ವಿಷಯಕ್ಕೆ ಹೋಗಿ

ಕಾರೇಹಳ್ಳಿ ಜಾತ್ರೆಯಲ್ಲಿ ರಾಸುಗಳ ಸಿಂಗಾರದ ಪರಿಕರಗಳ ಸದ್ದು

ವರದಿ: ಡಿ.ಆರ್.ನರೇಂದ್ರಬಾಬು
ಹುಳಿಯಾರು : ಎಲ್ಲೆಡೆ ಸುಗ್ಗಿಯ ಕೆಲಸ ಮುಗಿದಿದ್ದು ಸುಡು ಬೇಸಿಗೆಯಲ್ಲಿ ಕೃಷಿ ಚಟುವಟಿಕೆಗಳಿಂದ ಬಿಡುವು ಸಿಕ್ಕಿದ್ದು ಇನ್ನೇನಿದ್ದರೂ ಜಾತ್ರೆಗಳ ಸುಗ್ಗಿಯಾಗಿದೆ. ಜಾತ್ರೆಗಳು ಗ್ರಾಮೀಣ ಪ್ರದೇಶಗಳಲ್ಲಿ ಒಂದು ರೀತಿಯ ಪರಂಪರೆಯಾಗಿದ್ದು ಆಯಾ ಭಾಗದ ಆರಾಧ್ಯ ದೇವತೆಗಳನ್ನು ಹೊತ್ತು ಸಂಭ್ರಮಿಸುವ ಹಾಗೂ ಇದರ ನೆಪದಲ್ಲೇ ನೆಂಟರಿಷ್ಟರೆಲ್ಲಾ ಸೇರುವ ಆಚರಣೆಯಾಗಿದೆ.
ಕಾರೇಹಳ್ಳಿ ಜಾತ್ರೆಯಲ್ಲಿ ರಾಸುಗಳ ಸಿಂಗಾರದ ಪರಿಕರಗಳನ್ನು ಕೊಳ್ಳುತ್ತಿರುವ ರೈತರು
ಹೆಚ್ಚಿನ ಜಾತ್ರೆಗಳು ಅಯಾ ಭಾಗದ ಗ್ರಾಮದೇವತೆಗಳ ಆರಾಧನೆಗೆ ಸೀಮಿತವಾದರೆ ಮತ್ತೆ ಕೆಲವು ಜಾನುವಾರುಗಳ ಜಾತ್ರೆಯಾಗಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ರಾಸುಗಳ ವಿನಿಮಯಕ್ಕೆ ನೆರವಾಗಲಿವೆ. ಈ ಸಮಯದಲ್ಲಿ ಜಾನುವಾರು ಜಾತ್ರೆಗಳು ಎಲ್ಲೆ ನಡೆದರೂ ಸಹ ಗ್ರಾಮೀಣ ರೈತರು ತಪ್ಪದೇ ಹೋಗಿಬರುತ್ತಾರೆ. ಈ ಭಾಗದಲ್ಲಿ ಕಾರೇಹಳ್ಳಿ ಜಾತ್ರೆ ದನಗಳ ಮಾರಾಟಕ್ಕೆ ಹೆಸರುವಾಸಿಯಾಗಿದ್ದು ಎಲ್ಲಿ ಕಣ್ಣು ಹಾಯಿಸಿದರೂ ಜನಕ್ಕಿಂತ ರಾಸುಗಳೇ ಹೆಚ್ಚಾಗಿ ಕಂಡುಬರುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ರಾಸುಗಳು ಆಗಮಿಸಿದ್ದು ಇನ್ನೂ ಹತ್ತು ದಿನಗಳಕಾಲ ರಾಸುಗಳ ಕೊಡುಕೊಳ್ಳುವಿಕೆ ನಡೆಯಲಿದೆ.ಇದರ ಜೊತೆಯಲ್ಲಿ ರಾಸುಗಳಿಗೆ ಸಂಬಂಧಿಸಿದ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಶ್ಯಕವಾದ ಅಂಗಡಿಗಳು ಹೆಚ್ಚುಕಂಡುಬರುತ್ತಿದೆ.
ಸಾಮಾನ್ಯವಾಗಿ ಜಾತ್ರೆಗಳಲ್ಲಿ ಪುರಿ,ಬೆಂಡು,ಬತಾಸು, ಮಕ್ಕಳ ಆಟಿಕೆ,ಮಹಿಳೆಯರ ಸಿಂಗಾರದ ವಸ್ತುಗಳನ್ನೊಳಗೊಂಡ ಅಂಗಡಿಗಳೇ ಹೆಚ್ಚಾಗಿ ಕಂಡುಬಂದರೆ, ಇದಕ್ಕೆ ಸೆಡ್ಡುಹೊಡೆದಂತೆ ಹೋಬಳಿಯ ಕಾರೇಹಳ್ಳಿ ರಂಗನಾಥಸ್ವಾಮಿ ಜಾತ್ರೆಯಲ್ಲಿ ಮಾತ್ರ ರಾಸುಗಳ ಸಿಂಗಾರಕ್ಕೆ ಬೇಕಾದ ಸಕಲ ಪರಿಕರಗಳ ಅಂಗಡಿಗಳು ಹೆಚ್ಚಾಗಿ ಕಂಡುಬರುವುದು ವಿಶೇಷವಾಗಿದೆ.
ದೂರದ ಗದಗ್,ದಾವಣಗೆರೆ ಮುಂತಾದ ಕಡೆಯಿಂದ ಇದಕ್ಕೆ ಬೇಕಾದ ಪರಿಕರಗಳನ್ನು ತರುವ ವ್ಯಾಪಾರಿಗಳು ಇಂತಹ ಹತ್ತಾರು ಅಂಗಡಿಗಳನ್ನು ತೆರೆದಿದ್ದಾರೆ. ಎತ್ತುಗಳು ತಮ್ಮ ಜೀವನಾಡಿ ಎಂದು ಬಗೆದಿರುವ ರೈತರು ತಮ್ಮ ರಾಸುಗಳನ್ನು ಕಣ್ ಕುಕ್ಕುವಂತೆ ಅಲಂಕರಿಸಲು ಹಿಂದೆಗೆಯುವುದಿಲ್ಲ. ಹಾಗಾಗಿ ಇಂತಹ ವಸ್ತುಗಳಿಗೆ ಬೇಡಿಕೆ ಹೆಚ್ಚು.
ಈ ಅಂಗಡಿಗಳಲ್ಲಿ ಎತ್ತು , ಹಸುಗಳಿಗೆ ಹಾಕುವ ಮೂಗುದಾರ, ಮುಕೋಡ, ಬಾಯಿಕುಕ್ಕೆ, ಕೊರಳು ಹಾಗೂ ಕಾಲಿಗೆ ಕಟ್ಟುವು ಹಿತ್ತಾಳೆಯ ಗಂಟೆ, ಕೊರಳಿಗೆ ಹಾಕುವ ಕೊರಳ ಹಗ್ಗ, ಶಂಕು, ಗಂಟೆ ಸಹಿತಹಗ್ಗ, ಗೆಜ್ಜೆಸಹಿತ ಹಣೆಪಟ್ಟಿ,ಗಗ್ಗರ, ದೃಷ್ಠಿಯಾಗದಂತೆ ಕಟ್ಟುವ ಕುರಿ ಉಣ್ಣೆಯಿಂದ ಮಾಡಿದ ಕರಿಹಗ್ಗ, ಕುಚ್ಚು, ಕೊಂಬುಗಳ ತುದಿಗೆ ಹಾಕುವ ಕೋಡುಅಣ್ಸು ಸೇರಿದಂತೆ ಇನ್ನಿತರ ವಸ್ತುಗಳು ಕಂಡುಬರುವುದಲ್ಲದೆ, ರೈತರ ಕೃಷಿ ಚಟುವಟಿಕೆಯಲ್ಲಿ ಬಳಸುವ ದೊಡ್ಡ ಹಗ್ಗಗಳು, ನೇಗಿಲು ಹೂಡುವಹಗ್ಗ, ಅಗಡುಗಣ್ಣಿ, ತರಹೇವಾರಿ ಬಾರಿಕೋಲುಗಳು ಸಹ ದೊರೆಯುತ್ತವೆ.
 ದನಕರುಗಳಿಗೆ ಕಟ್ಟ ಕುಚ್ಚು , ಗಂಟೆ, ಶಂಖ ತರಹೇವಾರಿ ಇಲ್ಲಿ ಸಿಗುತ್ತೆ, ಅಲ್ಲದೆ ದನಕಟ್ಟಲು, ನೇಗಿಲು , ನೊಗ ಕಟ್ಟಲು ಬೇಕಾದ ಹಗ್ಗ ಸೇರಿದಂತೆ ಇನ್ನಿತರ ವಸ್ತುಗಳು ಈ ಜಾತ್ರೆಯಲ್ಲಿ ಒಂದೆಡೆ ಸಿಗುತ್ತೆ. ಈಗ ಬಿಟ್ಟರೆ ಮುಂದಿನ ವರ್ಷದ ಜಾತ್ರೆವರೆಗೆ ಕಾಯಬೇಕಾಗುತ್ತೆ : ಪರ್ವತಯ್ಯ , ಕೆಂಕೆರೆಗೊಲ್ಲರಹಟ್ಟಿ ರೈತ, 
ಜಾತ್ರೆಯ ನಂತರದ ದಿನಗಳಲ್ಲಿ ರಾಸುಗಳ ಸಿಂಗಾರದ ವಸ್ತುಗಳು ಹಾಗೂ ಕೃಷಿಗೆ ಬಳಸುವ ವಸ್ತುಗಳಿಗಾಗಿ ರೈತರು ಇಂತಹ ಅಂಗಡಿಗಳನ್ನು ಹುಡುಕುತ್ತಾದರೋ ಸಹ ಸಕಲವಸ್ತುಗಳು ದೊರೆಯದೆ ಹತಾಶರಾಗುತ್ತಾರೆ. ಆದರೆ ಈ ಜಾತ್ರೆಯಲ್ಲಿ ಮಾತ್ರ ದನಗಳ ಅಲಂಕಾರಕ್ಕೆ ಸಮರ್ಪಕವಾಗಿ ಬೇಕಾದ ರೈತರ ಮನಸ್ಸಿಗೆ ಒಪ್ಪುವಂತ ವಸ್ತುಗಳು ಸಿಗುತ್ತವೆ.
ರಾಸುಗಳ ಅಲಂಕಾರಿಕ ವಸ್ತುಗಳನ್ನೊಳಗೊಂಡ ಅಂಗಡಿದಾರರು ಕೆಲ ವಸ್ತುಗಳನ್ನು ತಾವೇ ಸಿದ್ದಮಾಡಿದರೆ, ಮತ್ತೆ ಕೆಲ ವಸ್ತುಗಳನ್ನು ನಗರ ಪ್ರದೇಶಗಳಿಂದ ತಂದು ಮಾರಾಟ ಮಾಡುತ್ತಾರೆ. ಅಲ್ಲದೆ ಕೆಲ ಅಂಗಡಿಯವರು ಈ ವಸ್ತುಗಳ ತಯಾರಿಕೆಯನ್ನು ತಮ್ಮ ಕಸುಬಾಗಿಸಿಕೊಂಡಿರುವುದಲ್ಲದೆ , ನೈಪುಣ್ಯತೆಯಿಂದ ಹೊಸಹೊಸ ವಿನ್ಯಾಸದ ಪರಿಕರಗಳನ್ನು ಸಿದ್ದಗೊಳಿಸಿ ಮಾರಾಟ ಮಾಡುತ್ತಾರೆ. ಈ ಅಂಗಡಿಗಳಿಂದಲೇ ತಮ್ಮ ಜೀವನ ಸಾಗಿಸುತ್ತಿರುವ ಇವರು ದನಗಳ ಜಾತ್ರೆ ಎಲ್ಲಿ ನಡೆದರು ಅಲ್ಲಿ ಹಾಜರಿರುತ್ತಾರೆ.
ಕಾರೇಹಳ್ಳಿ ಜಾತ್ರೆಗೆ ಹೋದರೆ ಸಾಕು ತಮ್ಮ ರಾಸುಗಳಿಗೆ ಬೇಕಾದ ಹಾಗೂ ಕೃಷಿ ಚಟುವಟಿಕೆಗೆ ಅವಶ್ಯಕ ವಸ್ತುಗಳು ಸಿಕ್ಕೆ ಸಿಗುತ್ತದೆ ಎಂಬ ನಂಬಿಕೆ ಈ ಭಾಗದ ರೈತರದ್ದಾಗಿದ್ದು, ಈವೇಳೆ ಬಿಟ್ಟರೆ ನಂತರ ಪರದಾಡಬೇಕಾಗುತ್ತದೆ ಎಂಬ ದೃಷ್ಠಿಯಿಂದ ಕೆಲ ರೈತರು ಜಾತ್ರೆಯಲ್ಲಿನ ಅಂಗಡಿಗಳಲ್ಲಿ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದಿರುತ್ತಾರೆ.

ಒಟ್ಟಾರೆ ಇನ್ನಿತರ ಊರುಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಸೇರುವ ಅಂಗಡಿಗಳಿಗಿಂತ ಕಾರೇಹಳ್ಳಿಯಲ್ಲಿ ನಡೆಯುವ ಜಾತ್ರೆಯಲ್ಲಿ ಸೇರುವ ರಾಸುಗಳ ಅಲಂಕಾರಿಕ ವಸ್ತುಗಳ ಅಂಗಡಿಗಳು ಹೆಚ್ಚಾಗಿದ್ದು ಈ ಜಾತ್ರೆಯ ವಿಶೇಷವಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...