ವಿಷಯಕ್ಕೆ ಹೋಗಿ

ಡಿ.ವೈ.ಗೆರೆಯಲ್ಲಿ ನಡೆಯಿತು ಅಖಿಲಭಾರತ ಬಂಜಾರರ ಯಶಸ್ವಿ ಜಾತ್ರಾಮಹೋತ್ಸವ

ವರದಿ: ಡಿ.ಆರ್.ನರೇಂದ್ರಬಾಬು
ಹುಳಿಯಾರು : ಹೋಬಳಿಯ ದೊಡ್ಡೆಣ್ಣೆಗೆರೆ ಪುಟ್ಟ ಗ್ರಾಮವಾಗಿದ್ದರೂ ಸಹ ಧಾರ್ಮಿಕ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಖ್ಯಾತಿ ಹೊಂದಿದೆ. ಇದು ಅಖಿಲ ಭಾರತ ಬಣಜಾರರ(ಲಂಬಾಣಿ) ಯಾತ್ರಾಸ್ಥಳವಾಗಿದ್ದು ಇದು ಭೀಮಾಸತಿ ತೀಥಾರಾಜಸ್ವಾಮಿ ದೇವತೆಗಳ ಪವಿತ್ರ ಕ್ಷೇತ್ರವಾಗಿ ಹೆಸರುವಾಸಿಯಾಗಿದೆ.
ಹುಳಿಯಾರು ಹೋಬಳಿ ದೊಡ್ಡಎಣ್ಣೆಗೆರೆಯಲ್ಲಿ ಭೀಮಾಸತಿ ತೀಥಾರಾಜಸ್ವಾಮಿ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಯಾರು ಈ ಲಂಬಾಣಿಗರು: ಲಂಬಾಣಿಗಳು,ಬಂಜಾರು,ಅಥವಾ ನಾಯ್ಕ ಎಂದು ಕರೆಯಲಾಗುವ ಈ ಜನಾಂಗ ಮೂಲತಃ ಗುಜರಾತ್,ಆಂಧ್ರ,ರಾಜಾಸ್ಥಾನ,ಮಹಾರಾಷ್ಟ,ಕರ್ನಾಟಕದ ನಿವಾಸಿಗಳಾಗಿದ್ದಾರೆ. ಗುಜರಾತ್ , ರಾಜಸ್ಥಾನ ಮೂಲದ ಇವರು ಲಂಬಾಣಿ ಭಾಷೆ ಮಾತಾಡುವುದಿದ್ದು, ಇವರದ್ದೇ ಆದ ವೇಷ ಭೂಷಣಗಳಿಂದ ಇವರುಗಳನ್ನು ಲಂಬಾಣಿಗಳೆಂದು ಗುರ್ತಿಸಬಹುದಾಗಿದೆ. ಸಾಮಾನ್ಯವಾಗಿ ಇವರು ಊರ ಹೊರಭಾಗದಲ್ಲಿ ತಮ್ಮದೇ ಆದ ತಾಂಡಗಳಲ್ಲಿ ವಾಸಿಸುತ್ತಾರೆ. ಬಂಜಾರ ಮಹಿಳೆಯರು ಕಸೂತಿ ವಸ್ತ್ರದಿಂದ ಕೂಡಿದ ತೊಡುಗೆ ಹಾಗೂ ಬಣ್ಣ ಬಣ್ಣದ ಹರಳು, ಬೆಳ್ಳಿಯ ನಾಕಾಣೆ,ಎಂಟಾಣೆಯಿಂದ ಮಾಡಿಸಿಕೊಂಡ ಕಾಸಿನ ಸರ,ತಲೆಗೆ ಗುಗ್ಗರಿ, ಕೈಗೆ ಪ್ರಾಣಿಯ ಕೊಂಬಿನಿಂದ ಮಾಡಿದ ಬಳೆ ಮುಂತಾದವುಗಳನ್ನು ಅಡಿಯಿಂದ ಮುಡಿಯವರೆಗೆ ತೊಟ್ಟುಕೊಂಡು ರಂಗುರಂಗಿನ ವೇಷಭೂಷಣದಿಂದ ತಟ್ಟನೆ ಗಮನ ಸೆಳೆಯುತ್ತದೆ.
ಯಾತ್ರಾಸ್ಥಳ: ದೊಡ್ಡಎಣ್ಣೆಗೆರೆಯಲ್ಲಿನ ಈ ಪವಿತ್ರ ಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದ್ದು ಈ ಹಿಂದೆ ಇಲ್ಲಿಗೆ ಆಗಮಿಸಿದ ಲಂಬಾಣಿ ಕುಟುಂಬದ ತೀಥಾರಾಜ ಹೋರಾಟದಲ್ಲಿ ಸಾವನಪ್ಪಿದ್ದರಿಂದ ಸಹಗಮನ ಪದ್ದತಿಯಂತೆ ಪತಿಯ ಚಿತೆ ಏರಿದ ಭೀಮಾಬಾಯಿ ಅಗ್ನಿಗಾಹುತಿಯಾದ ಸ್ಥಳ ಇದಾಗಿದ್ದು, ಕಾಲಕ್ರಮೇಣ ಇದು ಲಂಬಾಣಿಗರ ಪುಣ್ಯಕ್ಷೇತ್ರವಾಗಿ ಯಾತ್ರಾಸ್ಥಳವಾಗಿ ಪ್ರಸಿದ್ದಿ ಹೊಂದಿದೆ.
ಹುಳಿಯಾರು ಹೋಬಳಿ ದೊಡ್ಡಎಣ್ಣೆಗೆರೆಯ ಭೀಮಾಸತಿ ತೀಥಾರಾಜಸ್ವಾಮಿ ಜಾತ್ರೆಯಲ್ಲಿ ಲಂಬಾಣಿ ಮಹಿಳೆಯರ ಸಾಮೂಹಿಕ ನೃತ್ಯ.
ಮತ್ತೊಂದು ಮೂಲದ ಪ್ರಕಾರ ವಿರೋಧಿಗಳ ಜೊತೆ ಹೋರಾಟದಲ್ಲಿ ಹತನಾದ ತೀಥರಾಜನ ದೇಹವನ್ನು ಆತನ ಪತ್ನಿ ಕುದುರೆಯಲ್ಲಿ ಹೊತ್ತು ತಂದು ಗ್ರಾಮದ ಹೆಬ್ಬಾಗಿಲ ಬಳಿ ಪತಿಯೊಂದಿಗೆ ಆಕೆಯೂ ಚಿತೆ ಏರಿದ್ದರಿಂದ ಈ ಸ್ಥಳ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ ಎನ್ನಲಾಗಿದೆ. ಒಟ್ಟಾರೆ ಈ ಬಗ್ಗೆ ಯಾವುದೇ ಲಿಖಿತ ದಾಖಲೆಗಳಿಲ್ಲದೆ ಕೇವಲ ಹಿರಿಯರ ಬಾಯಿಂದ ಕೇಳಿ ಬರುವ ಅಮೂರ್ತವಾಣಿಯಾಗಿದೆ.
ಈ ಯಾತ್ರಾ ಸ್ಥಳದಲ್ಲಿ ಪ್ರತಿ ವರ್ಷವೂ ನಾಲ್ಕು ದಿನಗಳ ಜಾತ್ರಾ ಮಹೋತ್ಸವ ನಡೆಯುತ್ತದೆ. ದೇಶಾದ್ಯಂತ ಹರಡಿರುವ ಲಂಬಾಣಿಗರು ಅಂದು ಕುಟುಂಬ ಸಮೇತರಾಗಿ ದವಸ ಧಾನ್ಯಗಳ ಸಮೇತ ಆಗಮಿಸಿ ಡೇರೆ ಹೂಡಿ ತಂಗುವುದು ಇಲ್ಲಿನ ವಿಶೇಷ. ಇಲ್ಲಿನ ಜಾತ್ರೆಗೆ ೩೦೦ ವರ್ಷಗಳಷ್ಟು ಸುದೀರ್ಘ ಇತಿಹಾಸವಿದ್ದರೂ ಸಹ ನಿಗದಿತ ದಿನಾಂಕ ಜಾತ್ರೆ ನಡೆಯದೆ ಜನಾಕರ್ಷಣೆ ಆಗಿರಲಿಲ್ಲ. ಕಳೆದ ಕೆಲ ವರ್ಷಗಳಿಂದ ಈಚೆಗೆ ಫೆಬ್ರವರಿ ತಿಂಗಳ ಕಡೆವಾರದಲ್ಲಿ ನಿಗದಿತವಾಗಿ ಜಾತ್ರೆ ಅಯೋಜಿಸಿಕೊಂಡು ಬರುತ್ತಿದ್ದು ದಿನೇ ದಿನೆ ಪ್ರಖ್ಯಾತಿ ಹೊಂದುತ್ತಿದೆ. ಈ ಬಾರಿಯ ಜಾತ್ರಾಮಹೋತ್ಸವ ೫೮ ನೇ ವರ್ಷದ್ದಾಗಿದ್ದು ಫೆಬ್ರವರಿ ೨೬ ರಿಂದ ೪ ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿತು.
ಝಾಂಡೇವು, ಧ್ವಜಾರೋಹಣ, ಕಳಸಧಾರಣೆ ಮೂಲಕ ಆರಂಭಗೊಂಡು ನಿತ್ಯ ಅಭಿಷೇಕ ನಡೆಯಿತು.ಗಂಗಪೂಜೆ, ಒಳಂಗ್ , ಸಾತ್ ಸತ್ತಿ, ಮಾತಾಪೂಜೆ,ಭೀಮಾಸತಿ ತೀಥಾರಾಜಸ್ವಾಮಿ ಉತ್ಸವ, ದುಗ್ಗಲ ಸೇವೆ,ಲಕ್ಷ ದೀಪೋತ್ಸವ ಮುಂತಾದವು ನಡೆಯಿತು. ಜಾತ್ರೆಯ ಕಡೆಯ ದಿನ ದೇವಿಗೆ ಬಲಿ ಸಮರ್ಪಣೆ ಅಂಗವಾಗಿ ನೂರಾರು ಹರಕೆಯ ಕುರಿಗಳನ್ನು ಬಲಿಕೊಟ್ಟು ಬಾಡೂಟ ಸವಿಯುವುದು ಈ ಜಾತ್ರೆಯ ವೈಶಿಷ್ಟ್ಯವಾಗಿದ್ದು, ಊಟದ ಜೊತೆಗೆ ಲಂಬಾಣಿ ಮಹಿಳೆಯರ ಢಾಳೋ ಸಂಭ್ರಮ ಹಾಗೂ ಯುವಕರು ಕುಣಿತ ಗಮನ ಸೆಳೆಯಿತು. ವರ್ಷದಿಂದ ವರ್ಷಕ್ಕೆ ಭಕ್ತರ ಮಹಾಪೂರವೇ ಹರಿದು ಬರುತ್ತಿದ್ದು ಈ ಬಾರಿ ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದು ವಿಶೇಷವಾಗಿತ್ತು.
---------------------
ರಾಷ್ಟ್ರಮಟ್ಟದ ಖ್ಯಾತಿ ಹೊಂದಿದ್ದರೂ ಸಹ ಇಲ್ಲಿ ಸಾಕಷ್ಟು ಮೂಲಸೌಕರ್ಯದ ಅವಶ್ಯಕತೆಯಿದೆ. ಲಕ್ಷಾಂತರ ಜನ ಆಗಮಿಸುವ ಇಲ್ಲಿಗೆ ಶೌಚಾಲಯ ,ಸ್ನಾನಗೃಹ ಹಾಗೂ ಜಾಗ ಅಗತ್ಯ ಬೇಕಾಗಿದ್ದು ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. : ರಘುನಾಥ್, ಕಮಿಟಿಯ ಕಾರ್ಯದರ್ಶಿ.
--------------

ಲಂಬಾಣಿಗಳು ವಾಸಮಾಡುವ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಪ್ರಸ್ಥಾಪ ಸರ್ಕಾರದ ಮುಂದಿದ್ದು ತಾಂಡಾ ಅಭಿವೃದ್ದಿ ನಿಗಮಕ್ಕೆ ಅನುದಾನ ನೀಡುವ ಮೂಲಕ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ಈ ಯಾತ್ರಾ ಸ್ಥಳದ ಅಭಿವೃದ್ದಿಗೆ ೧ ಕೋಟಿ ಮಂಜೂರು ಮಾಡಿಸಲಾಗುವುದು : ಟಿ.ಬಿ.ಜಯಚಂದ್ರ.ಕಾನೂನು ಸಚಿವ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...