ದಕ್ಷ ಅಧಿಕಾರಿಯಾಗಿ ಹೆಸರಾಗಿದ್ದ ಡಿ.ಕೆ.ರವಿ ಅಸಹಜವಾಗಿ ಸಂಶಯಾಸ್ಪದ ರೀತಿಯಲ್ಲಿ ಸಾವನಪ್ಪಿರುವುದು ದುರಂತವಾಗಿದ್ದು ನಾಡು ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಜಿ.ಪಂ.ಸದಸ್ಯ ಬೆಳ್ಳಾರದ ಈರಣ್ಣ ಕಂಬನಿ ಮಿಡಿದರು.
![]() |
ಹುಳಿಯಾರು ಹೋಬಳಿ ಬೆಳ್ಳಾರದ ಸರ್ಕಾರಿ ಶಾಲಾವರಣದಲ್ಲಿ ಸಾರ್ವಜನಿಕರಿಂದ ಮಂಗಳವಾರ ಡಿ.ಕೆ.ರವಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. |
ಹುಳಿಯಾರು ಹೋಬಳಿ ಬೆಳ್ಳಾರದ ಸರ್ಕಾರಿ ಶಾಲಾವರಣದಲ್ಲಿ ಸಾರ್ವಜನಿಕರಿಂದ ಮಂಗಳವಾರ ಅಯೋಜಿಸಿದ್ದ ಡಿ.ಕೆ.ರವಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಿನ ಬಗ್ಗೆ ಈಗಾಗಲೇ ಸಿಬಿಐ ತನಿಖೆಗೆ ಸರ್ಕಾರ ಮುಂದಾಗಿದ್ದು ಶೀಘ್ರವೇ ನಿಸ್ಪಕ್ಷಪಾತ ತನಿಖೆಯಿಂದ ಸತ್ಯ ಹೊರಬೀಳಲಿದ್ದು , ಅಲ್ಲಿಯವರೆಗೂ ಎಲ್ಲರೂ ತಾಳ್ಮೆಯಿಂದಿರುವಂತೆ ಕೋರಿದರು.
ಈ ಸಂದರ್ಭದಲ್ಲಿ ಪವನ್,ರಾಘವೇಂದ್ರ,ಚಿದಾನಂದ,ಗಿರೀಶ್ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ