ವಿಷಯಕ್ಕೆ ಹೋಗಿ

ವರ್ಷತೊಡಕಿನ ಅಂಗವಾಗಿ ಪಾನಕವಿತರಣೆ

ಹುಳಿಯಾರು ಪಟ್ಟಣದ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಬಸವ ಸಮಿತಿ ಹಾಗೂ ಮಲ್ಲೇಶ್ವರ ಸ್ವಾಮಿ ದೇವಾಲಯ ಸಮಿತಿವತಿಯಿಂದ ಯುಗಾದಿ ವರ್ಷ ತೊಡಕಿನ ಅಂಗವಾಗಿ ಪಾನಕವಿತರಣೆ ಮಾಡಲಾಯಿತು.
ಹುಳಿಯಾರಿನ ಶ್ರೀಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಯುಗಾದಿ ವರ್ಷತೊಡಕಿನಂದು ಸಾರ್ವಜನಿಕರಿಗೆ ಪಾನಕ ವಿತರಿಸಲಾಯಿತು.
ಬೆಳಿಗ್ಗೆ ಸ್ವಾಮಿಗೆ ಅಭಿಷೇಕ , ಅರ್ಚನೆ ಹಾಗೂ ಮಹಾಮಂಗಳಾರತಿ ನಡೆಸಲಾಯಿತು. ನಂತರ ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಪಾನಕ ಪನಿವಾರ ವಿತರಿಸಲಾಯಿತು. ಈ ವೇಳೆ ದೇವಾಲಯ ಸಮಿತಿಯ ನಂಜುಂಡಯ್ಯ, ಪಟೇಲ್ ರಾಜ್ ಕುಮಾರ್,ಈಶ್ವರಪ್ಪ,ಮರುಳಪ್ಪ,ಷಡಕ್ಷರಿ ಸೇರಿದಂತೆ ಇತರರಿದ್ದರು.ಹೋಬಳಿಯ ಕೆಂಕೆರೆಯ ಹಳೆಮಠದಲ್ಲೂ ಸಹ ವರ್ಷ ತೊಡಕಿನಂದು ಸಾರ್ವಜನಿಕರಿಗೆ ಪಾನಕಪನಿವಾರ ವಿತರಿಸಲಾಯಿತು. 

ಕಾಮೆಂಟ್‌ಗಳು