ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಚಿನಾಹಳ್ಳಿ ತಾಲ್ಲೂಕಿನಾದ್ಯತಂತ ಚೆಕ್ ಡ್ಯಾಂ, ಅಣೆ,ಹುದಿಬದುಗಳ ನಿರ್ಮಾಣ ಸೇರಿದಂತೆ ಇನ್ನಿತರ ಸಾಕಷ್ಟು ಕಾಮಗಾರಿಗಳು ಮುಗಿದು ತಿಂಗಳುಗಳು ಕಳೆದಿದ್ದರೂ ಸಹ ಕಾಮಗಾರಿಗೆ ವ್ಯಯಮಾಡಿದ ಹಣ ಮಾತ್ರ ಸಂದಾಯವಾಗಿಲ್ಲ ,ಇನ್ನಾದರೂ ಆ ಹಣವನ್ನು ಸಂದಾಯ ಮಾಡಿ ಎಂದು ತಾ.ಪಂ.ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಒತ್ತಾಯಿಸಿದ್ದಾರೆ.
![]() |
| ಹುಳಿಯಾರು ಸುತ್ತಮುತ್ತ ಉದ್ಯೋಗಖಾತ್ರಿಯೊಜನೆಯಡಿ ನಿರ್ಮಿಸಿರುವ ಚೆಕ್ ಡ್ಯಾಂ ನಲ್ಲಿ ಮಳೆ ನೀರು ಶೇಖರಣೆಯಾಗಿರುವುದನ್ನು ಇಓ ಕೃಷ್ಣಮೂರ್ತಿ ಅವರಿಗೆ ತೋರಿಸುತ್ತಿರುವ ತಾ.ಪಂ.ಸದಸ್ಯ ನವೀನ್ ಹಾಗೂ ಗ್ರಾ.ಪಂ.ಸದಸ್ಯ ರಂಗನಾಥ್. |
ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದ್ದು ಇದರಡಿ ಅನೇಕ ಅಭಿವೃದ್ದಿ ಕಾರ್ಯಗಳಾಗಿದ್ದು ಜೊತೆಗೆ ಗ್ರಾಮೀಣ ಭಾಗದ ಜನಕ್ಕೆ ಕೆಲಸ ಸಹ ಲಭಿಸಿದ್ದು ಅವರ ಜೀವನ ನಿರ್ವಹಣೆಗೆ ಸಹಕಾರಿಯಾಗಿತ್ತು. ಯೋಜನೆಯಡಿ ಕಳೆದ 2013ರ ನವಂಬರ್ , ಡಿಸೆಂಬರ್ ತಿಂಗಳಲ್ಲೇ ಮುಗಿದಿರುವ ಕಾಮಗಾರಿಳಿಗೆ ತಗುಲಿದ ಹಣವನ್ನು ಸಹ ಮಂಜೂರು ಮಾಡದೆ ಸತಾಯಿಸುತ್ತಿರುವುದರಿಂದ ಈ ಬಾರಿಯ ಯಾವುದೇ ಯೋಜನೆಗಳನ್ನು ಕೈಗೊಳ್ಳಲು ಯಾರು ಮುಂದಾಗುತ್ತಿಲ್ಲ ಎಂದರು.
ತಾಲ್ಲೂಕಿನಾದ್ಯಂತ 30 ಕೋಟಿಯಷ್ಟು ಕಾಮಗಾರಿಯಾಗಿದ್ದು , 10 ಕೋಟಿಯಷ್ಟು ಹಣ ಬರಬೇಕಿದೆ. ಕೋಟ್ಯಾಂತರೂ ವೆಚ್ಚದಲ್ಲಿ ಕಾಮಗಾರಿಗಳು ನಡೆದಿದ್ದರೂ ಸಹ ಹೆಚ್ಚಿನ ಹಣ ಸರ್ಕಾರದ ಬಳಿಯೇ ಉಳಿದಿದೆ , ಕಾಮಗಾರಿ ಮಾಡಲು ಹಾಕಿದ್ದ ಬಂಡವಾಳದ ಹಣವೂ ಬಂದಿಲ್ಲ ಹಾಗಾಗಿ ಈ ಸಾಲಿನ ಕಾಮಗಾರಿಗಳನ್ನು ಮಾಡಿಸಲು ಯಾರೂ ಮುಂದಾಗುತ್ತಿಲ್ಲ ಎಂದರು.
ಈಗಾಗಲೇ ಆಗಿರುವ ಕಾಮಗಾರಿಗಳಲ್ಲಿ ಲೋಪಗಳಿದ್ದರೆ ಅವುಗಳನ್ನು ಅಧಿಕಾರಿಗಳು ಖುದ್ದು ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ಮಾಡಿರುವುವರಿಗೆ ಶೀಘ್ರವೇ ಹಣ ಮಂಜೂರು ಮಾಡಲಿ .ಕಳೆದ ಕೆಲ ದಿನಗಳಿಂದ ಹುಳಿಯಾರು ಹಾಗೂ ಸುತ್ತಮುತ್ತ ಉತ್ತಮ ಮಳೆಯಾಗಿದ್ದು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ್ದ ಚೆಕ್ ಡ್ಯಾಂ,ಪಿಕಪ್ ಗಳು,ಒಡ್ಡುಗಳಲ್ಲಿ ಹೆಚ್ಚು ನೀರು ಶೇಖರಣೆಯಾಗಿದ್ದು ಭೂಮಿಯ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ. ಅಲ್ಲದೆ ಯಾವುದೇ ಕಾಮಗಾರಿಗಳು ಶಿಥಿಲವಾಗಿಲ್ಲ ಅದರೂ ಸಹ ಸರ್ಕಾರ ಇದುವರೆಗೂ ಹಣ ಬಿಡುಗಡೆ ಮಾಡದೆ ಮೀನಾಮೇಷ ಎಣಿಸುತ್ತಿರುವುದೇಕೆಂದು ಪ್ರಶ್ನಿಸಿದ್ದಾರೆ.
ವೀಕ್ಷಣೆ : ಈಗಾಗಲೇ ಹುಳಿಯಾರು ಭಾಗದಲ್ಲಿ ಮಳೆಯಿಂದಾಗಿ ನೀರು ಶೇಖರಣೆಯಾಗಿರುವ ಪಿಕಪ್,ಚೆಕ್ ಡ್ಯಾಂ ಸೇರಿದಂತೆ ಇನ್ನಿತ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣವಾಗಿರುವ ಕಾಮಗಾರಿಗಳ ಬಳಿ ಇಓ ಕೃಷ್ಣಮೂರ್ತಿ ಅವರನ್ನು ಕರೆದುಕೊಂಡು ಹೋಗಿ ಪರಿಶೀಲಿಸಿದ್ದು ಗುಣಮಟ್ಟದ ಬಗ್ಗೆ ಸಾಕ್ಷಿಕರಿಸಲಾಗಿದೆ. ಈಗಲಾದರೂ ಹಣ ಬಿಡುಗಡೆ ಮಾಡಿ ಖಾತ್ರಿಯೋಜನೆಯನ್ನು ಇನ್ನಷ್ಟು ಮುನ್ನಡೆಯುವಂತೆ ಮಾಡಲಿ ಎಂದು ಆಗ್ರಹಿಸಿದರು.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ