ಆಧುನಿಕತೆ ಬೆಳೆದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಸಹ ಪೈಪೋಟಿ ಹೆಚ್ಚಾಗುತ್ತಿದ್ದು , ಪ್ರತಿ ಕೆಲಸಕ್ಕೂ ಸಹ ಹೆಚ್ಚು ಜನ ಸ್ಪರ್ಧಿಸುತ್ತಿರುತ್ತಾರೆ ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಾದವರೂ ಎಂದಿಗೂ ಭಯಪಡದೆ ಸ್ಪರ್ಧೆಗೆ ಮುಂದಾಗಬೇಕೆಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
| ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ,ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ನೆರವೇರಿಸಿದರು. |
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ,ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿ ನಾವು ಏನು ಕಲಿಯುತ್ತೇವೆ ಅದು ನಮ್ಮ ಮುಂದಿನ ಜೀವನ ರೂಪಿಸುತ್ತದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ತಿಳಿಸಿದರು. ಕಾಲೇಜು ಹಂತದ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿದಲ್ಲಿ ಶಿಸ್ತಿನಿಂದ ಕಾಣುತ್ತಾರೆಂಬ ಸದುದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಗೂ ಸಹ ಸಮವಸ್ತ್ರ ನೀಡಲು ತಾವು ಮುಂದಾಗಿದ್ದು ಈಗಾಗಲೇ ಚಿ.ನಾ.ಹಳ್ಳಿ ಪಿಯು ಕಾಲೇಜಿಗೆ ನೀಡಿರುವುದಾಗಿ ತಿಳಿಸಿದರಲ್ಲದೆ. ಕೆಲ ದಿನಗಳಲ್ಲೇ ಈ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸುವುದಾಗಿ ತಿಳಿಸಿದರು. ವಿದ್ಯಾರ್ಥಿಗಳು ಸಮವಸ್ತ್ರವನ್ನು ವಾರದಲ್ಲಿ ನಾಲ್ಕು ದಿನ ಕಡ್ಡಾಯವಾಗಿ ಹಾಕಿಕೊಂಡು ಕಾಲೇಜಿಗೆ ಬರಬೇಕು ಇದರಿಂದ ಕಾಲೇಜು ಹಂತದಲ್ಲಿ ಶಿಸ್ತಿನ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಸಿಎಸ್ ಪುರ ಪಿಯು ಕಾಲೇಜಿನ ಪ್ರಾಂಶುಪಾಲ ಹೆಚ್.ಎನ್.ನರಸಿಂಹಮೂರ್ತಿ ಮಾತನಾಡಿದರು. ಎನ್.ಎಸ್.ಎಸ್. ಅಧಿಕಾರಿ ಯೋಗೀಶ್ ಎನ್.ಎಸ್.ಎಸ್. ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಚಾರ್ಯ ನಟರಾಜು ಅಧ್ಯಕ್ಷತೆವಹಿಸಿದ್ದು, ಜಿ.ಪಂ.ಸದಸ್ಯೆ ಮಂಜುಳಾ,ಹೈಸ್ಕೂಲ್ ವಿಭಾಗದ ಉಪಪ್ರಾಂಶುಪಾಲೆ ಇಂದಿರಾ,ನಿವೃತ್ತ ಶಿಕ್ಷಕ ಹಾಗೂ ಗಾಯಕ ಕಲ್ಲೇಶ್, ಗ್ರಾ.ಪಂ.ಸದಸ್ಯರಾದ ಗಂಗಣ್ಣ, ಜಹೀರ್ ಸಾಬ್, ಗೀತಾಅಶೋಕ್ ಬಾಬು, ಧನುಷ್ ರಂಗನಾಥ್, ಕಿರುತೆರೆಕಲಾವಿದ ಗೌಡಿರಂಗನಾಥ್, ಜಲಾಲ್ ಸಾಬ್,ರಾಮಯ್ಯ, ಉಪನ್ಯಾಸಕರಾದ ಶಿವರುದ್ರಯ್ಯ, ಜಯಣ್ಣ,ಅನಂತರಾಮಯ್ಯ ಇತರರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ