ವಿಷಯಕ್ಕೆ ಹೋಗಿ

ಯುಗಾದಿ ವರ್ಷತೊಡಕು ಕೋಳಿ ಕೊಳ್ಳಲು ಮುಗಿಬಿದ್ದ ಜನ

ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷತೊಡಕು ಎಂದು ಆಚರಿಸಿಕೊಂಡು ಬರುವ ಪರಿಪಾಟವಿದ್ದು, ವರ್ಷ ತೊಡಕಿನಂದು ಖಾರದಊಟ ಸರ್ವೆ ಸಾಮಾನ್ಯವಾಗಿರುವ ಹಿನ್ನಲೆಯಲ್ಲಿ ಖಾರದ ಅಡುಗೆ ಅಂದರೆ ಮಾಂಸದ ಅಡುಗೆಗಾಗಿ ಕೋಳಿ ಕೊಂಡುಕೊಳ್ಳಲು ಮಾಂಸಾಹಾರಿಗಳು ಪಟ್ಟಣಕ್ಕೆ ಆಗಮಿಸಿದ್ದು ಕೋಳಿ ವ್ಯಾಪಾರ ಕಳೆಗಟ್ಟುವಂತೆ ಮಾಡಿತ್ತು.


ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ ಇದೆ.
ಕೋಳಿ ವ್ಯಾಪಾರ ; ಯುಗಾದಿ ಹಬ್ಬದ ಮೊದಲ ದಿನ ಎಲ್ಲರೂ ಒಬ್ಬಟ್ಟಿನ ಅಡುಗೆ ಮಾಡಿ ಹಬ್ಬ ಆಚರಿಸುವುದು ಒಂದೆಡೆಯಾದರೆ, ಗ್ರಾಮೀಣ ಭಾಗದಲ್ಲಿ ಯುಗಾದಿ ಹಬ್ಬದ ಮಾರನೆಯ ದಿನ ಮಾಂಸಹಾರಿ ವರ್ಗದ ಜನ ಈ ಹಬ್ಬವನ್ನು ಕುರಿ ಕೋಳಿ ಮಾಂಸದಿಂದ ಅಡುಗೆ ಮಾಡಿ ವರ್ಷದ ತೊಡಕಾಗಿ ಆಚರಿಸುತ್ತಾರೆ. ಮಾಂಸಾಹಾರಿಗಳು ಯುಗಾದಿ ದಿನಕ್ಕಿಂತ ವರ್ಷತೊಡಕಿನ ದಿನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಲ್ಲದೆ ಅಂದು ತಮಗೆ ಬೇಕಾದಷ್ಟು ಕೋಳಿ ,ಕುರಿ ಮಾಂಸವನ್ನು ಕೊಂಡು ತಂದು ಅದರ ಖಾದ್ಯ ಸಿದ್ದಗೊಳಿಸಿ ಸಂಬಂಧಿಕರನ್ನು ಹಾಗೂ ಸ್ನೇಹಿತರನ್ನು ಮನೆಗೆ ಕರೆದು ಊಣಬಡಿಸುವುದು ವಾಡಿಕೆಯಾಗಿದೆ.
ಹಬ್ಬದ ಹೊಸ ತೊಡಕು ಪ್ರಯುಕ್ತ ಮುಂಜಾನೆಯಿಂದಲೆ ಪಟ್ಟಣದ ಕೋಳಿ ಅಂಗಡಿಗಳಲ್ಲಿ ಮಾಂಸದ ವ್ಯಾಪಾರ ಪ್ರಾರಂಭಗೊಂಡು ಫಾರಂಕೋಳಿ ಕೆಜಿಗೆ ೬೫ ರೂ, ಬಾಯ್ಲರ್ ಕೋಳಿ ಕೆಜಿಗೆ ೧೦೦ರೂನಂತೆ ವ್ಯಾಪಾರ ನಡೆಯುತ್ತಿತ್ತು. ಮಾಂಸದ ಅಡುಗೆ ಸಿದ್ದ ಪಡಿಸಲು ಬೇಕಾದ ಶುಂಠಿ,ಕೊತ್ತಂಬರಿ,ಸೌತೆಕಾಯಿ,ನಿಂಬೆಹಣ್ಣಿಗೂಸಹ ಬೇಡಿಕೆಯಿತ್ತು.
ಕಳೆದ ವರ್ಷದ ಹಬ್ಬದಲ್ಲಿ ಪಟ್ಟಣದ ಕೋಳಿ ಅಂಗಡಿಗಳ ಮುಂದೆ ಕೋಳಿ ಕೊಳ್ಳಲು ಅಕ್ಕ-ಪಕ್ಕದ ಹಳ್ಳಿಗಳ ಜನ ಹೆಚ್ಚಾಗಿ ಆಗಮಿಸಿದ್ದರಿಂದ ಜಾತ್ರೆವಾತಾವರಣ ಉಂಟಾಗಿತ್ತು. ಆದರೆ ಈ ಬಾರಿ ಬಸ್ ನಿಲ್ದಾಣದಲ್ಲಿ ಕೋಳಿ ಅಂಗಡಿಗಳು ಇಲ್ಲದ ಕಾರಣ ಕೋಳಿ ಕೊಳ್ಳಲು ಬಂದ ಕೆಲವರು ಅಂಗಡಿಯ ಹುಡುಕಾಟದಲ್ಲಿದ್ದು ಬಸ್ ನಿಲ್ದಾಣದಲ್ಲಿ ಅಂಗಡಿಗಳಿರುವ ಜಾಗವನ್ನು ಕೇಳಿ ಹೋಗುತ್ತಿದ್ದರು.
ವ್ಯಾಪಾರದಲ್ಲಿ ಇಳಿಕೆ : ಹುಳಿಯಾರು ಪಟ್ಟಣಕ್ಕೆ ಶ್ರೀರಾಂಪುರ, ಮತ್ತಿಘಟ್ಟ, ಮತ್ತೋಡ್ ಸೇರಿದಂತೆ ಸುಮಾರು ೨೦ ಕಿ.ಮೀ.ದೂರದ ಊರುಗಳಿಂದ ಜನ ಬಂದ ಕೋಳಿಗಳನ್ನು ಕೊಂಡುಕೊಳ್ಳುತ್ತಿದ್ದರು ಆದರೆ ಈ ಬಾರಿ ಬಸ್ ನಿಲ್ದಾಣದ ಅಂಗಡಿಗಳನ್ನು ತೆರವು ಮಾಡಿದ್ದರಿಂದ ಇಲ್ಲಿದ್ದ ಕೊಳಿ ಅಂಗಡಿಗಳೆಲ್ಲಾ ಚದುರಿದ್ದು ಜಾಗಸಿಗದೆ ಪರದಾಡುವಂತಾಗಿತ್ತು. ಇದನ್ನರಿತ ಜನರು ಹುಳಿಯಾರಿನಲ್ಲಿ ಕೋಳಿ ಸಿಗುತ್ತದೆಯೋ ಎಲ್ಲವೋ ಎಂದು ಹೊಸದುರ್ಗ, ಚಿ.ನಾ.ಹಳ್ಳಿ, ಹಿರಿಯೂರು ಕಡೆ ಹೋಗಿದ್ದು ಹುಳಿಯಾರಿನ ಅಕ್ಕಪಕ್ಕದ ಜನರನ್ನು ಬಿಟ್ಟರೆ ದೂರದೂರುಗಳ ಹಳೆ ಗಿರಾಕಿಗಳು ಸಹ ಬಾರದೆಯಿದ್ದು ಕೋಳಿ ವ್ಯಾಪಾರವನ್ನು ಕುಂದುವಂತೆ ಮಾಡಿದೆ. ಕಳೆದಬಾರಿ ಫಾರಂಕೋಳಿ ಪ್ರತಿ ಕೆಜಿಗೆ ೮೦ ರೂ ಇದ್ದರೂ ಸಹ ಜನ ಹೆಚ್ಚಾಗಿ ಬಂದು ಕೊಂಡುಕೊಳ್ಳುತ್ತಿದ್ದು ಆದರೆ ಈಬಾರಿ ಅದೇ ಫಾರಂಕೋಳಿ ಬೆಲೆ ಕೆಜಿಗೆ ೬೫ ರೂ ಆಗಿದ್ದರೂ ಕೊಳ್ಳುವ ಜನ ಕಡಿಮೆಯಾಗಿದ್ದಾರೆ.
ಬಸ್ ನಿಲ್ದಾಣದಿಂದ ಅಂಗಡಿಗಳನ್ನು ತೆಗೆಸಿದ ನಂತರ ಕೋಳಿ ಅಂಗಡಿಯವರು ಜಾಗ ಸಿಗದೆ ಚೆಲ್ಲಾಪಿಲ್ಲಿಯಾಗಿದ್ದು ಜನರು ಬರುತ್ತಾರೋ ಇಲ್ಲವೋ ಎಂದು ಕಳೆದ ಬಾರಿ ತಸಿಸಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನಾಲ್ಕರಿಂದ ಐದು ಲಾರಿ ಲೋಡ್ ಕೋಳಿಗಳನ್ನು ಮಾತ್ರ ತಮಿಳುನಾಡು, ಬಳ್ಳಾರಿ,ಹೊಸಪೇಟೆ ಭಾಗದಿಂದ ತರಿಸಿದ್ದೇವೆ. ತೆರವಿಗೂ ಮುನ್ನಾ ೭೦-೮೦ ಜನ ಕೋಳಿ ವ್ಯಾಪಾರ ಮಾಡುತ್ತಿದ್ದು ಹತ್ತು ಲಕ್ಷದವರೆಗೆ ವಹಿವಾಟು ನಡೆದಿತ್ತು ಆದರೆ ಈ ಬಾರಿ ಕೇವಲ ೩೦ ಜನ ಮಾತ್ರ ವ್ಯಾಪಾರ ಮಾಡುತ್ತಿದ್ದು ವಹಿವಾಟು ಐದಾರು ಲಕ್ಷಕ್ಕೆ ಕುಸಿದಿದೆ. ಹೋದ ಯುಗಾದಿಯಲ್ಲಿ ೭೦ ಜಾಲ ಕೋಳಿ ಮಾರಿದ್ದೆ ಆದರೆ ಈಸಲ ೩೦ಜಾಲ ಕೋಳಿ ಮಾರುವುದು ದುಸ್ಥರವಾಗಿದೆ ಎಂದು ಕೋಳಿ ಶ್ರೀನಿವಾಸ್ ತಿಳಿಸುತ್ತಾರೆ.
---------------------

ಬಸ್ ನಿಲ್ದಾಣದಲ್ಲಿದ್ದ ಅಂಗಡಿಗಳ ತೆರವಿನಿಂದಾಗಿ ಕೋಳಿ ಅಂಗಡಿಯವರು ದಿಕ್ಕಾಪಾಲಿಗಿದ್ದು ಈಗ ಅಂಗಡಿಗಳಿರುವ ಜಾಗ ಸರಿಯಾಗಿ ತಿಳಿಯದೆ ಕೋಳಿ ಕೊಳ್ಳಲು ಗಿರಾಕಿಗಳು ಬರುತ್ತಿಲ್ಲ. ಈ ಹಿಂದೆ ಬರುತ್ತಿದ್ದ ಸಾಕಷ್ಟು ಹಳೆ ಗಿರಾಕಿಗಳು ಇತ್ತ ಸುಳಿಯದೆ ವ್ಯಾಪಾರ ಡಲ್ಲಾಗಿದೆ : ಕೋಳಿ ವ್ಯಾಪಾರಿ ಕೋಳೀಶ್ರೀನಿವಾಸ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...