ತಾಧಿಗಳಿಗೆ ಪಾನಕಪನಿವಾರ ವಿತರಿಸಲಿದ್ದು ಗ್ರಾಮದ ಸುತ್ತಮುತ್ತಲಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ನಾಟಕ ಮಂಡಳಿಯವರು ಕೋರಿದ್ದಾರೆ.

ಹುಳಿಯಾರು: ಯುಗಾದಿ ಹಬ್ಬಸಂತೆ ಬಲು ಜೋರು

ಹಿಂದೂ ಸಂಪ್ರದಾಯದ ಪ್ರಕಾರ ಹೊಸವರ್ಷವಾಗಿರುವ ಯುಗಾದಿಹಬ್ಬದ ಆಚರಣೆ ಅಂಗವಾಗಿ ಪಟ್ಟಣದಲ್ಲಿ ಗುರುವಾರ ನಡೆದ ಹಬ್ಬಸಂತೆ ಬಲು ಜೋರಾಗಿತ್ತು. ಸಂತೆಗೆ ಹಳ್ಳಿಗಳ ಜನ ತಂಡೋಪ ತಂಡವಾಗಿ ಆಗಮಿಸಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುವಲ್ಲಿ ಮಗ್ನರಾಗಿದ್ದರು.  ಹುಳಿಯಾರಿನಲ್ಲಿ ಹಬ್ಬದ ಅಂಗವಾಗಿ ನಡೆದ ಹಬ್ಬ ಸಂತೆಯಲ್ಲಿ ಉಡುದಾರ ಮಾಡುತ್ತಿರುವುದು. ಹಬ್ಬಸಂತೆಯಲ್ಲಿ ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನು ಕೊಂಡು ವಾಪಸ್ಸ್ ಹಿಂತಿರುಗುತ್ತಿರುವ ಜನರು. ಪಟ್ಟಣದ ಗಾಂಧಿಪೇಟೆ, ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಸಂತೆ ಸೇರಿದ್ದು ಎಲ್ಲಿ ಕಣ್ಣು ಹಾಯಿಸಿದರೂ ಜನರೇ ಕಾಣಿಸುತ್ತಿದ್ದರು. ಸಂತೆಯಲ್ಲಿನ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳ ಬಳಿ ಹೆಚ್ಚು ಜನ ಜಮಾಯಿಸಿದ್ದರಲ್ಲದೆ, ತರಕಾರಿ ಅಂಗಡಿ, ಹಣ್ಣು, ಹೂ ಅಂಗಡಿಗಳಲ್ಲೂ ಸಹ ಮಾರಾಟ ಜೋರಾಗಿತ್ತು. ಯುಗಾದಿ ಹಬ್ಬದಂದು ಹೊಸಬಟ್ಟೆ ತೊಡುವ ಸಂಪ್ರದಾಯ ನಮ್ಮ ಹಳ್ಳಿಗರಲಿದ್ದು ಹಬ್ಬದ ದಿನ ಸಂಪೂರ್ಣ ಹೊಸದನ್ನು ಹಾಕಿಕೊಳ್ಳಬೇಕೆಂಬ ದೃಷ್ಠಿಯಿಂದ ಉಡುದಾರವನ್ನು ಸಹ ಕೊಂಡುಕೊಳ್ಳುತ್ತಿದ್ದು ಕಂಡುಬಂತು. ಕಳೆದ ಹತ್ತು ವರ್ಷದಿಂದ ಉಡುದಾರದ ವ್ಯಾಪಾರ ಮಾಡುತ್ತಿದ್ದೇನೆ ಈ ಮೊದಲು ವ್ಯಾಪಾರ ಚೆನ್ನಾಗಿತ್ತು ಇತ್ತೀಚಿನ ದಿನಗಳಲ್ಲಿ ವ್ಯಾಪಾರ ಕುಸಿದಿದೆ ಅದರೂ ಹಿಂದಿನಿಂದ ಮಾಡಿಕೊಂಡು ಬಂದಿರುವುದರಿಂದ ಬಿಡದೆ ಉಡುದಾರದ ವ್ಯಾಪಾರ ಮಾಡುತ್ತಿದ್ದೇನೆ: ಕಲ್ಲಹಳ್ಳಿಯ

ಶಂಕರಪುರ ಬಡಾವಣೆ: ಚರಂಡಿತುಂಬಾ ಹೂಳು, ದುರ್ನಾತ

ಹುಳಿಯಾರು ಪಟ್ಟಣದ ಶಂಕರಪುರ ಬಡಾವಣೆಯಲ್ಲಿನ ಚರಂಡಿಗಳ ತುಂಬೆಲ್ಲಾ ಕಸ,ಕಡ್ಡಿ ಸೇರಿದಂತೆ ಇನ್ನಿತ ತ್ಯಾಜ್ಯವಸ್ತುಗಳು ತುಂಬಿಕೊಂಡು ನೀರು ಹರಿಯದೆ ದುರ್ನಾತ ಬೀರುತ್ತಿದ್ದು ಜನರು ಮೂಗು ಮುಚ್ಚಿಕೊಂಡು ಸಂಚರಿಸುವಂತ ದುಸ್ಥಿತಿ ನಿರ್ಮಾಣವಾಗಿದೆ. ಚರಂಡಿಗಳನ್ನು ಸ್ವಚ್ಚಗೊಳಿಸಿ ತಿಂಗಳುಗಳೇ ಕಳೆದಿದ್ದು ಬಡಾವಣೆಯಲ್ಲಿ ಹಂದಿಗಳ ಉಪಟಳ ಹೆಚ್ಚಾಗಿದ್ದು ಚರಂಡಿ ತುಂಬೆಲ್ಲಾ ಹಂದಿಗಳೇ ಕಂಡುಬರುತ್ತವೆ. ಅಲ್ಲದೆ ಮನೆಯ ಗೇಟನ್ನು ಹಾಕದಿದ್ದರೆ ಹಂದಿಗಳು ಮನೆ ಒಳಗೆ ಬರುತ್ತವೆ. ಮಕ್ಕಳುಮರಿ ಓಡಾಡುವುದಕ್ಕು ಹೆದರುವಂತಾಗಿದೆ ಎಂದು ಇಲ್ಲಿನ ಮಹಿಳೆಯರು ಪಂಚಾಯ್ತಿಯಲ್ಲಿಗೆ ಆಗಮಿಸಿ ಪಿಡಿಓ ಅವರನ್ನು ಪ್ರಶ್ನಿಸಿದರಲ್ಲದೆ ಖುದ್ದು ಪಿಡಿಓ ಅವರನ್ನೇ ಸ್ಥಳಕ್ಕೆ ಕರೆದುಕೊಂಡು ಹೋಗಿ ವಾಸ್ತವಾಂಶ ವೀಕ್ಷಿಸುವಂತೆ ಪಟ್ಟು ಹಿಡಿದರು. ಹುಳಿಯಾರಿನ ಶಂಕರಪುರ ಬಡಾವಣೆಯಲ್ಲಿ ಹೂಳುತುಂಬಿಕೊಂಡಿರುವ ಚರಂಡಿಯನ್ನು ಪಿಡಿಓ ಗೆ ತೋರಿಸುತ್ತಿರುವ ನಿವಾಸಿಗಳು. ಪಿಡಿಓ ಹಾಗೂ ಅಧ್ಯಕ್ಷರನ್ನು ಶಂಕರಪುರ ಬಡಾವಣೆಗೆ ಕರೆದುಕೊಂಡು ಬಂದ ನಿವಾಸಿಗಳು ಹಂದಿಗಳಿಂದ ಉಂಟಾಗಿರುವ ಅನೈರ್ಮಲ್ಯ ತೋರಿಸಿದರಲ್ಲದೆ, ಚರಂಡಿಯಲ್ಲಿ ಹೂಳು ತುಂಬಿಕೊಂಡು ನೀರು ಹರಿಯದೆ ಅಲ್ಲೇ ನಿಂತು ಸೊಳ್ಳೆಗಳಿಗೆ ಆಶ್ರಯ ತಾಣವಾಗಿರುವುದನ್ನು ತೋರಿಸಿದರು. ಅಲ್ಲದೆ ಈ ಬಡಾವಣೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಹಂದಿಗಳಿದ್ದು ಮುಂಜಾನೆ ಸಮಯದಲ್ಲಿ ಸಾಲುಸಾಲಾಗಿ ಹಂದಿಗಳು ಮನೆ ಮುಂದೆ ಓಡಾಡುತ್ತವ