ವಿಷಯಕ್ಕೆ ಹೋಗಿ

ಮರೆಯಾದ ಹಳ್ಳಿಚಿತ್ರದ ರಾಮೇಗೌಡ

         ರಾಮೇಗೌಡ ಪಾತ್ರಧಾರಿಯಾಗಿ ತಮ್ಮದೆ ಆದ ಛಾಪು ಮೂಡಿಸಿದ್ದ ಹುಳಿಯಾರಿನ ಅನಂತರಾಮಯ್ಯನವರು ಜೀವನದ ಅಂಕಣದಿಂದಲೇ ಮರೆಯಾಗಿದ್ದಾರೆ.ತಮ್ಮ ಬದುಕಿನ ನಾಟಕವನ್ನು ಮುಗಿಸಿ ಮರೆಯಾದ ರಾಮಣ್ಣಯ್ಯ ಇನ್ನಿಲ್ಲ ಅನ್ನುವ ಧೈರ್ಯ ನನ್ನಲಿಲ್ಲ.ಅವರು ಯಾರ ಮನಸ್ಸಿನಿಂದಲ್ಲೂ ಮರೆಯಾಗದ ಕಾರಣ ಅವರು ಚಿರಂಜೀವಿಯಾಗಿದ್ದಾರೆ ಅಂತಾನೇ ಹೇಳಬಹುದು.

            ಹುಳಿಯಾರಿನ ಕೇಶವ ಕೃಪದ ಹಿರಿಯರಾದ ರಾಮಣ್ಣಯ್ಯ ಆ ಕುಟುಂಬದ ಕಿರಿಯರಿಂದ ಹಿರಿಯರವರೆಗೂ ತುಂಬು ಗೌರವಕ್ಕೆ ಪಾತ್ರರಾಗಿದ್ದರು. ಜೀವನಕ್ಕಾಗಿ ಹಲವಾರು ವೃತ್ತಿ ಮಾಡಿ ಎಲ್ಲದರಲ್ಲೂ ಸೈ ಎನ್ನಿಸಿಕೊಂಡಿದ್ದ ರಾಮಣ್ಣಯ್ಯ ನಟನಾಗಿ ರಾಮೇಗೌಡನ ಪಾತ್ರಧಾರಿಯಾಗಿ ನಮ್ಮ ಮನದಲ್ಲಿನ್ನೂ ಮಾಸದ ನೆನಪಾಗಿ ಕಾಡುತ್ತಾರೆ.ಹುಟ್ಟುತ್ತಾಅಣ್ಣತಮ್ಮಂದಿರು-ಬೆಳೆಯುತ್ತಾ ದಾಯಾದಿಗಳು ಎನ್ನುವಂತೆ ಅಣ್ಣತಮ್ಮಂದಿರಿಬ್ಬರೂ ಹುಣುಸೆಮರದ ಪಾಲಿಗಾಗಿ ಯಾವ ಮಟ್ಟಕ್ಕೆ ವೈಷಮ್ಯಕ್ಕೆ ಕಾರಣರಾಗುತ್ತಾರೆಂಬ ಹಳ್ಳಿಚಿತ್ರದಲ್ಲಿ ತಮ್ಮ ಮನೋಘ್ನ ಅಭಿನಯದಿಂದ ರಾಜ್ಯದ್ಯಂತ ನಾಟಕ ಪ್ರದರ್ಶನ ನೀಡಿ ಮನೆಮಾತಾಗಿದ್ದರು.
ಮರೆಯಾದ ಚೇತನ ಅನಂತರಾಮಯ್ಯನವರೊಂದಿಗೆ ನಾನು
ಆ ಕಾಲದಲ್ಲೆ ಬಾಲ್ ಬ್ಯಾಡ್ ಮಿಂಟನ್ ಆಟಗಾರರಾಗಿ ಹೆಸರಾಗಿದ್ದವರು.ಮತ್ತೋಡು ,ಕಂಚೀಪುರದ ಮೂಲಕ ಹೊಸದುರ್ಗಕ್ಕೆ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಮಯದಲ್ಲಿ ಗುತ್ತಿಗೆದಾರರಾಗಿ ಕಂಟ್ರಾಕ್ಟರ್ ರಾಮಣ್ಣ ಎಂದೆ ಗುರ್ತಿಸಿಕೊಂಡಿದ್ದ ರಾಮ್ಮಣ್ಣನವರು ಕೆಲದಿನಗಳ ಕಾಲ ಗೌರ್ನಮೆಂಟ್ ಬಸ್ ಏಜೆಂಟ್ ಆಗಿ ಕೂಡ ಕಾರ್ಯನಿರ್ವಹಿಸ್ಸಿದ್ದರು.ಆಗಿನ್ನು ಖಾಸಗಿ ಬಸ್ಸುಗಳು ಮನಾಪಲಿಯಾಗಿ ಸರ್ಕಾರಿ ಬಸ್ ಪ್ರಾರಂಭವಾಗಿದ್ದ ಕಾಲ.ಹುಳಿಯಾರಿನಿಂದ ಬೆಂಗಳೂರಿಗೆ 3.60 ಛಾರ್ಜು.ಹೊಸದಾಗಿ ಶುರುಮಾಡಿದರಿಂದ ಸರ್ಕಾರಿ ಬಸ್ಸಿಗೀ ಏಜೆಂಟರು ಬೇಕಾಗಿದ್ದು ನಮ್ಮ ರಾಮ್ಮಣ್ಣನವರು ಆ ಕೆಲಸ ಕೂಡ ಮಾಡಿದ್ದರು.ಅಲ್ಲದೆ ಈಗಿರುವ ಗಣಪತಿ ದೇವಾಲಯದ ಜಾಗದಲ್ಲಿ ಮಿಲ್ ಗೋಪಾಲಶೆಟ್ರು ಅವರ ನಾಗಲಕ್ಷ್ಮಿ ಟೂರಿಂಗ್ ಟಾಕೀಸ್ ಇತ್ತು.ಅದರ ಉಸ್ತುವಾರಿ ನೋಡೊ ಕೆಲಸ ಕೂಡ ನಿರ್ವಹಿಸಿದ್ದರು.
ಕನ್ನಡಪ್ರಭ ಸುದ್ದಿ

          ಇದರೊಟ್ಟಿಗೆ ಸಾಮಾಜಿಕ ಕೆಲಸದಲ್ಲಿ ಕೂಡ ಆಸಕ್ತಿ ಹೊಂದಿದ್ದ ರಾಮಣ್ಣನವರು ಶ್ರೀರಾಮ ಸೇವಾಸಂಘದಲ್ಲಿ ಸಕ್ತಿಯವಾಗಿದ್ದುಕೊಂಡು ಇದೇ ಹೆಸರಿನಲ್ಲಿ ವಿಪ್ರ ಸಮಾಜದಿಂದ ಛತ್ರ ಕಟ್ಟುವ ಯೋಜನೆ ಹೊಂದು ಲಾರಿ ಅನಂತಣ್ಣನವರ ಅಧ್ಯಕ್ಷರನ್ನಾಗಿ ನಮ್ಮಪ್ಪನವರನ್ನು ಉಪಾಧ್ಯಕ್ಷರನ್ನಾಗಿ ಮಾಡಿ ಸೀರಾರಾಮ ಪ್ರತಿಷ್ಟಾನ ರಚಿನೆಗೆ ಕಾರಣರಾಗಿದ್ದರು.ಅದರ ಗೌರವಾಧ್ಯಕ್ಷರಾಗಿದ್ದುಕೊಂಡೆ ಹುಳಿಯಾರಿಗೆ ಸುಸ್ಸಜ್ಜಿತ ಕಲ್ಯಾಣ ಮಂದಿರ ಕಟ್ಟಲು ನೆರವಾದರು.

ಅಂತ್ಯಸಂಸ್ಕಾರಕ್ಕೆ ಸುಸಜ್ಜಿತವಾದ ಜಾಗಯಿರಬೇಕೆನ್ನುವ ದೃಷ್ಟಿಯಿಂದ ಸಾರ್ವಜನಿಕರು ಹಾಘೂ ದಾನಿಗಳ ನೆರವಿನಿಂದ ಮುಕ್ತಿಧಾಮ ಕಟ್ಟಲು ಮುಂದಾಳತ್ವ ವಹಿಸಿದ್ದರು.ಅಲ್ಲದೆ ಅದೇ ಮುಕ್ತಿಧಾಮದಲ್ಲೆ ತಮ್ಮ ಅಂತ್ಯ ಸಂಸ್ಕಾರ ನೆರವೇರಬೇಕೆಂಬ ಆಶಯ ಹೊಂದಿದ್ದರು.ಅದರಂತೆ ಮಾರ್ಚ್ 9 ರ ಸೋಮವಾರ ತಿಪಟೂರಿನ ತಮ್ಮ ಮಗನ ಮನೆಯಲ್ಲಿ ನಿಧನರಾದ ರಾಮಣ್ಣಯನವರ ಅಂತ್ಯಸಂಸ್ಕಾರ ನಮ್ಮೂರಿನ ವಿಪ್ರಸಮಾಜದ ನೆರವಿನಿಂದ ನೆರವೇರಿದ್ದು ಅವರ ಕಡೆ ಆಸೆ ಪೂರೈಸಿದ ಅಲ್ಪತೃಪ್ತಿ ನಮ್ಮ ಸಮಾಜಕ್ಕಿದೆ.

                  ನಮ್ಮ ಕುಟುಂಬದ ಹಿತೈಷಿಯಾಗಿದ್ದ ರಾಮ್ಮಣ್ಣನವರು ನನ್ನ ಇಂದಿನ ಬೆಳವಣಿಗೆಗೆ ಕಾರಣೀಕರ್ತರು ಅಂತ ಹೇಳುವುದಕ್ಕೆ ನನಗೆ ಹೆಮ್ಮೆಯಿದೆ.ನನ್ನನ್ನು ಮೊದಲು ನಮ್ಮೂರ ಬ್ರಾಹ್ಮಣಸಮಾಜದ ಉಪಾಧ್ಯಕ್ಷನನ್ನಾಗಿ ಆನಂತರ ಅಧ್ಯಕ್ಷನನ್ನಾಗಿ ಮಾಡಲು ಇವರೇ ಕಾರಣರು.ಸಧ್ಯ ತಾಲ್ಲೂಕಿನ ಅಧ್ಯಕ್ಷನಾಗಿ ಜಿಲ್ಲೆಯಲ್ಲೂ ಗುರ್ತಿಸಿಕೊಳ್ಳಲೂ ಇವರ ಆಶಿರ್ವಾದವೇ ಕಾರಣ ಅಂತ ಸದಾ ನೆನೆಯುತ್ತಾ ಈ ಬರಹದ ಮೂಲಕ ನನ್ನ ಶ್ರದ್ಧಾಂಜಲಿ ಅರ್ಪಿಸುತ್ತಿರುವೆ......

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...