ಗಾಂಧೀಜಿಯವರ ಕನಸಿನ ಕೂಸಾಗಿರುವ ರಾಷ್ಟ್ರೀಯ ಸ್ವಯಂ ಸೇವಾ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸ್ವ ಪ್ರೇರಣೆಯಿಂದ ತೊಡಗಿಕೊಂಡು ಸೇವೆ ಮಾಡಲು ಮುಂದಾಗುವುದರಿಂದ ಪ್ರತಿಯೊಬ್ಬರಲ್ಲೂ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಎನ್ನೆಸ್ಸಸ್ ಅಧಿಕಾರಿ ಯೋಗೀಶ್ ತಿಳಿಸಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಎನ್.ಎಸ್.ಎಸ್. ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಹಾಗೂ ಶಿಬಿರಗಳನ್ನು ಕುರಿತಂತೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
| ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಎನ್.ಎಸ್.ಎಸ್. ಘಟಕದ ಉದ್ಘಾಟನಾ ಸಮಾರಂಭದಲ್ಲಿ ಶಿಬಿರಾಧಿಕಾರಿ ಯೋಗೀಶ್ ಎನ್ನೆಸ್ಸಸ್ ಶಿಬಿರಗಳನ್ನು ಕುರಿತಂತೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. |
ಗ್ರಾಮೀಣ ಭಾಗಗಳ ಅಭಿವೃದ್ದಿಯ ನಿಟ್ಟಿನಲ್ಲಿ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಚೊಕ್ಕವಾಗಿಟ್ಟು ಕೊಳ್ಳುವ ಉದ್ದೇಶದಿಂದ ಗಾಂಧಿಜೀಯವರು ಈ ಸಂಘ ಸ್ಥಾಪಿಸಿ ಪ್ರತಿ ಹಳ್ಳಿಗಳಲ್ಲಿಗೆ ಶಿಬಿರಗಳನ್ನು ನಿಯೋಜಿಸುವ ಮೂಲಕ ಹಳ್ಳಿಗಳನ್ನು ಅನೈರ್ಮಲ್ಯ ಮುಕ್ತವಾಗಿಡಲು ಮುಂದಾಗಿದ್ದರು. ಅಂದು ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕಿದೆ ಎಂದರು
ಸ್ವಚ್ಚತೆ, ಪರಿಸರ ಸಂರಕ್ಷಣೆ ಹಾಗೂ ನಮ್ಮ ಪರಂಪರೆಯನ್ನು ರಕ್ಷಿಸುವುದೇ ಎನ್ನೆಸ್ಸಸ್ ನ ಮೂಲ ಉದ್ದೇಶವಾಗಿದ್ದು, 1969 ರಲ್ಲಿ ಪ್ರಾಯೋಗಿಕವಾಗಿ ಪದವಿ ಹಂತದ ಕಾಲೇಜುಗಳಲ್ಲಿ ಆರಂಭವಾಗಿ ನಂತರ 1982 ರಲ್ಲಿ ಪಿಯು ಹಂತದ ಕಾಲೇಜುಗಳಲ್ಲೂ ಸಹ ಇದರ ಘಟಕಗಳು ಸ್ಥಾಪನೆಯಾದವು. ಅಂದಿನಿಂದ ಇದುವರೆಗೂ 3600 ಕಾಲೇಜುಗಳಲ್ಲಿ 800 ಸ್ವಯಂ ಸೇವಕ ಸಂಘಗಳು ಸ್ಥಾಪನೆಯಾಗಿ ಎಂಭತ್ತು ಸಾವಿರಕ್ಕೂ ಅಧಿಕ ಸ್ವಯಂಸೇವಕರಿದ್ದು ಸೇವೆ ಮಾಡಲು ಮುಂದಾಗಿದ್ದಾರೆ ಎಂದರು.
ಎನ್ನೆಸ್ಸಸ್ ನ ಕಾರ್ಯಗಳು ; ಈ ಶಿಬಿರಗಳಲ್ಲಿ ಸೇರುವುದರಿಂದ ನಾವೆಲ್ಲಾ ಒಂದೇ ಎಂಬ ವಿಶಾಲ ಮನೋಭಾವ ಮೂಡಿ ಜಾತೀಯತೆ ನಿರ್ಮೂಲನೆಯಾಗುವುದರ ಜೊತೆಗೆ ಸರಳತೆ, ಪ್ರಾಮಾಣಿಕತೆಯಂತಹ ಸದ್ಗುಣಗಳು ಮೂಡುತ್ತವೆ. ಶಿಬಿರದಲ್ಲಿ ಮುಖ್ಯವಾಗಿ ಗ್ರಾಮಗಳಲ್ಲಿ ಸಸಿ ನೆಡುವ ಕಾರ್ಯ, ಚರಂಡಿಗಳನ್ನು ಸ್ವಚ್ಚಗೊಳಿಸುವುದು, ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು, ನೀರಿನ ಸದ್ಬಳಕೆಯ ಬಗ್ಗೆ ತಿಳಿಸುವುದು, ಅಂತರ್ಜಲ ವೃದ್ದಿಯ ಬಗ್ಗೆ ತಿಳಿಸುವುದು,ಸಾಕ್ಷರತೆಯ ಅರಿವು, ಸಹಕಾರ,ಸಹಬಾಳ್ವೆ ಬಗ್ಗೆ ಅರಿವು, ಸಾಮಾಜಿಕ ಒಡನಾಟಗಳ ಬಗ್ಗೆ ಗ್ರಾಮೀಣಬಾಗದ ಜನರಿಗೆ ತಿಳಿಸುವ ಕಾರ್ಯಗಳನ್ನು ಎನ್ನೆಸ್ಸಸ್ ನಿಂದ ಮಾಡಬಹುದಾಗಿದೆ ಎಂದರು.
ಎನ್.ಎಸ್.ಎಸ್ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಸೇರಿಕೊಂಡಾಗ ಮಾತ್ರ ನಾವು ಕೈಗೊಳ್ಳುವ ಕಾರ್ಯದಲ್ಲಿ ಯಶಸ್ಸು ಲಭಿಸುತ್ತದೆ, ದೇಶ ಅಭಿವೃದ್ದಿಯಾಗಬೇಕೆಂದರೆ ಗ್ರಾಮಗಳು ಅಭಿವೃದ್ದಿಯಾಗಬೇಕು ಎಂಬುದನ್ನು ಕಾಲೇಜಿನ ವಿದ್ಯಾರ್ಥಿಗಳು ಅರಿತು ಶಿಬಿರದಲ್ಲಿ ಪಾಲ್ಗೊಂಡು ತಮ್ಮಿಂದಾಗುವ ಸೇವೆಯನ್ನು ಮಾಡಲು ಮುಂದಾಗಿ ಇದರಿಂದ ಮುಂದಿ ಉತ್ತಮ ಭವಿಷ್ಯ ರೂಪಗೊಳ್ಳಲಿದೆ ಎಂದರು .
ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು, ಪ್ರಾಂಶುಪಾಲ ನಟರಾಜ್, ಜಿ.ಪಂ.ಸದಸ್ಯೆ ಮಂಜುಳಾ , ಹೈಸ್ಕೂಲ್ ವಿಭಾಗದ ಉಪಪ್ರಾಂಶುಪಾಲೆ ಇಂದಿರಾ,ನಿವೃತ್ತ ಶಿಕ್ಷಕ ಕಲ್ಲೇಶ್, ಸಿಎಸ್ ಪುರ ಪಿಯು ಕಾಲೇಜಿನ ಪ್ರಾಂಶುಪಾಲ ಹೆಚ್.ಎನ್.ನರಸಿಂಹಮೂರ್ತಿ ಸೇರಿದಂತೆ ಉಪನ್ಯಾಸಕರು,ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ