ವಿಷಯಕ್ಕೆ ಹೋಗಿ

ಮರೆಯಾದ ಹಳ್ಳಿಚಿತ್ರದ ರಾಮೇಗೌಡ

         ರಾಮೇಗೌಡ ಪಾತ್ರಧಾರಿಯಾಗಿ ತಮ್ಮದೆ ಆದ ಛಾಪು ಮೂಡಿಸಿದ್ದ ಹುಳಿಯಾರಿನ ಅನಂತರಾಮಯ್ಯನವರು ಜೀವನದ ಅಂಕಣದಿಂದಲೇ ಮರೆಯಾಗಿದ್ದಾರೆ.ತಮ್ಮ ಬದುಕಿನ ನಾಟಕವನ್ನು ಮುಗಿಸಿ ಮರೆಯಾದ ರಾಮಣ್ಣಯ್ಯ ಇನ್ನಿಲ್ಲ ಅನ್ನುವ ಧೈರ್ಯ ನನ್ನಲಿಲ್ಲ.ಅವರು ಯಾರ ಮನಸ್ಸಿನಿಂದಲ್ಲೂ ಮರೆಯಾಗದ ಕಾರಣ ಅವರು ಚಿರಂಜೀವಿಯಾಗಿದ್ದಾರೆ ಅಂತಾನೇ ಹೇಳಬಹುದು.

            ಹುಳಿಯಾರಿನ ಕೇಶವ ಕೃಪದ ಹಿರಿಯರಾದ ರಾಮಣ್ಣಯ್ಯ ಆ ಕುಟುಂಬದ ಕಿರಿಯರಿಂದ ಹಿರಿಯರವರೆಗೂ ತುಂಬು ಗೌರವಕ್ಕೆ ಪಾತ್ರರಾಗಿದ್ದರು. ಜೀವನಕ್ಕಾಗಿ ಹಲವಾರು ವೃತ್ತಿ ಮಾಡಿ ಎಲ್ಲದರಲ್ಲೂ ಸೈ ಎನ್ನಿಸಿಕೊಂಡಿದ್ದ ರಾಮಣ್ಣಯ್ಯ ನಟನಾಗಿ ರಾಮೇಗೌಡನ ಪಾತ್ರಧಾರಿಯಾಗಿ ನಮ್ಮ ಮನದಲ್ಲಿನ್ನೂ ಮಾಸದ ನೆನಪಾಗಿ ಕಾಡುತ್ತಾರೆ.ಹುಟ್ಟುತ್ತಾಅಣ್ಣತಮ್ಮಂದಿರು-ಬೆಳೆಯುತ್ತಾ ದಾಯಾದಿಗಳು ಎನ್ನುವಂತೆ ಅಣ್ಣತಮ್ಮಂದಿರಿಬ್ಬರೂ ಹುಣುಸೆಮರದ ಪಾಲಿಗಾಗಿ ಯಾವ ಮಟ್ಟಕ್ಕೆ ವೈಷಮ್ಯಕ್ಕೆ ಕಾರಣರಾಗುತ್ತಾರೆಂಬ ಹಳ್ಳಿಚಿತ್ರದಲ್ಲಿ ತಮ್ಮ ಮನೋಘ್ನ ಅಭಿನಯದಿಂದ ರಾಜ್ಯದ್ಯಂತ ನಾಟಕ ಪ್ರದರ್ಶನ ನೀಡಿ ಮನೆಮಾತಾಗಿದ್ದರು.
ಮರೆಯಾದ ಚೇತನ ಅನಂತರಾಮಯ್ಯನವರೊಂದಿಗೆ ನಾನು
ಆ ಕಾಲದಲ್ಲೆ ಬಾಲ್ ಬ್ಯಾಡ್ ಮಿಂಟನ್ ಆಟಗಾರರಾಗಿ ಹೆಸರಾಗಿದ್ದವರು.ಮತ್ತೋಡು ,ಕಂಚೀಪುರದ ಮೂಲಕ ಹೊಸದುರ್ಗಕ್ಕೆ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಮಯದಲ್ಲಿ ಗುತ್ತಿಗೆದಾರರಾಗಿ ಕಂಟ್ರಾಕ್ಟರ್ ರಾಮಣ್ಣ ಎಂದೆ ಗುರ್ತಿಸಿಕೊಂಡಿದ್ದ ರಾಮ್ಮಣ್ಣನವರು ಕೆಲದಿನಗಳ ಕಾಲ ಗೌರ್ನಮೆಂಟ್ ಬಸ್ ಏಜೆಂಟ್ ಆಗಿ ಕೂಡ ಕಾರ್ಯನಿರ್ವಹಿಸ್ಸಿದ್ದರು.ಆಗಿನ್ನು ಖಾಸಗಿ ಬಸ್ಸುಗಳು ಮನಾಪಲಿಯಾಗಿ ಸರ್ಕಾರಿ ಬಸ್ ಪ್ರಾರಂಭವಾಗಿದ್ದ ಕಾಲ.ಹುಳಿಯಾರಿನಿಂದ ಬೆಂಗಳೂರಿಗೆ 3.60 ಛಾರ್ಜು.ಹೊಸದಾಗಿ ಶುರುಮಾಡಿದರಿಂದ ಸರ್ಕಾರಿ ಬಸ್ಸಿಗೀ ಏಜೆಂಟರು ಬೇಕಾಗಿದ್ದು ನಮ್ಮ ರಾಮ್ಮಣ್ಣನವರು ಆ ಕೆಲಸ ಕೂಡ ಮಾಡಿದ್ದರು.ಅಲ್ಲದೆ ಈಗಿರುವ ಗಣಪತಿ ದೇವಾಲಯದ ಜಾಗದಲ್ಲಿ ಮಿಲ್ ಗೋಪಾಲಶೆಟ್ರು ಅವರ ನಾಗಲಕ್ಷ್ಮಿ ಟೂರಿಂಗ್ ಟಾಕೀಸ್ ಇತ್ತು.ಅದರ ಉಸ್ತುವಾರಿ ನೋಡೊ ಕೆಲಸ ಕೂಡ ನಿರ್ವಹಿಸಿದ್ದರು.
ಕನ್ನಡಪ್ರಭ ಸುದ್ದಿ

          ಇದರೊಟ್ಟಿಗೆ ಸಾಮಾಜಿಕ ಕೆಲಸದಲ್ಲಿ ಕೂಡ ಆಸಕ್ತಿ ಹೊಂದಿದ್ದ ರಾಮಣ್ಣನವರು ಶ್ರೀರಾಮ ಸೇವಾಸಂಘದಲ್ಲಿ ಸಕ್ತಿಯವಾಗಿದ್ದುಕೊಂಡು ಇದೇ ಹೆಸರಿನಲ್ಲಿ ವಿಪ್ರ ಸಮಾಜದಿಂದ ಛತ್ರ ಕಟ್ಟುವ ಯೋಜನೆ ಹೊಂದು ಲಾರಿ ಅನಂತಣ್ಣನವರ ಅಧ್ಯಕ್ಷರನ್ನಾಗಿ ನಮ್ಮಪ್ಪನವರನ್ನು ಉಪಾಧ್ಯಕ್ಷರನ್ನಾಗಿ ಮಾಡಿ ಸೀರಾರಾಮ ಪ್ರತಿಷ್ಟಾನ ರಚಿನೆಗೆ ಕಾರಣರಾಗಿದ್ದರು.ಅದರ ಗೌರವಾಧ್ಯಕ್ಷರಾಗಿದ್ದುಕೊಂಡೆ ಹುಳಿಯಾರಿಗೆ ಸುಸ್ಸಜ್ಜಿತ ಕಲ್ಯಾಣ ಮಂದಿರ ಕಟ್ಟಲು ನೆರವಾದರು.

ಅಂತ್ಯಸಂಸ್ಕಾರಕ್ಕೆ ಸುಸಜ್ಜಿತವಾದ ಜಾಗಯಿರಬೇಕೆನ್ನುವ ದೃಷ್ಟಿಯಿಂದ ಸಾರ್ವಜನಿಕರು ಹಾಘೂ ದಾನಿಗಳ ನೆರವಿನಿಂದ ಮುಕ್ತಿಧಾಮ ಕಟ್ಟಲು ಮುಂದಾಳತ್ವ ವಹಿಸಿದ್ದರು.ಅಲ್ಲದೆ ಅದೇ ಮುಕ್ತಿಧಾಮದಲ್ಲೆ ತಮ್ಮ ಅಂತ್ಯ ಸಂಸ್ಕಾರ ನೆರವೇರಬೇಕೆಂಬ ಆಶಯ ಹೊಂದಿದ್ದರು.ಅದರಂತೆ ಮಾರ್ಚ್ 9 ರ ಸೋಮವಾರ ತಿಪಟೂರಿನ ತಮ್ಮ ಮಗನ ಮನೆಯಲ್ಲಿ ನಿಧನರಾದ ರಾಮಣ್ಣಯನವರ ಅಂತ್ಯಸಂಸ್ಕಾರ ನಮ್ಮೂರಿನ ವಿಪ್ರಸಮಾಜದ ನೆರವಿನಿಂದ ನೆರವೇರಿದ್ದು ಅವರ ಕಡೆ ಆಸೆ ಪೂರೈಸಿದ ಅಲ್ಪತೃಪ್ತಿ ನಮ್ಮ ಸಮಾಜಕ್ಕಿದೆ.

                  ನಮ್ಮ ಕುಟುಂಬದ ಹಿತೈಷಿಯಾಗಿದ್ದ ರಾಮ್ಮಣ್ಣನವರು ನನ್ನ ಇಂದಿನ ಬೆಳವಣಿಗೆಗೆ ಕಾರಣೀಕರ್ತರು ಅಂತ ಹೇಳುವುದಕ್ಕೆ ನನಗೆ ಹೆಮ್ಮೆಯಿದೆ.ನನ್ನನ್ನು ಮೊದಲು ನಮ್ಮೂರ ಬ್ರಾಹ್ಮಣಸಮಾಜದ ಉಪಾಧ್ಯಕ್ಷನನ್ನಾಗಿ ಆನಂತರ ಅಧ್ಯಕ್ಷನನ್ನಾಗಿ ಮಾಡಲು ಇವರೇ ಕಾರಣರು.ಸಧ್ಯ ತಾಲ್ಲೂಕಿನ ಅಧ್ಯಕ್ಷನಾಗಿ ಜಿಲ್ಲೆಯಲ್ಲೂ ಗುರ್ತಿಸಿಕೊಳ್ಳಲೂ ಇವರ ಆಶಿರ್ವಾದವೇ ಕಾರಣ ಅಂತ ಸದಾ ನೆನೆಯುತ್ತಾ ಈ ಬರಹದ ಮೂಲಕ ನನ್ನ ಶ್ರದ್ಧಾಂಜಲಿ ಅರ್ಪಿಸುತ್ತಿರುವೆ......

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.