ಹುಳಿಯಾರು ಪಟ್ಟಣದ ಹೆದ್ದಾರಿಗೆ ಅಂಟಿಕೊಂಡಂತಿರುವ ರಶ್ಮಿ ಎಲೆಕ್ಟ್ರಿಕಲ್ಸ್ ಮುಂಭಾಗದಲ್ಲಿ ಇರುವ ನಾಲ್ಕು ಅಂಗಡಿಗಳಲ್ಲಿ ಭಾನುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು , ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
![]() |
| ಹುಳಿಯಾರು ಪಟ್ಟಣದ ಹೆದ್ದಾರಿಯ ಅಕ್ಕಪಕ್ಕದ ಅಂಗಡಿಗಳಲ್ಲಿ ಕಳ್ಳತನವಾಗಿರುವುದನ್ನು ನೋಡುತ್ತಿರುವ ಜನ. |
ಪಟ್ಟಣದ ಎಸ್.ಆರ್.ಟಿ ರಸ್ತೆಯ ರಘನಾಥ್ ಎಂಬುವರ ಎಂ.ಕೆ.ಡಿ. ಪ್ರಾವೀಜನ್ ಸ್ಟೋರ್, ತಿಮ್ಮಪ್ಪ ಅವರ ಬಾಲಾಜಿ ಗಾರ್ಮೆಂಟ್ಸ್, ವೆಂಕಟಾಛಲಪತಿ ಅವರ ಆಂಜನೇಯ ರೋಟರಿ ಅಯಿಲ್ ಮಿಲ್ ,ಅಣ್ಣಯ್ಯ ಅವರ ವಂಶಿ ವೆರೈಟಿ ಸೆಂಟರ್ ಅಂಗಡಿಗಳ ಕಬ್ಬಿಣದ ರೋಲಿಂಗ್ ಶೆಟರ್ ಡೋರನ್ನು ಬೆಂಡ್ ಮಾಡಿ ಒಳ ನುಸುಳಿದ ಕಳ್ಳರು ಗಲ್ಲದಲ್ಲಿದ ಹಣವನ್ನು ಹೊತ್ತೊಯ್ದಿದ್ದಾರೆ. ಬೆಳಗಿನ ಜಾವ ಅಣ್ಣಯ್ಯ ಅವರು ಮನೆಯಿಂದ ಹೊರಬಂದು ನೋಡಿದ್ದಾಗ ತಮ್ಮ ಅಂಗಡಿಯ ಬಾಗಿಲು ಸ್ವಲ್ಪ ಎತ್ತಿರುವುದು ಕಂಡು ಬಂದು ಅಕ್ಕಪಕ್ಕ ಗಮನಿಸಿದಾಗ ಪಕ್ಕದಲ್ಲಿನ ಇತರೆ ಅಂಗಡಿಗಳ ರೋಲಿಂಗ್ ಶೆಟರ್ ನ್ನು ಸಹ ಎತ್ತಿರುವುದು ಕಂಡುಬಂದಿದೆ. ಎಂ.ಕೆ.ಡಿ. ಪ್ರಾವೀಜನ್ ಸ್ಟೋರ್ ನಲ್ಲಿಟ್ಟಿದ್ದ 2000 ನಗದು, ಆಂಜನೇಯ ಆಯಿಲ್ ಮಿಲ್ ನಲ್ಲಿ 2000-3000ರೂ ನಗದು ಇನ್ನೆರಡು ಅಂಗಡಿಗಳಲ್ಲಿ ಚಿಲ್ಲರೆ ಕಾಸು ಮಾತ್ರ ಕಳ್ಳತನವಾಗಿರುವುದಾಗಿ ಅಂಗಡಿ ಮಾಲೀಕರು ತಿಳಿಸುತ್ತಾರೆ. ಅಲ್ಲದೆ ಗಾಂಧಿಪೇಟೆ ತಿರುವುನಲ್ಲಿರುವ ಮನೋಜ್ ಟ್ರೆಡರ್ಸ್ ನ ಡೋರನ್ನು ಸಹ ಎತ್ತುವ ಪ್ರಯತ್ನ ಸಹ ಮಾಡಿದ್ದಾರೆ. ವಿಷಯ ತಿಳಿದ ಪೋಲಿಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ.
ಈ ನಾಲ್ಕು ಅಂಗಡಿಗಳು ಹೆದ್ದಾರಿಗೆ ಅಂಟಿಕೊಂಡಂತೆ ಇದ್ದು ಎಲ್ಲಾ ಅಂಗಡಿಗಳಲ್ಲೂ ಒಂದೇ ರೀತಿಯಲ್ಲಿ ರೋಲಿಂಗ್ ಶೆಟರ್ ಬೆಂಡ್ ಮಾಡಿ ಒಳನುಸುಳಿರುವ ಕಳ್ಳರು ಯಾವುದೇ ಬೆಲೆಬಾಳುವ ವಸ್ತುಗಳನ್ನು ಅಪಹರಿಸದೆ ಕೇವಲ ಗಲ್ಲಾಪೆಟ್ಟಿಗೆಯಲ್ಲಿನ ಹಣಕ್ಕೆ ಮಾತ್ರ ಕೈಹಾಕಿರುವುದು ಸೋಜಿಗದ ಸಂಗತಿಯಾಗಿದ್ದು , ಕಳ್ಳರ ಉದ್ದೇಶವೇನೆಂದು ಅರಿಯದಂತಾಗಿದೆ. ಇತ್ತೀಚೆಗಷ್ಟೆ ಸರಗಳ್ಳರ ಕೈಚಳಕದಿಂದ ಸರ ಕಳೆದುಕೊಂಡಿರುವ ಘಟನೆ ಹಸಿಯಾಗಿರುವ ಬೆನ್ನಲೆ ಈ ಕೃತ್ಯ ನಡೆದಿರುವುದರಿಂದ ಮನೆಬಿಟ್ಟು ಹೊರಡಲು ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ