ಗ್ರಾ.ಪಂ ಕಟ್ಟಡ ಉದ್ಘಾಟನೆಗೆ ಹಾಜರಾಗದ ಜನಪ್ರತಿನಿಧಿಗಳು ,ಅಧಿಕಾರಿಗಳು ಸಂಜೆ ಉದ್ಘಾಟನಾ ಶಾಸ್ತ್ರ ಮುಗಿಸಿದ ತಾ.ಪಂ.ಅಧ್ಯಕ್ಷೆ
ಹುಳಿಯಾರು ಹೋಬಳಿ ಯಳನಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಗ್ರಾ.ಪಂ.ಕಟ್ಟಡ ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರದ ಉದ್ಘಾಟನೆ ಗುರುವಾರ ಬೆಳಿಗ್ಗೆ ನಡೆಯಬೇಕಿದ್ದು, ಸಂಜೆಯಾದರೂ ಆಹ್ವಾನಪತ್ರಿಕೆಯಲಿದ್ದ ಜನಪ್ರತಿನಿಧಿಗಳು ಯಾರು ಆಗಮಿಸದೆ ಕಾದುಕಾದು ಬೇಸತ್ತು ಸಂಜೆ ೬ರ ಸಮಯದಲ್ಲಿ ತಾ.ಪಂ.ಅಧ್ಯಕ್ಷೆಯಿಂದ ಉದ್ಘಟನಾಶಾಸ್ತ್ರ ನೆರವೇರಿಸಿದ್ದು ಇಂದಿನ ಘಟನೆ ತಾಲ್ಲೂಕಿನ ಗಡಿಭಾಗದ ಗ್ರಾಮಗಳ ಬಗ್ಗೆ ಆಡಳಿತಶಾಹಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಯಳನಡು ಗ್ರಾ.ಪಂ.ನ ನೂತನಕಟ್ಟಡದ ಉದ್ಘಾಟನೆಯಲ್ಲಿ ಜನಪ್ರತಿನಿಧಿಗಳ ಗೈರಿನಲ್ಲಿ ಉದ್ಘಾಟನೆ ನೆರವೇರಿಸಿದ ತಾ.ಪಂ.ಅಧ್ಯಕ್ಷೆ ಲತಾ. |
ಹುಳಿಯಾರು ಹೋಬಳಿಯ ಯಳನಡು ಗ್ರಾಮ ಗಡಿಭಾಗದಲಿದ್ದು ಒಟ್ಟು ೧೪ ಲಕ್ಷ ವೆಚ್ಚದಲ್ಲಿ ಗ್ರಾ.ಪಂ.ಕಟ್ಟಡ ನಿರ್ಮಿಸಲಾಗಿತ್ತು. ಸರ್ಕಾರಿ ಕಾರ್ಯಕ್ರಮವಾದ್ದರಿಂದ ಶಾಸಕರು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿ ಉದ್ಘಾಟನಾ ದಿನವನ್ನು ನಿಗದಿ ಪಡಿಸಲಾಗಿತ್ತು. ಶಿಷ್ಟಾಚಾರದಂತೆ ಸಚಿವರು,ಹಾಲಿಶಾಸಕರು, ಸಂಸದರು,ಇಬ್ಬರು ವಿಧಾನಪರಿಷತ್ ಸದಸ್ಯರು,ಜಿ.ಪಂ.ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಹೀಗೆ ಪ್ರತಿಯೊಬ್ಬರನ್ನು ಆಹ್ವಾನಪತ್ರಿಕೆಯಲ್ಲಿ ಮುದ್ರಿಸಿ ಎಲ್ಲರನ್ನು ಕಂಡು ಆಹ್ವಾನ ನೀಡಲಾಗಿತ್ತು.
ಯಳನಡು ಗ್ರಾ.ಪಂ.ನ ನೂತನಕಟ್ಟಡದ ಉದ್ಘಾಟನೆಗೆ ಸಿದ್ದಪಡಿಸಿದ್ದ ವೇದಿಕೆ. |
ಅದರಂತೆ ಇಂದು ಸಂಸದರು,ಶಾಸಕರ ನಿರೀಕ್ಷೆಯಲ್ಲಿ ವೇದಿಕೆಯನ್ನು ಸಿದ್ದಗೊಳಿಸಿದ್ದಲ್ಲದೆ, ಲಘು ಉಪಹಾರದ ವ್ಯವಸ್ಥೆ ಮಾಡಿಕೊಂಡಿದ್ದರು. ನಿಗದಿತ ಸಮಯ ಮೀರಿ ಗಂಟೆಗಳೇ ಕಳೆದರೂ ಸಹ ಆಗಹೀಗ ಎಂದು ನಂತರ ಪೋನ್ ಸಂಪರ್ಕಕ್ಕೆ ಯಾರೊಬ್ಬರೂ ಸಿಗದಂತಾಗಿ ಪರಿಪಾಟಲು ಪಡುವಂತಾಯಿತು.ಶಾಸಕರಿಂದಲೇ ಕಟ್ಟಡದ ಉದ್ಘಾಟನೆ ಮಾಡಿಸಬೇಕೆಂಬ ಹಂಬಲದಿಂದಿದ ಸಂಜೆಯವರೆಗೂ ಕಾದೇಕಾದರು. ಇನ್ನೇನು ಸೂರ್ಯ ಮುಳುಗಿ ಕತ್ತಲಾಗುವ ಸಮಯವಾಗಿತ್ತದೆಂದು ಅರಿತು ಕಾರ್ಯಕ್ರಮಕ್ಕೆಂದೆ ಆಗಮಿಸಿದ್ದ ತಾ.ಪಂ.ಅಧ್ಯಕ್ಷೆಯಿಂದ ಉದ್ಘಾಟನಾ ಶಾಸ್ತ್ರ ನೆರವೇರಿಸಿದರು. ಎಲ್ಲರ ವರ್ತನೆಯಿಂದ ಬೇಸತ್ತಿದ್ದ ಸಾರ್ವಜನಿಕರು ಒಬ್ಬರೂ ಇತ್ತಡೆ ತಲೆಹಾಕದೆ ಅವರಿಗಾಗಿ ಹಾಕಿದ್ದ ಛೇರ್ ಗಳು ಸಹ ಸಂಜೆಯವರೆಗೂ ಖಾಲಿಯೇ ಉಳಿದಿದ್ದವು.
ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿಯೇ ಕರಪತ್ರಗಳನ್ನು ಮಾಡಿಸಿ ಸಂಸದರಿಗೆ, ಶಾಸಕರಿಗೆ ಹಾಗೂ ಪಂಚಾಯ್ತಿಯ ಇಓ ಅವರಿಗೂ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ನೀಡಿ ಆಹ್ವಾನವಿತ್ತಿದ್ದರೂ ಸಹ ಯಾರೋಬ್ಬರು ಬಾರದಯಿದ್ದು ತಾ.ಪಂ.ಅಧ್ಯಕ್ಷರ ಹಾಗೂ ಸ್ಥಳೀಯ ಗ್ರಾ..ಪಂ.ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು.
ಈ ಬಗ್ಗೆ ಬೇಸರದಿಂದಲೇ ಮಾತನಾಡಿದ ತಾ.ಪಂ.ಅಧ್ಯಕ್ಷೆ ಶ್ರೀಮತಿ ಲತಾಕೇಶವಮೂರ್ತಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ರಾಜಕೀಯ ಮಾಡಬಾರದು, ಕಾರ್ಯಕ್ರಮಕ್ಕೆ ತಡವಾಗಿ ಬರುವುದಾಗಿ ಅಥವಾ ಬರುವುದಿಲ್ಲ ಎಂದು ತಿಳಿಸಬಹುದಾಗಿತ್ತು ಆದರೆ ಏನೂ ಹೇಳದೆ ಈರೀತಿ ಮಾಡುವುದು ಸರಿಯಲ್ಲ. ಇದರಿಂದ ಜನರ ಅಸಮಾಧಾನಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.
ಈವೇಳೆ ಗ್ರಾ.ಪಂ.ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಗಂಗಮ್ಮ, ತಾ.ಪಂ.ಸದಸ್ಯೆ ಜಯಲಕ್ಷ್ಮಮ್ಮ ಸೇರಿದಂತೆ ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ